No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Tuesday, September 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ದೀಪಾವಳಿಗೆ ಕಳೆಗಟ್ಟುವ ಅಂಟಿಗೆ-ಪಂಟಿಗೆ

kalpa News by kalpa News
October 29, 2016
in Army
0
Share on FacebookShare on TwitterShare on WhatsApp
ಕಾರ್ತಿಕ ಮಾಸ ಬಂತೆಂದರೆ ಪ್ರಕೃತಿಯಲ್ಲಿ ಎಲ್ಲೆಡೆಯೂ ಸಂಭ್ರಮವೇ. ಭೂಮಿ ತಾಯಿ ಹಸಿರುಟ್ಟು ನಿಂತು ಕಣ್ಣು ಹರಿಸಿದತ್ತಲೆಲ್ಲ ಸಮೃದ್ಧಿಯೇ ರೈತಾಪಿ ಜನ ತಮ್ಮ ಎಂದಿನ ಕೆಲಸಗಳನ್ನೆಲ್ಲಾ ಬದಿಗೊತ್ತಿ ದೀಪಗಳ ಹಬ್ಬ ದೀಪಾವಳಿಯನ್ನು ಬರಮಾಡಿಕೊಳ್ಳಲು ಇನ್ನಿಲ್ಲದ ಸಡಗರದಿಂದ ಓಡಾಡುವ ಕಾಲ ಗ್ರಾಮೀಣರ ಬದುಕಿನಲ್ಲಿ ಮೂರ‌್ನಾಲ್ಕು ದಿನ ನಿರಂತರವಾಗಿ ನಡೆಯುವ ಹಬ್ಬಕ್ಕೆ ಇನ್ನಿಲ್ಲದಷ್ಟು ಮಹತ್ವ ತೋರಣದ ತಳಿರಲ್ಲಿ, ಹೊಸಿದ ಹಣತೆಗಳಲ್ಲಿ, ಬಾಣ ಬಿರುಸುಗಳಲ್ಲಿ ನಲಿವು ಮೂಡಿ ಕತ್ತಲೆಯ ಪುಟಗಳಲ್ಲಿ ಬೆಳಕಿನಕ್ಷರಗಳಲ್ಲಿ, ದೀಪಗಳ ಸಂದೇಶ ಸಾರುವ ಈ ಹಬ್ಬದ ಆಚರಣೆಗಳು ನಾಡಿನ ಒಂದೊಂದು ಕಡೆ, ಒಂದೊಂದು ವಿಶಿಷ್ಟ ಆಚರನೆಯನ್ನು ಹೊಂದಿದೆ. ಈ ಆಚರಣೆಗಳು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆಗಟ್ಟುತ್ತವೆ. ನಮ್ಮ ಮಲೆನಾಡು ಪ್ರಾಂತ್ಯದ ಅಂತಹ ಒಂದು ವಿಶಿಷ್ಟ ಜಾನಪದ ಆಚರಣೆಯೇ ಅಂಟಿಗೆ-ಪಂಟಿಗೆ.
ಮಲೆನಾಡಿನಲ್ಲಿ ದೀಪಾವಳಿ ಬಂತೆದರೆ ಸಾಕು ಅಲ್ಲಲ್ಲಿ ಅಂಟಿಗೆ- ಪಂಟಿಗೆಯ ಏರುದನಿಯ ಹಾಡುಗಳು ಕಿವಿಗೆ ಬೀಳಲಾರಂಭಿಸುತ್ತವೆ.
ಮೂಳ್ಳಾಗೇ ಕಲ್ಲಾಗೇ ಬಂದೇವಯ್ಯ
ತಂದೇವಿ ದೀಪಾನ ಕೊಳ್ಳೀರಯ್ಯ
ಕತ್ತಲು ಹಾದ್ಯಾಗೆ ಬಂದೇವಯ್ಯ
ತಂದೇವಿ ದೀಪಾನ ಕೊಳ್ಳೀರಯ್ಯ!!
ಈ ಕಲೆಯಲ್ಲಿ ಕುಣಿತಕ್ಕಿಂತ ಹೆಚ್ಚಾಗಿ ಹಾಡುಗಳನ್ನು ಕಾಣಬಹುದು. ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗಗಳಲ್ಲಿ ಈ ಆಚರಣೆಯು ಹೆಚ್ಚು ಪ್ರಚಲಿತ ಅಂಟಿಗೆ-ಪಂಟಿಕೆ  ಹಬ್ಬ ಹಾಡುವುದು, ಜ್ಯೋತಿಕೊಡುವುದು ಅಡೀ-ಪಿಡೀ, ದೀಪ ನೀಡುವುದು, ಅವ್ಯಂಟಿಗ್ಯೊ- ಪವಂಟಿಗ್ಯೊ ಅಂಟಿ-ಸುಂಟಿ, ಬಿಂಗಿಪದ್ಯ ಬಲ್ಲಾಳಿ ಪದ್ಯ ಮುಂತಾದ ಹೆಸರುಗಳಿಂದ ಪ್ರಾದೇಶಿಕವಾಗಿ ಕರೆಯುತ್ತಾರೆ.
ಒಂದೇ ಸೀಮೆಯ ಅಂದರೆ ನಾಲ್ಕೆದು ಗ್ರಾಮದ ಯುವಕರೆಲ್ಲ ಸೇರಿ ತಂಡವನ್ನು ರಚಿಸುತ್ತಾರೆ. ಗ್ರಾಮದಲ್ಲಿರುವ ಮನೆಗಳಿಗನುಸಾರವಾಗಿ 10 ರಿಂದ 15 ಜನರ ತಂಡವನ್ನು ಕಟ್ಟೆ, ರಾತ್ರಿಯ ಹೊತ್ತು ಗ್ರಾಮದ ಗುಡಿಯಲ್ಲಿ ಪೂಜೆಯನ್ನು ಮಾಡಿ ದೇವರ ಮುಂದಿನ ದೀಪದಿಂದ ತಮ್ಮ ಹಣತೆಯ ದೀಪವನ್ನು ಹೆಣತ್ತಿಸಿಕೊಂಡು ಎಲ್ಲಾ ಗುಂಪುಗಳು ಒಟ್ಟಾಗಿ ಮೊದಲೇ ನಿರ್ಧರಿಸಿದಂತೆ ದೀಪ್- ದೀಪೋಳ್ಗೆ ಎಂದು ಕೂಗುತ್ತಾ ಗ್ರಾಮದ ಹಾದಿ ಹಿಡಿಯುತ್ತಾರೆ. ಈ ಗುಂಪಿನಲ್ಲಿ ಹಿಮ್ಮೇಳ ಮುಮ್ಮೇಳದ ಹಾಡುಗಾರರು, ಪರ ಊರಿನ ಹಾದಿ ತಿಳಿದವರು, ಸಂಭಾವನೆಯವರು, ದೀವಟಿಗೆ ಹಿಡಿಯುವವರು, ಮತ್ತು ಎಲ್ಲಾ ವಯೋಮಾನದವರು ಸೇರಿರುತ್ತಾರೆ. ದೀವರು, ಲಿಂಗಾಯತರು, ಗೌಡರು, ಬಂಟರು, ಹೆಚ್ಚಾಗಿ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಅಂಟಿಗೆ-ಪಂಟಿಗೆಯ ಹಾಡುಗಳನ್ನು ಗಂಡಸರು ಮಾತ್ರವೇ ಹಾಡುತ್ತಾರೆ. ವೀರ, ಶೃಂಗಾರ, ಹಾಸ್ಯ ಕರುಣ, ನವರಸಭರಿತವಾದ ಈ ಹಾಡುಗಳು ಸರಳವಾದ ನಿರೂಪಣೆಗಳಿಂದ ಕೂಡಿರುತ್ತದೆ. ಮೇಳದವರೆಲ್ಲರೂ ಒಕ್ಕೊರಲಿನಿಂದ ಹಾಡುವುದರಿಂದ ಕೇಳುಗರಿಗೆ ಹೊಸತೆನಿಸುತ್ತದೆ.
ಪ್ರತಿ ಗುಂಪು ದೀಪ್- ದೀಪೋಳ್ಗೆ ಎಂದು ಪ್ರತಿ ಮನೆಯ ಮುಂದೆ ನಿಂತು ಕೂಗಿ ಹಾಡಿ ಮನೆಯ ಬಾಗಿಲನ್ನು ತೆರೆಸುತ್ತದೆ. ಬಾಗಿಲನ್ನು ತೆರೆದ ಮನೆಯವರು ಸಂಭ್ರಮದಿಂದ ದೀಪವನ್ನು ಹೊತ್ತಿಸಿಕೊಂಡು ಅದನ್ನು ದೇವರ ಮನೆಯಲ್ಲಿಟ್ಟು, ನಂತರ ಅಂಟಿಗೆ-ಪಂಟಿಗೆಯವರು ತಂದ ದೀಪಕ್ಕೆ ಎಣ್ಣೆಯನ್ನು ಹಾಕಿ ಕಾಣಿಕೆಯ ರೂಪದಲ್ಲಿ ದವಸ-ಧಾನ್ಯಗಳನ್ನು ಹಬ್ಬದ ಸಿಹಿ ತಿಂಡಿಯನ್ನು ಹಣವನ್ನು ನೀಡುವರು, ಗುಂಪಿನ ಯಜಮಾನ ಆ ಮನೆಯ ಜನ- ಜಾನುವಾರು,  ಬೆಳೆ-ಬೇಸಾಯ, ಸಮೃದ್ಧವಾಗಿರಲೆಂದು ಹಾರೈಸಿ ಮನೆಯ ಹೊಸ್ತಿಲ ಬಾಗಿಲಿಗೆ ವಂದಿಸಿ ಮುಂದಿನ ಮನೆಗೆ ದೀಪವನ್ನು ನೀಡಲು ಹೊರಡುತ್ತಾರೆ. ಪ್ರತಿ ಮನೆಗೂ ಬೆಳಕನ್ನು ನೀಡುವ ಈ ಆಚರಣೆಯು ಒಂದು ವಿಶಿಷ್ಟವಾಗಿದೆ.
ಹೀಗೆ ಅಂಟಿಗೆ-ಪಂಟಿಗೆಯವರು ಮೂರು ರಾತ್ರಿ ಹಾಡುತ್ತಾರೆ. ಮೂರು ದಿನವಾದ ಮೇಲೆ ಆ ಬತ್ತಿಯನ್ನು ಹಣತೆಯಿಂದ ತೆಗೆದು ಹಲಸಿನ ಮರದ ಕೊಂಬೆಯ ಮೇಲಿಟ್ಟು ಅದಕ್ಕೆ ಕೈ ಮುಗಿಯುತ್ತಾರೆ.
ಗ್ರಾಮಸ್ಥರು ನೀಡಿದ ಹಣವನ್ನು ಸಂಗ್ರಹಿಸಿ ಅಂಟಿಗೆ-ಪಂಟಿಗೆ ಯುವಕರು ವನಭೋಜನವನ್ನು ಏರ್ಪಡಿಸುತ್ತಾರೆ. ಹೀಗೆ ಈ ಒಂದು ವಿಶಿಷ್ಟ ಆಚರಣೆ ಮುಕ್ತಾಯವಾಗುತ್ತದೆ. ಇಂದು ಈ ಆಚರಣೆ ಕೂಡ ಕಣ್ಮರೆಯಾಗುತ್ತಿದೆ.
ನಗರದ ಯಾಂತ್ರಿಕ ಬದುಕಿನಲ್ಲಿ ನಮ್ಮೆಲ್ಲರ ಮನೆಗೂ ಅಂಟಿಗೆ-ಪಂಟಿಗೆ ತಂಡ ಬಂದರೆ ಹೇಗಿರುತ್ತೆ? ನಗರದ ಯಾಂತ್ರಿಕ ಬದುಕಿನಲ್ಲಿ ಸಡಗರವಿಲ್ಲದೆ ಹಬ್ಬವನ್ನು ಮಾಡುತ್ತಿದ್ದೇವೆ. ಇಂದಿನ ದೀಪಾವಳಿಯನ್ನು ನೀವು ಕೂಡ ಸಡಗರ ಸಂಭ್ರಮದಿಂದ ಆಚರಿಸಬಹುದು. ಏಕೆಂದರೆ ನಗರದಲ್ಲೂ ಕೂಡ ಅಂಟಿಗೆ-ಪಂಟಿಗೆಯ ಎರಡು ತಂಡಗಳು ಊರಾಡುತ್ತವೆ. ಶ್ರೀ ಎಚ್.ಎಲ್. ನಾಗೇಗೌಡರ ಕನಸಿನ ಕೂಸಾದ ಜಾನಪದ ಪರಿಷತ್ತಿನ ಜಿಲ್ಲಾ ಶಾಖೆಯಾದ ಜಾನಪದ ಪರಿಷತ್ತು ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾಮಠ ಶಿವಮೊಗ್ಗ ಹಾಗೂ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ಇವರೆಲ್ಲರ ಸಹಯೋಗದಿಂದ ನಗರವಾಸಿಗಳಿಗೆ ಸಂಭ್ರಮ ಸಡಗರ ಲಭ್ಯವಾಗಲಿದೆ. ಅಂಟಿಗೆ-ಪಂಟಿಗೆಯವರು ನಿಮ್ಮ ಮನೆಗಳಿಗೂ ಬರಲಿದ್ದಾರೆ. ನೀವು ಈ ವಿಶಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳಿ.
ಬೆಳಕು ಬಾಳುತಿರಲಿ ಬಾಳು ಬೆಳಕಾಗಿರಲಿ 
ಹೂವು ಮುಂಜಾವು ತೆರನಾಗಿ-ಬಾಳಿರಲಿ
ಬೆಳಕಿಗರಳುವ ಹಣವಾಗಿ
ದೀಪೋಳಿ ದೀಪೋಳ್ಗ್ಳೋ…..( ದೀಪೋಳಿ ದೀಪೋಳ್ಗ್ಳೋ)
ಲೇಖಕರು: ಕವಿತಾ ಸಾಗರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಣ್ವಸ್ತ್ರ ನಿಷೇಧ: ಅಂತರ ಕಾಯ್ದುಕೊಂಡ ಭಾರತ

Next Post

ಜಿನಾಗಮದ ಬೆಳಕಿನಲ್ಲಿ ದೀಪಾವಳಿ

kalpa News

kalpa News

Next Post

ಜಿನಾಗಮದ ಬೆಳಕಿನಲ್ಲಿ ದೀಪಾವಳಿ

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL