Wednesday, July 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪುನೀತ್ ಜಿ. ಕೂಡ್ಲೂರು

ವಿದ್ಯಾಗಮಕ್ಕೆ ಕಲ್ಲು ಹಾಕಿ ಸಾಧಿಸಿದ್ದಾದರು ಏನು?

ಮಕ್ಕಳ ಭವಿಷ್ಯದ ದೃಷ್ಠಿಯಿಂದ ಸಹೃದಯಿ ಶಿಕ್ಷಣ ಸಚಿವರಿಗೆ ಕೆಲವು ಸಲಹೆಗಳು

November 9, 2020
in ಪುನೀತ್ ಜಿ. ಕೂಡ್ಲೂರು
0 0
0
Internet file image

Internet file image

Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮಾರ್ಚ್ 2020 ರಿಂದ ಭಾರತಾದ್ಯಂತ ಕೊರೋನಾದ ಆತಂಕ ಹಾವಳಿ ಮರಣ ಮೃದಂಗ ರಣಕೇಕೆ ಎಲ್ಲಾ ವರ್ಗದ ವೃತ್ತಿ ಬದುಕಿನ ಜನ ಅನುಭವಿಸಿದ ಕಷ್ಟ ಹೇಳತೀರದು, ಸತತ ಆರು ತಿಂಗಳ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ನಾವು ಖಂಡಿತ ವಿಫಲರಾದೆವು.

ಶಿಕ್ಷಣ ಅತ್ಯಂತ ಪವಿತ್ರವಾದ ಮತ್ತು ಅಮೂಲ್ಯವಾದ ಒಂದು ಶಕ್ತಿ, ಮಕ್ಕಳಿಗೆ ಅದರ ಅವಶ್ಯಕತೆ ಮತ್ತು ಅನಿವಾರ್ಯತೆ ಬಹಳವಿದೆ. ಕೊರೋನಾ ಆರಂಭದಿಂದ ಈ ವಿಚಾರದಲ್ಲಿ ಆದ ಗೊಂದಲಗಳು ಚರ್ಚೆಗಳು ಆರೋಗ್ಯ ಇಲಾಖೆಯಲ್ಲೂ ಆಗಲಿಲ್ಲವೇನೋ? ಶಾಲೆಗೆ ಪ್ರವೇಶ ಪಡೆಯುವುದರಿಂದ ಹಿಡಿದು ಪರೀಕ್ಷೆ ಬರೆಯುವ ತನಕ ಎಲ್ಲವೂ ಗೋಜಲೇ, ಎಲ್ಲದಕ್ಕೂ ಮಾನ್ಯ ಶಿಕ್ಷಣ ಸಚಿವರೇ ಸ್ಪಷ್ಟನೆ ಕೊಡಬೇಕು, ಅಧಿಕಾರಿಗಳು ನಾಪತ್ತೆಯಾಗಿದ್ದರೋ ಅಥವಾ ಅವರಿಗೆ ಅಧಿಕಾರವಿರಲಿಲ್ಲವೋ ಎಂಬುದು ಯಕ್ಷಪ್ರಶ್ನೆ.

ಎಸ್’ಎಸ್’ಎಲ್’ಸಿ ಪರೀಕ್ಷೆ ವಿಚಾರದಲ್ಲಿ ಮಾತ್ರ ಸಚಿವರ ಕಾಳಜಿ ಮತ್ತು ಜವಾಬ್ದಾರಿ ಮೆಚ್ಚುವಂತದ್ದು, ಕೊರೋನಾ ಉತ್ತುಂಗದಲ್ಲಿದ್ದಾಗ ನಿರಾತಂಕವಾಗಿ ಪರೀಕ್ಷೆ ನಡೆಸಿ ಮಾದರಿಯಾದರು. ಆದರೆ ಶಾಲೆ ತೆರೆಯುವ ವಿಚಾರದಲ್ಲಿ ಅಥವಾ ವಿದ್ಯಾಗಮದ ತಾತ್ಕಾಲಿಕ ಸ್ಥಗಿತದ ವಿಚಾರದಲ್ಲಿ ಇಲಾಖೆಯೇ ಖುದ್ದಾಗಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಸಚಿವರ ತಾಳ್ಮೆ ಮತ್ತು ಜಾಣ್ಮೆಯನ್ನು ಪ್ರತಿಹಂತದಲ್ಲೂ ಪರೀಕ್ಷಿಸುವಂತಿದೆ ಈ ವಿಚಾರ.

ಖಾಸಗಿ ಶಾಲೆಗಳು ಮಕ್ಕಳನ್ನು ಆನ್-ಲೈನ್ ತರಗತಿ ಅಂತ ಕೂರಿಸಿ ಒಂದಷ್ಟು ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿ ಆರಂಭಿಸಿದವು. ಪೋಷಕರೂ ಸಹ ವಿದ್ಯೆಯ ಮಹತ್ವ ಅರಿತು ಕೊರೋನಾ ಸಂಕಷ್ಟದಲ್ಲೂ ಸಾಲ ಸೋಲ ಮಾಡಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಟ್ಯಾಬ್’ಗಳನ್ನು ಮತ್ತು ಅದಕ್ಕೆ ಪೂರಕವಾಗಿ ಬೇಕಾದಂತ ಇನಂಟರ್‌ನೆಟ್ ಒದಗಿಸಿದರು. ಖಾಸಗಿ ಶಾಲೆಗಳೆಲ್ಲವೂ ಅಲ್ಲದೇ ಹೋದರು ಸರಿ ಸುಮಾರು ಶೇ.60 ರಷ್ಟು ಶಾಲೆಗಳು ಅತಿ ವೇಗವಾಗಿ ನೂತನ ಶಿಕ್ಷಣಪದ್ದತಿಗಳನ್ನು ಅಳವಡಿಸಿಕೊಂಡರು.

ಮತ್ತೊಂದಷ್ಟು ಶಾಲೆಗಳು ಕೊರೋನಾ ಅದು ಇದು ಅಂತ ಕಾರಣ ಹೇಳುತ್ತಾ ಶಿಕ್ಷಕರಿಗೆ ಸರಿಯಾಗಿ ಸಂಬಳವನ್ನು ನೀಡದೆ ಅವರ ಬದುಕನ್ನು ಆತಂಕಕ್ಕೆ ದೂಡಿತು. ಸರ್ಕಾರ ಶಿಕ್ಷಕರಿಗೆ ಮಾನವೀಯತೆಯ ಪಾಠಮಾಡಿತು ಸಮಸ್ಯೆ ಬಗೆಹರಿಯಲಿಲ್ಲ. ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆನೋ ಪಾಠ ಪ್ರವಚನ ನಡೆಯಿತು. ಆದರೆ ಸರ್ಕಾರಿ ಶಾಲೆ ಮಕ್ಕಳು, ಗ್ರಾಮೀಣ ಮಕ್ಕಳ ಕಥೆಯೇನು? ಆನ್‌ಲೈನ್ ತರಗತಿಗಳಿಗೆ ಹಳ್ಳಿಮಕ್ಕಳಿಗೆ ಮೊಬೈಲ್ ಸಿಕ್ಕರೂ ನೆಟ್‌ವರ್ಕ್ ಸಿಗಬೇಕಲ್ಲಾ? ಅಪ್ಪಿತಪ್ಪಿ ಮನೆಯೊಳಗೆ ನೆಟ್‌ವರ್ಕ್ ಸಿಕ್ಕರೂ ವೇಗದ ಇಂಟರ್ ನೆಟ್ ಸಿಗುವುದು ಕನಸಿನ ಮಾತು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಆನ್‌ಲೈನ್ ತರಗತಿಯಲ್ಲಿ ಕಲಿಯುವುದಾದರೂ ಹೇಗೆ? ಒಮ್ಮೆ ಇವೆಲ್ಲಾ ಒದಗಿದರೂ ಮಕ್ಕಳು ಮೇಷ್ಟ್ರ ಬೆತ್ತದ ಏಟಿನ ಭಯವಿಲ್ಲದೆ ಏಕಾಗ್ರತೆಯಿಂದ ಪಾಠ ಕಲಿಯುವುದು ಒಂದು ಸವಾಲಿನ ಪ್ರಶ್ನೆ. ಇದನ್ನು ಅರಿತ ಸರ್ಕಾರವು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾಗಮವೆಂಬ ನೂತನ ಪದ್ದತಿಯನ್ನು ಜಾರಿಗೊಳಿಸಿತು. ಆದರೆ ಅದರ ಅನುಷ್ಠಾನವನ್ನು ಸ್ವಲ್ಪ ಜಾಗರೂಕತೆಯಿಂದ ಮಾಡಬಹುದಿತ್ತು. ದೇವಸ್ಥಾನ, ಒಠಾರ, ಮೈದಾನಗಳಲ್ಲಿ ಪಾಠ ಮಾಡುವ ಬದಲು ಮಕ್ಕಳನ್ನು ಶಾಲೆಯ ಆವರಣದಲ್ಲೇ ಕೂರಿಸಿ ಮಾಡಬಹುದಿತ್ತು.

ಉಪಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿಗಳೀರ್ವರು ಸರ್ಕಾರವನ್ನು ದೂಷಿಸಲು ಆಯ್ಕೆ ಮಾಡಿಕೊಂಡಿದ್ದೇ ಪಾಪ ಬಡಮಕ್ಕಳ ವಿದ್ಯೆಗೆ ಆಸರೆಯಾಗಿದ್ದ ವಿದ್ಯಾಗಮವನ್ನು, ಮಾನ್ಯ ಸಚಿವರ ಸರ್ವಶ್ರಮವನ್ನು ನೀರುಪಾಲು ಮಾಡಲು ಸಂಚು ಹಾಕಿದರು. ಚುನಾವಣೆ ಸಂದರ್ಭದಲ್ಲಿ ಯಾರೋ ಒಂದಿಬ್ಬರು ಕೊರೋನಾಕ್ಕೆ ಬಲಿಯಾದ ಕಾರಣ ಹಿಡಿದು ಜರಿಯಬಹುದೆಂದು ಭಾವಿಸಿ ಸರ್ಕಾರವೂ ವಿದ್ಯಾಗಮವನ್ನು ಸ್ಥಗಿತಗೊಳಿಸಿತು. ತಿಂಗಳುಗಳ ಗಟ್ಟಲೆ ಮಕ್ಕಳು ಶಿಕ್ಷಣದಿಂದ ವಿಮುಖರಾದರೆ ಅಂತಹ ಮಕ್ಕಳನ್ನು ಮತ್ತೆ ಶಿಕ್ಷಣದ ಕಡೆಗೆ ತರುವುದು ಬಹಳ ಕಷ್ಟಕರವಾದ ಕೆಲಸ. ಕುಟುಂಬದಲ್ಲಿ ಬಡತನವಿದ್ದರೆ ಮಕ್ಕಳನ್ನು ಪೋಷಕರೇ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಪ್ರೌಢಶಿಕ್ಷಣದ ಹಂತದಲ್ಲಿನ ವಿದ್ಯಾರ್ಥಿ/ನಿ ಒಮ್ಮೆ ದುಡಿಮೆಗೆ ಹೋಗಿ ನಾಲ್ಕು ಕಾಸು ಸಂಪಾದಿಸದರೆ ಮುಂದಿನ ಅವರ ಗುರಿ ಸಂಪಾದನೆಯೇ ಆಗಿರುತ್ತದೆಯೇ ಹೊರೆತು ಶಿಕ್ಷಣವಲ್ಲ ಎಂಬುದು ಸತ್ಯ.

ಶಾಲೆಗಳಿಲ್ಲ ಎಂಬ ಕುಂಟುನೆಪವೊಡ್ಡಿ ಕೆಲವರು ಬಾಲ್ಯವಿವಾಹಕ್ಕೆ ಮುಂದಾಗುತ್ತಾರೆ. ಶಾಲೆ ಇಲ್ಲದಿದ್ದರೆ ಬಾಲಕಾರ್ಮಿಕರ ವರ್ಗವೇ ಮುಂದಿನ ದಿನಗಳಲ್ಲಿ ದೊಡ್ದದಾಗಿರುತ್ತದೆ. ಮಕ್ಕಳು ಮನೆಯಲ್ಲಿ ಸುರಕ್ಷಿತವಾಗಿರಲಿ ಒಂದು ವರ್ಷವೆಂದು ನಾವು ಅವರನ್ನು ಶಾಲೆಗೆ ಕಳುಹಿಸಲು ಅಥವಾ ಶಿಕ್ಷಣ ಕೊಡಿಸಲು ಹಿಂಜರಿದರೆ ಅದರ ಅಡ್ಡಪರಿಣಾಮವನ್ನು ಸರಿದಾರಿಗೆ ತರಲು ಹಲವು ವರ್ಷಗಳೇ ಬೇಕಾಗುತ್ತದೆ ಎಂಬುದು ಮಾತ್ರ ಸತ್ಯ.

ಸರ್ಕಾರವು ಶಾಲೆಗಳನ್ನು ತೆರೆಯುವ ಬಗ್ಗೆ ಯಾವುದೇ ದೃಢ ನಿರ್ಧಾರಕ್ಕೆ ಬಾರದಿರುವುದು ವಿಷಾದನೀಯ. ಅಂದರೆ ಶಾಲೆಯನ್ನು ನಾಳೆಯೇ ತೆರೆಯಬೇಕೆಂದಲ್ಲ, ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಬೇಕು. ಅದೆಷ್ಟು ಬಾರಿ ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು? ಈ ಶೈಕ್ಷಣಿಕ ವರ್ಷ ಶಾಲೆಗಳು ತೆರೆಯುವುದಿಲ್ಲ, ವಿವಿಧ ಮಾಧ್ಯಮದ ಮೂಲಕ ಶಿಕ್ಷಣ ನಡೆಯುತ್ತದೆ ಹಾಗೂ ಎಂದಿನಂತೆ ಪರೀಕ್ಷೆಗಳು ನಡೆಯುತ್ತದೆ, ಇಲ್ಲಾ ಜನವರಿಯ ತನಕ ಶಾಲೆಗಳಿಗೆ ಪ್ರವೇಶವಿಲ್ಲ, ವ್ಯಾಕ್ಸಿನ್ ಬಂದನಂತರ ಮುಂದಿನ ನಿರ್ಧಾರ ತಿಳಿಸಲಾಗುವುದು. ಈ ವರ್ಷ ಪರೀಕ್ಷಾ ರಹಿತ ವರ್ಷ ಎಲ್ಲರನ್ನು ಉತ್ತೀರ್ಣ ಮಾಡಲಾಗುವುದು ಅಥವಾ ಶಾಲೆಯನ್ನು ಇಂತಹ ತಾರೀಖಿನಿಂದ ತೆರೆಯುತ್ತೇವೆ. ನಿಮ್ಮ ಜಾಗರೂಕತೆಯಲ್ಲಿ ಶಾಲೆಗೆ ಹಾಜರಾಗುವುದು, ಈ ವರ್ಷದ ಪಠ್ಯವನ್ನು ಸ್ವಲ್ಪ ಕಡಿತಗೊಳಿಸಲಾಗುವುದು, ಇಷ್ಟು ಮಾತ್ರ ಇಲಾಖೆಗೆ ಇರುವ ಆಯ್ಕೆಗಳು ಇದನ್ನು ಹೇಳುವುದು ಬಿಟ್ಟು ಹಗ್ಗ ಜಗ್ಗಿದಂತೆ ಮಾಧ್ಯಮದ ವರದಿ ತಪ್ಪು, ಇಲಾಖೆಯ ನಿರ್ಧಾರವಲ್ಲ, ಸುಳ್ಳು ಸುದ್ದಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಬದಲು ನಿರ್ಧಾರ ಪ್ರಕಟಿಸಿದರೆ ಪೋಷಕರಿಗೂ ನೆಮ್ಮದಿ ಮಾಧ್ಯಮದವರಿಗೂ ಬೇರೆ ಸುದ್ದಿ ಬಗ್ಗೆ ಗಮನಕೊಡಲು ಅನುವು ಮಾಡಿಕೊಂಟ್ಟಂತೆ ಆಗುತ್ತದೆ ಅನ್ನಿಸುತ್ತದೆ.

ರಾಜಕೀಯ ಲೆಕ್ಕಚಾರದಲ್ಲಿ ವಿದ್ಯಾಗಮ ನಿಲ್ಲಿಸಿದ್ದರೆ ಅದು ಅಕ್ಷಮ್ಯ ಅಪರಾಧ. ಸಹೃದಯಿಯಾದ ಶಿಕ್ಷಣ ಸಚಿವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆ ತೆರೆಯುವ ತನಕ ವಿದ್ಯಾಗಮ ಪದ್ದತಿ, ದೂರದರ್ಶನ ಹಾಗೂ ಆಕಾಶವಾಣಿಗಳನ್ನು ಸಾಮಾಜಿಕ ಜಾಲತಾಣಗಳೊಂದಿಗೆ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು. ಸೋಮಾರಿ ಶಿಕ್ಷಕರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೆ ಆಯಾ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರನ್ನು ಬಳಸಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಬಹುದು. ಪ್ರತಿ ತರಗತಿಯ ಪಾಠಗಳನ್ನು ಉತ್ತಮ ಶಿಕ್ಷಕರಿಂದ ಪಾಠ ಮಾಡಿಸಿ ಅದನ್ನು ರೆಕಾರ್ಡ್ ಮಾಡಿ ಶಿಕ್ಷಣ ಇಲಾಖೆಯ ವೆಬ್‌ಸೈಟ್’ನಲ್ಲಿ ಹಾಕಬಹುದು. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಎಲ್ಲಾ ಶಿಕ್ಷಕರಿಗೂ ಅನುಕೂಲವಾಗುತ್ತದೆ. ವಿದ್ಯಾವಂತ ಯುವಕರು ಆ ವಿಡೀಯೋಗಳನ್ನು ನೋಡಿ ತಮ್ಮ ಗ್ರಾಮದ ಮಕ್ಕಳಿಗೆ ಪಾಠ ಮಾಡಬಹುದು, ಆ ಯುವಕರಿಗೆ ಮಾಸಿಕ ಇಷ್ಟು ಅಂತ ಗೌರವ ಧನ ನೀಡಿ, ಇದಕ್ಕೆ ಸ್ವಯಂ ಸೇವಕರಾಗಿ ನೊಂದಾಯಿಸಿಕೊಳ್ಳಲು ಒಂದು ಅಂತರ್ಜಾಲವನ್ನು ತೆರೆಯಿರಿ, ಆ ಯುವಕರಿಗೂ ಸಮಯ ಸಾಗುತ್ತದೆ ಮತ್ತು ಈ ಕಷ್ಟದ ಸಂದರ್ಭದಲ್ಲಿ ಒಂದಷ್ಟು ಹಣವೂ ಸಿಗುತ್ತದೆ, ಮಕ್ಕಳಿಗೆ ಶಿಕ್ಷಣವೂ ಸಿಗುತ್ತದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Department of HealthKannada News WebsiteLatest News KannadaOnline ClassPrivate SchoolPuneeth G Koodluruvidyagama schemeಆನ್ ಲೈನ್ ತರಗತಿಆರೋಗ್ಯ ಇಲಾಖೆಕೊರೋನಾ ಲಾಕ್’ಡೌನ್ಖಾಸಗಿ ಶಾಲೆಪುನೀತ್ ಜಿ ಕೂಡ್ಲೂರುವಿದ್ಯಾಗಮಶಾಲೆ
Previous Post

150 ಬಡ ಕುಟುಂಬಗಳಿಗೆ ನವ್ಯ ಫೌಂಡೇಶನ್ ವತಿಯಿಂದ ದೀಪಾವಳಿಗಾಗಿ ಫುಡ್ ಕಿಟ್

Next Post

ಸಿಎಂ ತವರು ಶಿಕಾರಿಪುರ ಪುರಸಭೆ ಬಿಜೆಪಿ ಮಡಿಲಿಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಿಎಂ ತವರು ಶಿಕಾರಿಪುರ ಪುರಸಭೆ ಬಿಜೆಪಿ ಮಡಿಲಿಗೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಮಲೆನಾಡಿನ ಮೆಡಿಕಲ್ ಹಬ್ ಆಗಲಿದೆ ಸಿಹಿಮೊಗೆ

July 23, 2025

ಪಾಂಡವಪುರ | ಭೀಮನ ಅಮಾವಾಸ್ಯೆಗೆ ಉಕ್ಕಡಮ್ಮ ದೇಗುಲಕ್ಕೆ ತೆರಳುವವರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

July 23, 2025
File Image

ಶಿವಮೊಗ್ಗ | ಮನೆಯಲ್ಲಿ ಸಿಲಿಂಡರ್ ಸ್ಫೋಟ | ಮೂವರಿಗೆ ಗಾಯ

July 23, 2025

ಭದ್ರಾವತಿ ಪೌರಾಯುಕ್ತ ಚನ್ನಪ್ಪನವರ್ ವರ್ಗಾವಣೆ | ನೂತನ ಕಮಿಷನರ್ ನಿಯೋಜಿಸದ ಸರ್ಕಾರ

July 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಮಲೆನಾಡಿನ ಮೆಡಿಕಲ್ ಹಬ್ ಆಗಲಿದೆ ಸಿಹಿಮೊಗೆ

July 23, 2025

ಪಾಂಡವಪುರ | ಭೀಮನ ಅಮಾವಾಸ್ಯೆಗೆ ಉಕ್ಕಡಮ್ಮ ದೇಗುಲಕ್ಕೆ ತೆರಳುವವರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

July 23, 2025
File Image

ಶಿವಮೊಗ್ಗ | ಮನೆಯಲ್ಲಿ ಸಿಲಿಂಡರ್ ಸ್ಫೋಟ | ಮೂವರಿಗೆ ಗಾಯ

July 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!