No Result
View All Result
Food & Hospitality Sector a Global Employment Hub: Celebrity Chef Satish Nagaraj
English Articles

Food & Hospitality Sector a Global Employment Hub: Celebrity Chef Satish Nagaraj

by ಕಲ್ಪ ನ್ಯೂಸ್
March 21, 2026
0

Kalpa Media House  |  Mysuru | Trained and experienced Indian chefs today have immense job opportunities across the globe, and...

Read moreDetails
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
  • Advertise With Us
  • Grievances
  • About Us
  • Contact Us
Saturday, March 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ನಮ್ಮ ಸಂಸ್ಕೃತಿ, ಧರ್ಮ, ಆಚಾರ ವಿಚಾರ ಎಲ್ಲಿಗೆ ಹೋಗಿ ನಿಂತಿದೆ? ಆದಿಚುಂಚನಗಿರಿ ಶ್ರೀ ಬೇಸರ

ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 9ನೇ ಸಮ್ಮೇಳನಕ್ಕೆ ತೆರೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 8, 2024
in ಮೈಸೂರು
0
ನಮ್ಮ ಸಂಸ್ಕೃತಿ, ಧರ್ಮ, ಆಚಾರ ವಿಚಾರ ಎಲ್ಲಿಗೆ ಹೋಗಿ ನಿಂತಿದೆ? ಆದಿಚುಂಚನಗಿರಿ ಶ್ರೀ ಬೇಸರ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನಿಂದ ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ 9ನೇ ವಾರ್ಷಿಕ ಸಮ್ಮೇಳನಕ್ಕೆ ಭಾನುವಾರ ರಾತ್ರಿ ಮಂಗಳ ಹಾಡಲಾಯಿತು.

ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಮಾರೋಪ ಭಾಷಣ ಮಾಡಿ,  ಸ್ವಾಮಿ ವಿವೇಕಾನಂದರು ಷಿಕಾಗೋ ಧಾರ್ಮಿಕ ಸಮ್ಮೇಳನಕ್ಕೆ ತೆರಳುವ ಮುನ್ನ ಮೈಸೂರಿನಲ್ಲಿ ತಂಗಿದ್ದ ಸ್ಥಳದಲ್ಲಿ ಯುವಕರ ಮನಸ್ಸನ್ನು ವಿಕಸನಗೊಳಿಸುವ ಸೌಧ ನಿರ್ಮಿಸಲು ಹೋದಾಗ ಹಲವು ಅಡ್ಡಿಗಳು ಉಂಟಾಗಿ ಕಾರ್ಯ ನಿಧಾನವಾಗುತ್ತಿದೆ. ಆದರೆ ಯುವ ಜನಾಂಗವನ್ನು ವಿಕೃತಿಗೆ ತಳ್ಳುವ ಮಾಲ್‌ಗಳು ಅಲ್ಲಲ್ಲಿ ತಲೆ ಎತ್ತುತ್ತಿದ್ದರೂ ಯಾವುದೇ ಚಕಾರ ಎತ್ತುತ್ತಿಲ್ಲ. ನಮ್ಮ ಸಂಸ್ಕೃತಿ, ಧರ್ಮ, ಆಚಾರ ವಿಚಾರ ಎಲ್ಲಿಗೆ ಹೋಗಿ ನಿಂತಿದೆ ಎನ್ನುವುದು ಕಂಡು ಬೇಸರವಾಗುತ್ತದೆ ಎಂದರು.
ಭಾರತವನ್ನು ಮತ್ತೆ ಕಟ್ಟಬೇಕಿದೆ
ಅಧ್ಯಕ್ಷತೆ ವಹಿಸಿದ್ದ ಮೈಸೂರು ಶ್ರೀರಾಮಕೃಷ್ಣ ಆಶ್ರಮದ #RamakrishnaAshrama ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ಧರ್ಮ ನೆಲೆಯಲ್ಲಿ ಭವ್ಯವಾಗಿದ್ದ ಭಾರತವನ್ನು ನಾವು ಮತ್ತೆ ಕಟ್ಟಬೇಕಿದೆ. ಪ್ರಜಾಪ್ರಭುತ್ವದಲ್ಲಿ ಆಳುವ ವರ್ಗದವರ ದಾಸ್ಯ, ಆಮಿಷಕ್ಕೆ ಬಲಿಯಾಗಿ ಧರ್ಮ, ಐಕ್ಯತೆ, ಸಂಸ್ಕೃತಿ ಕ್ಷೀಣಿಸುತ್ತದೆ ಎಂದು ಬೇಸರಿಸಿದರು.

ಇನ್ನೂ ಜಾಗೃತವಾಗಿಲ್ಲ
ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ನಮ್ಮ ಸರ್ಕಾರಗಳು ಇನ್ನೂ ಜಾಗೃತ ಆಗಿಲ್ಲ. ಹೀಗಾಗಿ, ಪ್ರಜ್ಞಾವಂತ ಸಮಾಜದವರೇ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯ ಸದುದ್ದೇಶವನ್ನು ಮನಗಾಣಬೇಕು. ಸಮಾಜಕ್ಕೆ ಉಪಯುಕ್ತವಾದ ಆಲೋಚನೆ, ಯೋಜನೆಗಳನ್ನು ನೀಡಬೇಕು ಎಂದರು.

ಸಂದೇಶ ಎಲ್ಲರನ್ನೂ ತಲುಪಲಿ
ರಾಣೆಬೆನ್ನೂರಿನ ಸ್ವಾಮಿ ಪ್ರಕಾಶಾನಂದಜೀ ಮಾತನಾಡಿ, ಸಮಾಜಕ್ಕೆ ಮಹಾತ್ಮರ ಸಂದೇಶಗಳು ಹಿಂದಿಗಿಂತ ಹೆಚ್ಚು ಅಗತ್ಯ ಇದೆ. ಯಾವುದೇ ಜಾತಿ ಭೇದವಿಲ್ಲದೆ ವಿವೇಕಾನಂದರ ಸಂದೇಶಗಳು ಎಲ್ಲರನ್ನೂ ತಲುಪಬೇಕಿದೆ. ಕುವೆಂಪು ಅವರಿಗೆ ವಿಶ್ವಮಾನವ ತತ್ವಕ್ಕೆ ವಿವೇಕಾನಂದರೇ ಪ್ರೇರಣೆ. ವಿವೇಕಾನಂದರ ಸಂಪರ್ಕಕ್ಕೆ ಬಂದ ಎಲ್ಲರೂ ವಿಶ್ವಮಾನವರಾಗಬೇಕು. ಆಗಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
Kalahamsa Infotech private limitedತ್ಯಾಗ ಬಹಳ ಮುಖ್ಯ
ಮನುಷ್ಯತ್ವದಿಂದ ದೈವತ್ವಕ್ಕೇರಲು ತ್ಯಾಗ ಬಹಳ ಮುಖ್ಯ ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜ್ಞಾನಯೋಗಾನಂದಜೀ ಮಹಾರಾಜ್ ಹೇಳಿದರು.  ಸಮ್ಮೇಳನದಲ್ಲಿ ‘ಶ್ರೀ ರಾಮಕೃಷ್ಣ ವಚನವೇದದ ಸಾರಸೂಚಿ’ ಕುರಿತು ಉಪನ್ಯಾಸ ನೀಡಿದರು.

ಪ್ರಪಂಚದಲ್ಲಿ ಅನೇಕ ಸಂಗತಿಗಳಿವೆ. ಆದರೆ, ಅವುಗಳು ಮನುಷ್ಯನನ್ನು ಬಲವಾಗಿ ಬಂಧಿಸುವುದಿಲ್ಲ. ‘ನಾನು- ನನ್ನದು ಎನ್ನುವುದನ್ನು ಅನುಸರಿಸಿಕೊಂಡು ಇಡೀ ಪ್ರಪಂಚವೇ ನಡೆಯುತ್ತದೆ. ಆದ್ದರಿಂದ ‘ನಾನು- ನನ್ನದು ಎನ್ನುವುದು ಮನುಷ್ಯನನ್ನು ಬಂಧಿಸುವ ವಸ್ತು’ ಎಂದು ಶಂಕರ ಭಗವತ್ಪಾದರು ಹೇಳಿದ್ದಾರೆ. ಅದನ್ನು ಶ್ರೀರಾಮಕೃಷ್ಣರು ಮತ್ತೊಂದು ರೀತಿ ‘ಕಾಮ- ಕಾಂಚನ’ ಎಂದು ಹೇಳಿದ್ದಾರೆ. ಪ್ರಪಂಚದಲ್ಲಿನ ಎಲ್ಲ ವಸ್ತುಗಳನ್ನೂ ತನ್ನದಾಗಿ ಮಾಡಿಕೊಳ್ಳಲು ಇರುವ ಸಾಮಗ್ರಿಯೇ ಕಾಂಚನ (ಹಣ). ಹಾಗಾಗಿ, ‘ಕಾಮ- ಕಾಂಚನ’ ಎರಡನ್ನೂ ತ್ಯಜಿಸಿದರೆ ನಿಜವಾದ ತ್ಯಾಗ ಮಾಡಿದಂತಾಗುತ್ತದೆ ಎಂದರು.

ಅನೇಕ ದ್ವಂದ್ವ, ವಿರುದ್ಧ ಭಾವ, ದೃಷ್ಟಿಕೋನಗಳು ನಮ್ಮಲ್ಲಿ ಇವೆ. ಅವುಗಳನ್ನು ಸಮನ್ವಯಗೊಳಿಸಿ, ಏಕದೃಷ್ಟಿಯಿಂದ ನೋಡಬೇಕು. ಕಲಿಯುಗಕ್ಕೆ ಭಕ್ತಿಮಾರ್ಗವೇ ಸೂಕ್ತ ಎಂದು ರಾಮಕೃಷ್ಣರು ಪ್ರತಿಪಾದಿಸಿದ್ದಾರೆ. ಒಂದೊಂದು ಯುಗಕ್ಕೆ ಒಂದೊಂದು ಮಾರ್ಗ ವಿಶೇಷ. ಕಲಿಯುಗದಲ್ಲಿ ನಮ್ಮ ದೃಷ್ಟಿ ದೇಹದ ಕಡೆಗೆ ಇರುತ್ತದೆ. ಭಕ್ತಿಮಾರ್ಗ ಸುಲಭ ಹಾಗೂ ಸರಳ. ಅದನ್ನು ಅನುಸರಿಸಿ. ಧರ್ಮಗಳ ನಡುವೆ ಕಲಹ ಬೇಡ. ಧರ್ಮಗಳು ಪರಸ್ಪರ ಗೌರವದಿಂದ ಇರಬೇಕು. ಒಳ್ಳೆಯ ಅಂಶ ಎಲ್ಲಿದ್ದರೂ ಸ್ಪೀಕರಿಸಬೇಕು. ಇತರರನ್ನು ಗೌರವಿಸಬೇಕು ಎಂಬುದೇ ರಾಮಕೃಷ್ಣರ ಉಪದೇಶ ಸಾರ ಎಂದು ತಿಳಿಸಿದರು.

ಉಪನ್ಯಾಸ
ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ‘ಶ್ರೀ ರಾಮಕೃಷ್ಣರ ದೈವತ್ವ-ನೇರ ಶಿಷ್ಯರು ಕಂಡಂತೆ’ ಕುರಿತು, ಪಾವಗಡ ತಾಲೂಕಿನ ವೆಂಕಟಾಪುರ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಅಮೂರ್ತಾನಂದಜೀ ಅವರು ‘ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಕಂಡ ಭಾರತ’ ವಿಷಯ ಕುರಿತು ಉಪನ್ಯಾಸ ನೀಡಿದರು. ವಿವಿಧ ಮಠಾಧೀಶರು, ಮಾತಾಜಿಯವರು ಹಾಜರಿದ್ದರು.

ಆಂಧ್ರಪ್ರದೇಶ ವಿಜಯವಾಡದ ರಾಮಕೃಷ್ಣ ಮಿಷನ್‌ನ ಸ್ವಾಮಿ ವಿನಿಶ್ಚಲಾನಂದಜೀ, ದಾವಣಗೆರೆ ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜೀ, ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಹಲಸೂರು ಮಠದ ಶ್ರೀ ಬೋಧ ಸ್ವರೂಪಾನಂದಜೀ, ಮಾಜಿ ಮೇಯರ್ ಸುನಂದಾ ಪಾಲನೇತ್ರ, ಶ್ರೀ ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ.ಪಾಪೇಗೌಡ ಇದ್ದರು.
ಕುವೆಂಪು ವಿವಿ ವಿಶ್ರಾಂತ ಕುಲಪತಿ  ಪ್ರೊ. ಕೆ. ಚಿದಾನಂದಗೌಡ, ಶಿವಮೊಗ್ಗದ ಸ್ವಾಮಿ ವಿನಯಾನಂದಜೀ ಇತರರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteLatest News KannadamysoreRamakrishna MissionShimogaಆದಿಚುಂಚನಗಿರಿ ಮಠಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಮೈಸೂರುರಾಮಕೃಷ್ಣ ಮಿಷನ್ವಿವೇಕಾನಂದಶಿವಮೊಗ್ಗ
Share201Tweet123Send
Previous Post

ಹೊಸ ದಾಖಲೆ ಬರೆದ ಬೆಂಗಳೂರು ಸಬರ್ಬನ್ ರೈಲು: 31 ಮೀ ಉದ್ದದ ಯು-ಗರ್ಡರ್ ಸಿದ್ಧ

Next Post

ಜ.27ರಂದು ಎಮ್‌ಎಲ್‌ಸಿ ರುದ್ರೇಗೌಡರ ಸಾಧನೆ ಆಧಾರಿತ ದಿ ಐರನ್‌ ಮ್ಯಾನ್‌ ಪುಸ್ತಕ ಬಿಡುಗಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜ.27ರಂದು ಎಮ್‌ಎಲ್‌ಸಿ ರುದ್ರೇಗೌಡರ ಸಾಧನೆ ಆಧಾರಿತ ದಿ ಐರನ್‌ ಮ್ಯಾನ್‌ ಪುಸ್ತಕ ಬಿಡುಗಡೆ

ಜ.27ರಂದು ಎಮ್‌ಎಲ್‌ಸಿ ರುದ್ರೇಗೌಡರ ಸಾಧನೆ ಆಧಾರಿತ ದಿ ಐರನ್‌ ಮ್ಯಾನ್‌ ಪುಸ್ತಕ ಬಿಡುಗಡೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

ಯುವಕರು ದುಶ್ಚಟಗಳನ್ನು ಬಿಟ್ಟು ಕ್ರೀಡೆಗಳಲ್ಲಿ ಭಾಗವಹಿಸಬೇಕು: ಮಾಜಿ ಡಿಸಿಎಂ ಈಶ್ವರಪ್ಪ

March 21, 2026
Food & Hospitality Sector a Global Employment Hub: Celebrity Chef Satish Nagaraj

Food & Hospitality Sector a Global Employment Hub: Celebrity Chef Satish Nagaraj

March 21, 2026
ಶ್ರೀರಾಮನವಮಿ ಸಂಗೀತೋತ್ಸವ | ಮಾ.27ರವರೆಗೆ ಸಂಗೀತ ಮಹೋತ್ಸವ

ಶ್ರೀರಾಮನವಮಿ ಸಂಗೀತೋತ್ಸವ | ಮಾ.27ರವರೆಗೆ ಸಂಗೀತ ಮಹೋತ್ಸವ

March 21, 2026
ಕನ್ನಡ ಪಂಡಿತ ಹಾಗೂ ಜ್ಞಾನಯೋಗಿಗೆ ಅರ್ಪಿಸಿದ ಶ್ರದ್ಧಾ ಕುಸುಮ

ಕನ್ನಡ ಪಂಡಿತ ಹಾಗೂ ಜ್ಞಾನಯೋಗಿಗೆ ಅರ್ಪಿಸಿದ ಶ್ರದ್ಧಾ ಕುಸುಮ

March 21, 2026
ಪ್ರಾಣಿ-ಪಕ್ಷಿ, ಪರಿಸರವನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ | ಸುರೇಶ್ ಎನ್ ಋಗ್ವೇದಿ

ಪ್ರಾಣಿ-ಪಕ್ಷಿ, ಪರಿಸರವನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ | ಸುರೇಶ್ ಎನ್ ಋಗ್ವೇದಿ

March 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL