ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ನಾಡಿನಲ್ಲೆ ಹುಟ್ಟಿ ಕನ್ನಡ ನಾಡಿನಲ್ಲೆ ಸಮುದ್ರ ಸೇರುವ ಶರಾವತಿ ನದಿಯನ್ನು ಹಿಂಡಿದಷ್ಟು ಇನ್ಯಾವ ನದಿಯನ್ನೂ ನಮ್ಮ ಆಡಳಿತಗಳು ಹಿಂಡಲು ಸಾಧ್ಯವಿಲ್ಲ ಏಕೆಂದರೆ ಈ ನದಿಗೆ ಬೇರೆ ರಾಜ್ಯದ ಹಂಗಿಲ್ಲ ಎಂದು ಅರ್ಥಶಾಸ್ತ್ರಜ್ಞ ಬಿ.ಎಂ. ಕುಮಾರಸ್ವಾಮಿ ಹೇಳಿದರು.
ರಾಜ್ಯ ಜೀವವೈವಿಧ್ಯ ಮಂಡಳಿ, ವೃಕ್ಷಲಕ್ಷ ಆಂದೋಲನ, ಜಿಲ್ಲೆಯ ಅನೇಕ ಪರಿಸರ ಸಂಘಟನೆಗಳ ಸಹಯೋಗದಲ್ಲಿ ನಡೆದ ಅಂತರ್ರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ, ಅದರಂಗದ ಪಶ್ಚಿಮಘಟ್ಟ ಪ್ರದೇಶದಲ್ಲಿನ ನದಿ ಮೂಲಗಳ ಜಾಥಾದ ಶರಾವತಿ ಉಗಮ ಸ್ಥಾನ ತೀರ್ಥಹಳ್ಳಿ ತಾಲ್ಲೂಕು ಅಂಬುತೀರ್ಥದಲ್ಲಿ ಸ್ಥಳೀಯ ಆಡಳಿತದೊಂದಿಗೆ ನಡೆದ ಸಮಾಲೋಚನಾ ಸಭೆ ಉದ್ಧೇಶಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯ ಅಂಬುತೀರ್ಥದಲ್ಲಿ ಹುಟ್ಟಿ ನೆರೆಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರ ಸೇರುವ ತೀರಾ ಕಿರು ಮಾರ್ಗದ ನದಿ ಇದಾದರೂ ಇಡೀ ದೇಶದಲ್ಲಿ ಪ್ರಖ್ಯಾತಿ ಹೊಂದಿರುವ ನದಿ. ಇಷ್ಟು ಕಿರಿದಾದ ನದಿಗೆ ಲಿಂಗನಮಕ್ಕಿ, ಗೇರುಸೊಪ್ಪ ಎರಡು ಕಡೆ ತಡೆ ಗೋಡೆ ನಿರ್ಮಿಸಿದ್ದಲ್ಲದೆ ಇದೀಗ ರಾಜಧಾನಿಗೆ ವಿದ್ಯುತ್ ನೀಡಲು ಪುನಃ ಸಮುದ್ರ ಸೇರುವ ಅನತಿ ದೂರದಿಂದ ವಾಪಸ್ಸು ಮೇಲ್ಮುಖವಾಗಿ ಅಂತರ್ಮಾರ್ಗವಾಗಿ ನೀರೆತ್ತುವ ಮೂಲಕ ಕರಾವಳಿಯ ಜನತೆಗೆ, ಅಪರೂಪದ ಜೀವಿ ಸಿಂಗಳೀಕಕ್ಕೆ ಆತಂಕ ಸೃಷ್ಟಿಸಲಾಗಿದೆ. ಸರ್ಕಾರಕ್ಕೆ ಜೀವವೈವಿಧ್ಯದ ಸಂರಕ್ಷಣೆಯ ಕಾರ್ಯಕ್ಕಿಂತಲು ಅಭಿವೃದ್ಧಿ ಹೆಸರಿನ ಇಂತಹ ಜೀವ ಮಾರಕ ಚಟುವಟಿಕೆಗಳತ್ತ ಸರ್ಕಾರಗಳು ಮುಂದಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು.
Also read: ಕಾರು ಡಿಕ್ಕಿ: ಫುಟ್ ಪಾತ್ ಮೇಲೆ ಹೋಗುತ್ತಿದ್ದ ವ್ಯಕ್ತಿ ಸಾವು
ನದಿ ಮೂಲಗಳು, ನದಿ ಕಣಿವೆ, ನದಿ ತೀರ ಜೀವವೈವಿಧ್ಯತೆಯ ಸಂರಕ್ಷಣೆಗೆ ಪ್ರಮುಖವಾಗಿವೆ. ಈ ನೆಲೆಯ ನೈಜ ಜೀವನೋಪಾಯಕ್ಕಾಗಿ ನಮ್ಮ ನೀರಿನ ಮೂಲಗಳ ರಕ್ಷಣೆಯಾಗಬೇಕು. ಆಡಳಿತಗಳು ಅಭಿವೃದ್ಧಿ ಹೆಸರಲ್ಲಿ ಅವೈಜ್ಞಾನಿಕ ಯೋಜನೆಗಳನ್ನು ರೂಪಿಸಲು ಅವಕಾಶ ನೀಡಬಾರದು ಎಂದರು.
ದೇಶದ ಅತ್ಯುನ್ನತ ನೈಸರ್ಗಿಕ ತಾಣವಾಗಿರುವ ಆಗುಂಬೆ ಪರ್ವತ ಶ್ರೇಣಿಯಲ್ಲಿ ಸುರಂಗಮಾರ್ಗ ಮಾಡುವ ಮೂರ್ಖ ಯೋಜನೆಯೊಂದಿಗೆ ನಿಸರ್ಗ ದತ್ತ ಪ್ರಕೃತಿಯ ಸಿರಿಯನ್ನು ಹೊಸಕಿಹಾಕಲು ಹೊರಟಿದ್ದಾರೆ. ಪ್ರಬಲ ವಿರೋಧವನ್ನು ವ್ಯಕ್ತಪಡಿಸಲು ಪರಿಸರ ಸಂಘಟನೆಗೆ ಮುಂದಾಗಬೇಕು ಎಂದರು.
ಪಶ್ಚಿಮ ಘಟ್ಟ ನದಿ ಮೂಲಗಳ ಜಾಥಾ ಕುರಿತು ವೃಕ್ಷಲಕ್ಷ ಆಂದೋಲನದ ಅನಂತಹೆಗಡೆ ಅಶಿಸರ ವಿವರಿಸಿದರು. ರಾಜ್ಯ ಜೀವವೈವಿಧ್ಯ ಮಂಡಳಿಯ ಅಧಿಕಾರಿ ಪವಿತ್ರ, ಕುಮಾರ್, ಪ್ರಸನ್ನ, ತೀರ್ಥಹಳ್ಳಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಶೈಲಾ, ಅರಣ್ಯ, ಕಂದಾಯ, ತಾಪಂ, ಗ್ರಾಪಂ, ವಿವಿದ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಅಂಬುತೀರ್ಥ ದೇವಸ್ಥಾನ ಆಡಳಿತ ಮಂಡಳಿಯವರು, ವೃಕ್ಷಲಕ್ಷ ಆಂದೋಲನದ ಕೆ.ವೆಂಕಟೇಶ್, ಅನಂತರಾಮ್, ಶ್ರೀಪಾದ ಬಿಚ್ಚುಗತ್ತಿ, ನಿರ್ಮಲ ತುಂಗಾ ಅಭಿಯಾನದ ಬಾಲಕೃಷ್ಣ ನಾಯ್ಡು, ತ್ಯಾಗರಾಜ ಮಿತ್ಯಾಂತ, ಪ್ರೊ.ವರದರಾಜ್ ಇದ್ದರು.
ಸಾಗರ ತಾಲ್ಲೂಕು ವರದಹಳ್ಳಿಯಿಂದ ಆರಂಭಗೊಂಡ ಜಾಥಾ ವರದಾಮೂಲ, ಅಮ್ಮನಘಟ್ಟ, ಬಿಲ್ಲೇಶ್ವರ, ಅಂಬುತೀರ್ಥ, ಕಡೆಯದಾಗಿ ತೀರ್ಥಹಳ್ಳಿಯಲ್ಲಿ ಮುಕ್ತಾಯಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post