ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ಕತ್ತಲಾಗುತ್ತಿದ್ದಂತೆ ಯಾವುದೊ ಪ್ರಪಂಚಕ್ಕೆ ತಿರುಗುತ್ತದೆ. ಹಗಲಿಡಿ ಭಿಕ್ಷಾಟನೆ ಹೆಸರಲ್ಲಿ ಜನರಿಂದ ಸುಲಿಗೆ ಮಾಡಿದ ಹಣ ರಾತ್ರಿಯಾಗುತ್ತಿದ್ದಂತೆ ತೀರ್ಥ ಸೇವನೆಗೆ ಬಳಕೆಯಾಗಿ ಜಗಳ ಹೊಡೆದಾಟ ಶುರುವಾಗುತ್ತದೆ. ಇದಕ್ಕೆ ಬಸ್ ಸ್ಟ್ಯಾಂಡ್ ನ ಯಾವುದೋ ಮೂಲೆ ಆಗಬೇಕಿಂದಿಲ್ಲ. ಮುಂದುಗಡೆ ಪ್ರಯಾಣಿಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಮಿಸಿದ್ದ ವಿಶಾಲ ಜಾಗವೇ ಇವರುಗಳ ಕಾಯಕಕ್ಕೆ ವೇದಿಕೆಯಾಗುತ್ತದೆ.ಕೆಲವು ಅಮಾಯಕ ಪ್ರಯಾಣಿಕರು ಇಲ್ಲಿ ವಿಶ್ರಾಂತಿಗೆ ಬಂದಿದ್ದರೆ ಅವರನ್ನು ಹೆದರಿಸಿ ಸುಲಿಗೆ ಮಾಡುವ ಕಾಯಕವೂ ನಡೆಯುತ್ತದೆ.
ನಿನ್ನೆ ರಾತ್ರಿ 9.30 ರ ಸುಮಾರಿಗೆ ಉಡುಪಿಯಿಂದ ಖಾಸಗಿ ಬಸ್ ನಲ್ಲಿ ಬಂದು ನಿಲ್ದಾಣದಲ್ಲಿ ಇಳಿದೆ. ಅಷ್ಟೊತ್ತಿಗೆ ನಿಲ್ದಾಣ ದ ಮುಂಭಾಗದ ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಬಾಟಲಿಯೊಂದು ಫಳ್ ಎನ್ನುವ ಶಬ್ದದೊಂದಿಗೆ ಪುಡಿ ಪುಡಿ ಯಾಗಿ ಬಿತ್ತು. ಭಿಕ್ಷುಕರಂತಿದ್ದ ಒಬ್ಬಾತ ಆ ಗ್ಯಾಂಗ್ ಜೊತೆ ಜಗಳವಾಡಿ ಬೀರ್ ಬಾಟಲ್ ಒಡೆದು ಹಾಕಿದ್ದ. ಜನ ಓಡಾಡುವ ಜಾಗದಲ್ಲಿ ಗಾಜಿನ ಚೂರುಗಳು!
ಸ್ಥಳದಲ್ಲಿ ಕಾರ್ಯನಿಮಿತ್ತ ಇರುವ ಒಂದಿಷ್ಟು ಜನರಿಗೆ ಪ್ರತಿನಿತ್ಯದ ಗೋಳು ಇದಾದ್ದರಿಂದ ಗೊಣಗಾಡುವುದು, ಉಳಿದ ಪ್ರಯಾಣಿಕರು ಆದಷ್ಟು ಬೇಗ ಈ ಸ್ಥಳದಿಂದ ದೂರ ಹೋದರೆ ಸಾಕು ಎಂದು ಚಡಪಡಿಸುವುದು ಕಂಡುಬಂತು!
ಶಿವಮೊಗ್ಗ ಪೊಲೀಸರು ಪ್ರೈವೇಟ್ ಬಸ್ ನಿಲ್ದಾಣದ ಈ ಪಬ್ಲಿಕ್ ಇಷ್ಯೂಗೆ ಒಂದು ಫುಲ್ ಸ್ಟಾಪ್ ನೀಡುವರೇ? ಕಾದು ನೋಡೋಣ.
ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post