ನವದೆಹಲಿ: ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರೆದಿರುವಂತೆಯೇ ಕಣಿವೆ ರಾಜ್ಯದ ಆವಂತಿಪೋರ ಹಾಗೂ ಶ್ರೀನಗರದ ವಾಯುನೆಲೆಗಳ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಾಯುನೆಲೆಗಳ ಸುತ್ತಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ನಿನ್ನೆಯಷ್ಟೇ ಶೋಪಿಯಾನ್ ಮತ್ತು ಪುಲ್ಮಾಮಾದಲ್ಲಿ 6 ಮಂದಿ ಜೈಷ್ ಇ ಮೊಹಮದ್ ಉಗ್ರರ ಎನ್ಕೌಂಟರ್ ನಡೆಸಲಾಗಿತ್ತು. ಅಲ್ಲದೇ, ಉಗ್ರರ ಮುಕ್ತ ಜಮ್ಮು ಕಾಶ್ಮೀರ ನಿರ್ಮಾಣ ನಮ್ಮ ಗುರಿ. ಈ ನಿಟ್ಟಿನಲ್ಲಿ ಯಾರೇ ಅಡ್ಡ ಬಂದರೂ ಸದೆ ಬಡಿಯಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ಸೇನೆ ಸಾರಿದ ಬೆನ್ನಲ್ಲೇ ಈ ವರದಿ ಬಂದಿದೆ.
ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ದಾಳಿ ನಡೆಸಿ ಸಿಆರ್’ಪಿಎಫ್’ನ 42 ಉಗ್ರರನ್ನು ಬಲಿ ಪಡೆದ ಜೈಷ್ ಉಗ್ರ ಸಂಘಟನೆಯೇ ಈಗ ಮತ್ತೊಂದು ಕ್ರೂರ ದಾಳಿಗೆ ಸಂಚು ರೂಪಿಸಿದೆ ಎಂದು ಹೇಳಲಾಗಿದೆ.
Discussion about this post