ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಾಗೂ ಮಂಗನ ಕಾಯಿಲೆ, ಹಕ್ಕಿ ಜ್ವರ ಭೀತಿಯಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಕ್ರಿಮಿನಾಶಕಗಳನ್ನು ಸಿಂಪಡನೆ ಮಾಡಲಾಗುತ್ತಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಯವರ ನಿರ್ದೇಶನದ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ನೆರವಿನೊಂದಿಗೆ ನಗರದ ಪ್ರಮುಖ ರಸ್ತೆಗಳು, ಜನವಸತಿ ಪ್ರದೇಶಗಳು ಸೇರಿದಂತೆ ಹಲವೆಡೆ ಕ್ರಿಮಿನಾಶಕ ಸ್ಪ್ರೇ ಸಿಂಪಡನೆ ಮಾಡುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.
ಶಿವಮೊಗ್ಗ ನಗರದಾದ್ಯಂತ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ನೆರವಿನೊಂದಿಗೆ ಕ್ರಿಮಿನಾಶಕ ಸ್ಪ್ರೇ ಮಾಡಲಾಗುತ್ತಿದೆ. pic.twitter.com/5P8Xk5SrPX
— Deputy Commissioner Shivamogga (@DeputyCommissi8) March 25, 2020
Get in Touch With Us info@kalpa.news Whatsapp: 9481252093
Discussion about this post