Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ಇದು ಅನ್ನದಾನವಲ್ಲ, ದಾಸೋಹ ಯಜ್ಞ: ಭದ್ರಾವತಿಯ ಈ ಮಿಡಿದ ಹೃದಯಗಳು ನಾಡಿಗೇ ಮಾದರಿ

ಉಕ್ಕಿನ ನಗರಿಯ ಈ ಎಲ್ಲರಿಗೂ ತಾಯಿ ಭಾರತಿ ಹರಸಿ, ಅವರ ಸಂತತಿ ನೂರ್ಮಡಿಯಾಗಲಿ

May 2, 2020
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ನಾ ’ಅನ್ನ’ದೆ
ನೀ ’ಅನ್ನ’ದೆ
ಅವ ’ಅನ್ನ’ದೆ
’ಅನ್ನ’ದ ಮುಂದೆ
ನಾವೆಲ್ಲ ಒಂದೇ

ಹುಟ್ಟಿದ ಮೊದಲ ಮಾತು ಅಮ್ಮ ಅಂದರೂ, ಕುಡಿಯೋ ಮೊದಲ ಹನಿ ಹಾಲು ಅನ್ನವೇ. ಕಟ್ಟ ಕಡೆಯ ಉಸಿರು ಎಳೆಯುವ ಮುನ್ನ ಎದೆಯ ಗೂಡೊಳಗೆ ಇನಿತು ಅನ್ನ ಇರಲೇಬೇಕು. ಅದಕ್ಕೆ ಅಲ್ಲವೇ ಅನ್ನ ಬ್ರಹ್ಮ. ಅನ್ನವೇ ದೈವ. ಹೌದು ಈಗ ಜಗತ್ತೇ ಈ ಚೀನೀ ವೈರಸ್ಸಿನ ವಿರುದ್ಧದ ಮಹಾಸಮರದಲ್ಲಿ ಹೆಣಗುತ್ತಿದೆ. ಆರೋಗ್ಯ ಹೋಗಲಿ, ಆಹಾರಕ್ಕೂ ಬಡಿದಾಡುವ ಪರಿಸ್ಥಿತಿ. ಯಾಕಾದರೂ ಬಂತೋ ಈ ಹೆಮ್ಮಾರಿ. ಅಮ್ಮ ತನ್ನ ಕಂದನ ಮುಟ್ಟುವ ಹಾಗಿಲ್ಲ, ಅಪ್ಪ ಮಗುವ ಹೆಗಲಿಗೆ ಹಾಕಿಕೊಳ್ಳುವಂತಿಲ್ಲ, ಅಜ್ಜಿ ಕೆಮ್ಮುತ್ತಾ ಕತೆ ಹೇಳುವಂತಿಲ್ಲ, ಅಜ್ಜನ ಊರಿಗೆ ಕಂದ ಓಟಕೀಳುವಂತಿಲ್ಲ.

ಉಳಿತಾಯದ ಊರುಗೋಲಲ್ಲಿ ಎಷ್ಟು ದಿನ ಬದುಕಲು ಸಾಧ್ಯ? ಅದು ಎಷ್ಟು ದಿನ ತಡೆದೀತು? ಇಡೀ ಪರಿವಾರ ಮನೆಯೊಳಗೆ ಬಂಧಿಯಾಗಿ ಕುಳಿತು ಇನ್ನೆಂತು ಬದುಕಲು ಆಗಬಹುದು? ಅಂತಹ ಸಂದರ್ಭದಲ್ಲಿ ಭದ್ರಾವತಿಯ ಒಂದಿಷ್ಟು ಹೃದಯಗಳು ಮಿಡಿದವು. ಅವರಿಗೆ ತಾವು ಸುರಕ್ಷಿತವಾಗಿ ಇರಬೇಕು ಅನ್ನಿಸಲಿಲ್ಲ, ಊರ ಚಿಂತೆ ಯಾಕೆ ಎಂದು ಕೈ ಕಟ್ಟಿ ಕೂರುವ ಮನಸಿರಲಿಲ್ಲ. ಆಗ ಹುಟ್ಟಿದ್ದು ಸಾಮೂಹಿಕ ಅನ್ನದಾನ. ಅದು ಕರುನಾಡಷ್ಟು ಜನಸಂಖ್ಯೆ ಹೊಂದಿದ ಇಟಲಿ ಕೊರೋನಾ ವೈರಸ್ಸಿಗೆ ತತ್ತರಿಸಿದ ಸಮಯ. ಭಾರತ ಪ್ರತಿ ದೇಶಗಳ ಕ್ರಮಗಳನ್ನು ಅಧ್ಯಯನ ಮಾಡಿ ಕೊನೆಗೆ ಲಾಕ್ ಡೌನ್ ಅಂತಹ ಕಠಿಣ ಕ್ರಮ ಕೈಗೊಂಡಿತು. ಆಗ ದಿನಗೂಲಿ ನೌಕರರು ಸೇರಿದಂತೆ ಹಲವು ರೀತಿಯ ಜನರು ತಮ್ಮ ಆಹಾರಕ್ಕಾಗಿ ತೊಂದರೆಗೊಳಗಾದರು. ಅದು ಇವರನ್ನು ತುಂಬಾ ಚಿಂತನೆಗೆ ಪ್ರೇರೇಪಿಸಿತು. ಹಾಗಿದ್ದಾಗ ಅನ್ನದಾನ ಮಾಡುವ ಬಯಕೆ ಉಂಟಾಯಿತು. ಅಲ್ಲಿಂದಲೇ ಆರಂಭವಾಗಿದ್ದು ಇವರ ದಾಸೋಹ ಯಜ್ಞ.

ಇಂತಹ ಮಾದರಿ ಕಾರ್ಯದ ಬಗ್ಗೆ ಅವರ ಮಾತುಗಳಲ್ಲೇ ಓದಿ:
ಹಿಂದೊಮ್ಮೆ ಮಾಜಿ ಸೈನಿಕರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಹೇಳಿದ್ದೆ. ಭದ್ರಾವತಿ ಅಷ್ಟೇ ಉಕ್ಕಿನ ನಗರಿ. ಅಲ್ಲಿರುವ ಪ್ರತಿ ಹೃದಯವೂ ಬೆಣ್ಣೆಗಿಂತ ಮೃದು. ಕಷ್ಟ ಅಂದಾಗ ದೇಶದ ಗಡಿಯಲ್ಲೂ ಭದ್ರೆಯ ನಾವಿದ್ದೇವು, ಇವತ್ತು ಅಂತಹ ಕಷ್ಟ ಬಂದಿದೆ, ಭದ್ರೆಯ ಮಕ್ಕಳು ಮತ್ತೆ ನಾವು ಗಡಿಯೊಳಗೂ ನಾವಿದ್ದೇವೆ. ಏನಾದರೂ ಅನ್ನ ತೀರದೆ ಸಾವು ಬರಬಾರದು ಅದೇ ನಮ್ಮ ಮನದ ಮಾತಾಗಿತ್ತು. ಸ್ವರ್ಣ ಟ್ರಾವೆಲ್ಸ್, ಮರ್ಚೆಂಟ್ ಅಸೋಸಿಯೇಷನ್ ಮತ್ತು ಸ್ವಯಂ ಸೇವಕರು. ಒಂದು ವಿಚಾರ ನೆನಪಿದೆ. ಇಂತಹ ಒಂದು ಘನ ಉದ್ದೇಶ ಹೊತ್ತಾಗ ಆಧಾರ ಸ್ಥಂಭಗಳ ಅವಶ್ಯಕತೆ ತುಂಬಾ ಇರುತ್ತದೆ. ಯಾರೆಲ್ಲ ಅಂತ ಯೋಚಿಸಿದರೆ ಒಂದು ದಿನವೂ ಅವರ ಕೊರತೆ ಬೀಳಲಿಲ್ಲ. ಅದು ಭದ್ರಾವತಿಯ ಹೆಮ್ಮೆಯ ಮಕ್ಕಳು ಅಂದರೆ. ಇಲ್ಲಿರುವುದು ಬರೀ ಕಬ್ಬಿಣ ಉಕ್ಕಿನ ಕಾರ್ಖಾನೆಯಲ್ಲ, ಚಿನ್ನದ ಮನದ ಜನಗಳು.

ಕೇಳಿದರೆ ಆಶ್ಚರ್ಯ ಹುಟ್ಟಿಸುವಂತೆ ಇಡೀ ದಾಸೋಹ ನಡೆದು ಹೋಯಿತು. ವಿದೇಶಗಳಿಂದ ದೇಶಕ್ಕೆ ಓಗೊಟ್ಟವರೆಷ್ಟೋ, ಪುಟ್ಟ ಉಳಿತಾಯಗಳ ಗಂಟು ಬಿಚ್ಚಿ ಕೊಟ್ಟವರೆಷ್ಟೋ, ನನ್ನಂತೆಯೇ ಅವರು ಎಂದು ಕರೆದುಕೊಟ್ಟ ವರ್ತಕರೆಷ್ಟೋ, ಇನ್ನು ಇರುಳರಿಯದೆ ದುಡಿದ ಸ್ವಯಂ ಸೇವಕರ ದಂಡು.. ಹೇಳತೀರದು ಆ ಸಂಭ್ರಮ.

ಒಟ್ಟು ಮೂವತ್ನಾಲ್ಕು ದಿನ, ಅವಿರತ ಶ್ರಮ. ಅಲ್ಲೊಂದು ಹುರುಪು, ಸಾಮಾಜಿಕ ಕಳಕಳಿಯ ಕನಸು, ಸ್ವಾರ್ಥ ರಹಿತ ಅರ್ಪಣೆ. 27 ಮಾರ್ಚ್ 2020 ನಾವೆಲ್ಲಾ ಕಲೆತು ಇಂತಹ ಕನಸಿದೆ ಎಂದಾಗ ಯಾರೂ ಇಲ್ಲ ಅನ್ನಲಿಲ್ಲ, ಹೇಗೆ ಶುರು ಮಾಡೋಣ ಎಂದವರೇ ಎಲ್ಲ. ನಮ್ಮ ಈ ಸದುದ್ದೇಶಕ್ಕೆ ಬೆನ್ನೆಲುಬಾಗಿ ಅಡುಗೆ ಭಟ್ಟರಾದ ಮುರಳಿ ಮತ್ತು ತಂಡದವರು, ಒಂದಲ್ಲ ಎರಡಲ್ಲ 7500 ಚಪಾತಿ ಮಾಡಿಕೊಟ್ಟ ಮಹಿಳಾ ಸಂಘದ ಸದಸ್ಯರು ಎಷ್ಟು ಅಂತ ಕೃತಜ್ಞತೆ ಸಲ್ಲಿಸಲು ಸಾಧ್ಯ? ಒಂದು ಮಾತಿದೆ ಒಳ್ಳೆಯ ಕಾರ್ಯಗಳನ್ನು ನಡೆಸಲು ದೇವರು ಜೊತೆ ನಿಲ್ಲುತ್ತಾರೆ ಎಂದು. ಹಾಗೆಯೇ ಆಯಿತು. ಇಲ್ಲಿರುವ ಪ್ರತಿ ಒಬ್ಬರೂ ಅಸಹಾಯಕ ನಿರಾಶ್ರಿತರಿಗೆ ದೇವರಂತೆ ಜೊತೆಯಾದರು.

ಮೇ 3, ನಮ್ಮ ದಾಸೋಹವನ್ನು ಅಂತ್ಯಗೊಳಿಸೋಣ ಅಂತ ಅಂದೇ ತೀರ್ಮಾನಿಸಿದ್ದೆವು. ಅಂತೆಯೇ ಒಟ್ಟು 38 ದಿನಗಳ ಈ ಆಹಾರ ಯಜ್ಞವನ್ನು ಮುಗಿಸುತ್ತಿದ್ದೇವೆ. ಒಟ್ಟು 225 ಕೆಜಿ ಅಕ್ಕಿಯ ಆಹಾರವನ್ನು 2300ಕ್ಕೂ ಹೆಚ್ಚಿನ ನಿರಾಶ್ರಿರಿಗೆ ನೀಡಿದ್ದೇವೆ ಎನ್ನಲು ಹೆಮ್ಮೆಯಾಗುತ್ತದೆ. ಅದಕ್ಕೆ ಹೇಳಿದ್ದು ಇದು ಬರೀ ಅನ್ನದಾನವಲ್ಲ, ಆಹಾರ ಯಜ್ಞ. ನಮ್ಮ ಸೇವೆ ನಿಂತಿರಬಹುದು. ನಮ್ಮ ಮನಗಳು ನಿಂತಿಲ್ಲ. ಸದಾ ನಿಮ್ಮ ಕಷ್ಟವನ್ನು ಕೇಳಲು ನಾವಿದ್ದೇವೆ. ಇಲ್ಲಿರುವ ಎಲ್ಲ ದಾನಿಗಳು, ಸ್ವಯಂಸೇವಕರು, ಅಡಿಗೆ ಕೆಲಸದವರು, ಮಹಿಳಾ ಸಂಘಟನೆಗಳ ಸದಸ್ಯರು ಹೀಗೆ ಪ್ರತಿಯೊಬ್ಬರೂ ತಮ್ಮ ಶಕ್ತಿ ಮೀರಿ ನಮ್ಮೊಡನೆ ನಿಂತು ಈ ಯೋಜನೆಯ ಯಶಸ್ಸಿಗೆ ಕಾರಣರಾಗಿದ್ದಾರೆ. ಧನ್ಯವಾದಗಳು. ಗಡಿಯಲ್ಲೂ ಶತ್ರುಗಳ ಬಿಟ್ಟಿಲ್ಲ, ಗಡಿಯೊಳಗೂ ಬಿಡುವುದಿಲ್ಲ. ಮಹತ್ಕಾರ್ಯದ ಪಾಲುದಾರರಾದ ನಿವೃತ್ತ ಸೈನಿಕರ ಸಂಘ, ವರ್ತಕರ ಸಂಘ ಮತ್ತು ಸ್ವರ್ಣ ಟ್ರಾವೆಲ್ಸ್ ಹಾಗೂ ಪ್ರತಿಯೊಬ್ಬ ಸ್ವಯಂ ಸೇವಕರಿಗೂ ತಾಯಿ ಭಾರತಿ ಹರಸಲಿ. ಅವರ ಪೀಳಿಗೆ ನೂರ್ಮಡಿ ಆಗಲಿ.

ಕೊರೋನಾ ತುರ್ತು ಪರಿಸ್ಥಿತಿಯಲ್ಲೂ ಸಹ ಗಡಿಯಲ್ಲಿ ನಮ್ಮ ವೀರ ಯೋಧರು ತಾಯಿ ಭಾರತಿಯನ್ನು ರಕ್ಷಿಸುತ್ತಿದ್ದಾರೆ, ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ, ಪೊಲೀಸರು ತಮ್ಮ ಕುಟುಂಬಗಳನ್ನೇ ಪಕ್ಕಕ್ಕಿಟ್ಟು ಶ್ರಮಿಸುತ್ತಿದ್ದಾರೆ, ನರ್ಸ್‌ಗಳು-ಆಶಾ ಕಾರ್ಯಕರ್ತೆಯರು-ಪೌರ ಕಾರ್ಮಿಕರು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ತ್ಯಾಗ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಹಿತಕ್ಕಾಗಿ ಕೈಜೋಡಿಸುವುದು ಎಷ್ಟು ಮುಖ್ಯವೋ, ಹಸಿದ ಹೊಟ್ಟೆಯನ್ನು ತುಂಬಿಸುವುದು ಅದಕ್ಕಿಂತಲೂ ಮುಖ್ಯ. ಇಂತಹ ಕಾರ್ಯವನ್ನು ಸತತ 38 ದಿನಗಳ ಕಾಲ ದಾಸೋಹ ಯಜ್ಞದಂತೆ ಯಶಸ್ವಿಯಾಗಿ ನಿರ್ವಹಿಸಿದ ಸ್ವರ್ಣ ಟ್ರಾವೆಲ್ಸ್‌ ಕಿಶೋರ್ ಹಾಗೂ ಸಂಗಡಿಗರು, ಮಾಜಿ ಸೈನಿಕರ ಸಂಘದ ಸದಸ್ಯರು, ಅಡುಗೆ ಮುರಳಿ ಹಾಗೂ ಸಂಗಡಿಗರು, ಇವರಿಗೆ ಸಹಕರಿಸಿದ ದಾನಿಗಳು ಸೇರಿದಂತೆ ಆಹಾರವನ್ನು ಪ್ರತಿ ವ್ಯಕ್ತಿಗೂ ತಲುಪಿಸಿದ ಪ್ರತಿಯೊಬ್ಬರಿಗೂ ತಾಯಿ ಭಾರತಿ, ತಾಯಿ ಚಾಮುಂಡೇಶ್ವರಿ ನೂರು ಕಾಲ ಸಂಮೃದ್ದಿಯಿಂದ ಬಾಳುವಂತೆ ಹರಸಲಿ ಎಂಬುದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಕೆ…


Get in Touch With Us info@kalpa.news Whatsapp: 9481252093

Tags: BhadravathiCovid19IndiaIndiaLockDownKannadaNewsWebsiteLatestNewsKannadaMalnadNewsSachin ParshwanathSteel CitySwarna TravelsSwarna Travels Bhadravathiಅನ್ನದಾನದಾಸೋಹಭದ್ರಾವತಿಸ್ವರ್ಣ ಟ್ರಾವೆಲ್ಸ್
Previous Post

ದಾವಣಗೆರೆಯಲ್ಲಿ ಕೊರೋನಾ ವೈರಸ್’ಗೆ ಮೊದಲ ಬಲಿ: 69 ವರ್ಷದ ವೃದ್ಧ ಸಾವು

Next Post

ಸಂಕಷ್ಟದಲ್ಲಿರುವ ಪುರೋಹಿತರಿಗೆ ದಿನಸಿ ಪದಾರ್ಥ ವಿತರಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಂಕಷ್ಟದಲ್ಲಿರುವ ಪುರೋಹಿತರಿಗೆ ದಿನಸಿ ಪದಾರ್ಥ ವಿತರಣೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!