ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಟಿಕೇಟ್ ದೊರೆಯದೇ ಇದ್ದರೂ ತಾವೇಕೆ ಬಂಡಾಯ ಏಳಲಿಲ್ಲ ಎಂಬ ಹಲವರ ಪ್ರಶ್ನೆಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಉತ್ತರ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಗ್ರಾಮಾಂತರ ಭಾಗದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಆಗ ಮೋದಿಯವರು Modi ಒಂದು ಕುಟುಂಬದ ಹಿಡಿತದಲ್ಲಿ ಪಕ್ಷದ ಅಧಿಕಾರ ಇರಬಾರದು ಎಂದು ಕಾಂಗ್ರೆಸ್ ವಿರುದ್ಧ ಹಲವು ಬಾರಿ ಟೀಕಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿ ವರಿಷ್ಠರು ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದಾಗ ಒಪ್ಪಿಕೊಂಡೆ ಎಂದರು.
Also read: ಹಿಂದೂ ದೇವಾಲಯಗಳಿಗೆ ಮಾತ್ರ ಏಕೆ ತೆರಿಗೆ? ರಾಜ್ಯಪಾಲರು ಗರಂ | ಮಸೂದೆ ತಿರಸ್ಕಾರ
ಆದರೆ, ಆಗ ಆ ಕುಟುಂಬದಲ್ಲಿ ಯಡಿಯೂರಪ್ಪ Yadiyurappa ಹಾಗೂ ರಾಘವೇಂದ್ರ Raghavendra ಇದ್ದರು. ಆನಂತರ ಇನ್ನೊಬ್ಬರು ಶಾಸಕರಾದರು. ಅಲ್ಲಿಗೇ ನಿಲ್ಲದೇ, ದೆಹಲಿಗೆ ತೆರಳಿ ಹಠ ಹಿಡಿದು ಪಕ್ಷದ ರಾಜ್ಯಾಧ್ಯಕ್ಷರೂ ಸಹ ಆದರು. ಹಾಗಾದರೆ, ಒಂದು ಕುಟುಂಬದ ಹಿಡಿತದಲ್ಲಿ ಅಧಿಕಾರ ಇರಬಾರದು ಎಂಬ ಸಿದ್ದಾಂತ ಎಲ್ಲಿ ಹೋಯಿತು. ಕಾಂಗ್ರೆಸ್ ಪಕ್ಷದಲ್ಲಿನ ಕುಟುಂಬ ರಾಜಕಾರಣದ ಸಂಸ್ಕೃತಿ ರಾಜ್ಯ ಬಿಜೆಪಿಗೂ ಸಹ ತಟ್ಟಿದೆ ಎಂದರು.
ಇದನ್ನು ಚಿಂತಿಸಿ ಈ ಕುಟುಂಬ ರಾಜಕಾರಣದ ವಿರುದ್ಧ ಹೋರಾಟಬೇಕು, ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕಾಗಿ ಈಗ ಚುನಾವಣೆಗೆ ಸ್ಪರ್ಧಿಸಬೇಕಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post