ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಟ್ರಾಫಿಕ್ ಪೊಲೀಸ್ #Shivamogga Police ಸಿಬ್ಬಂದಿಗಳ ಸಾಮಾಜಿಕ ಕಳಕಳಿಗೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೊಲೀಸರ ಸಾಮಾಜಿಕ ಕಾರ್ಯಕ್ಕೆ ಜನಸಾಮಾನ್ಯರು ಶ್ಲಾಘಿಸಿದ್ದಾರೆ,
ನಗರದಲ್ಲಿ ನಿನ್ನೆ ಸಂಜೆ ಬಿದ್ದ ಸಣ್ಣ ಮಳೆಗೆ 15ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದ ಪರಿಣಾಮ ತಕ್ಷಣವೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು ರಸ್ತೆ ಜಾರದಂತೆ ಮಣ್ಣು ಮತ್ತು ಮರದ ದೂಳನ್ನು ತಂದು ರಸ್ತೆಗೆ ಹಾಕಿಸಿದ್ದಲ್ಲದೇ ಖುದ್ದು, ರಸ್ತೆಯಲ್ಲೇ ನಿಂತು ನಿಧಾನವಾಗಿ ಚಲಿಸಿ ಎಂದು ಎಚ್ಚರಿಕೆ ನೀಡುತ್ತಿದ್ದರು.
Also read: ರಾಮೇಶ್ವರಂ ಕೆಫೆ ಬ್ಪಾಸ್ಟ್ | ಬಾಂಬರ್ ಹುಸೇನ್, ಮತೀನ್ ಬಂಧನ | ಇಬ್ಬರೂ ಸಿಕ್ಕಿದ್ದೆಲ್ಲಿ?
ರಸ್ತೆಯಲ್ಲಿ ಜೋರಾಗಿ ಚಲಿಸದಂತೆ ಮನವಿ ಮಾಡಿಕೊಳ್ಳುತ್ತಿದ್ದ ಶಿವಮೊಗ್ಗ ಟ್ರಾಫಿಕ್ ಪಿ ಎಸ್ ಐ ತಿರುಮಲೇಶ್ ಹಾಗೂ ಪೊಲೀಸ್ ಸಿಬ್ಬಂದಿಗಳ ಸಾಮಾಜಿಕ ಕಳಕಳಿಗೆ ವಾಹನ ಸವಾರರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post