ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಧುನಿಕ ತಂತ್ರಜ್ಞಾನದಿಂದ ಯಾವುದೇ ಕಠಿಣವಾದ ಖಾಯಿಲೆಗಾದ್ರೂ ಚಿಕಿತ್ಸೆ ಇದೆ ಅನ್ನುವುದನ್ನು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆ #MediCoverHospital ಯಶಸ್ವಿಯಾಗಿ ಸಾಬೀತು ಮಾಡಿದೆ.
ಆರೋಗ್ಯ ಸೇವೆಯಲ್ಲಿ ನವೀನ ಆವಿಷ್ಕಾರಗಳ ಸಹಾಯದಿಂದ ನಿಖರವಾದ ರೋಗನಿರ್ಣಯವನ್ನು ಕೈಗೊಂಡು ಸೂಕ್ತವಾದ ಚಿಕಿತ್ಸೆಯನ್ನು ನೀಡಿ ರೋಗಿಗಳನ್ನು ಗುಣಪಡಿಸಬಹುದು. ಇಂತಹ ವಿಶೇಷವಾದ ಒಂದು ಕೇಸ್ ಬೆಂಗಳೂರಿನ ವೈಟ್ ಫೀಲ್ಡ್’ನಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದಿದೆ.
Also read: ದೆಹಲಿ ವಿಧಾನಸಭಾ ಚುನಾವಣೆ | ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ’ ಪತ್ರದಲ್ಲಿ ಮಹಿಳೆಯರಿಗಾಗಿ ಮಹತ್ವದ ಘೋಷಣೆ
33 ವರ್ಷದ ಗೃಹಿಣಿಯು ದೀರ್ಘ ಕಾಲದ, ಕೆಮ್ಮು, ಉಸಿರಾಟಕ್ಕೆ ತೊಂದರೆ, ಶ್ವಾಸಕೋಶದ ಸಮಸ್ಯೆಗಳು ಮತ್ತು ದುರ್ಬಲತೆಯಿಂದ ಸುಮಾರು ಏಳು ವಾರಗಳಿಗೂ ಹೆಚ್ಚು ಕಾಲ ನರಳುತ್ತಿದ್ದರು. ಇದಕ್ಕಾಗಿ ತಮ್ಮ ನಿವಾಸದ ಬಳಿಯಿದ್ದ ವೈದ್ಯರ ಬಳಿ ಪ್ರಾಥಮಿಕ ಪರೀಕ್ಷೆ ಮಾಡಿಸಿದಾಗ, ಕುತ್ತಿಗೆಯಲ್ಲಿನ 8.2 x 7.5 x 5.4 ಸೆಂಮೀ ಗಾತ್ರದ ಸಿಸ್ಟ್ cyst) ಕಂಡುಬಂದಿದೆ.

ಮೆಡಿಕವರ್ ಆಸ್ಪತ್ರೆಯ ಕಾರ್ಡಿಯೋಥೋರೆಸಿಕ್ ಸರ್ಜನ್ #CardiothoracicSurgeon ಡಾ. ರಾಘವೇಂದ್ರ ಚಿಕ್ಕಾತೂರ್ ಅವರನ್ನು ರೋಗಿ ಮತ್ತು ಸಂಬಧಿಕರು ಆಪರೇಷನ್ ಗೆ ಎಂದು ಭೇಟಿ ಮಾಡಿದರು.
ಇವು ಶ್ವಾಸನಾಳಗಳಿಂದ ಹುಟ್ಟುವುದರಿಂದ ಶ್ವಾಸಕೋಶದ ಮೇಲೆ ಒತ್ತಡ ಉಂಟಾಗಿ, ಕೆಮ್ಮು, ಉಸಿರಾಟಕ್ಕೆ ತೊಂದರೆ ಇಂತಹ ರೋಗ ಲಕ್ಷಣಗಳು ಕಂಡು ಬರುತ್ತವೆ. ಈ ತರಹದ ಸಿಸ್ಟ್’ಗಳು ಸಾಮಾನ್ಯವಾಗಿ ಹೃದಯಕ್ಕೆ ಹತ್ತಿರವಿದ್ದು ಶ್ವಾಸನಾಳ ದೇಹದ ಮುಖ್ಯ ರಕ್ತನಾಳಗಳ ಮೇಲೆ ಒತ್ತಡವನ್ನುಂಟು ಮಾಡುತ್ತವೆ. ಬಳಿಕ ಮೆಡಿಕವರ್ ಆಸ್ಪತ್ರೆಯ ಕಾರ್ಡಿಯೋಥೋರಾಸಿಕ್ ತಂಡವು ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯನ್ನು ರೋಗಿಗೆ ತಿಳಿಸಿಕೊಟ್ಟಿದ್ದಾರೆ.

ಅಪರೇಷನ್ ನಡೆದು ಒಂದು ವಾರಕ್ಕೆ, ಯಾವುದೇ ಸಮಸ್ಯೆ ಇಲ್ಲದೇ ಎಂದಿನಂತೆ ತಮ್ಮ ದೈನಂದಿನ ಜೀವನ ನಡೆಸಲು ಅನುಕೂಲವಾಗಿದೆ. ಇಂತಹ ಸಮಸ್ಯೆಗಳಿಗೆ ಸರಿಯಾದ ರೇಡಿಯೋಲಾಜಿಕಲ್ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ಮೂಲಕ ರೋಗಿಗೆ ಇರೋ ನಿಜವಾದ ಸಮಸ್ಯೆಯನ್ನು ತಿಳಿದು ಬಳಿಕ ಅದಕ್ಕೆ ಸೂಕ್ತ ಪರಿಹಾರ ಹುಡುಕಲು ಅನುಕೂಲವಾಗುತ್ತದೆ ಎಂದು ಮೆಡಿಕವರ್ ಆಸ್ಪತ್ರೆಯ ಕಾರ್ಡಿಯೋಥೋರಾಸಿಕ್ ಸರ್ಜನ್ ಡಾ. ರಾಘವೇಂದ್ರ ಚಿಕ್ಕಾತೂರ್ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post