ಕಲ್ಪ ಮೀಡಿಯಾ ಹೌಸ್
ತರೀಕೆರೆ: ಲಕ್ಕವಳ್ಳಿ ಬಳಿ ರಸ್ತೆ ಅಪಘಾತ ನಡೆದು ಇಲ್ಲಿನ ಹೆಲ್ತ್ ಇನ್ಸ್ಪೆಕ್ಟರ್ ರಕ್ತದ ಮಡುವಿನಲ್ಲಿ ನರಳುತ್ತಿದ್ದರೂ, ಎದುರಿಗೇ ಇದ್ದ ತರೀಕೆರೆ ಶಾಸಕ ಸುರೇಶ್ ಅವರು, ಕಾರಿನಿಂದ ಇಳಿದು ಬರದೇ ಇರುವ ನಡೆಗೆ ರಾಜ್ಯದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕೊರೋನಾ ಕರ್ತವ್ಯ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಆರೋಗ್ಯಾಧಿಕಾರಿ ಡಾ. ರಮೇಶ್ ಕುಮಾರ್ ಬೈಕ್ ಭೀಕರ ಅಪಘಾತಕ್ಕೀಡಾಗಿತ್ತು. ಅಪಘಾತದ ರಭಸಕ್ಕೆ ಆರೋಗ್ಯಾಧಿಕಾರಿ ಅಕ್ಷರಶಃ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದರು. ಇದೇ ದಾರಿಯಲ್ಲಿ ತೆರಳುತ್ತಿದ್ದ ಶಾಸಕ ಸುರೇಶ್ ಕಾರು ನಿಲ್ಲಿಸಿ ತಮ್ಮ ಅಂಗರಕ್ಷಕರ ಮೂಲಕ ವಿಚಾರಿಸಿದ್ದಾರೆ. ಆದರೆ, ಅಪಘಾತಕ್ಕೀಡಾಗಿರುವುದು ಓರ್ವ ಆರೋಗ್ಯಾಧಿಕಾರಿ ಎಂದು ತಿಳಿದರೂ ಸಹ ಕಾರಿನಿಂದ ಇಳಿದು ಬಂದು ನೋಡಲಿಲ್ಲ. ಇದೇವೇಳೆ ಸ್ಥಳಕ್ಕೆ ತಡವಾಗಿ ಆಗಮಿಸಿದ ಆಂಬ್ಯುಲೆನ್ಸ್ನಲ್ಲಿ ಆರೋಗ್ಯಾಧಿಕಾರಿಯನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಶಾಸಕರ ಕಾರು ಸಹ ಇರುವ ವೀಡಿಯೋ ಹಾಗೂ ಕಾರಿನಲ್ಲಿಯೇ ಇದ್ದರೂ ಇಳಿದು ಬಂದು ವಿಚಾರಿಸುವ ಹಾಗೂ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಮಾಡದ ತರೀಕೆರೆ ಶಾಸಕರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post