ಚೆನ್ನೈ/ನವದೆಹಲಿ: ತಮಿಳುನಾಡ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯದಲ್ಲಿ ಏರುಪೇರು ಸಂಭವಿಸಿದ್ದು, ಅವರ ಸ್ವಗೃಹದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ಮೂತ್ರ ಕೋಶದ ಸೋಂಕಿನಿಂದ ಜ್ವರವೂ ಸಹ ಕಾಣಿಸಿಕೊಂಡಿದ್ದು, ನಿರಂತರವಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕರುಣಾನಿಧಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
Spoke to Thiru @mkstalin and Kanimozhi Ji. Enquired about the health of Kalaignar Karunanidhi Ji and offered any assistance required. I pray for his quick recovery and good health. @kalaignar89
— Narendra Modi (@narendramodi) July 27, 2018
ಈ ಸಂಬಂಧ ಕರುಣಾನಿಧಿ ಪುತ್ರ ಎಂಕೆ ಸ್ಟಾಲಿನ್ ಮತ್ತು ಪುತ್ರಿ ಕನಿಮೋಳಿ ಅವರ ಜೊತೆ ಪ್ರಧಾನಿ ಚರ್ಚಿಸಿದ್ದೇನೆ ಎಂದಿದ್ದಾರೆ.
Discussion about this post