ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚುನಾವಣೆ ಎಂಬುದು ಕುರುಕ್ಷೇತ್ರ. ಇಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಎಂಬ ಬೇಧವಿಲ್ಲ. ಅವರನ್ನೇ ಎದುರಿಸಬೇಕಾದುದು ಅನಿವಾರ್ಯ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ #Kumar Bangarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧು ಬಂಗಾರಪ್ಪ ನನ್ನ ತಮ್ಮ, ಗೀತಾ #Geetha ನನ್ನ ಸಹೋದರಿ. ಶಿವರಾಜ್ ಕುಮಾರ್ #Shivarajkumar ನನ್ನ ಭಾವ ಎಂಬುದು ನಿಜ. ಆದರೆ, ಚುನಾವಣೆ ಎಂಬ ಕಣದಲ್ಲಿ ಈ ಭಾವನೆಗಳು ಇರುವುದಿಲ್ಲ. ಮುಖ್ಯವಾಗಿ ನನ್ನ ತಮ್ಮ ಎಂದು ನಾನು ಅಂದುಕೊಳ್ಳುತ್ತೇನೆ. ಆದರೆ ಆತ ದ್ವೇಷದ ರಾಜಕಾರಣ ಮಾಡುತ್ತಿದ್ದಾನೆ. ಒಂದು ಕುಟುಂಬವನ್ನು ಪ್ರೀತಿಸದವನು ರಾಜ್ಯದ ಜನರನ್ನು ಹೇಗೆ ಪ್ರೀತಿಸುತ್ತಾನೆ ಎಂದು ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

Also read: ನೋಡ್ತಿರಿ, ಆ ದಿನಾಂಕಕ್ಕೆ ಮನೆ ಖಾಲಿ ಮಾಡ್ತಾರೆ | ಗೀತಾ ವಿರುದ್ಧ ಕುಮಾರ್ ಬಂಗಾರಪ್ಪ ವ್ಯಂಗ್ಯ
ಸಂಸದ ಬಿ.ವೈ. ರಾಘವೇಂದ್ರ #B Y Raghavendra ಅವರು ಸಂಸದರಾದ ಮೇಲೆ ಸಾಕಷ್ಟು ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಅವರ ಅಭಿವೃದ್ಧಿಯೇ ಅವರನ್ನು ಗೆಲ್ಲಿಸುತ್ತದೆ. ಇದು ರಾಷ್ಟ್ರದ ಪ್ರಶ್ನೆ, ಜಾತಿಗೆ ಮತವಲ್ಲ, ದೇಶಕ್ಕೆ ಮತ, ಮೋದಿಗೆ ಮತ, ಮೋದಿ #PM Modi ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post