ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ #Bajarangadal activist Harsha murder ಹಾಗೂ ಆನಂತರ ನಡೆದ ಹಿಂಸಾಚಾರದ ವಿಚಾರದಲ್ಲಿ ಗುಪ್ತಚರ ಇಲಾಖೆ ವೈಫಲ್ಯವಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ #Chakravarthi Sulibele ವಾಗ್ದಾಳಿ ನಡೆಸಿದ್ದಾರೆ.
ಹತ್ಯೆಗೀಡಾದ ಹರ್ಷನ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿರುವುದು ಸಮಾಧಾನಕರ ಸಂಗತಿ. ಆದರೆ, ಇದರಲ್ಲಿ ಗುಪ್ತಚರ ಇಲಾಖೆ ವೈಫಲ್ಯವಾಗಿದೆ ಎಂಬುದು ನನ್ನ ಅನಿಸಿಕೆ ಎಂದರು.
ಶಾಂತಿರೀತಿಯಂದಿದ್ದ ಶಿವಮೊಗ್ಗದಲ್ಲಿ ಕೆಲವು ಬಾರಿ ಕೋಮುದಳ್ಳರಿ ಹಚ್ಚಲಾಗಿದೆ. ಹಿಂದೆ ಪಿಎಫ್’ಐ ರ್ಯಾಲಿ ವೇಳೆ ಗಾಜನೂರು ಬಳಿ ಸುಮ್ಮನೆ ಹೋಗುತ್ತಿದ್ದ ವಿಶ್ವನಾಥ್ ಎನ್ನುವವರನ್ನು ಹತ್ಯೆ ಮಾಡಿದ್ದರು, ಹಲವು ಕೊಲೆಗಳಾಗಿವೆ, ಗಣೇಶೋತ್ಸವದ ಸಂದರ್ಭಗಳಲ್ಲಿ ದುಷ್ಕೃತ್ಯಗಳಗಾಗಿವೆ. ಇಷ್ಟೊಂದು ಕೋಮುವಿರೋಧಿ ಮನಃಸ್ಥಿತಿಯ ವ್ಯಕ್ತಿಗಳು ಇರುವ ಕಡೆಗಳಲ್ಲಿ ಸರ್ಕಾರ ರಕ್ಷಣೆ ಕೊಡುವುದರಲ್ಲಿ ಎಡವಿದೆ ಎಂದು ಕುಟುಕಿದರು.
Also read: ಹರ್ಷ ಹತ್ಯೆ, ಹಿಂಸಾಚಾರ ಪ್ರಕರಣ-ಗುಪ್ತಚರ ಇಲಾಖೆ ವೈಫಲ್ಯವೂ ಕಾರಣ: ಸೂಲಿಬೆಲೆ ವಾಗ್ದಾಳಿ
ಶವಯಾತ್ರೆ ನಡೆಯುವ ವೇಳೆ ಕಲ್ಲು ಎಸೆಯುತ್ತಾರೆ ಎಂದರೆ ಹತ್ಯೆ ಮಾಡುವವರಿಗೆ ಬೆಂಬಲಿಸುವವರು ಇನ್ನೂ ಇದ್ದಾರೆ ಎಂಬುದು ತಿಳಿಯುತ್ತದೆ. ಹತ್ಯೆ ಮಾಡಿರುವವರಲ್ಲಿ 20 ವರ್ಷದ ಹುಡುಗ ಇದ್ದಾನೆ ಎಂದರೆ ಅಂತಹ ಮನಃಸ್ಥಿತಿ ವಯಸ್ಸಿನ ಹುಡುಗರು ಇನ್ನು 15 ವರ್ಷಗಳ ಕಾಲ ಅಪಾಯವಿದ್ದಂತೆ. ಇಂದು ಮೂಲಭೂತವಾಗಿ ಮನಃಸ್ಥಿತಿಯನ್ನು ಹೊಸಕಿಹಾಕಬೇಕಿದೆ. ಇವರುಗಳ ಮನಸ್ಸಿನಲ್ಲಿ ಹುದುಗಿರುವ ಜಿಹಾದಿ ಭೂತವನ್ನು ಹೊಡೆದೋಡಿಸಬೇಕಿದೆ. ಇದಕ್ಕಾಗಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಹಿಜಾಬ್’ಗಾಗಿ ಆರಂಭವಾದ ಹೋರಾಟದಲ್ಲಿ ಅದರ ವಿರುದ್ಧ ಹರ್ಷ ಹೋರಾಡುತ್ತಿದ್ದ. ಇದರೊಂದಿಗೆ ಅವನ ವಿರುದ್ಧ ಹಿಂದೆಯಿದ್ದ ದ್ವೇಷವೂ ಸೇರಿಕೊಂಡು ಈಗ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ಇಂತಹ ಸಮಾಜದಲ್ಲಿ ಇಂತಹ ಕೃತ್ಯ ಮಾಡುವವರ ಹೆಡಿಮುರಿಯನ್ನು ಸರ್ಕಾರ ಕಟ್ಟಬೇಕಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post