ಕಲ್ಪ ಮೀಡಿಯಾ ಹೌಸ್ | ಉಡುಪಿ |
ಕೃಷ್ಣಮಠದಲ್ಲಿ, ಶ್ರೀಮಧ್ವಾಚಾರ್ಯರ ಕೃತಿಗಳ ಸಂಗ್ರಹವಾದ ಸರ್ವಮೂಲ ಆಪ್ನ್ನು ಉಡುಪಿ ಶ್ರೀಕೃಷ್ಣಪರ್ಯಾಯಪೀಠಾಧಿಪತಿಗಳಾದ ಶೀಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಿಜಯದಶಮಿ-ಮಧ್ವಜಯಂತಿಯಂದು ಅನಾವರಣಗೊಳಿಸಿದರು.
ಶ್ರೀಮಧ್ವಾಚಾರ್ಯರು ವೇದ-ಉಪನಿಷತ್ತು-ಭಗವದ್ಗೀತೆ ಮಹಾಭಾರತ ಮೊದಲಾದವುಗಳಿಗೆ ವ್ಯಾಖ್ಯಾನ ಹಾಗೂ ಅನೇಕ ಸ್ವಂತ ಕೃತಿಗಳನ್ನೂ ರಚಿಸಿದ್ದು, ಅವುಗಳ ಮೂಲಪ್ರೈತಿಗಳು ತುಳು ಲಿಪಿಯಲ್ಲಿದ್ದು, ಇಂದಿಗೂ ಶ್ರೀಪಲಿಮಾರು ಮಠದಲ್ಲಿ ಸಂರಕ್ಷಿಸಲ್ಪಟ್ಟಿವೆ.
ಪ್ರಕೃತ ಈ ಆಂಡ್ರಾಯಿಡ್ ಆಪ್ ನಲ್ಲಿ ತುಳುಲಿಪಿಯನ್ನೂ ಒಳಗೊಂಡು ಸಂಸ್ಕೃತ, ಕನ್ನಡ ಮೊದಲಾದ ಏಳು ಲಿಪಿಗಳಲ್ಲಿ ಓದಲು ಅನುಕೂಲವನ್ನು ಮಾಡಿಕೊಡಲಾಗಿದೆ. ಆಸಕ್ತರು ಗೂಗಲ್ ಪ್ಲೇಸ್ಟೋರಿನಿಂದ ಉಚಿತವಾಗಿ ಪಡೆದುಕೊಳ್ಳಬಹುದು.
ಶ್ರೀಕೃಷ್ಣಮಠದ ಅಧೀನಸಂಸ್ಥೆಯಾದ ಶ್ರೀಮನ್ ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತಸಂಶೋಧನಕೇಂದ್ರವು ಇದನ್ನು ಅಭಿವೃದ್ಧಿಪಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post