ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ೪ನೆಯ ವಾರ್ಡ್ ವ್ಯಾಪ್ತಿಯ ಶಾಂತಿನಗರದ (ರಾಗಿಗುಡ್ಡ) ಮಲ್ಲಿಕಾರ್ಜುನ ನಗರದಲ್ಲಿ ಅನಧಿಕೃತವಾಗಿ ಮಸೀದಿ ಮತ್ತು ಮದರಸ ನಿರ್ಮಿಸಲು ಯೋಜಿಸಿರುವುದನ್ನು ನಿಷೇಧಿಸುವಂತೆ ವಿಶ್ವಹಿಂದೂ ಪರಿಷದ್-ಬಜರಂಗದಳ ಆಗ್ರಹಿಸಿದೆ.
ಸದರಿ ಜಾಗವು ಮಹಾನಗರಪಾಲಿಕೆಗೆ ಸಂಬಂಧಪಟ್ಟಿರುತ್ತದೆ ಹಾಗೂ ಸ್ಥಳೀಯ ನಾಗರೀಕರ ಹಿತದೃಷ್ಟಿಯಿಂದ ಪಾಲಿಕೆಯು ಎಲ್ಲಾ ಸಾರ್ವಜನಿಕರಿಗೆ ಉಪಯೋಗಕ್ಕೆ ಅನುಕೂಲವಾಗಲು ಇದನ್ನು ಮೀಡಲಿಡಬೇಕು ಎಂದು ವಿನಂತಿಸಿದ್ದಾರೆ.
ಭವಿಷ್ಯದಲ್ಲಿ ಇದು ಕೋಮು ಗಲಭೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮಸೀದಿ ಮತ್ತು ಮದರಸ ನಿರ್ಮಾಣ ಮಾಡಲು ಹೊರಟಿರುವ ಆ ಸಮಿತಿಯ ವಿರುದ್ಧ ಕಾನೂನಾತ್ಮಕವಾಗಿ ಕ್ರಮವನ್ನು ಜರುಗಿಸಿ ಪಾಲಿಕೆಯಿಂದ ಯಾರಿಗೂ ಪರವಾನಿಗೆ ನೀಡದೆ ಈ ಜಾಗದಲ್ಲಿ ಯಾವುದೇ ಕಾರ್ಯ ಚಟುವಟಿಕೆ ನಡೆಯದಂತೆ ನಿಷೇಧಿಸಬೇಕಾಗಿ ವಿಶ್ವಹಿಂದೂ ಪರಿಷದ್-ಬಜರಂಗದಳ ಪಾಲಿಕೆ ಮೇಯರ್ಗೆ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post