ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುಪ್ರಸಿದ್ಧ ಗಾಯಕಿ, ಕರುನಾಡ ಗಾನತಾರೆ ಡಾ. ಭೂಮಿಕಾ ಎಲ್. ಮಧುಸೂದನ್ ಅವರಿಗೆ, ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ 2026ರ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ #AryabhataInternationalAward ಲಭಿಸಿದೆ.
ಮೇ 23 ರ ಶನಿವಾರ ಸಂಜೆ 6ಗಂಟೆಗೆ ನಗರದ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
Also Read>> ನಾಳೆ ರೋಜಗಾರ್ ಮೇಳ | 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಣೆ
ಭೂಮಿಕಾ ಮಧುಸೂಧನ್ ಪರಿಚಯ
ಸುಪ್ರಸಿದ್ಧ ವೈದ್ಯ ಡಾ. ಕೆ ಮಧುಸೂದನ ಮತ್ತು ಎಂಜಿನಿಯರ್ ಲಕ್ಷ್ಮೀ ಮಧುಸೂದನ ಅವರ ಸುಪುತ್ರಿ ಡಾ. ಭೂಮಿಕ ಎಲ್. ಮಧುಸೂದನ್ ಅವರು ಕೇರಳದ #Kerala ಕಣ್ಣೂರಿನಲ್ಲಿ ಜನಿಸಿದರು.
ಸತತ ಹತ್ತು ವರ್ಷಗಳ ಕಾಲ ರಾಷ್ಟ್ರೀಯ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗುತ್ತಾ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಉತ್ತಮ ಅಂಕಗಳೊಂದಿಗೆ ಪೂರೈಸಿದ ಸಾಧಕಿ ಈಕೆ.
ಬಾಲ್ಯದಿಂದಲೂ ಸಂಗೀತದ ಕಡೆಗೆ ವಿಶೇಷ ಒಲವಿದ್ದ ಭೂಮಿಕಾ ಅವರು ಶಾಸ್ತ್ರೀಯ ಸಂಗೀತ, ಭಾವಗೀತೆಗಳು, ಭಜನೆಗಳು, ಲಘು ಸಂಗೀತ, ಹಿಂದೂಸ್ಥಾನಿ ಸಂಗೀತ, ಚಲನ ಚಿತ್ರ ಗೀತೆಗಳು ಇತ್ಯಾದಿಗಳನ್ನು ಕಲಿಯುತ್ತಾ ಹಲವಾರು ರಸಿಕರ ಮನಸ್ಸನ್ನು ತಲುಪಿದ್ದಾರೆ. ಉತ್ತಮ ಕಲಾವಿದೆಯಾದ ಇವರು ಆಕಾಶವಾಣಿ, ದೂರದರ್ಶನ ಇಂತಹ ಸುಪ್ರಸಿದ್ದ ವೇದಿಕೆಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.
ದೇಶ ವಿದೇಶಗಳ ವೇದಿಕೆಗಳೂ ಸೇರಿ ಇಲ್ಲಿಯವರೆಗೂ ಸರಿಸುಮಾರು 800 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿ ಪ್ರಖ್ಯಾತರಾಗಿದ್ದಾರೆ. ಅಲ್ಲದೇ, ಹತ್ತು ಭಾಷೆಗಳಲ್ಲಿ ಹಾಡುವ ಸಾಮರ್ಥ್ಯವನ್ನು ಗಳಿಸಿಕೊಂಡಿದ್ದಾರೆ.
Also Read>> ಕನ್ಯಾಕುಮಾರಿ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲಿನ ಸಮಯ ಬದಲು
ಹಲವಾರು ಪತ್ರಿಕೆಗಳಿಗೆ ಸಂಗೀತದ ಬಗ್ಗೆ ಲೇಖನಗಳನ್ನು ಬರೆದಿರುವ ಇವರು ಸುಪ್ರಸಿದ್ದ ಆಡಿಯೋ ವೇದಿಕೆಗಳಲ್ಲಿ ಶ್ಲಾಘನೀಯ ರೀತಿಯಲ್ಲಿ ತಮ್ಮ ಕಲೆಯನ್ನು ಪ್ರಸ್ತುತ ಪಡೆಸುತ್ತಾ ಸಂಗೀತ ಕಂಪನಿಗಳಿಗೆ ಸಿನಿಮಾ ಹಾಡುಗಳನ್ನೂ, ದೇವರ ನಾಮಗಳನ್ನೂ ಹಾಡಿ ಖ್ಯಾತಿ ಪಡೆದಿದ್ದಾರೆ.
ಅಮೇರಿಕಾ, ಯುಕೆ, ಜರ್ಮನಿ, ಕರ್ತಾ, ಯುಎಇ ಕೀನ್ಯಾ ಇತ್ಯಾದಿ ದೇಶಗಳ ವೇದಿಕೆಗಳಲ್ಲಿ ಹಾಡಿ ಅಪಾರ ಅನುಭವವನ್ನು ಸಂಪಾದಿಸಿರುತ್ತಾರೆ.
ಹಾಗೆಯೇ 2023 ರಲ್ಲಿ ‘ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್’ ಮೂಲಕ ವೆಸ್ಟರ್ನ್ ಪಾಪ್ ಓಕಲ್’ಗೆ ಸಂಬಂಧಪಟ್ಟ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ.
Also Read>> ಮಧ್ಯ ಕರ್ನಾಟಕಕ್ಕೆ ಹೈಕೋರ್ಟ್ ಪೀಠ ಅತ್ಯಗತ್ಯ: ಶಿವಮೊಗ್ಗದ ವಕೀಲರ ಹೋರಾಟಕ್ಕೆ ಡಾ. ಧನಂಜಯ ಸರ್ಜಿ ಬೆಂಬಲ
ಇಂತಹ ಪ್ರತಿಭಾಶಾಲಿಯಾದ ಭೂಮಿಕಾ ಅವರು 2012ರಲ್ಲಿ ಕಲಾಶ್ರೀ, 2017 ರಲ್ಲಿ ವಿಶೇಷ ಸಾಧನೆಯ ಬಿರುದು ದೊರೆತಿದೆ. ರೋಟರಿ ಸಂಸ್ಥೆಯ ಉತ್ತಮ ಕಲಾವಿದೆ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಭಾವೈಕ್ಯ ರಾಷ್ಟ್ರೀಯ ಪ್ರಶಸ್ತಿ, ಭಾರತೀಯ ಲಲಿತ ಕಲಾ ಸಂಸ್ಥೆಯ ಕರ್ನಾಟಕ ಕಲಾ ಚೈತ್ರ ಪ್ರಶಸ್ತಿ, ಬಸವಶ್ರೀ ಫೌಂಡೇಶನ್ ನಿಂದ ಸಿದ್ಧಗಂಗಾ ರಾಷ್ಟ್ರೀಯ ರತ್ನ ಪ್ರಶಸ್ತಿ, ಫೋರ್ಟ್ ಹೈ ಸ್ಕೂಲ್’ನ ಪ್ರತಿಭಾಕಾಂಕ್ಷಿ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ ಎನ್ನುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಎಸ್.ಬಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ರಾಜೇಶ್ ಕೃಷ್ಣನ್ ರಂತಹ ಸುಪ್ರಸಿದ್ಧ ಗಾಯಕರೊಡನೆ ವೇದಿಕೆ ಹಂಚಿಕೊಂಡಿರುವ ಇವರು, ರಾಜನ್ ನಾಗೇಂದ್ರ, ವಿ. ಮನೋಹರ್, ಮನೋಮೂರ್ತಿ, ಉಪೇಂದ್ರ, ಗುರುಕಿರಣ್ ಅವರಂತಹ ಪ್ರಖ್ಯಾತ ಸಂಗೀತ ನಿರ್ದೇಶಕರ ಗರಡಿಗಳಲ್ಲಿ ಪಳಗಿ ಅವರೆಲ್ಲರಿಂದ ಶಹಬ್ಬಾಷ್ ಎನಿಸಿಕೊಂಡಿದ್ದಾರೆ.
ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ-ಉದ್ಯಮ ಶೀಲತೆ ಸಚಿವಾಲಯದಿಂದ ಅನುಮೋದಿಸಲ್ಪಟ್ಟಿರುವ ‘ಪರವಾನಗಿ ನೀಡುವ ಸಂಸ್ಥೆ ಇದರ ವತಿಯಿಂದ 2025 ರ ಡಿಸೆಂಬರ್’ನಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಾರೆ.
Also Read>> ಗುಬ್ಬಿಯಲ್ಲಿ ಮೇ 24ರಂದು ‘ವಿಕಾಸ ಸಂಭ್ರಮ-2026’
ಶಾಸ್ತ್ರೀಯ ಸಂಗೀತ ಹಾಗೂ ಚಲನಚಿತ್ರ ಹಾಡುಗಳ ಹಾಡುಗಾರಿಕೆಯ ಸಾಮರ್ಥ್ಯವನ್ನೂ, ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನೂ ಪರಿಗಣಿಸಿ ‘ಆರ್ಯಭಟ – ಅಂತಾರಾಷ್ಟ್ರೀಯ ಪ್ರಶಸ್ತಿ-2026 ಎಂಬ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.
ಪ್ರಸ್ತುತ, ಸುಪ್ರಸಿದ್ದ ಸಂಗೀತ ನಿರ್ದೇಶಕ ಇಳೆಯರಾಜ ಅವರ `ವಾದ್ಯ ತಂಡದ ವಿಭಾಗದಲ್ಲಿ ಹಾಡುವ ಅವಕಾಶವನ್ನು ಗಳಿಸಿಕೊಂಡಿದ್ದಾರೆ. ಅಲ್ಲದೇ, ಇಳೆಯರಾಜ ಅವರ ಒಂದು ತಮಿಳು ಚಲನಚಿತ್ರಕ್ಕೆ ಹಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















