Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ನೋಡಲೇಬೇಕಾದ ಚಿತ್ರ ಟ್ರಾನ್ಸ್ (ಮಲಯಾಳಂ)

ಹಲಲೂಯ..

April 16, 2020
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಒಂದು ಚಿತ್ರ ಎಷ್ಟು ಚೆನ್ನಾಗಿ ಮೌಢ್ಯತೆಯ ಬಣ್ಣಿಸಬಹುದೋ ಅದನೆಲ್ಲಾ ಮಾಡಿದ ಚಿತ್ರ ಟ್ರಾನ್ಸ್. ಅಲ್ಲಿ ವೈಲೆಂಟ್ ಆಗುವ ರಾವಣರಿಲ್ಲ, ವಿದೇಶದಲ್ಲಿ ಕುಣಿದ ಹಾಡುಗಳಿಲ್ಲ, ಹೇಳುವಂತಹ ಸ್ಟಾರ್ ನಟರೂ ಇಲ್ಲ. ಕೇವಲ ಕಥೆಯಲ್ಲಿ ಕುತೂಹಲ ಕೆರಳಿಸುವ ಚಿತ್ರಗಳಿಗೆ ಇದೊಂದು ಸೇರ್ಪಡೆ. ಮಲಯಾಳಂ ಭಾಷೆಯ ಈ ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯ.

ಎಷ್ಟೋ ವಿಡಿಯೋಗಳನ್ನು, ಫೋಟೋಗಳನ್ನು ನೋಡಿದ್ದೇವೆ ಮತ್ತು ಎಷ್ಟೋ ಸುದ್ಧಿಗಳು ನೋಡಿದ್ದೇವು. ಸ್ಟೇಜ್ ಮೇಲೆ ಇರುವ ಉದ್ದನೆಯ ಅಂಗಿಯ ಮಾಂತ್ರಿಕ ತನ್ನ ಕೈಗಳಿಂದ, ಮಾತುಗಳಿಂದ ಅಸಂಖ್ಯಾತ ನೆರೆದ ಜನರ ಕಾಯಿಲೆ ವಾಸಿ ಮಾಡುವುದು, ಹಾಡುತ್ತಾ ಕುಣಿಯುತ್ತಿರುವುದು, ಮತ್ತೆ ಯಾರಿಗೋ ಛಡಿಯೇಟು ಕೊಡುವುದು ಹೀಗೆ ಕ್ರೈಸ್ತ ಧರ್ಮದ ಗುರುವಿನ ಕರುಣಾಜನಕ ಮಾಯಜಾಲ. ಇದರ ಹಿಂದಿನ ಸತ್ಯವನ್ನು, ಕಾಣದ ಕೈಗಳನ್ನು ಮತ್ತು ಪರಿಣಾಮಗಳನ್ನು ಬಿಚ್ಚಿಡುವ ಚಿತ್ರ ಟ್ರಾನ್ಸ್. ಚಿತ್ರ ಆರಂಭವಾಗುವುದೇ ಹಾಗೆ. ಆತನೊಬ್ಬ ಮಧ್ಯಮ ವರ್ಗದ ಯುವಕ. ದೈಹಿಕವಾಗಿ ತೀರಾ ಆಕರ್ಷಕನಲ್ಲದ, ಅಂತಹ ಹೇಳಿಕೊಳ್ಳುವ ಉದ್ಯೋಗ ಇಲ್ಲದ, ವಿದ್ಯುತ್ ಬಿಲ್ ಕಟ್ಟಲೂ ಯೋಚಿಸಬೇಕಾದ ಹಿನ್ನೆಲೆಯ ವ್ಯಕ್ತಿ. ಆತನ ಕನಸು ತಾನೊಬ್ಬ ವ್ಯಕ್ತಿತ್ವ ವಿಕಸನ ಮಾಡುವ ಗುರು ಆಗಬೇಕೆಂದು. ಅದಕ್ಕಾಗಿ ಸದಾ ಕಾಲ ಹಂಬಲಿಸುವ, ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಬದುಕಿನ ಮತ್ತೊಂದು ಮಹತ್ವದ ಅಧ್ಯಾಯ ತೆರೆದುಕೊಳ್ಳುತ್ತದೆ. ಹಳೆಯ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ತಮ್ಮ. ಹಣಕಾಸಿನ ಅಡಚಣೆ, ಅನಾರೋಗ್ಯದ ಚಿಂತೆ, ಹಳೆಯ ನೋವಿನ ನೆನಪುಗಳು ಅದರೊಂದಿಗೆ ಆತನ ಬದುಕು ಕಟ್ಟಿಕೊಳ್ಳುವ ಪ್ರಯತ್ನ. ಹೀಗಿರುವಾಗ ಆತನಿಗೆ ಒಮ್ಮೆ ಚಲನಚಿತ್ರ ಇನ್ನಿತರ ಕಾರ್ಯಕ್ರಮಗಳಿಗೆ ಕಲಾವಿದರ ಪೂರೈಸುವ ಮಹಿಳೆಯ ಪರಿಚಯವಾಗುತ್ತದೆ. ಅವಳು ಈ ಚಿತ್ರದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತಾಳೆ. ಈ ಮಧ್ಯೆ ಅಸ್ವಸ್ಥ ತಮ್ಮ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದ್ದೊಬ್ಬ ಬಂಧುವನ್ನೂ ಕಳೆದುಕೊಂಡ ಮೇಲೆ ನಾಯಕ ಇನ್ನಷ್ಟು ನೊಂದು ಮಾತ್ರೆಗಳ ಜಾಲದಲ್ಲಿ ಸಿಲುಕುತ್ತಾನೆ. ಮತ್ತು ಆ ಮನೆಯನ್ನೂ ಬಿಟ್ಟು ಹೊರಡುತ್ತಾನೆ.

ಮತ್ತೆ ಆ ಮಹಿಳೆಯ ಭೇಟಿ ಆಗಿ ತನ್ನ ವಿಡಿಯೋಗಳನ್ನು ನೀಡುತ್ತಾನೆ. ಅವಳು ತನಗೆ ಪರಿಚಿತರಾದ ಉದ್ಯಮಿಗಳಿಗೆ ಕಳಿಸುತ್ತಾಳೆ ಮತ್ತು ಅವರು ಈತನನ್ನು ಆಯ್ಕೆ ಮಾಡಿ ಬರಲು ಹೇಳುತ್ತಾರೆ. ಅವರನ್ನು ಭೇಟಿ ಆಗಲು ತೆರಳುವ ನಾಯಕನಿಗೆ ಅಲ್ಲಿ ಒಂದು ಆಘಾತ ಕಾದಿರುತ್ತದೆ. ಅಲ್ಲಿ ಆತನ ಆಯ್ಕೆ ಮ್ಯಾನೇಜ್‌ಮೆಂಟ್ ಗುರು ಸ್ಥಾನದ ಬದಲು ದೈವ ದೂತನ ಪದವಿಯ ಆಯ್ಕೆ ನೀಡುತ್ತಾರೆ. ಮತ್ತು ಈತನ ಅಷ್ಟೂ ಪೂರ್ವಾಪರ ಅವರು ಅರಿತಿರುತ್ತಾರೆ. ಆ ಪರಿಸ್ಥಿತಿಯಲ್ಲಿ ಅವರ ಆಯ್ಕೆ ಒಪ್ಪದೇ ಬೇರೆ ದಾರಿಯೂ ಇರುವುದಿಲ್ಲ. ಕೆಲಸಕ್ಕೆ ಸೇರಿದ ಮೇಲೆ ಆತನಿಗೆ ಅನೇಕ ಬಗೆಯ ತರಬೇತಿ ನೀಡಲಾಗುತ್ತದೆ. ಹೆಚ್ಚು ವೈಭವೋಪೆತವಾಗಿ ನೋಡಿಕೊಳ್ಳಲಾಗುತ್ತದೆ. ಮಾತ್ರೆಗಳಿಗೆ ಆತ ಅದಾಗಲೇ ಅಡಿಕ್ಟ್ ಆಗಿರುತ್ತಾನೆ. ತರಬೇತಿ ಪೂರ್ಣಗೊಳ್ಳುವ ಹೊತ್ತಿಗೆ ಜೀವನವೊಂದೇ ಅಲ್ಲ, ಆತನ ಹೆಸರು ಬದಲಾಗುತ್ತದೆ.

ಕೋಟ್ಯಾಂತರ ರೂಪಾಯಿಗಳ ದುಡಿಮೆ, ಬಯಸಿದ್ದೆ ದೊರಕುವ ಜೀವನ, ನಿಲ್ಲದೆ ಓಡುವ ಕಾಲ ಹೀಗೆ ಆತನ ಪ್ರತಿಭೆ ಮತ್ತೊಂದು ಬಗೆಯಲ್ಲಿ ಬಳಕೆಯಾಗುತ್ತದೆ. ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಅಂತಲೂ ಯೋಚಿಸದೆ ಇನ್ನಿಲ್ಲದಂತೆ ಬದುಕುತ್ತಾನೆ. ಈ ಸಂದರ್ಭದಲ್ಲಿ ನಡೆಯುವ ಟಿವಿ ಸಂದರ್ಶನ, ತಾನು ಎಚ್ಚೆತ್ತುಕೊಳ್ಳುವ ಪ್ರಯತ್ನ, ಆಘಾತ, ಮುಂದೆ ಎದುರಾಗುವ ತಿರುವುಗಳನ್ನು ನೋಡಿಯೇ ಅರಿಯಬೇಕು. ಚಿತ್ರದ ಕ್ಲೈಮ್ಯಾಕ್ಸ್ ಕೂಡ ಅದ್ಭುತ.

ಪಿಕ್ಕೆ ಹಾಕಿದ ಆಮೀರು, ಹುಲಿಕಲ್ಲಿನ ಹುಲಿಯನನ್ನು ಸೇರಿ ಅನೇಕ ‘ವಿದ್ವಾಂಸರು’ ಕೇವಲ ಒಂದು ದಿವ್ಯ ಪರಂಪರೆಯನ್ನು ಅಷ್ಟೇ ಪ್ರಶ್ನೆ ಮಾಡಿ ಜಾಣ ಕುರುಡು ತೋರಿಸಿದರು. ದೇವರ ಹೆಸರಿನಲ್ಲಿ ಸುಲಭವಾಗಿ ದೊರೆಯುವ ಜನರ ಮೌಢ್ಯತೆಯನ್ನು ಸುಲಭವಾಗಿ ಕೋಟಿ ರೂಪಾಯಿಗಳ ಉದ್ದಿಮೆಯಾಗಿ ಹೇಗೆ ಮಾಡಿಕೊಳ್ಳುತ್ತಾರೆ, ಅದಕ್ಕಾಗಿ ನಡೆಯುವ ತಯಾರಿ, ನಾಯಿಕೊಡೆಗಳಂತೆ ಹುಟ್ಟುವ ದೇವದೂತರು, ಅವರ ಹೆಸರಿನಲ್ಲಿ ನಡೆಯುವ ಔಷಧ, ತೈಲ ಇನ್ನಿತರ ವಸ್ತುಗಳ ಮಾರಾಟ, ಅಂತಹ ಗುರುಗಳನ್ನು ನಂಬಿ ತನ್ನ ಕಂದನ ಬಲಿ ಮಾಡಿ ಆಮೇಲೆ ಬದುಕಿಸಲು ಬೇಡುವ ಅಪ್ಪ ಹೀಗೆ ಚಿತ್ರ ಸತ್ಯದ ಬೆನ್ನಟ್ಟಿ ಬೆಳಕು ಚೆಲ್ಲುತ್ತದೆ.

ಮೌಢ್ಯತೆಯ ಸೋಗು ಪ್ರತಿ ವ್ಯಕ್ತಿಯಲ್ಲೂ, ಪ್ರತಿ ಧರ್ಮದಲ್ಲೂ ಇದೆ. ಆದರೆ ಪ್ರಶ್ನಿಸುವವರು ಮಾತ್ರ ಆಯ್ಕೆ ಮಾಡಿಕೊಂಡು ತೋರುತ್ತಿದ್ದರು. ಧರ್ಮ ನಂಬಿ ಕಾಯಿಲೆ ಹಂಚೋಣ ಎನ್ನುವವರ , ದೈವಾಂಶಸಭೂತರ ದೆಸೆ ಕಾಯುವ ಈ ಹೊತ್ತಿನಲ್ಲಿ ಇಂತಹ ಚಿತ್ರಗಳನ್ನು ನೋಡುವುದು ಅವಶ್ಯಕ. ಫಹಾದ್ ಫಾಸಿಲ್, ಗೌತಮ್ ವಾಸುದೇವ್ ಮೆನನ್, ಚೆಂಬನ್ ವಿನೋದ್ ಜೋಸ್, ನಜ್ರಿಯಾ ನಜೀಂ, ದಿಲೀಶ್ ಪೋಥನ್, ವಿನಾಯಕನ್ ಮತ್ತು ಸೌಭಿನ್ ಶಾಹಿರ್ ಇವರ ಅತ್ತ್ಯುತ್ತಮ ನಟನೆ, ಗಟ್ಟಿ ಕಥೆ ಮತ್ತು ಗಂಭೀರ ನಿರೂಪಣೆಯಿಂದ ಚಿತ್ರ ಮನಸ್ಸಿಗೆ ಹತ್ತಿರವಾಗುವುದು ಖಂಡಿತ. ಹಿಂದೂ ಸಂಸ್ಕೃತಿಯ ಆಚರಣೆಗಳು, ಯಜ್ಞ ಯಾಗಾದಿಗಳು, ವಿಚಾರಗಳನ್ನು ಹೀಗಳೆದು ಮುದ್ರಿಸುವ, ಚಿತ್ರಿಸುವ ಮತ್ತು ದೇವರುಗಳ ಮೇಲೆ ಮೂತ್ರಿಸುವ ಮಾತನಾಡುವ ಚೆರ್ರಿ ಪಿಕ್ಕಿಂಗ್ (Cherry Picking) ಅವಿಚಾರವಂತರೂ ಈ ಚಿತ್ರ ನೋಡುವುದು ಒಳಿತು.


Get in Touch With Us info@kalpa.news Whatsapp: 9481252093

Tags: KannadaNewsWebsiteLatestNewsKannadaMalayalamSachin ParshwanathSillinessTrans Malayalam movieಟ್ರಾನ್ಸ್ ಮಲಯಾಳಂ ಚಿತ್ರಮಲಯಾಳಂಮೌಢ್ಯತೆಸಚಿನ್ ಪಾರ್ಶ್ವನಾಥ್
Previous Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ?: ಮಾಲಿಕೆ-18 ಬ್ರಹ್ಮಾಂಡ ಪುರಾಣ

Next Post

ಲಾಕ್ ಡೌನ್ ಅವಧಿಯಲ್ಲಿ ಉದ್ಗೀಥ ಆಯುರ್ವೇದ ಚಿಕಿತ್ಸಾಲಯದಿಂದ ಉಚಿತ ಹೆಲ್ತ್‌ ಟಿಪ್ಸ್‌: ಕರೆ ಮಾಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಲಾಕ್ ಡೌನ್ ಅವಧಿಯಲ್ಲಿ ಉದ್ಗೀಥ ಆಯುರ್ವೇದ ಚಿಕಿತ್ಸಾಲಯದಿಂದ ಉಚಿತ ಹೆಲ್ತ್‌ ಟಿಪ್ಸ್‌: ಕರೆ ಮಾಡಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!