ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ #Tunga River ಉಕ್ಕಿ ಹರಿಯುತ್ತಿದ್ದು, ನಗರ ವ್ಯಾಪ್ತಿಯಲ್ಲಿರುವ ಮಂಟಪ ಮುಳುಗುವ ಹಂತದಲ್ಲಿದೆ.
ಭಾರೀ ಮಳೆಯಿಂದಾಗಿ ಎರಡೇ ದಿನದಲ್ಲಿ ನದಿ ತುಂಬಿ ಹರಿಯುತ್ತಿದ್ದು, ಜೀವಕಳೆ ತುಂಬಿಕೊಂಡಿದೆ.
Also read: ತೀರ್ಥಹಳ್ಳಿ | ಭಾರೀ ಮಳೆ | ಕುಸಿದು ಬಿದ್ದ ಯಕ್ಷಗಾನ ಕಲಾವಿದನ ಮನೆ
ಹಳೇ ಸೇತುವೆ ಹೊಸಸೇತುವೆಗಳಲ್ಲಿ ಜನರು ತುಂಗಾನದಿಯ ರೌದ್ರ ದೃಶ್ಯಗಳನ್ನ ನೋಡಿಕೊಂಡು ಮುಂದಕ್ಕೆ ಸಾಗುತ್ತಿದ್ದಾರೆ. ಇನ್ನು, ಶಿವಮೊಗ್ಗದಲ್ಲಿ ಕೊರ್ಪಳಯ್ಯನ ಛತ್ರದ ಬಳಿ ಇರುವ ಮಂಟಪ ಮುಳುಗುವುದು ಶಿವಮೊಗ್ಗದ ಮಟ್ಟಿಗೆ ತುಂಗಾ ನದಿ ಭರ್ತಿಯಾಗಿದೆ ಎಂಬುದಕ್ಕೆ ಸಾಕ್ಷಿ.
ಈ ನಿಟ್ಟಿನಲ್ಲಿ ನೋಡುವುದಾದರೆ ಮಂಟಪ ಮುಳುಗಲು ಕೆಲವೇ ಅಡಿ ಭಾಕಿಯಿದ್ದು ತುಂಗಾ ಜಲಾಶಯದ ಹೊರಹರಿವು ಇನ್ನಷ್ಟು ಹೆಚ್ಚಾದರೆ, ನದಿಗೆ ಉಕ್ಕೇರುವುದರಲ್ಲಿ ಅಚ್ಚರಿಯಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post