ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಂಬಿಕೆಗೆ ಎಂದಿಗೂ ದ್ರೋಹ ಮಾಡಲ್ಲ, ಕಾರ್ಯಕರ್ತರಿಗೆ ಅವಮಾನ ಮಾಡುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಭರವಸೆ ನೀಡಿದರು.
ಗ್ರಾಮಾಂತರ ಭಾಗದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೋದಿಯವರೇ Modi ನಿಮ್ಮ ಮನೆಗೆ ಬಂದು ಮಾತನಾಡಿದರೆ, ಕೊನೆ ಗಳಿಗೆಯಲ್ಲಿ ನಿರ್ಧಾರ ವಾಪಾಸ್ ತೆಗೆದುಕೊಂಡರೇ ಎಂದು ಹಲವು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಆದರೆ, ನನ್ನ ನಿರ್ಧಾರವನ್ನು ಬೆಂಬಲಿಸಿ ಹಲವು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಯಕರ್ತರಿಗೆ ಅವಮಾನ ಆಗಲು ಬಿಡುವುದಿಲ್ಲ ಎಂದರು.
ಯಾವುದೇ ಕಾರಣಕ್ಕೂ ನಿರ್ಧಾರ ವಾಪಾಸ್ ತೆಗೆದುಕೊಳ್ಳುವುದಿಲ್ಲ. ಈಗ ಬರೀ ಚುನಾವಣೆಗೆ ಸ್ಪರ್ಧಿಸುವುದಲ್ಲ, ಗೆದ್ದು ಆಗಿರುವ ಅನ್ಯಾಯವನ್ನು ಸರಿ ಪಡಿಸಬೇಕು ಎಂದು ಕರೆ ನೀಡಿದರು.
Also read: ಅಸೆಂಬ್ಲಿ ಎಲೆಕ್ಷನ್ ಟೈಮಲ್ಲಿ ತಾವೇಕೆ ಬಂಡಾಯ ಏಳಲಿಲ್ಲ? ಈಶ್ವರಪ್ಪ ಹೇಳಿದ್ದೇನು?
ಬಹಳಷ್ಟು ಶ್ರಮ ವಹಿಸಿದರೆ ಮಾತ್ರ ಗೆಲುವು ಸಾಧ್ಯ ಎಂದು ಸಿಗಂಧೂರಿಗೆ ಮೊನ್ನೆ ಹೋದ ವೇಳೆ ವಿದ್ವಾಂಸರು ಧ್ಯಾನದಲ್ಲಿ ಕಂಡು ಹೇಳಿದ್ದಾರೆ. ಮಾರುತಿ ದೇವರಿಗೆ ಪೂಜೆ ಸಲ್ಲಿಸುವ ವೇಳೆಯಲ್ಲೂ ಸಹ ಪ್ರಸಾದ ಸಿಕ್ಕಿದೆ ಎಂದರು.
ಇನ್ನು, ನಿಮ್ಮ ಮನೆಗಳಿಗೆ ಇನ್ನೊಂದು ಗುಂಪು ಬರುತ್ತದೆ. ಅವರಿಗೇಕೆ ಓಟ್ ಮಾಡುತ್ತೀರಿ, ನಮಗೆ ಓಟ್ ಮಾಡಿ ಎಂದು ನಿಮ್ಮನ್ನು ಮನವೊಲಿಸುವ ಕೆಲಸ ಮಾಡುತ್ತಾರೆ. ಅಂತಹವರಿಗೆ ಸೊಪ್ಪು ಹಾಕಬೇಡಿ ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post