No Result
View All Result
South Western Railway, Mysuru Division Hosts Inter Department Drama Competition
English Articles

South Western Railway, Mysuru Division Hosts Inter Department Drama Competition

by ಕಲ್ಪ ನ್ಯೂಸ್
May 16, 2026
0

Kalpa Media House  |  Bengaluru  | The South Western Railway, Mysuru Division, successfully organized the much-awaited Inter Department Drama Competition,...

Read moreDetails
PCCF Kumar Pushkar Warns Human Intolerance Fueling Biodiversity Crisis

PCCF Kumar Pushkar Warns Human Intolerance Fueling Biodiversity Crisis

May 15, 2026
Annual Disaster Management Mock Drill Conducted at Harihar Railway Station

Annual Disaster Management Mock Drill Conducted at Harihar Railway Station

May 14, 2026
AESL Launches Victory Batch at Rs 99 to support students appearing for RE-NEET

AESL Launches Victory Batch at Rs 99 to support students appearing for RE-NEET

May 13, 2026
Why The Hell Did You Make Manya Surve a Hero?: Sanjay Gupta Opens Up on Underworld Threats

Why The Hell Did You Make Manya Surve a Hero?: Sanjay Gupta Opens Up on Underworld Threats

May 13, 2026
  • Advertise With Us
  • Grievances
  • About Us
  • Contact Us
Saturday, May 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ನಗ್ನ ಪ್ರತಿಭಟನೆಗಳು ಮತ್ತು ಪ್ರಚಾರದ ಗೀಳುಗಳು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 13, 2016
in Army
0
Share on FacebookShare on TwitterShare on WhatsApp

ನೀವು ಮುಂಬೈ ರೈಲುಗಳಲ್ಲಿ ಅಡ್ಡಾಡಿದವರಾದರೆ ನಿಮಗೆ ಅಲ್ಲಿ ಮಂಗಳಮುಖಿಯರು ಹೇಗೆ ಜನರನ್ನು ದುಡ್ಡಿಗೆ ಪೀಡಿಸುತ್ತಾರೆ, ದುಡ್ಡು ಕೊಡದಿದ್ದರೆ ಯಾವ ಬಗೆಯ ಪ್ರತಿಭಟನೆ ಮಾಡುತ್ತಾರೆ ಎನ್ನುವುದು ಗೊತ್ತಿರಬಹುದು. ಸುಮಾರು ಹದಿನೈದು ವರ್ಷದ ಹಿಂದೆ ಅಲ್ಲಿ ನನಗೆ ಅವರ ಆ ಬಗೆಯ ಪ್ರತಿಭಟನೆ ಕಂಡಾಗ ದಿಗಿಲಾಗಿತ್ತು. ಅವರ ಪ್ರತಾಪಗಳ ಅರಿವಿರುವ ಯಾರೂ ಅವರು ಅಲ್ಲಿಯವರೆಗೆ ಮುಂದುವರಿಯಲು ಬಿಡುವುದಿಲ್ಲ. ಕೇಳಿದಷ್ಟು ದುಡ್ಡು ಕೊಟ್ಟು ಸಾಗಹಾಕುತ್ತಾರೆ. ಅಂದರೆ, ಅವರಿಗೆ ಅಲ್ಲಿ ನಗ್ನತೆ ಪ್ರತಿಭಟನೆ ಅನ್ನುವುದಕ್ಕಿಂತಲೂ ಬ್ಯುಸಿನೆಸ್ಸಿನ ಒಂದು ತಂತ್ರವಾಗಿ ಬಳಕೆಯಾಗುತ್ತಿದೆ.
ಉತ್ತರಪ್ರದೇಶದಲ್ಲಿ ಕೆಲವು ವರ್ಷಗಳನ್ನು ಕಳೆದವರಿಗೆ ಅಲ್ಲಿನ ಬೆತ್ತಲೆ ಪ್ರತಿಭಟನೆಗಳೇನೂ ವಿಶೇಷವಲ್ಲ. ಇದನ್ನು ದಲಿತರು ಮಾತ್ರವಲ್ಲ; ಜಾತಿಭೇದ ಇಲ್ಲದೆ ಎಲ್ಲರೂ ಒಂದು ತಂತ್ರವಾಗಿ ಅಲ್ಲಿ ಬಳಸುತ್ತಾರೆ. ಇದಕ್ಕೆ ಅರ್ಧ ಕಾರಣ ಅಲ್ಲಿನ ಪೊಲೀಸ್ ವ್ಯವಸ್ಥೆಯೇ ಎನ್ನಬೇಕು. ನೂರರಲ್ಲಿ ಐವತ್ತು ಕೇಸುಗಳನ್ನು ಪೊಲೀಸರು ಅಲ್ಲಿ ದಾಖಲಿಸಿಕೊಳ್ಳುವುದಿಲ್ಲ. ಎರಡೂ ಪಾರ್ಟಿಯವರಿಗೆ ಗದರಿಸಿಯೋ ಸಮಾಧಾನ ಮಾಡಿಯೋ ಸಾಗಹಾಕುತ್ತಾರೆ. ಇದುವರೆಗೆ ಬರೆದಿಟ್ಟುಕೊಂಡ ಕೇಸುಗಳಿಗೆ ಗತಿ ಕಾಣಿಸಲು ಇನ್ನೆಷ್ಟು ಶತಮಾನಗಳು ಬೇಕಾಗುತ್ತವೋ ಎಂಬಂಥ ಸ್ಥಿತಿಯಲ್ಲಿ ಅಲ್ಲಿನ ಪೋಲೀಸ್ ವ್ಯವಸ್ಥೆ ಇರುವುದರಿಂದ, ದೂರು ಕೊಡಲು ಬಂದವರು ಕೂಡ, ದೂರು ದಾಖಲಾಗದೆ ರಾಜಿ ಪಂಚಾಯಿತಿಗೆಯಿಂದಲೇ ಪ್ರಕರಣ ಸುಖಾಂತ್ಯ ಕಂಡರೆ ಅದಕ್ಕೇನೂ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಆದರೆ, ಕೇಸು ಹಾಕಿಸುವುದೇ ಮುಖ್ಯ; ಉಳಿದದ್ದೆಲ್ಲ ನಗಣ್ಯ ಎನ್ನುವವರು ಮಾತ್ರ ಪೋಲೀಸರ ಮೇಲೆ ಒತ್ತಡ ಹಾಕುತ್ತಾರೆ. ಕೇಸು ತೆಗೆದುಕೊಂಡಿಲ್ಲ ಎಂದರೆ ಪ್ರತಿಭಟನೆಯ ಅಸ್ತ್ರಗಳನ್ನು ಹೊರತೆಗೆಯುತ್ತಾರೆ. ನಗ್ನವಾಗಿ ನಿಂತರೆ ಮಾಧ್ಯಮಗಳು ಎದ್ದೆವೋ ಬಿದ್ದೆವೋ ಎನ್ನುತ್ತ ಬಂದು ಶೂಟ್ ಮಾಡಿ ಸುದ್ದಿ ಮಾಡುವುದರಿಂದ, ಅದೊಂದು ಅಗ್ಗದ ಸಾಧನವಾಗಿದೆ ಹಲವರಿಗೆ. ಈ ನಗ್ನಾಸ್ತ್ರಕ್ಕೆ ಇಂಥವರೇ ಎಂಬ ಜಾತಿಬಂಧನ ಏನೂ ಇಲ್ಲ. ಎಲ್ಲರೆದುರು ಹಾಗೆ ಬಟ್ಟೆ ಕಳಚಿ ನಿಲ್ಲುವ ಧೈರ್ಯ ಇದ್ದರೆ ಸಾಕು.
ಒಂದು ವ್ಯವಸ್ಥೆಯ ಕಿವಿ ಹಿಂಡಬೇಕಾದರೆ ಜನಸಾಮಾನ್ಯರು ನಗ್ನರಾಗಿ ನಿಲ್ಲುವಂಥ ಅನಿವಾರ್ಯತೆ ಸೃಷ್ಟಿಯಾಗಿದೆಯೆಂದರೆ ಅದಕ್ಕಿಂತ ಘೋರ ವಾಸ್ತವ ಇನ್ನೊಂದಿಲ್ಲ. ಆದರೆ, ಅಲ್ಲಿ ಅವರು ಯಾವ ಕಾರಣಕ್ಕೆ ಹಾಗೆ ನಿಂತರು ಎನ್ನುವುದನ್ನೇ ತಿಳಿಯದೆ ಪೋಲೀಸರು ಅವರ ಬಟ್ಟೆ ಬಿಚ್ಚಿದರು ಎಂದು ಗೋಗರೆದು, ಪದ್ಯ ಬರೆದು ಹಾಹಾಕಾರ ಎಬ್ಬಿಸುವ ಬುದ್ದಿಜೀವಿಗಳ ನಡತೆ ಮಾತ್ರ ನನ್ನಲ್ಲಿ ನಗು ಉಕ್ಕಿಸುತ್ತಿದೆ. ನಮ್ಮಲ್ಲಿ ದೇವದೇವಿಯರನ್ನು ಕಲಾಭಿವ್ಯಕ್ತಿ ಎಂಬ ಗುರಾಣಿ ಅಲ್ಲಾಡಿಸುತ್ತ ನಗ್ನವಾಗಿ ಚಿತ್ರಿಸಿ ತೀಟೆ ತೀರಿಸಿಕೊಳ್ಳುವವರು ಇದೇ ಬುಜೀ ಕಲಾವಿದರು. ಇವರು ನಿರ್ದೇಶಿಸುವ ಚಿತ್ರ, ನಾಟಕಗಳಲ್ಲಿ ಅಗತ್ಯ ಮೀರಿ ನಗ್ನತೆ ಇರುತ್ತದೆ. ಸೋಕಾಲ್ಡ್ ಬುಜೀ ನಿರ್ದೇಶಕರು ನಿರ್ದೇಶಿಸುವ ನಾಟಕಗಳಲ್ಲಿ ಬಟ್ಟೆ ಹರಿಯುವುದು, ಹೆಣ್ಣಿನ ಒಳ ಉಡುಪುಗಳನ್ನು ಕಿತ್ತೆಸೆಯುವುದು (’ಅಂಜುಮಲ್ಲಿಗೆ’ ನೆನಪು ಮಾಡಿಕೊಳ್ಳಿ), ಲೈಂಗಿಕ ದೃಶ್ಯಗಳು, ಬ್ಲೋಜಾಬ್ ಇತ್ಯಾದಿಗಳು ವೇದಿಕೆ ಮೇಲೇ ಯಾವ ಎಗ್ಗಿಲ್ಲದೆ ಅಭಿನಯಿಸಲ್ಪಡುತ್ತವೆ. ಮತ್ತು ಇಂಥವಕ್ಕೆ ಬುಜೀ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆಗಳ ಮೂಲಕ ಉತ್ತೇಜನ ಕೂಡ ಕೊಡುತ್ತಾರೆ. ಇವನ್ನೆಲ್ಲ ಭಾವಾಭಿವ್ಯಕ್ತಿ, ಕಲಾಪ್ರಜ್ಞೆ, ವಾಸ್ತವತೆಯ ಪ್ರತಿಫಲನ, ಹೆಣ್ಣಿನ ಮನೋರಂಗದ ಅನಾವರಣ ಎಂದು ಮುಂತಾದ ಮಣ್ಣುಮಸಿ ಸಿದ್ಧಾಂತಗಳಿಂದ ಸಮರ್ಥಿಸಿಕೊಳ್ಳಲಾಗುತ್ತದೆ. ಇದೇ ಬುಜೀಗಳು ರಾತ್ರಿ ಹನ್ನೆರಡರ ತನಕ ಬಾರುಗಳನ್ನು ತೆರೆದಿರಬೇಕು; ಕ್ಯಾಬರೆ – ಡಿಸ್ಕೋಥೆಕ್ ಮುಂತಾದವನ್ನು ಮುಚ್ಚಿಸಿ ಹೆಣ್ಣುಗಳ ಸಂಪಾದನೆಗೆ ಕಲ್ಲು ಹಾಕಬಾರದು ಎಂದು ಟೌನ್‌ಹಾಲ್ ಎದುರು ಓರಾಟ ಮಾಡುತ್ತಾರೆ! ಹೆಣ್ಣುಗಳ ಮೇಲೆ ಅತ್ಯಂತ ಹೀನಾಯವಾದ ಕವಿತೆ ಬರೆದುಕೊಂಡು ತಮ್ಮ ತೃಷೆಗಳನ್ನು ನೀಗಿಕೊಳ್ಳುತ್ತಾರೆ. ರಾತ್ರಿ ಒಂಬತ್ತರ ನಂತರ ಗ್ಲಾಸುಗಳಲ್ಲಿ ಜಲಸಮಾಧಿಯಾಗುವ ಬಹುತೇಕ ಬುಜೀ ಮತ್ತು ಮರಿ ಬುಜೀಗಳು ತಮ್ಮ ಫೋನಿನ ಅಡ್ರೆಸ್ ಬುಕ್ಕಿನಲ್ಲಿರುವ ಹೆಣ್ಣುಗಳಿಗೆ ಬರೆಯುವ ಮೆಸೇಜುಗಳು ಆತ್ಮಹತ್ಯೆಗಳಿಗೆ ಪ್ರಚೋದಿಸುವಷ್ಟು ಕೊಳಕಾಗಿರುತ್ತವೆ. ನಗ್ನತೆ ಎಂದರೆ ಉಸಿರಾಟದಷ್ಟೇ ಸಹಜ ಇವರಿಗೆಲ್ಲ ಎನ್ನುವುದು ಈ ಎಲ್ಲ ಸಂದರ್ಭಗಳಲ್ಲೂ ರುಜುವಾತಾಗುತ್ತವೆ.
ಪೋರ್ನ್ ಸೈಟುಗಳನ್ನು ನಿಷೇಧಿಸಬಾರದು ಎಂದು ವಾದಹೂಡುವ ಬುಜೀಗಳು ಅದಕ್ಕಾಗಿ ಎಳೆದುತರುವುದು ಖಜುರಾಹೋ ವಿಗ್ರಹಗಳನ್ನು. ಇವರಲ್ಲಿ ಎಷ್ಟು ಜನ ತಮ್ಮ ತೀಟೆ ತೀರಿಸಿಕೊಳ್ಳಬೇಕಾದಾಗ ಪೋರ್ನ್ ಬದಲು ಖಜುರಾಹೋ ವಿಗ್ರಹಗಳನ್ನು ನೋಡುತ್ತಾರೆ? ನಿಮ್ಮದು ಕಾಮುಕ ಕವಿತೆ ಎಂದರೆ ಕಾಮಸೂತ್ರದ ಉದಾಹರಣೆ ಎತ್ತಿಕೊಂಡು ಬಂದು ತಮ್ಮ ಕವಿತೆ ಶ್ರೇಷ್ಠವೇ ಹೌದು ಎಂದು ಸಮರ್ಥಿಸಿಕೊಳ್ಳುವ ಕವಿಗಳೂ ಇದ್ದಾರೆ.
ಒಬ್ಬ ಕವಿಗೆ ತನ್ನ ಕಾವ್ಯದ ಬಗ್ಗೆ ಇಂಥ ವಕಾಲತ್ತು ಮಾಡಬೇಕಾಗಿದೆ (ಮತ್ತು ಸಮರ್ಥನೆಗಾಗಿ ಕಾಮಸೂತ್ರವನ್ನು ಹಿಡಿಯಬೇಕಾಗಿದೆ) ಎಂದರೆ, ಅವನ ಕಾವ್ಯದ ಕಸುವು ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು! ಹಾಗೆಯೇ, ಮಹಿಳೆಯರು ಯಾವುದೋ ಒಂದು ಬೀದಿಯಲ್ಲಿ ಬೆತ್ತಲಾದದ್ದು ಮಾನವ ಜನಾಂಗವೇ ತಲೆ ತಗ್ಗಿಸುವಂಥ ಘಟನೆ; ಆದರೆ ಬೆತ್ತಲೆಗಳನ್ನು ಸಮರ್ಥಿಸಿಕೊಂಡು ಕಲೆಯ ಹೆಸರಲ್ಲಿ ದೊಡ್ಡ ಪರದೆಯಲ್ಲಿ ಹೆಣ್ಣಿನ ನಗ್ನತೆಯನ್ನು ಜಗತ್ತಿನಾದ್ಯಂತ ಪ್ರದರ್ಶಿಸಿ ದುಡ್ಡು ಮಾಡುವುದು ಹೆಣ್ಣಿನ ಶೋಷಣೆ ಅಲ್ಲ ಎನ್ನುವುದು ಯಾವ ಲಾಜಿಕ್ಕು? ಹುಡುಗಿಯರು, ಪ್ರಾಯದ ಹೆಂಗಸರು ಎಂಬ ಭೇದವಿಲ್ಲದೆ ಹೆಣ್ಣೆಂದು ತಿಳಿದೊಡನೆ ಗುರುತು-ಪರಿಚಯ ಮಾಡಿಕೊಂಡು ಕೊನೆಗೆ ಚಾಟಿಂಗ್‌ನಲ್ಲಿ ಕಾಮಕೇಳಿಗೆಳಸುವ; ಖಾಸಗಿ ಫೋಟೋಗಳನ್ನು ಕೇಳುವ ವ್ಯಕ್ತಿಗಳು ಬಹಿರಂಗದಲ್ಲಿ ನಗ್ನತೆ ವಿರೋಧಿಸಿ ಪ್ರತಿಭಟನೆ ಮಾಡುವುದು ಬಹುಶಃ ಬುಜೀ ಲೋಕದಲ್ಲಿ ಮಾತ್ರ ಕಂಡುಬರುವ ವೈರುಧ್ಯವಿಶೇಷ ಇರಬಹುದು!
ಈ ನಗ್ನತೆಯ ರಾಜಕೀಯದಲ್ಲಿ ತಾವೂ ಜಗತ್ತಿನೆದುರು ನಗ್ನರಾಗುತ್ತಿದ್ದೇವೆ ಎನ್ನುವ ತಿಳಿವಳಿಕೆ ಈ ಬುಜೀ ಓರಾಟಗಾರರಿಗೆ ಬಂದರೆ ಸಾಕು.
ಮಹಿಳೆಯರು ಯಾವುದೋ ಒಂದು ಬೀದಿಯಲ್ಲಿ ಬೆತ್ತಲಾದದ್ದು ಮಾನವ ಜನಾಂಗವೇ ತಲೆ ತಗ್ಗಿಸುವಂಥ ಘಟನೆ; ಆದರೆ ಬೆತ್ತಲೆಗಳನ್ನು ಸಮರ್ಥಿಸಿಕೊಂಡು ಕಲೆಯ ಹೆಸರಲ್ಲಿ ದೊಡ್ಡ ಪರದೆಯಲ್ಲಿ ಹೆಣ್ಣಿನ ನಗ್ನತೆಯನ್ನು ಜಗತ್ತಿನಾದ್ಯಂತ ಪ್ರದರ್ಶಿಸಿ ದುಡ್ಡು ಮಾಡುವುದು ಹೆಣ್ಣಿನ ಶೋಷಣೆ ಅಲ್ಲ ಎನ್ನುವುದು ಯಾವ ಲಾಜಿಕ್ಕು? ಹುಡುಗಿಯರು, ಪ್ರಾಯದ ಹೆಂಗಸರು ಎಂಬ ಭೇದವಿಲ್ಲದೆ ಹೆಣ್ಣೆಂದು ತಿಳಿದೊಡನೆ ಗುರುತು-ಪರಿಚಯ ಮಾಡಿಕೊಂಡು ಕೊನೆಗೆ ಚಾಟಿಂಗ್‌ನಲ್ಲಿ ಕಾಮಕೇಳಿಗೆಳಸುವ; ಖಾಸಗಿ ಫೋಟೋಗಳನ್ನು ಕೇಳುವ ವ್ಯಕ್ತಿಗಳು ಬಹಿರಂಗದಲ್ಲಿ ನಗ್ನತೆ ವಿರೋಧಿಸಿ ಪ್ರತಿಭಟನೆ ಮಾಡುವುದು ಬಹುಶಃ ಬುಜೀ ಲೋಕದಲ್ಲಿ ಮಾತ್ರ ಕಂಡುಬರುವ ವೈರುಧ್ಯವಿಶೇಷ ಇರಬಹುದು!

Share196Tweet123Send
Previous Post

ಜೆಎನ್‌ಯುನಲ್ಲಿ ಮೋದಿ ಪ್ರತಿಕೃತಿ ದಹನ: ವರದಿ ಕೇಳಿದ ಕೇಂದ್ರ ಗೃಹ ಇಲಾಖೆ

Next Post

ಗಂಡ ಊರಿಗ್ ಹೋದಾಗ ಚಿತ್ರೀಕರಣಕ್ಕೆ ಚಾಲನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗಂಡ ಊರಿಗ್ ಹೋದಾಗ ಚಿತ್ರೀಕರಣಕ್ಕೆ ಚಾಲನೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು | ಎಷ್ಟು ದಿನ? ಕಾರಣವೇನು?

ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲು ಡೇಟ್ ಫಿಕ್ಸ್ | ಯಾವತ್ತು? ಎಷ್ಟು ನೀರು? ಯಾರಿಗೆ ಪ್ರಯೋಜನ?

May 16, 2026
ಮಧ್ಯಪ್ರಾಚ್ಯದ ಉದ್ವಿಗ್ನತೆ | ಭಾರತದಲ್ಲಿ ಹಿಂಸಾಚಾರದ ಸಾಧ್ಯತೆ | ಎಲ್ಲ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ ಪತ್ರ

ಕೇಂದ್ರ ಗೃಹ ಇಲಾಖೆ ಭರ್ಜರಿ ಬೇಟೆ | 182 ಕೋಟಿ ರೂ ಮೌಲ್ಯದ ಜಿಹಾದಿ ಡ್ರಗ್ಸ್ ಸೀಜ್

May 16, 2026
ದೇಶ ಮೊದಲು ಎಂದು ಹೇಳಿಕೊಟ್ಟ ಪಕ್ಷ ಬಿಜೆಪಿ: ಬಿ.ವೈ. ವಿಜಯೇಂದ್ರ

ದೇಶ ಮೊದಲು ಎಂದು ಹೇಳಿಕೊಟ್ಟ ಪಕ್ಷ ಬಿಜೆಪಿ: ಬಿ.ವೈ. ವಿಜಯೇಂದ್ರ

May 16, 2026
ಕೊಪ್ಪಳ | 10ನೇ ವರ್ಷದ ಮಾವು ಮೇಳಕ್ಕೆ ಜನಸಾಗರ

ಕೊಪ್ಪಳ | 10ನೇ ವರ್ಷದ ಮಾವು ಮೇಳಕ್ಕೆ ಜನಸಾಗರ

May 16, 2026
ಕಡಿಮೆ ಶುಲ್ಕದಲ್ಲಿ ಹೈಟೆಕ್ ಶಿಕ್ಷಣಕ್ಕಾಗಿ ಗಂಗೋತ್ರಿ ಪಿಯು ಕಾಲೇಜು ಆರಂಭ: ಹೆಚ್.ಎಸ್. ಸುಂದರೇಶ್

ಕಡಿಮೆ ಶುಲ್ಕದಲ್ಲಿ ಹೈಟೆಕ್ ಶಿಕ್ಷಣಕ್ಕಾಗಿ ಗಂಗೋತ್ರಿ ಪಿಯು ಕಾಲೇಜು ಆರಂಭ: ಹೆಚ್.ಎಸ್. ಸುಂದರೇಶ್

May 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL