No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Friday, July 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

40 ವರ್ಷದ ಸೇವೆಯಿಂದ ನಿವೃತ್ತಿಗೊಂಡ ಗಣೇಶ್ ಅವರ ಸಮಾಜ ಸೇವೆ ಮುಂದುವರೆಯಲಿ

ಗಣ್ಯವ್ಯಕ್ತಿಗಳೊಂದಿಗೆ ಒಡನಾಟವಿದ್ದರೂ ಹಮ್ಮುಬಿಮ್ಮುಗಳಿಲ್ಲದ ಕೂಡ್ಲೂರು ಕುಟುಂಬಸ್ಥರು

kalpa News by kalpa News
June 3, 2020
in Small Bytes, Special Articles
0
40 ವರ್ಷದ ಸೇವೆಯಿಂದ ನಿವೃತ್ತಿಗೊಂಡ ಗಣೇಶ್ ಅವರ ಸಮಾಜ ಸೇವೆ ಮುಂದುವರೆಯಲಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಎಲ್ಲರಿಗೂ ನಮಸ್ಕಾರ… ಈ ಕ್ಷಣಗಳು ಜೀವನದಲ್ಲಿ ಕೆಲವೇ ಕೆಲವರಿಗೆ ಸಿಗುವ ಅಮೋಘ ಘಳಿಗೆಗಳು. ಸತತವಾಗಿ 40 ವರ್ಷಗಳ ಕಾಲ ಸರಕಾರಿ ಸೇವೆಯಲ್ಲಿದ್ದು ಇಂದು ನಿವೃತ್ತಿಯಾಗಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ಶ್ರೀಗಣೇಶ್ ಅವರು.

ಶ್ರೀ ಗುಂಡಪ್ಪ ಹಾಗೂ ಶ್ರೀಮತಿ ಇಂದ್ರಮ್ಮ ಅವರ ಮಗನಾಗಿ ನಾಲ್ಕು ಜನ ಸಹೋದರಿಯರಾದ (ಗೀತಾ, ನಾಗರತ್ನ(ಪಾಪ), ರಾಧ, ಸುಧಾ) ಹಾಗೂ ನಾಲ್ಕು ಜನ ಸಹೋದರರಾದ ರಂಗರಾಜು, ಕೃಷ್ಣ, ನಾಗರಾಜು, ಕೆ.ಆರ್. ಮಂಜು ರವರ ಜೊತೆಗೆ 4ನೆಯ ಪುತ್ರರಾಗಿ 1960 ಮೇ 31ರಂದು ಜನಿಸಿದ ಇವರು ಕೇವಲ 20 ವರ್ಷದವರಿದ್ದಾಗಲೇ ಉದ್ಯೋಗಕ್ಕೆ ಸೇರಿದವರು.

ಕೇಂದ್ರ ರೇಷ್ಮೆ ಇಲಾಖೆಗೆ ಸೇವೆಗೆ ಸೇರಿದ ಇವರು ಇಷ್ಟು ವರ್ಷಗಳ ಕಾಲ ನಿರಂತರ ಸೇವೆ ಮಾಡಿ, ಇಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. 40 ವರ್ಷಗಳಷ್ಟು ದೀರ್ಘಕಾಲ ಸೇವೆ ಸಲ್ಲಿಸುವುದು ತೀರಾ ಅಪರೂಪದ ಸಂಗತಿ. ಇವರು ಯಾವುದೇ ಊರಿನ ಕಚೇರಿಯಲ್ಲಿ ಸೇವೆಯಲ್ಲಿ ಇರಲಿ ಅಲ್ಲಿ ಇವರು ಪ್ರತೀ ವರ್ಷ ಗಣಪತಿಯ ಹಬ್ಬದಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತಿದ್ದುದು ವಿಶೇಷವಾಗಿತ್ತು. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಾಗ ಇವರ ರೇಷ್ಮೆ ಇಲಾಖೆಯ ಪೇಟವನ್ನು ಅವರಿಗೆ ತೊಡಿಸಲಾಯಿತು.

ಆಂಧ್ರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿರುವಾಗ ಸಂಪರ್ಕಕ್ಕೆ ಬಂದ ನಮ್ಮ ದೇಶದ ಉಪರಾಷ್ಟ್ರಪತಿಯಾಗಿದ್ದ ಶ್ರೀ ನೀಲಂ ಸಂಜೀವರೆಡ್ಡಿ ಕುಟುಂಬದ ಜೊತೆಗೆ ಸ್ನೇಹ (ಇಂದಿಗೂ) ಹಾಗೂ ಉತ್ತಮ ಒಡನಾಟ ಹೊಂದಿದ್ದಾರೆ. ಅನೇಕ ರಾಜಕೀಯ ನಾಯಕರೊಂದಿಗೂ ಸ್ನೇಹ _ಹೊಂದಿರುವ ಇವರು ಬಾಲ್ಯದಲ್ಲಿ ಹಲಸಿನ ಹಣ್ಣು, ತಂದೆ ತರುತ್ತಿದ್ದ ಸಿಪಿಸಿ ಬಿಸ್ಕತ್ತು ಅತ್ಯಂತ ಪ್ರಿಯ ಇವರಿಗೆ. ಇವರು ಪಿಯುಸಿ ತನಕ ಓದಿದ್ದು (ಚಾಮರಾಜನಗರದಲ್ಲಿ) ದೊಡ್ಡ ಕುಟುಂಬ ಹಾಗೂ ಬಡತನದ ಕಾರಣ ಮುಂದೆ ಓದಬೇಕೆಂಬ ಆಸೆ ಇದ್ದರೂ ಓದಲು ಸಾದ್ಯವಾಗಲಿಲ್ಲ!

ತಮ್ಮ ಕಾಲೇಜು ದಿನಗಳಲ್ಲಿ ಸಿನಿಮಾದ ರಂಗ ಪ್ರವೇಶ ಮಾಡಿ 1980 ರಲ್ಲಿ ದೇವರ ಮಕ್ಕಳು (ರಾಜೇಶ್ ಹೀರೋ) ಹಾಗೂ ’ನಂಜುಂಡ ನಕ್ಕಾಗ ’ಚಿತ್ರದಲ್ಲಿ ನಟಿಸಿದ್ದಾರೆ. ತಂದೆ ಗುಂಡಪ್ಪನವರು ಚಾಮರಾಜನಗರದಲ್ಲಿ ಸ್ಥಳ ಪುರೋಹಿತ ಆದ್ದರಿಂದ ಪುರೋಹಿತದಲ್ಲಿ ಆಸಕ್ತಿಯಾಗಿ ಪುರೋಹಿತ ವೃತ್ತಿ ಹಾಗೂ ಅದರಲ್ಲಿ ಹೆಚ್ಚು ಪರಿಚಯ. ಇದರಿಂದ ದೊಡ್ಡರಾಯಪೇಟೆಯ ಬಸವರಾಜು ಎಂಬುವವರು ಕೇಂದ್ರ ರೇಷ್ಮೆ ಇಲಾಖೆಯ ಕೆಲಸದಲ್ಲಿ ಇದ್ದು ಅವರ ಸಹಾಯದಿಂದ ಕೇಂದ್ರದ ರೇಷ್ಮೆ ಇಲಾಖೆಯ ಕೆಲಸಕ್ಕೆ ಶಿಫಾರಸ್ಸು ಹೊಂದಿ ಅದಕ್ಕಾಗಿ ಊರಿನ ಮುಖಂಡ ಚಿನ್ನಸ್ವಾಮಿಶೆಟ್ಟಿ ಅವರಿಂದ ಪ್ರಯಾಣಕ್ಕೆ 80 ರೂಪಾಯಿಗಳ ಸಹಾಯ ಪಡೆದಿದ್ದನ್ನು ನೆನೆಸಿಕೊಳ್ಳುತ್ತಾರೆ.

ಮೊದಲ ಸಂಬಳ ಒಂದು ನೂರ ಐವತ್ತು (ಆ ಕಾಲದಲ್ಲಿ ದೊಡ್ಡ ಮೊತ್ತ)ಅದರಲ್ಲಿ ಮನೆಗೆ 75 ರೂಪಾಯಿ ಮನಿ ಆರ್ಡರ್ ಮಾಡುತ್ತಿದ್ದರು. ಸೇವೆಯಲ್ಲಿ ದಕ್ಷಿಣ ಭಾರತದ ಹಲವು ಕಡೆ ಸೇವೆ ಮಾಡಿದ್ದರು. ಹೀಗಾಗಿ ಆರು ಭಾಷೆಯಲ್ಲಿ ಅತ್ಯಂತ ಸುಲಲಿತವಾಗಿ ಮಾತನಾಡಲು ಇವರಿಗೆ ಬರುತ್ತದೆ. ಆಂಧ್ರಪ್ರದೇಶದ_ ಮದನಪಲ್ಲಿ ಹಾಗೂ ನಮ್ಮ ರಾಜ್ಯದ ಅತ್ತಿಬೆಲೆ, ಬೆಂಗಳೂರು, ಕೊಣನೂರು, ಕೊಳ್ಳೇಗಾಲ, ನಂಜನಗೂಡು, ಚಾಮರಾಜನಗರ, ಮೈಸೂರು ಹೀಗೆ ಹಲವಾರು ಕಡೆ ಸೇವೆ ಹಾಗೂ ಕೇಂದ್ರದಿಂದ ಬಂದ ಹಲವಾರು ವಿಐಪಿಗಳಿಗೆ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಧರ್ಮ ಪತ್ನಿಯಾದ ಶ್ರೀಮತಿ ಸರಸ್ವತಿಯವರು ಗುಂಡ್ಲುಪೇಟೆಯ ಕೆಲಸೂರಿನವರಾಗಿದ್ದು, ಒಬ್ಬನೇ ಮಗ ಪುನೀತ್ ಮೈಸೂರಿನ ಎಸ್’ಪಿಐನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಲ್ಕು ಜನ ಸಹೋದರಿಯರು ಮತ್ತು ನಾಲ್ಕು ಸಹೋದರರ ಬಾಂಧವ್ಯದಲ್ಲಿ ಇರುವ ಇವರಿಗೆ ಈಗ 60ರ ಸಂಭ್ರಮ. ಇವರ ಸೊಸೆ ಪೂಜಾ(ಮೇಘ) ಹಾಗೂ ಮೊಮ್ಮಗ ಪೃಥು.

ಅನೇಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಕುಟುಂಬಸ್ಥರು ಸರ್ಕಾರದ ಶಾಲೆಗಳಿಗೆ ಉಚಿತವಾಗಿ ಪುಸ್ತಕದ ಹಾಗೂ ಸಾಮಾಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯವನ್ನು ಮಗನ ಜೊತೆಯಲ್ಲಿ ವಿದ್ಯಾ ಸ್ಪಂದನದ ಮುಖಾಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಕೊರೋನಾದ ಬಗ್ಗೆ ಜನ ಜಾಗೃತಿ ಹಾಗೂ ಮೈಸೂರು ಮತ್ತು ಚಾಮರಾಜನಗರದಲ್ಲಿ ಉಚಿತವಾಗಿ ರಸ್ತೆಯ ಬದಿ ವ್ಯಾಪಾರಿಗಳಿಗೆ ಮಾಸ್ಕ ಗಳನ್ನು ವಿತರಿಸಿದ್ದಾರೆ.

ಕನಕಾಭಿಷೇಕ
ಅಂದರೆ ಹಿಂದೂ ಬ್ರಾಹ್ಮಣ ಪದ್ದತಿಯಲ್ಲಿ ಮೊದಲ ಗಂಡು ಮಗನಿಗೆ ಗಂಡು ಮಗು ಆಗಿ ಹಾಗೂ ಆ ಗಂಡು ಮಗನಿಗೆ ಮೊದಲ ಮಗ ಗಂಡು ಆದರೆ ಮುತ್ತಜ್ಜ ಹಾಗೂ ಮುತ್ತಜ್ಜಿಗೆ ಆ ಮರಿ ಮೊಮ್ಮಗನಿಂದ ಕನಕಾಭಿಷೇಕವಾಗುತ್ತದೆ. ಇದನ್ನು ಇವರ ಸಂತಾನದಿಂದ ಸಂಪನ್ನಗೊಳಿಸಲಾಯಿತು.

ಪ್ರಸ್ತುತ ಮೈಸೂರಿನ ಮಾನಂದವಾಡಿ ರಸ್ತೆಯ ಪಕ್ಕದಲ್ಲಿ ಸ್ವಂತ ಮನೆಯಲ್ಲಿ ಇರುವ ಇವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ, ನಿವೃತ್ತಿ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಸಿಗಲಿ ಎಂದು ಕೂಡ್ಲೂರಿನ ಅವಿಭಕ್ತ ಕುಟುಂಬದಿಂದ ಹಾರೈಸುತ್ತಿದ್ದೇವೆ ಹಾಗೂ ಇವರಿಂದ ಇನ್ನಷ್ಟು ಸಮಾಜ ಸೇವೆ ಮುಂದುವರೆಯಲಿ.

ಲೇಖನ: ಕೆ.ಆರ್. ಮಂಜು, ಸಮಾಜ ಸೇವಕರು, ಕೂಡ್ಲೂರು

Get In Touch With Us info@kalpa.news Whatsapp: 9481252093

Tags: Central Silk BoardKanakabhishekamKannadaNewsWebsiteLatestNewsKannadamysoreRetirementಕನಕಾಭಿಷೇಕಕೇಂದ್ರ ರೇಷ್ಮೆ ಇಲಾಖೆಚಾಮರಾಜನಗರನಿವೃತ್ತಿಮೈಸೂರು
Share203Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಜ್ಯದ ಯಾವೆಲ್ಲಾ ದೇವಾಲಯಗಳಿಗೆ ಆನ್’ಲೈನ್ ಮೂಲಕ ಸೇವೆ ಸಲ್ಲಿಸಬಹುದು? ಇಲ್ಲಿದೆ ಸಂಫೂರ್ಣ ಮಾಹಿತಿ

Next Post

ಮುಂದಿನ 20 ವರ್ಷದ ದೂರದೃಷ್ಠಿಯೊಂದಿಗೆ ಜಿಲ್ಲೆಯ ಅಭಿವೃದ್ಧಿಯೇ ನನ್ನ ಸಂಕಲ್ಪ: ಸಂಸದ ರಾಘವೇಂದ್ರ

kalpa News

kalpa News

Next Post
ಮುಂದಿನ 20 ವರ್ಷದ ದೂರದೃಷ್ಠಿಯೊಂದಿಗೆ ಜಿಲ್ಲೆಯ ಅಭಿವೃದ್ಧಿಯೇ ನನ್ನ ಸಂಕಲ್ಪ: ಸಂಸದ ರಾಘವೇಂದ್ರ

ಮುಂದಿನ 20 ವರ್ಷದ ದೂರದೃಷ್ಠಿಯೊಂದಿಗೆ ಜಿಲ್ಲೆಯ ಅಭಿವೃದ್ಧಿಯೇ ನನ್ನ ಸಂಕಲ್ಪ: ಸಂಸದ ರಾಘವೇಂದ್ರ

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL