Monday, June 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ರಾಮಾನುಜನ್ ಜೀವನಾಧರಿತ The man who knew infinity

ಅರ್ಥಪೂರ್ಣವಾಗಿ ಚಿತ್ರಿಸಿದ, ವಸ್ತುನಿಷ್ಟ ಎನ್ನಿಸಿಕೊಳ್ಳುವ ನೋಡಲೇಬೇಕಾದ ಸಿನಿಮಾ

January 29, 2024
in Special Articles
0 0
0
Share on facebookShare on TwitterWhatsapp
Read - 4 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

‘ನಿನಗೆ ಗೊತ್ತಾ? ನನ್ನ ಎಲ್ಲಾ ಗಣಿತ ಎಲ್ಲಿಂದ ಬರುತ್ತೆ ಅಂತ? ತಾಯಿ ನಾಮಗಿರಿ (ಲಕ್ಷ್ಮಿ). ಅವಳು ನಾನು ಮಲಗಿದಾಗ ನನ್ನ ನಾಲಗೆಯಲ್ಲಿ ಬರೆಯುತ್ತಾಳೆ ಇಲ್ಲಾ ನಾನು ಪೂಜೆ ಮಾಡುವಾಗ ಹೇಳುತ್ತಾಳೆ’ ಎಂದು ಭಾರತೀಯ ಶ್ರೀನಿವಾಸ ರಾಮಾನುಜನ್ ಹೇಳುತ್ತಾ ಇದ್ದರೆ, ಅತ್ತ ತನ್ನ ಜೀವನವನ್ನೇ ಗಣಿತಕ್ಕೆ ಮುಡಿಪಾಗಿಟ್ಟ, ನಾಸ್ತಿಕ ಜಿ ಎಚ್ ಹಾರ್ಡಿ ಮೂಕನಾಗಿದ್ದ. ವಿಪರ್ಯಾಸ ಎಂದರೆ ಬಹುಶಃ ಆ ಹೊತ್ತಿಗೆ ರಾಮಾನುಜನ್ ಸಾವಿನ ಮನೆಯ ಕದ ತಟ್ಟಿಯಾಗಿತ್ತು.

ಹೌದು, ಎಲ್ಲಾ ಮಹಾನ್ ಸಾಧಕರಂತೆ ರಾಮಾನುಜನ್ ಕೂಡ ಅಲ್ಪಾಯುಷಿ ಆಗಿದ್ದರೇನೋ ಅನ್ನಿಸುತ್ತದೆ. ಈಗ ಹೇಳಲು ಹೊರಟಿರುವುದು ಮತ್ತೊಂದು ನೋಡಲೇಬೇಕಾದ ಚಿತ್ರ ಎಸ್ ರಾಮಾನುಜನ್ ಅವರ ಜೀವನದ ಕುರಿತಾದುದು. ಬೇಸರದ ಸಂಗತಿ ಎಂದರೆ ಹೆಮ್ಮೆಯ ಭಾರತೀಯನ ಕುರಿತು ವಿದೇಶಿಗರು ಮಾಡಿರುವ ಚಿತ್ರ ಇದು. ಗಣಿತಪ್ರೇಮ ಇದ್ದರೆ, ಒಂದೊಳ್ಳೆ ಸಿನಿಮಾ ನೋಡುವಷ್ಟು ಸಮಯವಿದ್ದರೆ ಖಂಡಿತಾ ನೋಡಿ ದಿ ಮ್ಯಾನ್ ವ್ಹು ನಿವ್ ಇನ್ಫಿನಿಟಿ The man who knew infinity ಅಂದರೆ ಅನಂತ ಜ್ಞಾನಿ ಎಸ್ ರಾಮಾನುಜನ್. S Ramanujan ಎಷ್ಟು ಒಳ್ಳೆಯ ಹೆಸರು. ನಿಜವಾಗಿಯೂ ಅತಿ ಅರ್ಥಪೂರ್ಣವಾಗಿ ಚಿತ್ರಿಸಿದ ಮತ್ತು ವಸ್ತುನಿಷ್ಟ ಎನ್ನಿಸಿಕೊಳ್ಳುವ ಸಿನಿಮಾ ಎಂದರೆ ತಪ್ಪಾಗಲಾರದು.

2015ರಲ್ಲಿ ತೆರೆ ಕಂಡ ಇಂಗ್ಲೀಷ್ ಭಾಷೆಯ ಈ ಚಲನಚಿತ್ರ ರಾಬರ್ಟ್ ಕನಿಗೆಲ್ ಅವರ ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ ಕೃತಿಯನ್ನು ಆಧರಿಸಿದುದಾಗಿದೆ. ಮ್ಯಾಥ್ಯೂ ಬ್ರೌನ್ Mathew Brown ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದ ಮುಖ್ಯ ಪಾತ್ರಗಳಲ್ಲಿ

ಶ್ರೀನಿವಾಸ ರಾಮಾನುಜನ್ ಆಗಿ ದೇವ್ ಪಟೇಲ್
ಜಿಎಚ್ ಹಾರ್ಡಿ ಪಾತ್ರದಲ್ಲಿ ಜೆರೆಮಿ ಐರನ್ಸ್
ಜಾನಕಿಯಾಗಿ ದೇವಿಕಾ ಭಿಸೆ
ಜಾನ್ ಎಡೆನ್ಸರ್ ಲಿಟಲ್‌ವುಡ್ ಪಾತ್ರದಲ್ಲಿ ಟೋಬಿ ಜೋನ್ಸ್
ಸರ್ ಫ್ರಾನ್ಸಿಸ್ ಸ್ಪ್ರಿಂಗ್ ಆಗಿ ಸ್ಟೀಫನ್ ಫ್ರೈ
ಜೆರೆಮಿ ನಾರ್ಥಮ್ ಬರ್ಟ್ರಾಂಡ್ ರಸ್ಸೆಲ್ ಆಗಿ
ಮೇಜರ್ ಮ್ಯಾಕ್ ಮಹೊನ್ ಆಗಿ ಕೆವಿನ್ ಮೆಕ್‌ನಾಲಿ
ವೈದ್ಯ ಪಾತ್ರದಲ್ಲಿ ಎಂಜೊ ಸಿಲೆಂಟಿ
ರಾಮಾನುಜನ್ ಅವರ ತಾಯಿಯಾಗಿ ಅರುಂಧತಿ ನಾಗ್
ನಾರಾಯಣ ಅಯ್ಯರ್ ಪಾತ್ರದಲ್ಲಿ ಧೃತಿಮಾನ್ ಚಟರ್ಜಿ
ಪ್ರಶಾಂತ ಚಂದ್ರ ಮಹಲನೋಬಿಸ್ ಪಾತ್ರದಲ್ಲಿ ಶಾಜಾದ್ ಲತೀಫ್
ಅಯ್ಯಂಗಾರ್ ಆಗಿ ರೋಜರ್ ನಾರಾಯಣ್
Kalahamsa Infotech private limitedದೇವ್ ಪಟೇಲ್ Dev Patel ಮತ್ತು ಜೆರೆಮಿ ಐರನ್ಸ್ Jeremy Irons ನಡುವೆ ಬಹು ಮುಖ್ಯವಾಗಿ ನಡೆಯುವ ಬಹುಪಾಲು ಸಂಭಾಷಣೆ ಚಿತ್ರವನ್ನು ಒಂದೇ ವೇಗದಲ್ಲಿ ಒಯ್ಯುತ್ತದೆ. ದೇವ್ ಪಟೇಲ್ ಮೂಲ ಭಾರತವಾಗಿದ್ದು, ಅಲ್ಲದೆ ಸುಮಾರಾಗಿ ರಾಮಾನುಜನ್ ತರವೇ ಕಾಣುವುದು ಚಿತ್ರಕ್ಕೆ ಧನಾತ್ಮಕ ಅಂಶವಾಗಿದೆ.

ಒಂದೆಡೆ ತಮಿಳುನಾಡಿನ ಒಂದು ಹಳ್ಳಿಯ ಬ್ರಾಹ್ಮಣ ಕುಟುಂಬ, ಅದೇ ಕುಟುಂಬದ ಏಕೈಕ ಆಧಾರವಾದ ಪುತ್ರ, ದೇಶವನ್ನು ಆಳುತ್ತಿದ್ದ ಆಂಗ್ಲರು, ಭೋರ್ಗರೆಯುವ ಕಡಲಾಚೆಗಿನ ಹೊರ ಪ್ರಪಂಚ, ರಾಮಾನುಜನ್ ಮೇಲೆ ಜೀವವನ್ನೇ ಇಟ್ಟ ತಾಯಿ ಮತ್ತು ಪತ್ನಿ. ಇನ್ನೊಂದೆಡೆ ಮದ್ರಾಸ್ ಆಚೆ ನೋಡಿಯೇ ಇಲ್ಲವಲ್ಲ ಎಂಬ ಭಯ, ಅಲ್ಲದೇ ನನ್ನ ಯಾರೂ ನಂಬಿಯಾರು ಎಂಬ ದುಗುಡ ಮನೆಮಾಡಿತ್ತು. ಅದನ್ನೆಲ್ಲ ದಾಟಿ ನಿಷ್ಕಲ್ಮಶ ಹೃದಯಿ ಆಂಗ್ಲರ ಅಂಗಳದಲ್ಲಿ ನಿಂತಾಗ ಅದೇ ಚರ್ಮದ ಬಣ್ಣದ ಹಿಯ್ಯಾಳಿಕೆ, ಅಪನಂಬಿಕೆ, ಜೊತೆಗೆ ಅಸೂಯೆ. ದೇವರು ಬಾಗಿಲುಗಳನ್ನು ಮುಚ್ಚಿದಾಗ ಕಿಟಕಿಗಳನ್ನು ತೆರೆಯುತ್ತಾನೆ ಎಂಬ ಮಾತಿದೆ. ಅಂತೆಯೇ ರಾಮಾನುಜನ್ ಗೆ ಆ ಅಪರಿಚಿತರಲ್ಲಿ ಆತ್ಮೀಯರು ಸಿಕ್ಕರು. ಅಹುದು, ಹಾಗೆ ಸಿಕ್ಕವರು ಕೊನೆಯ ಉಸಿರಿನ ತನಕವೂ ಜೊತೆಯಾದರು.
ಅವಶ್ಯಕತೆಯಂತೆಯೇ ತುಂಬಾ ಸರಳವಾಗಿ ಕಥೆ ಸಾಗುತ್ತದೆ. ಹಾಗಾಗಿ ಒಂದೇ ಸಲಕ್ಕೆ ನೋಡಿ ಮುಗಿಸಿದರೆ ಒಳ್ಳೆಯದು ಅನ್ನಿಸುತ್ತದೆ. ಬಹು ಮುಖ್ಯ ವಿಷಯ ಎಂದರೆ ವಿದೇಶಿಗರು ಭಾರತೀಯ ಸಂಸ್ಕೃತಿ ಅಥವಾ ಕಥೆಯನ್ನು ಅರಿಸಿಕೊಂಡಾಗ, ಒಂದು ದಾರದ ಎಳೆಯಷ್ಟಾದರೂ ನೈಜತೆಗೆ ಭಿನ್ನವಾಗಿರುತ್ತದೆ. ಬಹುಶಃ ಅದು ಅವರ ನೆಲಕ್ಕೆ ಕಥೆಯನ್ನು ಮುಟ್ಟಿಸುವಾಗ ಆಗುವ ಬದಲಾವಣೆಯೂ ಆಗಿರಬಹುದು ಅಥವಾ ಅವರು ಉದ್ದೇಶಪೂರ್ವಕವಾಗಿಯೂ ಮಾಡುತ್ತಿರಬಹುದು. ಊರಿನ ಸಂಭಾಷಣೆ ತೋರಿಸುವಾಗ ಸ್ಥಳೀಯ ಭಾಷೆ ಬಳಸಿಕೊಂಡಿದ್ದರೆ ಇನ್ನೂ ಪರಿಣಾಮಕಾರಿ ಆಗಿರುತ್ತಿತ್ತು. ಅದನ್ನು ಹೊರತುಪಡಿಸಿ, ರಾಮಾನುಜನ್ ರ ಕೈಗೆ ಕಟ್ಟಿದ ದಾರದ ಕುರಿತು ಕೇಳುವಾಗ, ರಾಮಾನುಜನ್ ಆರೋಗ್ಯ ಕೆಟ್ಟಾಗ ಅದೇ ದಾರವನ್ನು ತೋರಿಸುವಾಗ ಹೀಗೆ ಹಲವೆಡೆ ಸೂಚ್ಯವಾಗಿ ನಂಬಿಕೆಗಳನ್ನು ಪ್ರಶ್ನೆ ಮಾಡಿದ್ದರೂ, ಅದಕ್ಕೆ ರಾಮಾನುಜನ್ ಕಡೆಯಿಂದ ಸಮರ್ಪಕ ಮಾರುತ್ತರ ನೀಡಲಾಗಿದೆ.

ಇನ್ನೊಂದು ಬಹು ಮುಖ್ಯವಾಗಿ ಒಂದು ವಿಷಯ ಹೇಳಬೇಕೆಂದರೆ ವಿದೇಶಕ್ಕೆ ಹೊರಡುವ ಮೊದಲು ರಾಮಾನುಜನ್ ಜೀವನ ನಡೆಸಲು ಒಂದೆಡೆ ಗುಮಾಸ್ತನಾಗಿ ಕೆಲಸ ಮಾಡಬೇಕಾಗುತ್ತದೆ. ಆಗ ಎಲ್ಲೆಲ್ಲಿ ರಾಮಾನುಜನ್ ತನ್ನ ಕೆಲಸಕ್ಕೆ ಪ್ರಯತ್ನ ಮಾಡಿದ್ದರು ಎಂಬುದರ ಕುರಿತು ನಾರಾಯಣ ಅಯ್ಯರ್ ಜೊತೆ ಚರ್ಚೆ ನಡೆಯುತ್ತದೆ. ಆಗ ಅಯ್ಯರ್ ಆಗ ಹೆಸರೇ ಮಂದ ರಸ ಎಂದು ಇಟ್ಟುಕೊಂಡಿರುವ ಈ ಮದ್ರಾಸಿನಲ್ಲಿ ನೀನು ಏನು ಸಾಧನೆ ಮಾಡಲು ಸಾಧ್ಯ? ಎಂದು ಕೇಳುತ್ತಾರೆ. ಇದೊಂದು ಹಳೆಯ ಹೆಸರು ಆಗಿರಲಿಕ್ಕೂ ಸಾಕು. ಹೀಗೆ ಹೇಳುತ್ತಾ ಹೋದರೆ, ಇಡೀ ಕಥೆಯನ್ನೇ ಹೇಳಿಬಿಡಬಹುದು. ಇದೇ ಕಥೆ ಬಾಲಿವುಡ್ಡಿನ ಮಹಾನ್ ನಿರ್ದೇಶಕರ ಕೈಗೆ ಸಿಕ್ಕಿದ್ದರೆ ಮೂಲ ವಸ್ತುವನ್ನೇ ಅರಸಬೇಕಿತ್ತೇನೋ? ಸಂಭಾಷಣೆಗಳ ಪ್ರತೀ ಅಕ್ಷರವೂ ಕಥೆಯೊಂದಿಗೆ ಸಾಗುವ ಕಾರಣ ಹೆಚ್ಚಿನ ಗಮನ ಅದರ ಮೇಲೆ ಕೊಡಬೇಕಾಗುತ್ತದೆ. ಬ್ರಿಟಿಷರ ಕಾಲದಲ್ಲಿ, ಅವರ ಎದುರೇ ಒಬ್ಬ ಭಾರತೀಯ ತಮ್ಮ ಸರಿಸಮನಾಗಿ ಗುರುತಿಸಿಕೊಂಡ ಎಂದು ಅವರು ಹೇಳಲು ಬಯಸಿದರೂ ಒಂದೆಡೆ ರಾಮಾನುಜನ್ ರ ಗಣಿತ ದೇವರಿಗೆ ಸಮ ಎಂದೂ ಹೇಳಲಾಗಿದೆ. ಒಬ್ಬ ಏನೂ ಅರಿಯದ ಮುಗ್ಧ ತನ್ನ ಒಡಲ ಗಣಿತದ ಒಲವಿಗೆ ರೆಕ್ಕೆ ಕಟ್ಟಿ, ಕಡಲ ಆಚೆ ಜೀಕಿ, ಅಸಡ್ಡೆ ಅಸೂಯೆ ಅನಾದರಗಳ ಮೀರಿ, ಇವೆಲ್ಲದರ ನಡುವೆ ಗೆಲ್ಲುವ ಅನಾರೋಗ್ಯ..! ಗಣಿತದ ಅಗಣಿತ ಸಿರಿವಂತ ಶ್ರೀನಿವಾಸರ ಚಿತೆಗೆ ಅಗ್ನಿ ಸ್ಪರ್ಶವಾದಾಗ ಅವರಿಗೆ ಮೂವತ್ತಮೂರರ ಹರೆಯ. ದೇವರ ಗಣಿತ ತಪ್ಪಿತೇನೋ ಅವರ ಆಯಸ್ಸು ಬಹಳ ಬರೆದೇ ಇರಲಿಲ್ಲ. ಹೀಗೆ ಗಣಿತದ ಒರತೆಯಾಗಿ, ನದಿಯಾಗಿ, ಕಡಲಾಗುವ ರಾಮಾನುಜನ್ ಎಂದೆಂದೂ ಜೀವಂತ ಸೆಲೆ.

ಇನ್ನುಳಿದಂತೆ ಚಿತ್ರ ನೋಡ ಬಯಸುವ ವಿದ್ಯಾರ್ಥಿ ಅಥವಾ ಶಿಕ್ಷಕರ ಹಾಗೂ ಪೋಷಕರ ಕುರಿತು ಹೇಳುವುದಾದರೆ ಗಣಿತ ಕಲಿಯಲು, ಉರು ಹೊಡೆಯಲು, ತಪ್ಪಿಸಿಕೊಳ್ಳಲು ಹೇಳುವ ಬದಲು ಅದನ್ನು ಪ್ರೀತಿಸಲು ಯಾಕೆ ಹೇಳಿಕೊಡಬಾರದು? ಗಣಿತವೇ ಜಗತ್ತು. ಲೆಕ್ಕ, ತೂಕ, ಅಳತೆ ಬಾರದ ಮನುಷ್ಯನೇ ಇಲ್ಲ. ಹೇಳಿಕೊಡುವ ವಿಧಾನ ಬದಲಾಗಬೇಕು ಅನ್ನಿಸುತ್ತದೆ. ‘ಓ ಗಣಿತನಾ?! ಏನಗಲ್ಲ ಬಿಡ್ರಿ, ನಮ್ಗೂ ಶಾಲೇಲಿ ಅರ್ಥ ಆಗ್ತಾ ಇರ್ಲಿಲ್ಲ. ಇನ್ನು ಇವ್ರಿಗೆ ಎಲ್ ಆಗತ್ತೆ? ಸುಮ್ನೆ ನಾನೊಂದು ಕಡೆ ಹೇಳ್ತೀನಿ ಅಲ್ಲೇ ಟ್ಯೂಷನ್ ಹಾಕ್ಬಿಡಿ ಅಷ್ಟೇ’ ಅನ್ನುವ ಮಾತು ಸಾಮಾನ್ಯ. ಅಲ್ಲಿಗೆ ಆ ವಿದ್ಯಾರ್ಥಿ ಶತಾಯ ಗತಾಯ ಉರು ಹೊಡೆದು ಪಾಸ್ ಆದರೆ ಸಾಕು. ಗಣಿತದ ಹುಚ್ಚು ಪ್ರೀತಿ ಹುಟ್ಟಿಸಿ. ಗಣಿತ ಕಲಿತು ಕೆಟ್ಟವರಿಲ್ಲ. ಜಗತ್ತಿನ ಅತಿ ಉತ್ತಮ ಗಣಿತ ವಿದ್ವಾಂಸರ ಹೆಸರು ಪಟ್ಟಿ ಮಾಡಿದರೆ ಮೊದಲ ಹತ್ತು ಜನರಲ್ಲಿ ಭಾರತೀಯರು ಐದು ಜನ ಇರಲಿಕ್ಕೂ ಸಾಕು. ಅಷ್ಟು ಗಣಿತ ಸಿರಿವಂತ ದೇಶ ಭಾರತ. ಇನ್ನು ಮೊದಲು ಅಮೆಜಾನ್ ಪ್ರೈಮ್ ನಲ್ಲಿ ಇದ್ದ ಚಿತ್ರ ಈಗ ಯೂಟ್ಯೂಬ್ ನಲ್ಲಿದೆ. ಉಚಿತವಾಗಿ ನೋಡಬಹುದು. ಮತ್ತು ನೋಡಲೇಬೇಕಾದ ಚಿತ್ರ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Dev PatelJeremy IronsKannada NewsKannada News LiveKannada News OnlineKannada News WebsiteKannada WebsiteLatest News KannadaMathew BrownNews in KannadaNews KannadaS RamanujanSpecial ArticleThe man who knew infinityಎಸ್ ರಾಮಾನುಜನ್ಜೆರೆಮಿ ಐರನ್ಸ್ದೇವ್ ಪಟೇಲ್ಮ್ಯಾಥ್ಯೂ ಬ್ರೌನ್ವಿಶೇಷ ಲೇಖನ
Previous Post

ಶಿವಮೊಗ್ಗ ಡಿಸಿ ಸೆಲ್ವಮಣಿ ವರ್ಗಾವಣೆ | ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ ನೇಮಕ

Next Post

ಹನುಮ ಧ್ವಜ ಘರ್ಷಣೆ: ಕೆರಗೋಡು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹನುಮ ಧ್ವಜ ಘರ್ಷಣೆ: ಕೆರಗೋಡು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!