ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೇರೆ ಬೇರೆ ಜಾತಿ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಕೆಲಸವಾಗುತ್ತಿದ್ದು, ಸಾಧು-ಸಂತರ ಮಠಗಳ ಅಭಿವೃದ್ಧಿ ಹಿಂದೂ ಧರ್ಮದ ಉದ್ಧಾರ ಮತ್ತು ಹಿಂದುತ್ವ ಉಳಿಸುವುದೇ ಕ್ರಾಂತಿವೀರ ಬ್ರೀಗೇಡ್ನ #Krantiveera Briged ಉದ್ದೇಶ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬ್ರೀಗೇಡ್ನ ಸಂಚಾಲಕರಾದ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಬಸವನ ಬಾಗೇವಾಡಿಯಲ್ಲಿ 1008 ಸಾಧು-ಸಂತರ ಪಾದ ಪೂಜೆಯೊಂದಿಗೆ ಕ್ರಾಂತಿವೀರ ರಾಯಣ್ಣ ಬ್ರೀಗೇಡ್ ಉದ್ಘಾಟಿಸಿ ಮಾತನಾಡಿದರು.

ನಾವು ಇಂದಿನಿಂದಲೇ ನಮ್ಮ ಹೃದಯದಲ್ಲಿ ದೇಶ ಮತ್ತು ಧರ್ಮ ಉಳಿಸುವ ಮತ್ತು ಅದಕ್ಕಾಗಿ ತ್ಯಾಗ ಮಾಡುವ ಸಿದ್ದಾಂತವನ್ನು ರೂಢಿಸಿಕೊಳ್ಳಬೇಕು. ಇವತ್ತಿನಿಂದ ಮುಂದೇ ಜೀವನದಲ್ಲಿ ಯಾವುದೇ ಜಾತಿ ಮಾಡಲ್ಲ ಜಾತ್ಯಾತೀತ ವ್ಯಕ್ತಿಯಾಗಿ ಈ ದೇಶದ ಸಂಸ್ಕøತಿ ಮತ್ತು ಧರ್ಮವನ್ನು ರಕ್ಷಿಸುತ್ತೇನೆ ಎಂಬ ಪ್ರತಿಜ್ಞೆ ಮಾಡೋಣ ಎಂದರು.
Also read: ಸಿಬಿಎಸ್ಇ ಶಾಲೆಗಳ ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನ | ಪೋದಾರ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ. ಗರ್ಭಧರಿಸಿದ ಹಸುವಿನ ಚಿತ್ರವನ್ನು ವಾಟ್ಸಾಪ್ನಲ್ಲಿ ಪ್ರಕಟಿಸಿ ಅಂತಹ ಹಸುವನ್ನು ಕಡಿದು ಮಾರಾಟ ಮಾಡುವ ಜಾಲ ವ್ಯಾಪಾಕವಾಗಿದೆ. ಕಣ್ಣೆದುರೇ ಕೆಚ್ಚಲು ಮತ್ತು ಬಾಲವನ್ನು ಕಡಿಯುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ದುಃಖ ತಂದಿದೆ. ಸತ್ತು ಸ್ವರ್ಗ ಸೇರಿದ ಹೋರಾಟಗಾರರು ಇದಕ್ಕಾಗಿ ನಾವು ಸ್ವಾತಂತ್ರ್ಯ ಪಡೆಯಬೇಕಿತ್ತ ಎಂದು ದುಃಖಿಸುತ್ತಿದ್ದಾರೆ ಎಂದರು.
ನಮ್ಮ ಸರ್ಕಾರವಿದ್ದಾಗ ನೂರಾರು ಕೋಟಿಗಳನ್ನು ಮಠಗಳ ಅಭಿವೃದ್ಧಿಗೆ ಕೊಟ್ಟಿದ್ದೆವು. ಇವತ್ತು 1008 ಸ್ವಾಮೀಜಿಗಳು ಇಲ್ಲಿ ಬಂದಿದ್ದಾರೆ. ಕೆಲವರು ಗುಡಿಸಿಲಿನಲ್ಲಿದ್ದು ಧರ್ಮ ಸಂಘಟನೆ ಮಾಡುತ್ತಿದ್ದಾರೆ. ಇದನ್ನು ನೋಡಿದಾಗ ಕಣ್ಣೀರು ಬರುತ್ತದೆ. ಹಲವು ಪೀಳಿಗೆಗಳಿಂದ ಒಕ್ಕಲುತನ ಮಾಡಿಕೊಂಡು ಬಂದಿದ್ದ ರೈತರ ಜಮೀನುಗಳು ವಕ್ಫ್ ಆಸ್ತಿಯಾಗಿದೆ. ಇನ್ನು ಮುಂದೆ ಇದಕ್ಕೆಲ್ಲ ಅವಕಾಶ ಕೊಡಬಾರದು ಎಂಬ ಉದ್ದೇಶದಿಂದ ಬ್ರೀಗೇಡ್ ರಚನೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಉತ್ತರಕರ್ನಾಟಕ ಭಾಗದ 1008ಕ್ಕಿಂತಲೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಮತ್ತು ಬ್ರೀಗೇಡ್ನ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post