ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ದೇಶದ ಪ್ರಜಾಪ್ರಭುತ್ವವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಂವಿಧಾನ ಸಭೆಯ ಚರ್ಚೆಗಳನ್ನು ಅಧ್ಯಯನ ಮಾಡಬೇಕೆಂದು ಅಮಿತ್ ಶಾ Amith Shah ನಂಬುತ್ತಾರೆ. ಸತತ ಪ್ರಯತ್ನಗಳ ಮೂಲಕ ರಚನೆಯಾದ ಕಾನೂನಿನ ಕರಡು ರಚನೆಯು ಒಂದು ಉತ್ತಮ ಕೌಶಲ್ಯವಾಗಿದ್ದು, ಇದನ್ನು ಸರಿಯಾದ ಉತ್ಸಾಹದೊಂದಿಗೆ ಜಾರಿಗೆ ತರಬೇಕು. ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಯಾವುದೇ ಹಂತದಲ್ಲಿ ಸಂಘರ್ಷಗಳನ್ನು ತಪ್ಪಿಸಲು ಕಾನೂನಿನ ಕರಡು ಸ್ಪಷ್ಟ ಮತ್ತು ಸರಳವಾಗಿರಬೇಕು. ಕಾನೂನಿನಲ್ಲಿ ರಾಜಕೀಯ ಇಚ್ಚಾಶಕ್ತಿಯನ್ನು ಸೇರಿಸಲು ಅನುವಾದವಲ್ಲ, ಭಾವಾನುವಾದ ಬೇಕು ಎನ್ನುವ ಅಮಿತ್ ಶಾ, ‘ಪ್ರತಿ ಭಾಷೆಗೂ ತನ್ನದೇ ಆದ ಘನತೆ ಇದೆ. ಆದ್ದರಿಂದ, ಕರಡು ಎಷ್ಟು ಸ್ಪಷ್ಟವಾಗಿರುತ್ತದೆಯೋ, ಅನುಷ್ಠಾನವು ಅಷ್ಟೇ ಸರಳವಾಗಿರುತ್ತದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸೋಮವಾರ ನವದೆಹಲಿಯಲ್ಲಿ ಶಾಸಕಾಂಗ ಕರಡು ರಚನೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ‘370ನೇ ವಿಧಿಯು ಮೂಲ ಸಂವಿಧಾನದ ಸೂಚ್ಯಂಕದಲ್ಲಿ ತಾತ್ಕಾಲಿಕ ಭಾಗವಾಗಿತ್ತು, ಅಂದರೆ ಅದು ಅಪ್ರಸ್ತುತವಾಗಿತ್ತು, ಆದಕ್ಕೆ ಅದನ್ನು ರದ್ದುಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, 2015ರಿಂದ ಅನೇಕ ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಕಾನೂನು ಕ್ಷೇತ್ರದಲ್ಲಿ ಅನೇಕ ನವೀನ ಉಪಕ್ರಮಗಳನ್ನು ಆರಂಭಿಸಿಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ‘ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಪ್ರಜಾಪ್ರಭುತ್ವದ ತಾಯಿಯಾದ ಭಾರತದ ಸಂವಿಧಾನವು ಪ್ರಜಾಸತ್ತಾತ್ಮಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯ ಜೊತೆಗೆ ಆಧುನಿಕ ವ್ಯವಸ್ಥೆಯನ್ನು ಮೈಗೂಡಿಸಿಕೊಂಡಿದ್ದು, ಪರಿಪೂರ್ಣವಾಗಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮ – ಸಂವಿಧಾನದ ನಾಲ್ಕು ಸ್ತಂಭಗಳು, ಅವು ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಿವೆ, ಆದರೆ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸಮಯ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಕಾನೂನನ್ನು ತಿದ್ದುಪಡಿ ಮಾಡುವುದು ಅಥವಾ ಬದಲಾಯಿಸುವುದು ಅವಶ್ಯಕ.











Discussion about this post