ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯೋಗ ಶಾಸ್ತ್ರದ ಕ್ರಮಬದ್ಧ ಅವಲೋಕನದೊಂದಿಗೆ ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡರೆ ಶರೀರದಲ್ಲಿನ ಶಕ್ತಿ ಉದ್ಧಿಪನಗೊಳಿಸಿ, ಮನಸ್ಸನ್ನು ಸದೃಢ, ಸಂತುಲಿತ ಮಾಡಿಕೊಳ್ಳಬಹುದು ಎಂದು ಯೋಗ ಶಿಕ್ಷಕರು, ಯೋಗ Yoga ತಜ್ಞರಾದ ಡಾ. ಬಾ.ಸು. ಅರವಿಂದ ಹೇಳಿದರು.
ಮನ್ವಂತರ ಮಹಿಳಾ ಮಂಡಳ, ಶಿವಮೊಗ್ಗದ ವತಿಯಿಂದ ರವಿ ಮತ್ತು ರಾಜೇಶ್ವರಿ ಅಕ್ಕನವರ ಧ್ಯಾನ ಕೇಂದ್ರದಲ್ಲಿ ಸ್ತ್ರೀಯರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಯೋಗಾಸನಗಳು ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಶಾಸ್ತ್ರದ ವಿವರವಿರುವ ಪುಸ್ತಕಗಳು ನಿರ್ಜೀವ ಗ್ರಂಥಗಳಲ್ಲ. ಅವು ಜೀವಂತ ಶಿಕ್ಷಕ. ಹಜ್ಜೆ ಹೆಜ್ಜೆಗೂ ಎಚ್ಚರಿಸುವ, ಆಲಸ್ಯವನ್ನು ದೂರಮಾಡುವ ಹೊತ್ತಿಗೆಗಳು. ಸರಳ, ಸುಲಭ ಯೋಗಾಸನಗಳೊಂದಿಗೆ, ಸೂರ್ಯ ನಮಸ್ಕಾರಗಳೊಂದಿಗೆ ದೇಹದ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.

Also read: ಕೊಡಗು: ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಲಘು ಭೂಕಂಪನ!
ಮನ್ವಂತರ ಮ.ಮ. ಅಧ್ಯಕ್ಷರಾದ ಶ್ರೀರಂಜಿನಿ ದತ್ತಾತ್ರಿ ಮಾತನಾಡಿ, ಭಾರತದ ಪ್ರಾಚೀನ ಯೋಗ ಶಾಸ್ತ್ರಕ್ಕೆ ವಿಶ್ವ ಮಾನ್ಯತೆ ಬಂದಿರುವುದಕ್ಕೆ ಪ್ರತಿಯೊಬ್ಬ ಭಾರತೀಯರೂ ಹೆಮ್ಮ ಪಡಲೇಬೇಕು. ಆಹಾರ-ವಿಹಾರ, ಆಚಾರ-ವಿಚಾರಗಳಲ್ಲಿ ಭಾರತೀಯ ಜೀವನ ಶೈಲಿಯಲ್ಲಿ, ಯೋಜನೆಗಳಲ್ಲಿಯೇ ಯೋಗ ಮಾರ್ಗವಿದೆ. ಆದರೆ, ಈ ಎಲ್ಲ ಮಾರ್ಗಗಳಿಂದ ನಾವುಗಳು ಹೊರಬಂದಿರುವ ಪರಿಣಾಮವೇ ಶಾರೀರಿಕ, ಮಾನಸಿಕ ಸಮಸ್ಯೆಗಳಿಗೆ ಕಾರಣವೂ ಅಗಿರಬಹುದು. ಒತ್ತಡ ಭರಿತ ಆಧುನಿಕ ಜೀವನ ಶೈಲಿಯಿಂದ ಬಳಲುವ ವ್ಯಕ್ತಿಗಳಿಗೆ ನಿಜವಾದ ಶಾರೀರಿಕ, ಮಾನಸಿಕ ನೆಮ್ಮದಿ ನೀಡುವ ಯೋಗ ಶಾಸ್ತ್ರ ಕಲಿಕೆ ಅತ್ಯಗತ್ಯ. ಇಂದು ಹೇರಳ ಹಣ ಹಾಗೂ ಉಪಭೋಗ ಸಾಮಗ್ರಿಗಳಿದ್ದರೂ ಖಾಯಿಲೆಗಳೂ ಹೊಸ ಹೊಸ ರೂಪದಲ್ಲಿ ಹೊರಬರುತ್ತಿರುವುದು ವಾಸ್ತವ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಬಾ.ಸು. ಅರವಿಂದರವರ ಯೋಗ ಸಾಧನೆಯನ್ನು ಪರಿಗಣಿಸಿ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ಗೆ ಭಾಜನರಾದ ಸಂಭ್ರಮಕ್ಕೆ ಡಾ.: ಬಾ.ಸು. ಅರವಿಂದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿಜಯಾಶಿವು ನಿರೂಪಿಸಿ, ಶ್ವೇತಾ ಸಂಪತ್ ಸ್ವಾಗತಿಸಿ, ಅಶ್ವಿನಿ ಜಾದವ್ ವಂದನಾರ್ಪಣೆ ನೆರವೇರಿಸಿದರು.









Discussion about this post