Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಮಹಾಲಯ ಅಮಾವಾಸ್ಯೆ ಪಿತೃಗಳಿಗೆ ವಿಶೇಷವೇಕೆ? ಯಾವ ವಸ್ತುಗಳು ದಾನಕ್ಕೆ ಪವಿತ್ರ? ಇಲ್ಲಿದೆ ಮಾಹಿತಿ

ಪಿತೃ ಪಕ್ಷ ಹಿರಿಯರ ಸ್ಮರಣೆಯ ಪರ್ವದಿನ

September 27, 2019
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Share on facebookShare on TwitterWhatsapp
Read - 3 minutes

ಪಿತೃಗಳಿಗೆ ನಾವು ಸಲ್ಲಿಸುವ ವಂದನಾರ್ಪಣೆಯೇ ಪಿತೃಪಕ್ಷದ ವಿಶೇಷ. ನಾವು ಏನೇ ಸಾಧನೆ ಮಾಡಲಿ; ನಮ್ಮ ಜನ್ಮಕ್ಕೆ, ಇಂದಿನ ಜೀವನಕ್ಕೆ ನಮ್ಮ ಪಿತೃಗಳ ಕೊಡುಗೆ ಅಪಾರ. ಆದುದರಿಂದ ವರ್ಷಕ್ಕೊಮ್ಮೆ ಅವರೆಲ್ಲರನ್ನೂ ನೆನೆದು ನಮ್ಮ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ. ಈ ಕರ್ಮಾಂಗಕ್ಕೆ ಯಾವುದೇ ಜಾತಿ-ಧರ್ಮಗಳ ಭೇದವಿಲ್ಲ! ಪಿತೃಪಕ್ಷವು ಸರ್ವರಿಗೂ ಅನ್ವಯಿಸುವ ಆಚರಣೆಯಾಗಿದೆ.

“ಆಚರಣೆ ಎಲ್ಲಿ ಮಾಡಬೇಕು”
ಮನೆಯಲ್ಲಿ ತಿಲತರ್ಪಣ ನೀಡುವುದನ್ನು ಶಾಸ್ತ್ರಗಳು ನಿಷೇಧಿಸಿವೆ. ಭಾನುವಾರ, ಶುಕ್ರವಾರ, ಭರಣಿ, ಕೃತಿಕಾ ಹಾಗೂ ಮಘಾ ನಕ್ಷತ್ರಗಳಿರುವ ದಿನಗಳಲ್ಲಿ ಕೂಡ ತಿಲತರ್ಪಣವನ್ನು ನಿಷೇಧಿಸಲಾಗಿದೆ. ಆದರೆ ಪಿತೃಪಕ್ಷದಲ್ಲಿ ಮಾತ್ರ ಯಾವುದೇ ನಿಷಿದ್ಧ ತಿಥಿ ವಾರ ನಕ್ಷತ್ರಗಳಿದ್ದರೂ ತಿಲತರ್ಪಣ ಮಾಡಬಹುದು.

ತರ್ಪಣಕ್ಕೆ ಉತ್ತಮ ಸ್ಥಳಗಳೆಂದರೆ ಪವಿತ್ರ ನದೀತೀರಗಳು ಹಾಗೂ ಗೋಕರ್ಣಾದಿ ತೀರ್ಥಕ್ಷೇತ್ರಗಳು. ಪಿತೃಪಕ್ಷದಲ್ಲಿ ಅವಶ್ಯವಾಗಿ ತರ್ಪಣದ ಅಧಿಕಾರವುಳ್ಳವರು ಗೋಕರ್ಣ, ಶ್ರೀರಂಗಪಟ್ಟಣ ಮುಂತಾದ ಕ್ಷೇತ್ರಗಳು ಅಥವಾ ಕಾವೇರಿ, ಗಂಗಾ ಇಂಥ ಪವಿತ್ರ ನದೀತೀರಗಳಲ್ಲಿ ಪಿತೃಗಳಿಗೆ ಪಿಂಡಪ್ರದಾನ, ತರ್ಪಣಾದಿಗಳನ್ನು ಅರ್ಪಿಸುವುದು ಉತ್ತಮ. ವಿವಾಹವಾಗಿ ಇನ್ನೂ ಒಂದು ವರ್ಷ ಮುಗಿಯದವರು ತರ್ಪಣ ಮಾಡಕೂಡದು.

ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಆಚಾರ್ಯ ಶಂಕರರು ನುಡಿದಂತೆ ಪುನರಪಿ ಜನನಂ ಪುನರಪಿ ಮರಣಂ. ಹೀಗೆ ಎಷ್ಟು ಜನ್ಮ ತಾಳಿದರೂ ಸಹ ಮುಗಿಸಲಾಗದಷ್ಟು ಪಾಪವನ್ನು ಒಂದೇ ಜನ್ಮದಲ್ಲಿ ಸಂಪಾದಿಸಿಬಿಡುತ್ತೇವೆ. ಈ ಕಠಿಣ ಸಮಸ್ಯೆಗೆ ನಮ್ಮ ಶಾಸ್ತ್ರಗಳು ಸುಲಭ ಪರಿಹಾರ ನೀಡುತ್ತವೆ. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.

ಗರುಡಪುರಾಣದಲ್ಲಿ ಭಗವಂತನು ನುಡಿಯುತ್ತಾನೆ: ‘ಯಾವನು ಪುತ್ ಎಂಬ ನರಕದಿಂದ ಪಿತೃಗಳನ್ನು ಪಾರುಮಾಡುತ್ತಾನೋ ಅವನೇ ಪುತ್ರ’. ಆದುದರಿಂದ ಯಾವುದೇ ಜಾತಿಬೇಧವಿಲ್ಲದೆ ಕರ್ಮಾಕಾರ ಇದ್ದಲ್ಲಿ ಪಿತೃಗಳಿಗೆ ಶ್ರಾದ್ಧ, ತರ್ಪಣ ಹಾಗೂ ದಾನಗಳನ್ನು ಮಾಡಿ ತಮ್ಮ ಋಣ ತೀರಿಸಲೇಬೇಕು.

ಕಾಲ
ಇಂಥ ವಿಶೇಷ ಕರ್ತವ್ಯವನ್ನು ಪಾಲಿಸಬೇಕಾದ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಕಾಲ. ಯಾವ ಕಾಲದಲ್ಲಿ ಪಿತೃಗಳಿಗೆ ಸದ್ಗತಿ ನೀಡುವ ಕಾರ್ಯಗಳನ್ನು ಮಾಡಬೇಕು? ಸಾಮಾನ್ಯವಾಗಿ ವಾರ್ಷಿಕ ಶ್ರಾದ್ಧ ರೂಢಿಯಲ್ಲಿ ಇಟ್ಟುಕೊಂಡವರು ಮೃತರ ಶ್ರಾದ್ಧವನ್ನು ಅವರ ಮೃತಮಾಸದ ಆ ತಿಥಿಯಂದು ಪಿಂಡಗಳನ್ನು ಸಮರ್ಪಿಸಿ ಆಚರಿಸುತ್ತಾರೆ. ಆದರೆ ಅಂಥ ಸಮಯದಲ್ಲಿ ಶ್ರಾದ್ಧ ಮಾಡುವವರು ಪಿತೃ, ಪಿತಾಮಹ, ಪ್ರಪಿತಾಮಹ ಅಂದರೆ ತಂದೆ, ಅಜ್ಜ ಹಾಗೂ ಮುತ್ತಜ್ಜನಿಗೆ ಅಥವಾ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿಗೆ ಪಿಂಡಾದಿಗಳನ್ನಿಟ್ಟು ಶ್ರಾದ್ಧ ಮಾಡುತ್ತಾರೆ. ಆದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಮಾತ್ರ ಕುಟುಂಬದಲ್ಲಿ ಮೃತರಾದ ಪ್ರತಿಯೊಬ್ಬರಿಗೂ ತರ್ಪಣ ಕೊಡಬೇಕು. ಕಾರಣ ಮಾಸಗಳಲ್ಲಿ ಅತ್ಯಂತ ಭದ್ರಮಾಸ ಎಂದು ಕರೆಯಲ್ಪಡುವುದು ಈ ಭಾದ್ರಪದ.

ಅದರಲ್ಲಿಯೂ ಕೃಷ್ಣಪಕ್ಷ ಪ್ರಾರಂಭಗೊಳ್ಳುವುದು ಉತ್ತರಭಾದ್ರಾ ನಕ್ಷತ್ರದಿಂದ. ಅಂದರೆ ಮನುಷ್ಯಜನ್ಮ ಮುಗಿಸಿದ ಉತ್ತರದಲ್ಲಿ ಆ ಆತ್ಮಕ್ಕೆ ಶಾಶ್ವತ ಭದ್ರಸ್ಥಾನವನ್ನು ಪಿತೃಲೋಕದಲ್ಲಿ ಸ್ಥಾಪಿಸಲು ಹಾಗೂ ಅವರಿಗೆ ತರ್ಪಣಾದಿಗಳನ್ನು ಕೊಟ್ಟು ಶುಭವನ್ನು ಪಡೆಯಲು ಈ ಪಕ್ಷ ಸೂಕ್ತ ಸಮಯ. ವರ್ಷಕ್ಕೊಮ್ಮೆ ಏಕೆ ಎಂಬುದು ಸಾಮಾನ್ಯರ ಅನುಮಾನ. ಶಾಸಗಳ ಪ್ರಕಾರ ಭೂಲೋಕದಲ್ಲಿ ವಾಸ ಮಾಡುವ ನಮ್ಮ ಒಂದು ವರ್ಷ ಪಿತೃಲೋಕದವರಿಗೆ ಒಂದು ದಿವಸ. ಹೀಗಾಗಿ ವರ್ಷಕ್ಕೊಮ್ಮೆ ಪಿತೃಪಕ್ಷದಲ್ಲಿ ಪೂರ್ವಿಕರನ್ನು ಆರಾಸಿದರೆ ಪ್ರತಿದಿನ ಪಿತೃಗಳನ್ನು ಆರಾಸಿದಂತೆ. ಇನ್ನು ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿಯೇ ಏಕೆ? ‘ನಿರ್ಣಯಸಿಂಧು’ ಗ್ರಂಥದಲ್ಲಿ ತಿಳಿಸಿದಂತೆ ‘ಆಷಾಢಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷದಲ್ಲಿ ಪಿತೃಗಳು ಪ್ರತಿದಿನ ಅನ್ನ ಹಾಗೂ ನೀರನ್ನು ಬಯಸುತ್ತಾರೆ.’

ಇಲ್ಲಿ ಪಕ್ಷ ಎಂದರೆ 15 ತಿಥಿಗಳು. ಅಲ್ಲಿಗೆ ಆಷಾಢಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷ ಈ ಭಾದ್ರಪದ ಕೃಷ್ಣಪಕ್ಷ. ಆದುದರಿಂದ ಈ ಪಕ್ಷವನ್ನು ಪಿತೃಪಕ್ಷ ಎಂದು ಕರೆದಿದ್ದಾರೆ. ಆದುದರಿಂದ ಪಿತೃಗಳನ್ನು ತೃಪ್ತಿಪಡಿಸಲು ಅವರು ಬಯಸುವ ಅನ್ನವನ್ನು ಪಿಂಡಗಳ ಸಮರ್ಪಣೆ ಮೂಲಕ ಹಾಗೂ ಅವರು ಬಯಸುವ ನೀರನ್ನು ತರ್ಪಣಗಳ ಮೂಲಕ ನೀಡಿ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾಗಬೇಕು.

“ಆಚರಣಾ ಕ್ರಮಗಳು”
ಈ ಪಕ್ಷದಲ್ಲಿ ಪಿತೃಗಳಿಗೆ ಯಾವ ವಿಧಾನವನ್ನು ಆಚರಿಸಬೇಕೆಂಬುದು ವರ್ಣಶ್ರಮಗಳನ್ನು ಆಧರಿಸಿ ಸ್ವಲ್ಪ ವಿಭಿನ್ನವಾಗಿದೆ. ಇಲ್ಲಿ ಪದ್ಧತಿ ಭೇದಗಳು ಬಹಳವಾಗಿ ಕಂಡುಬರುವುದು. ಆದರೆ ‘ಶಾಸಾತ್ ರೂಢಿಃ ಗರೀಯಸೀ’ ಎಂಬ ಶಾಸ್ತ್ರವಾಕ್ಯದಂತೆ ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದುದನ್ನು ಬಿಡಬಾರದು. ವೇದಾಕಾರ ಇಲ್ಲದವರು ಪಿತೃಗಳಿಗೆ ಪ್ರಿಯವಾದ ಭಕ್ಷ್ಯಗಳನ್ನು ತಯಾರಿಸಿ ಮನೆಯ ದೇವರ ಮುಂದೆ ಬಾಳೆ ಎಲೆಗಳನ್ನು ಹರಡಿ ಅದರಲ್ಲಿ ಆ ಭಕ್ಷ್ಯಗಳನ್ನು ಬಡಿಸಬೇಕು. ಮನೆಯ ತುಂಬ ಧೂಪವನ್ನು ಹಾಕಿ ಪಿತೃಗಳನ್ನು ನೆನೆದು, ಅವರು ಈ ಎಲ್ಲ ಭಕ್ಷ್ಯಭೋಜ್ಯಗಳನ್ನು ಸ್ವೀಕರಿಸಿ ತಮ್ಮನ್ನು ಹರಸಬೇಕೆಂದು ಪ್ರಾರ್ಥಿಸಬೇಕು. ಯದ್ಭಾವಂ ತದ್ಭವತಿ ಎಂಬಂತೆ ಇದನ್ನೇ ಹಿರಿಯರಿಗೆ ಎಡೆ ನೀಡುವುದು ಎನ್ನುತ್ತಾರೆ. ಇದರಿಂದ ಪಿತೃಗಳು ತೃಪ್ತರಾಗುತ್ತಾರೆ. ತರ್ಪಣಗಳನ್ನು ಕೊಡುವಾಗ ಯಾರ‍್ಯಾರಿಗೆ ಮತ್ತು ಯಾರಿಗೆ ಮೊದಲು ತರ್ಪಣ ಕೊಡಬೇಕು ಇತ್ಯಾದಿಗಳ ಬಗ್ಗೆ ಶಾಸಗಳಲ್ಲಿ ಹೀಗೆ ತಿಳಿಸಲಾಗಿದೆ.

ಆದೌ ಪಿತಾ ತತೋ ಮಾತಾ ಸಪತ್ನೀ ಜನನೀ ತಥಾ |
ಮಾತಾಮಹಾಃ ಸಪತ್ನೀಕಾಃ ಹ್ಯಾತ್ಮಪತ್ನೀ ತತಃ ಪರಂ ||
ಸುತಭ್ರಾತೃಪಿತೃವ್ಯಾಶ್ಚ ಮಾತುಲಾಶ್ಚ ಸಭಾರ್ಯಕಾಃ |
ದುಹಿತಾ ಭಗಿನೀ ಚೈವ ದೌಹಿತ್ರೋ ಭಾಗಿನೇಯಕಃ ||
ಶ್ಯಾಲಕೋ ಭಾವುಕಶ್ಬೈವ ಶ್ವಶುರೋ ಗುರುಋತ್ವಿಜಾ |
ಏತೇ ಸ್ಯುಃ ಪಿತರಸ್ತೀರ್ಥೆ ತರ್ಪಣೇಚ ಮಹಾಲಯೇ ||

ಕುಟುಂಬದಲ್ಲಿ ಮೃತಪಟ್ಟವರಲ್ಲಿ ಕ್ರಮವಾಗಿ ಮೊದಲು ತಂದೆ, ತಾಯಿ, ಹೆಂಡತಿ, ಅತ್ತೆ, ಮಾವ, ಮಗ, ಸಹೋದರರು, ದೊಡ್ಡಪ್ಪ, ಚಿಕ್ಕಪ್ಪ ಹಾಗೂ ಅವರ ಹೆಂಡತಿ, ತಾಯಿಯ ತಮ್ಮ ಅಥವಾ ಅಣ್ಣ, ಅವರ ಹೆಂಡತಿಯರು, ಮಗಳು, ಅಕ್ಕ, ತಂಗಿ ಹಾಗೂ ಅವರ ಮಕ್ಕಳಿಗೆ, ಭಾವ, ಮೈದುನ ಮುಂತಾದವರು ಹಾಗೂ ವಿಶೇಷವಾಗಿ ಗುರುಗಳು, ಕುಲಪುರೋಹಿತರು ಸೇರಿದಂತೆ ಯಾರು ನಮಗೆ ತಿಳಿದಂತೆ ಮೃತರಾಗಿದ್ದಾರೋ ಅವರಿಗೆ – ಹೀಗೆ ಸರ್ವರಿಗೂ ಕ್ರಮವಾಗಿ ತರ್ಪಣಗಳನ್ನು ಕೊಡಬೇಕು.

ಇನ್ನು ಅನಾರೋಗ್ಯ, ವೃದ್ಧಾಪ್ಯ ಇತ್ಯಾದಿ ಕಾರಣಗಳಿಂದಾಗಿ ಇಷ್ಟೆಲ್ಲ ವಿಸ್ತಾರವಾಗಿ ತರ್ಪಣಗಳನ್ನು ಮಾಡಲು ಅಶಕ್ತರಾದವರು ಸಂಕ್ಷಿಪ್ತವಾಗಿಯೂ ಆಚರಿಸಬಹುದು. ಹೇಗೆಂದರೆ,

ಆಬ್ರಹ್ಮಸ್ತಂಭಪರ‍್ಯಂತಂ ದೇವರ್ಷಿ ಪಿತೃಮಾನವಾಃ |
ತೃಪ್ಯಂತು ಪಿತರಃ ಸರ್ವೇ ಮಾತೃಮಾತಾಮಹಾದಯಃ ||
ಆತೀತ ಕುಲಕೋಟೀನಾಂ ಸಪ್ತದ್ವೀಪ ನಿವಾಸಿನಾಂ |
ಆಬ್ರಹ್ಮ ಭುವನಾಲ್ಲೋಕಾತ್ ಇದಮಸ್ತು ತಿಲೋದಕಮ್ ||

ಎಂದು ಹೇಳುತ್ತ ಮೂರು ಸಲ ಎಳ್ಳುನೀರು ಬಿಡಬೇಕು. ಸಾಮಾನ್ಯವಾಗಿ ಇದನ್ನು ಮನೆಯ ಮುಂದೆ, ತುಳಸಿ ಕಟ್ಟೆಯ ಹತ್ತಿರ ಮಾಡುವ ಸಂಪ್ರದಾಯ ಕೆಲವರಲ್ಲಿದೆ ಎಂಬುದು ಕೆಲವು ಧರ್ಮಶಾಸ್ತ್ರಜ್ಞರ ಅಭಿಪ್ರಾಯ.

ಈ ತರ್ಪಣಾದಿಗಳನ್ನು ಆಚರಿಸುವಾಗ ಶುದ್ಧತೆಗೆ ಪ್ರಾಮುಖ್ಯತೆ ನೀಡಬೇಕು. ಈ ಸಂದರ್ಭದಲ್ಲಿ ದರ್ಭೆಗೆ ಅತ್ಯಂತ ಆವಶ್ಯಕ ಸ್ಥಾನವಿದೆ. ದರ್ಭೆಯಿಂದ ತಯಾರಿಸಿದ ಪವಿತ್ರವನ್ನು ಉಂಗುರದ ಬೆರಳಿಗೆ ಧರಿಸಿಯೇ ತರ್ಪಣಾದಿಗಳನ್ನು ಕೊಡಬೇಕು. ಕರ್ಮ ಮಾಡುವವನು ದರ್ಭಾಸನದಲ್ಲಿ ಕುಳಿತುಕೊಳ್ಳಬೇಕು ಹಾಗೂ ಪಿಂಡ ಹಾಕಿ ಕರ್ಮಾಂಗ ಮಾಡುವವರು ದರ್ಭೆಯ ಮೇಲೆಯೇ ಪಿಂಡ ಪ್ರಧಾನ ಮಾಡಬೇಕು. ತರ್ಪಣಾದಿಗಳನ್ನು ಮಾಡುವವರು ಶುದ್ಧವಾದ ಸ್ಥಳ, ವಸ, ನೀರು, ಎಳ್ಳು ಹಾಗೂ ಅಕ್ಕಿಯನ್ನು ಬಳಸಬೇಕು. ಯಾವುದೇ ಕಾರಣಕ್ಕೂ ತರ್ಪಣದಲ್ಲಿ ಬಳಸುವ ಅಕ್ಕಿ ತುಂಡಾಗಿರಬಾರದು. ತರ್ಪಣ ಮಾಡುವ ಸ್ಥಳದಲ್ಲಿ ಉದುರಿದ ಕೂದಲು ಇತ್ಯಾದಿಗಳು ಇರಬಾರದು. ಪರಿಶುದ್ಧ ಮನಸ್ಸಿನಿಂದ ತರ್ಪಣಗಳನ್ನು ನೀಡಬೇಕು. ಮನೆಯಲ್ಲಿ ಹಿರಿಯರ ದಿನದ ಆಚರಣೆಯ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ, ಕೂಗುವುದು, ಕಿರುಚುವುದು ಮಾಡಬಾರದು. ಈ ಸಂದರ್ಭದಲ್ಲಿ ಘಂಟಾನಾದಕ್ಕೆ ನಿಷೇಧವಿದೆ.

“ಘಾತ ಚತುರ್ದಶಿ”
ಪಿತೃಪಕ್ಷದಲ್ಲಿ ಮಹಾಲಯ ಅಮಾವಾಸ್ಯೆಯ ಹಿಂದಿನ ತಿಥಿ ಅಂದರೆ ಚತುರ್ದಶಿಯಂದು ಘಾತ ಚತುರ್ದಶಿ ಎಂದು ಬಳಸುವ ಪದ್ಧತಿ ಹಾಗೂ ಶಾಸ್ತ್ರಾಧಾರವಿದೆ. ಶಾಸ್ತ್ರಾದಿಗಳಲ್ಲಿ ತಿಳಿಸಿದಂತೆ ಮರದಿಂದ ಬಿದ್ದು ಸತ್ತವರು; ವಿಷಪ್ರಾಶನ, ಲೋಹ, ವಿದ್ಯುತ್, ನೀರು, ಬೆಂಕಿ, ಶಸ್ತ್ರಾಸ್ತ್ರಗಳ ಘಾತ, ಪ್ರಾಣಿಗಳ ಆಕ್ರಮಣ ಇತ್ಯಾದಿಗಳಿಂದ ಪ್ರಾಣ ಕಳೆದುಕೊಂಡವರಿಗೆ ಮಹಾಲಯ ಅಮಾವಾಸ್ಯೆಯ ಮೊದಲು ಬರುವ ಚತುರ್ದಶಿಯಂದು ಪಿಂಡಾದಿ ಪ್ರದಾನ ಮಾಡಿ ಶ್ರಾದ್ಧ ಆಚರಿಸಬೇಕು. ಅದರಿಂದ ಅವರು ತೃಪ್ತರಾಗುತ್ತಾರೆ. ಕುಟುಂಬದಲ್ಲಿ ಯಾರಾದರೂ ಅಪಮೃತ್ಯುವಿಗೀಡಾಗಿದ್ದಲ್ಲಿ ಈ ತಿಥಿಯಂದು ಅವರಿಗೆ ಕಡ್ಡಾಯವಾಗಿ ತರ್ಪಣಾದಿಗಳನ್ನು ನೀಡಬೇಕು. ಹಾಗೆ ಮಾಡುವುದರಿಂದಾಗಿ ಕುಟುಂಬದಲ್ಲಿನ ಪ್ರೇತಬಾಧೆಗಳು ನಿವಾರಣೆಯಾಗುತ್ತವೆ.

“ದಾನಗಳು”
ಈ ಪಕ್ಷದಲ್ಲಿ ಪಿತೃಗಳ ತೃಪ್ತಿಗಾಗಿ ದಾನಗಳಿಗೆ ಮಹತ್ವವಿದೆ. ಈರುಳ್ಳಿ-ಬೆಳ್ಳುಳ್ಳಿ ಇತ್ಯಾದಿ ತಮೋಗುಣ ಪ್ರಧಾನ ತರಕಾರಿ ಹೊರತುಪಡಿಸಿ ಬೇರೆ ತರಕಾರಿ, ಅಕ್ಕಿ, ಬೇಳೆ, ಬೆಲ್ಲ ಇತ್ಯಾದಿಗಳನ್ನು ಕುಂಬಳಕಾಯಿ ಸಹಿತ ದಾನ ಮಾಡಬೇಕು. ವಸ್ತ್ರ, ಗೋವು, ಹೊಸ ಕೊಡೆ, ಹೊಸ ಪಾದರಕ್ಷೆ ಇತ್ಯಾದಿಗಳ ದಾನವು ಕೂಡ ವಿಶೇಷ ಫಲಗಳನ್ನು ಹಾಗೂ ಪಿತೃಗಳಿಗೆ ತೃಪ್ತಿಯನ್ನು ಕೊಡುತ್ತದೆ ಎಂದು ಶಾಸ್ತಗಳು ತಿಳಿಸಿವೆ. ನಾವು ಕೊಡುವ ದಾನವು, ಅದನ್ನು ಪಡೆದವರು ಸಂತೋಷವಾಗಿ ಬಳಸುವಂತಿರಬೇಕು ಎಂಬುದು ಗಮನಿಸಬೇಕಾದ ಮುಖ್ಯ ಅಂಶ. ಅಶಕ್ತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಕ್ಷಿಣೆ ಕೊಟ್ಟು ನಮಸ್ಕರಿಸಿದರೂ ಅದು ಶುಭಪ್ರದ.
ಸರ್ವೇಜನಾಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು

Tags: Dr. Gururaja PoshettihalliGaruda PuranaMahalaya AmavasyaPitru PakshaSpecial Articleಗರುಡಪುರಾಣಡಾ.ಗುರುರಾಜ ಪೋಶೆಟ್ಟಿಹಳ್ಳಿತಿಲತರ್ಪಣಪಿತೃ ಪಕ್ಷಮಹಾಲಯ ಅಮಾವಾಸ್ಯೆ
Previous Post

ಭದ್ರಾವತಿ-ಜನಪದ ಕಲೆಗಳು ಅಗಾಧ ಸಮುದ್ರ, ಕಲಿಕೆಗೆ ಆಸಕ್ತಿ ಮುಖ್ಯ: ಡಿ.ಮಂಜುನಾಥ್

Next Post

ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ಬಿವೈಆರ್ ಒತ್ತು: ಜೋಗ ಅಭಿವೃದ್ಧಿ ಹೊಸ ಪ್ಲಾನ್ ಏನು ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ಬಿವೈಆರ್ ಒತ್ತು: ಜೋಗ ಅಭಿವೃದ್ಧಿ ಹೊಸ ಪ್ಲಾನ್ ಏನು ಗೊತ್ತಾ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!