ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
“ಕುಕ್ಕರ್ ಬಾಂಬ್ ಸ್ಪೋಟ” ಪ್ರಕರಣದ Cooker Bomb Blast Case ಅಪರಾಧಿ ಮೊಹಮ್ಮದ್ ಶಾರೀಖ್ ಗೆ ರಾಷ್ಟ್ರಿಯ ತನಿಖಾ ದಳ (ಎನ್.ಐ.ಎ.)ದ National Investigation Agency ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂನ 92 ಸಾವಿರ ರೂ.ದಂಡ ವಿಧಿಸಿ ಮಹತ್ವದ ತೀರ್ಪು ನಿಡಿದ್ದು, ಅತ್ಯಂತ ಸಂತೋಷ ತಂದಿದೆ. ಈ ಹಿನ್ನೆಲೆಯಲ್ಲಿ ಎನ್ ಐಎ ಮತ್ತು ನ್ಯಾಯಾಧೀಶರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಿಷಯವನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುವೆ. ಕಾಂಗ್ರೆಸ್ ಭಯೋತ್ಪಾದಕರ ಪರವಾಗಿ ನಡೆದುಕೊಳ್ಳುವ ನೀತಿ ಭಯ ಹುಟ್ಟಿಸುತ್ತದೆ. ಅಪರಾಧಿ ಶಾರೀಖ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. ಎನ್ಐಎದವರು ಇವನ ಚಲನವಲನಗಳನ್ನು ಗಮನಿಸಿ ಸಮಗ್ರ ಮಾಹಿತಿ ಕಲೆ ಹಾಕಿ ಅಪರಾಧಿ ವಿರುದ್ಧ ಬಲವಾದ ಸಾಕ್ಷ್ಯ ಒದಗಿಸಿತು. ಇಲ್ಲಿಯೇ ತುಂಗಾ ನದಿ ತಟದಲ್ಲಿ ಬಾಂಬ್ ಸ್ಪೋಟದ ಪರೀಕ್ಷೆ ನಡೆಸುತ್ತಿದ್ದ. ಕಳೆದ ಅನೇಕ ವರ್ಷಗಳಿಂದ ಕೆಲ ಮುಸ್ಲಿಂ ಭಯೋತ್ಪಾದಕರಿಂದ ಶಿವಮೊಗ್ಗದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ಬಗ್ಗೆ ಬಿಜೆಪಿ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ಭಯೋತ್ಪಾದನೆಯಲ್ಲಿ ತೊಡಗಿರುವವರನ್ನೇ ಕಾಂಗ್ರೆಸ್ “ಬ್ರದರ್ಸ್” ಎಂದು ಅಪ್ಪಿಕೊಂಡಿತು. ಈಗ ಶಾರೀಖ್ಗೆ ಶಿಕ್ಷೆಯಾಗಿದ್ದರ ಬಗ್ಗೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಹಿರಿಯ ನಾಯಕ ಛಲವಾದಿ ನಾರಾಯಣಸ್ವಾಮಿ ಕ್ರೈಸ್ತ ಧರ್ಮಕ್ಕೆ ಮಾತಾಂತರ ಗೊಂಡಿದ್ದಾರೆ. ಆದ್ದರಿಂದ ಒಳಮೀಸಲಾತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಎಸ್ಟಿ ಘಟಕದ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಹಾಸ್ಯಾಸ್ಪದ. ಅರ್ಥವಿಲ್ಲದ ಮಾತು. ಕಾಂಗ್ರೆಸ್ನವರೇ ಮಾಡಬಾರದ್ದು ಮಾಡಿಕೊಂಡು ಈಗ ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ.
ಎಸ್.ಎನ್. ಚನ್ನಬಸಪ್ಪ, ಶಾಸಕರು
ಶಿವಮೊಗ್ಗದಲ್ಲಿ ಹಿಂದೂಗಳ ವಿರುದ್ಧ ಗಲಬೆ ನಡೆಯುತ್ತಿರುವ ಇತಿಹಾಸ 1935ರಿಂದಲೇ ಇದೆ. ಅನೇಕ ಹಿಂದೂಗಳ ಹತ್ಯೆ ಆಗಿವೆ. ಹರ್ಷ ಕೊಲೆ ಪ್ರಕರಣದಲ್ಲಿ ಅನೇಕರು ಸಿಕ್ಕಿದ್ದಾರೆ. ಕಾಂಗ್ರೆಸ್ ಭಯೋತ್ಪಾದಕರಿಗೆ ನೀಡುತ್ತಿದ್ದ ಕುಮ್ಮಕ್ಕಿನಿಂದ ಶಿವಮೊಗ್ಗ ಭಯೋತ್ಪಾದಕರಿಗೆ ಸ್ವರ್ಗವಾಗಿತ್ತು. ಪಿಎಫ್ ಐ ಸಂಘಟನೆಯ ನಿಷೇಧದ ನಡುವೆಯೂ ಬೇರೆ ಸಂಘಟನೆ ಹೆಸರಿನಿಂದ ಭಯೋತ್ಪಾದಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದವು. ಇತ್ತೀಚೆಗೆ ಸೂಳೆಬೈಲಿನಲ್ಲಿ ಬಾಲಕ ಸಂಕೇತ್ ಕೊಲೆಯೂ ಮುಸ್ಲಿಂ ಅಪ್ರಾಪ್ತ ಹೆಸರಿನಲ್ಲೇ ಆಗಿತ್ತು. ಶಾರೀಖ್ ಜೈಲಿನಲ್ಲಿದ್ದರೂ ಶಿವಮೊಗ್ಗದಲ್ಲಿ ದುಷ್ಕøತ್ಯಗಳು ನಡೆಯುತ್ತಲೇ ಇದ್ದವು. ಎನ್ಐಎ ಅಧಿಕಾರಿಗಳು ಮುಂದಾಗುವ ಅನಾಹುತ ತಪ್ಪಸಿದ್ದಾರೆ ಎಂದು ಶ್ಲಾಘಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಜ್ಞಾನೇಶ್ವರ, ಎನ್.ಜೆ.ನಾಗರಾಜ, ನವುಲೆ ಮಂಜುನಾಥ್, ದೀನ ದಯಾಳ್, ಶ್ರೀನಾಗ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















