ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸಲು ರಚನಾತ್ಮಕ ಸಿದ್ದತೆ ಹಾಗೂ ನಿರಂತರ ಪರಿಶ್ರಮ ಅತ್ಯಂತ ಮುಖ್ಯ ಎಂದು ಪಿಇಎಸ್’ಐಟಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಆರ್. ಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಿಇಎಸ್’ಐಟಿಎಂ ಸಂಸ್ಥೆಯು ಸಿಇಟಿ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ನೈಜ ಅನುಭವ ನೀಡಲು ಕ್ಯಾಂಪಸ್’ನಲ್ಲಿ ಆಯೋಜಿಸಿದ್ದ MOCK CET-2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Also Read: ಶಿವಮೊಗ್ಗದಲ್ಲಿ ಸರಣಿ ಅಪಘಾತ | ಕಾರು-ಬಸ್ ನಡುವೆ ಸಿಲುಕಿದ ಆಟೋ ನಜ್ಜುಗುಜ್ಜು | ಘಟನೆ ನಡೆದಿದ್ದು ಹೇಗೆ?
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಚನಾತ್ಮಕ ಸಿದ್ಧತೆ ಮತ್ತು ನಿರಂತರ ಶ್ರಮದ ಹಾಗೂ ಮೌಲ್ಯಮಾಪನದ ಮಹತ್ವವನ್ನು ಒತ್ತಿ ಹೇಳಿದರು.
ಟೆಸ್ಟ್ ಮೈ ಸ್ಕಿಲ್ಸ್ ವೇದಿಕೆಯ ಮೂಲಕ ನಡೆಸಲಾಗುವ ಈ ಅಣಕು CET ಕಾರ್ಯಕ್ರಮವು ಮೌಲ್ಯಮಾಪನ ಮಾಡಲು, ಕಲಿಕೆಯ ಅಂತರವನ್ನು ಗುರುತಿಸಲು ಮತ್ತು ಪರೀಕ್ಷಾ ತಂತ್ರಗಳನ್ನು ಪರಿಷ್ಕರಿಸಲು ವಿಶ್ವಾಸಾರ್ಹ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ZYSK ಟೆಕ್ನಾಲಜೀಸ್ ಸಹ ಸಂಸ್ಥಾಪಕ ಸಾರಂಗ್ ಅವರು ಎಐ ಚಾಲಿತ ಟೆಸ್ಟ್ ಮೈ ಸ್ಕಿಲ್ಸ್ ವೇದಿಕೆಯ ಸಾಮರ್ಥ್ಯಗಳ ಕುರಿತು ವಿವರಿಸಿದರು.
ವಿಷಯವಾರು ಅಣಕು ಪರೀಕ್ಷೆಗಳು, ವಿವರವಾದ ಕಾರ್ಯಕ್ಷಮತೆಯ ವಿಶ್ಲೇಷಣೆ ಮತ್ತು ಉದ್ದೇಶಿತ ತಯಾರಿ, ಬೆಂಬಲದಂತಹ ವೈಶಿಷ್ಟ್ಯಗಳುಗಳು ವಿದ್ಯಾರ್ಥಿಗಳು ತಮ್ಮ ಮಿತಿಗಳನ್ನು ಅರಿಯಲು ಹಾಗೂ ಕಲಿಕೆಗೆ ಆದ್ಯತೆ ನೀಡಿ ಪರೀಕ್ಷೆಯಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಪಿಇಎಸ್ ಟ್ರಸ್ಟ್ ರಿಜಿಸ್ಟ್ರಾರ್ ಡಾ. ಆರ್. ನಾಗರಾಜ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿಗದಿಪಡಿಸಿಕೊಳ್ಳುವುದು, ಶಿಸ್ತುಬದ್ಧವಾದ ಅಧ್ಯಯನದ ಅಭ್ಯಾಸ ಮತ್ತು ಸಮಯದ ಪರಿಣಾಮಕಾರಿ ನಿರ್ವಹಣೆಯ ಕುರಿತು ಅದರ ಮಹತ್ವವನ್ನು ಒತ್ತಿ ಹೇಳಿದರು.
ಕೆಸಿಇಟಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ವಿಶ್ಲೇಷಣಾತ್ಮಕ ಮತ್ತು ಚಿಂತನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಯ ಹಾಗೂ ಬೆಂಗಳೂರನ್ನು ಪ್ರತಿನಿಧಿಸುವ 400ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭಾಗವಹಿಸಿದ್ದರು.
ಪಿಇಎಸ್’ಐಟಿಎಂ ನ ಉಪ ಪ್ರಾಂಶುಪಾಲರಾದ ಡಾ. ಆರ್. ಶೇಖರ್ ವಂದಿಸಿ, ಪೂಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















