ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೆನ್ನೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ Minister Madhu Bangarappa ಹಾಗೂ ಕಾಂಗ್ರೆಸ್ನ ಕೆಲ ನಾಯಕರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ಮತದಾರ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಪ್ರಜ್ಞಾವಂತರ ನಾಡಾಗಿದೆ. ರಾಷ್ಟ್ರಕವಿ ಕುವೆಂಪು, ಶರಣ-ಶರಣೆಯರು ಹಾಗೂ ಅನೇಕ ಮಹನೀಯರು ಜನ್ಮತಾಳಿದ ಜಿಲ್ಲೆಯಾಗಿದ್ದು, ಇಲ್ಲಿಯ ಜನ ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯನ್ನು ಗಮನಿಸಿ ಮತ ನೀಡುತ್ತಾರೆ ಎಂದರು.
ಸಚಿವರ ಹೇಳಿಕೆ ಗಮನಿಸಿದಾಗ ನನಗೆ ನಗು ಬರುತ್ತದೆ. ಶರಾವತಿ ಸಂತ್ರಸ್ಥರಿಗೆ ಹಕ್ಕುಪತ್ರ, ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳಿಗೆ ಅಭಿವೃದ್ಧಿ 5 ವರ್ಷದಲ್ಲಿ ಸಂಸದ ರಾಘವೇಂದ್ರ ಏನು ಮಾಡಿದ್ದಾರೆ. ಸದನದಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ಸಚಿವರು ಗೇಲಿ ಮಾಡಿದ್ದಾರೆ. ಅವರು ನನ್ನ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಹೋದರೆ ನಾನು ಮೂರು ಬಾರಿ ಸಂಸದನಾದಾಗ ಏನೇನು ಮಾಡಿದ್ದೇ ಎಂಬುವುದರ ಸಂಪೂರ್ಣ ವಿವರ ಅದರಲ್ಲಿದೆ. ಕರ ಪತ್ರದ ಮೂಲಕವು ದಾಖಲು ಸಮೇತ ಕ್ಷೇತ್ರದ ಮತದಾರನಿಗೆ ಈಗಾಗಲೇ ತಲುಪಿಸಲಾಗಿದೆ. ಮೊದಲು ಕಾಂಗ್ರೆಸ್ನವರು ಅದನ್ನು ಓದಿಕೊಳ್ಳಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಅವರಗಿಲ್ಲ. ಯುವ ಶಕ್ತಿಗೆ ನಾನು ಏನು ಮಾಡಿದ್ದೇನೆ ಎಂಬುವುದು ಗೊತ್ತಿದೆ. ಅಂತರಾಷ್ಟ್ರೀಯ ಶಕ್ತಿಗಳು ಮೋದಿ ಅಧಿಕಾರಕ್ಕೆ ಬಾರದಾಗೇ ಷಡ್ಯಂತರ ರೂಪಿಸುತ್ತಿದೆ ಎಂದರು.
Also read: ಮೋದಿಯೇ ಮನೆಗೆ ಬಂದು ಮಾತನಾಡಿದರೆ!? ಕಾರ್ಯಕರ್ತರಿಗೆ ಈಶ್ವರಪ್ಪ ಹೇಳಿದ್ದೇನು?
ನೀತಿ ಸಂಹಿತೆ ಜಾರಿ ಇದ್ದರೂ ಕೂಡ ಪ್ರಧಾನಿಯವರ ಕಾರ್ಯಕ್ರಮದಲ್ಲಿ ಜನ ನಭೂತೋ, ನಾಭವಿಷ್ಯತಿ ಎಂಬಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಮತದಾರ ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂದು ಬಯಸುತ್ತಾನೆ. ಇನ್ನೊಂದು ವಾರದಲ್ಲಿ ಸರಿಯಾದ ಅಖಾಡ ಸಿದ್ದವಾಗುತ್ತದೆ. ಬಿಜೆಪಿಯ ರಾಷ್ಟ್ರೀಯ ವಿಚಾರಗಳು ಕಣ್ಣ ಮುಂದಿದೆ. ಕ್ಷೇತ್ರದ ಮತದಾರರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post