Friday, June 27, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ನಾನು ಎಂಬುದನ್ನು ಬಿಟ್ಟು ನಾವು ಎನ್ನೋಣ: ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಸಂದೇಶ

ಹೊಳೆಹೊನ್ನೂರಿನಲ್ಲಿ ಚಾತುರ್ಮಾಸ್ಯ ವಿಶೇಷ ಉಪನ್ಯಾಸ

July 17, 2023
in ಶಿವಮೊಗ್ಗ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   | ಹೊಳೆಹೊನ್ನೂರು |

ನನ್ನದು, ನನಗೆ , ನನ್ನಿಂದ ಎಂಬ ಸ್ವಾರ್ಥದಿಂದ ಹೊರಬಂದು ನಮ್ಮವರು, ನನ್ನ ಪರಿವಾರ, ನಮ್ಮವರ ಕ್ಷೇಮ, ನಮ್ಮ ನಾಡು, ನಮ್ಮ ದೇಶ ಎಂಬುದನ್ನು ಅಭ್ಯಾಸ ಮಾಡಿಕೊಂಡರೆ ಜೀವನ ಸುಖಮಯವಾಗಿರುತ್ತದೆ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.

ಚಾತುರ್ಮಾಸ್ಯ ಸಂದರ್ಭ ಇಲ್ಲಿನ ಶ್ರೀ ಸತ್ಯಧರ್ಮ ತೀರ್ಥರ ವೃಂದಾವನ ಸನ್ನಿಧಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಆಶೀರ್ವಚನ ನೀಡಿದ ಅವರು, ನಮ್ಮಲ್ಲಿರುವ ಸ್ವಾರ್ಥಗಳ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಂಡರೆ ವಿಶ್ವವೇ ನಮ್ಮದಾಗುತ್ತದೆ ಎಂದರು.
ಕೇವಲ ನನಗಲ್ಲದೆ ನನ್ನ ಪರಿವಾರಕ್ಕೆ, ನನ್ನ ಬಂಧು ಮಿತ್ರರಿಗೆ ಸಮಸ್ತ ವಿಶ್ವದ ಸಜ್ಜನರಿಗೆಲ್ಲ ದೇವರು ಮಾಡಿದ ಉಪಕಾರ ಎಷ್ಟೆಂದು ಸ್ಮರಿಸಬೇಕು. ಮಹಾಭಾರತದ ಪರೀಕ್ಷಿತನಿಗೆ ಗರ್ಭದಿಂದಲೇ ರಕ್ಷಣೆ ಮಾಡಿದಂತೆ ದೇವರು ನಮ್ಮನ್ನೂ ಸದಾಕಾಲ ಕಾಪಾಡಿದ್ದಾನೆ. ಕಾಪಾಡುತ್ತಲೇ ಇರುತ್ತಾನೆ. ಒಂದು ರೀತಿಯಲ್ಲಿ ನಾವೆಲ್ಲರೂ ಸಹ ವಿಷ್ಣುವಿನಿಂದ ರಕ್ಷಣೆಗೊಂಡ ಪರೀಕ್ಷಿತರೇ ಸರಿ ಎಂದರು.

ಮಹಾಭಾರತವನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಕೆಲ ಪ್ರಸಂಗಗಳನ್ನು ಶ್ರೀಗಳು ಉಲ್ಲೇಖಿಸಿದರು.

ಮನುಷ್ಯನಿಗೆ ಸಂಕುಚಿತ ಬುದ್ಧಿ ಸರ್ವೇಸಾಮಾನ್ಯ. ತಾನು ಪರರಿಗೆ ಮಾಡಿದ ಸಣ್ಣಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಆದರೆ ಇನ್ನೊಬ್ಬರು ಮಾಡಿದ ಮಹಾ ಉಪಕಾರವನ್ನು ಎಂದಿಗೂ ಸ್ಮರಿಸುವುದಿಲ್ಲ. ಹಾಗೆಯೇ ತಾನು ಇನ್ನೊಬ್ಬರಿಗೆ ಎಷ್ಟೇ ಅಪಕಾರ ಮಾಡಿದರೂ ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಆದರೆ ಇನ್ನೊಬ್ಬರು ಮಾಡಿದ ಸಣ್ಣ ಅಪಕಾರವನ್ನು ಜೀವನವಿಡಿ ಮರೆಯುವುದಿಲ್ಲ. ಇದು ಮನುಷ್ಯನ ಸಹಜ ಸ್ವಭಾವ. ಇಂತಹ ಮನೋಧರ್ಮದಲ್ಲಿ ದೇವರನ್ನು ನೆನೆಯುವುದಾದರೂ ಹೇಗೆ..? ಅದಕ್ಕೆ ಪರೀಕ್ಷಿತ ನಂತೆ ಕೇವಲ ತನಗೆ ಮಾಡಿದ ಉಪಕಾರವನ್ನು ಸ್ಮರಿಸಿದೇ ತನ್ನ ಹಿರಿಯರಿಗೆ ಹಾಗೂ ತನ್ನ ಬಂಧು ಮಿತ್ರರಿಗೆ, ನಂತರ ಇಡೀ ವಿಶ್ವಕ್ಕೆ ದೇವರು ಮಾಡುವ ಉಪಕಾರವನ್ನೆಲ್ಲ ನಾವು ಸ್ಮರಿಸಬೇಕು. ಆಗ ಶ್ರದ್ಧೆ ಭಕ್ತಿ ಇಮ್ಮಡಿಯಾಗುವುದು. ವರ್ತಮಾನದ ಬದುಕು ಬಂಗಾರಮಯವಾಗುವುದು ಎಂದರು.
ಪರೀಕ್ಷಿತನಿಗೆ ದೇವರು ಮೂಲದಿಂದಲೇ ರಕ್ಷಣೆ ಒದಗಿಸಿದ. ಬ್ರಹ್ಮಾಸ್ತçವನ್ನೂ ಗೌರವಿಸಿ ಗರ್ಭವನ್ನೂ ಕಾಪಾಡಿದ. ಇದನ್ನು ಪರೀಕ್ಷಿತ ಮಹಾರಾಜ ಬದುಕಿನ ಉದ್ದಕ್ಕೂ ಸ್ಮರಿಸಿದ. ಮಾತ್ರವಲ್ಲ,

Also read: ಸಮಾಜಮುಖಿ ಸೇವೆಗಳಿಂದ ಜನಮಾನಸ ತಲುಪುತ್ತಿರುವ ರೋಟರಿ ಕಾರ್ಯ ಶ್ಲಾಘನೀಯ

ಆ ಮಹಾ ವಿಷ್ಣುವಿನ ಆಜ್ಞೆಯಂತೆ ಬ್ರಹ್ಮ ಸೃಷ್ಟಿ ಮಾಡುವಾತ. ವಿಷ್ಣು ಸ್ವಯಂ ರಕ್ಷಣೆ ಮಾಡುವಾತ. ರುದ್ರದೇವರು ಅದರ ಸಂಹಾರ ಮಾಡುವವರು. ಅಶ್ವತ್ಥಾಮಾಚಾರ್ಯರು ಸ್ವಯಂ ರುದ್ರಾವತಾರಗಳು. ಹೀಗಿರುವಾಗ ಇಡೀ ಸೃಷ್ಟಿಯ ಸಂಹಾರವೇ ಅವರ ಕೈಯಿಂದ ಆಗುವಾಗ, ನಾನು ಗರ್ಭದಲ್ಲಿಯ ಶಿಶು.ಆದರೂ ತಾಯಿಯ ಕುಕ್ಷಿಯಲ್ಲಿ ಬ್ರಹ್ಮಾಸ್ತ್ರದಿಂದ ಆ ಕೃಷ್ಣ ಪರಮಾತ್ಮ ನನ್ನನ್ನು ರಕ್ಷಣೆ ಮಾಡಿದ. ಪುನಃ ಗರ್ಭದಿಂದ ಹೊರ ಬಂದಾಗ ಮತ್ತೆ ಮೃತನಾದೆ.ಆಗ ಮತ್ತೆ ನನ್ನನ್ನು ಬದುಕಿಸಿದ. ಅವನ ರಕ್ಷಣೆಯಿಂದಲೇ ಎಂತಹ ಬ್ರಹ್ಮಾಸ್ತ್ರದಿಂದಲೂ ಬದುಕಬಹುದು ಎಂದು ಪರೀಕ್ಷಿತ ಉಪಕಾರದ ಸ್ಮರಣೆ ಮಾಡಿದ. ಕೇವಲ ತನಗಷ್ಟೇ ಅಲ್ಲದೇ ತನ್ನ ಪೂರ್ವಜರಿಗೂ ಮಾಡಿದ ಉಪಕಾರವನ್ನು ಸ್ಮರಿಸಿದ. ನಮಗೆ ಇಂಥ ಸ್ಮರಣಾ ಮನೋಭಾವ ರೂಢಿಗತವಾಗಬೇಕು ಎಂದು ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಕೇವಲ ನನ್ನ ಕಷ್ಟಗಳು ಅಂತ ನೋಡದೆ ನನ್ನೊಂದಿಗೆ ಎಲ್ಲ ವಿಶ್ವವೇ ನನ್ನ ಪರಿವಾರ ಎಲ್ಲ ಸಜ್ಜನರು ನನ್ನ ಬಾಂಧವರು ಎಂದು ತಿಳಿದು, ದೇವರು ಎಲ್ಲರ ಕಷ್ಟಗಳನ್ನು ಪರಿಹಾರ ಮಾಡಲಿ ಹಾಗೂ ಮಾಡುತ್ತಾನೆ ಎಂಬ ಚಿಂತನೆಯೇ ನಮ್ಮದಾಗಬೇಕು. ಕೇವಲ ಬಂದ ಕಷ್ಟಗಳನ್ನು, ಆದ ರೋಗಗಳನ್ನು ದೇವರ ಮುಂದೆ ತೋಡಿಕೊಂಡು ಸದಾ ರೋದಿಸುವುದಕ್ಕಿಂತ, ಬಾರದೇ ಇರುವ ಕಷ್ಟಗಳನ್ನು ಪಟ್ಟಿಮಾಡಿ. ಆಗದೇ ಇರುವ ಮಹಾ ಮಹಾ ರೋಗಗಳನ್ನು ಪಟ್ಟಿ ಮಾಡಿ. ನೆನೆದಾಗ ಅದನ್ನು ಸಂತೋಷದಿಂದ ದೇವರ ಮುಂದೆ ಹೇಳಿಕೊಂಡಾಗ ನಿಶ್ಚಿತವಾಗಿ ಮನಸ್ಸಿಗೆ ದುಃಖಕ್ಕಿಂತಲೂ ಸುಖ ಸಮಾಧಾನಗಳೇ ದೊರಕುವುದು ನಿಶ್ಚಿತ ಎಂದರು.

`ಜನ್ಮ ಮೃತ್ಯು ಜರಾವ್ಯಾಧಿ ದುಃಖ ದೋಷಾನುದರ್ಶನಂ’ – ಹೀಗೆ ಇನ್ನೊಬ್ಬರ ಕಷ್ಟಗಳಿಂದ ನಮಗೆ ವೈರಾಗ್ಯದ ಪಾಠ.. ಇನ್ನೊಂದು ಅವನ ಉಪಕಾರ ಸ್ಮರಣೆ ನಮ್ಮೆಲ್ಲರ ಕರ್ತವ್ಯವೆಂದು ತಿಳಿದು ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.

http://kalpa.news/wp-content/uploads/2023/05/VID-20230516-WA0005.mp4

ದೇವರಲ್ಲಿ ಪ್ರತಿಬಾರಿ ಕೇವಲ ನನಗಾಗಿ ಪ್ರಾರ್ಥಿಸದೇ, ನಮಗಾಗಿ ಎಂದು ಪ್ರಾರ್ಥಿಸುವ ಔದಾರ್ಯ ಬೆಳೆದರೆ ಅದು ಸಾರ್ಥಕ. ಅದು ನನ್ನ ವಂಶಕ್ಕೆ, ಸಂಸ್ಕೃತಿಗೆ, ಭವ್ಯ ಸನಾತನ ಪರಂಪರೆಗೆ, ನಾಡಿಗೆ ಮತ್ತು ದೇಶಕ್ಕೆ ನೀಡುವ ಗೌರವ. ಈ ನಿಟ್ಟಿನಲ್ಲಿ ದಿನವೂ ವಿಶಾಲರಾಗೋಣ ಎಂದು ಸ್ವಾಮೀಜಿ ತಿಳಿಸಿದರು.

ಮಠದ ದಿವಾನದರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಸುಬ್ಬಣ್ಣಾಚಾರ್ಯ, ಮಠದ ವ್ಯವಸ್ಥಾಪಕ ನವರತ್ನ ಶ್ರೀನಿವಾಸಾಚಾರ್ಯ ಇತರರು ಇದ್ದರು.
Kalahamsa Infotech private limitedಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: HolehonnuruKannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaShivamoggaNewsಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಹೊಳೆಹೊನ್ನೂರು
Previous Post

ಸಮಾಜಮುಖಿ ಸೇವೆಗಳಿಂದ ಜನಮಾನಸ ತಲುಪುತ್ತಿರುವ ರೋಟರಿ ಕಾರ್ಯ ಶ್ಲಾಘನೀಯ

Next Post

ಶಿವಮೊಗ್ಗ | ಹಾಡಹಗಲೇ, ಜನನಿಬಿಡ ಪ್ರದೇಶದಲ್ಲಿ ಮಹಿಳೆಯ ಅಪಹರಣ | ಪತಿಯಿಂದಲೇ ಕೃತ್ಯ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ | ಹಾಡಹಗಲೇ, ಜನನಿಬಿಡ ಪ್ರದೇಶದಲ್ಲಿ ಮಹಿಳೆಯ ಅಪಹರಣ | ಪತಿಯಿಂದಲೇ ಕೃತ್ಯ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭೂತಕಾಲದ ವಿಚಾರಗಳು ತಿಳಿದಾಗ ಮಾತ್ರ ವ್ಯಕ್ತಿ ಭವಿಷ್ಯ ನಿರ್ಮಿಸಲು ಸಾಧ್ಯ

June 26, 2025

ನಿಸ್ವಾರ್ಥ ಸೇವೆಯಿಂದ ಆತ್ಮತೃಪ್ತಿ ಲಭ್ಯ: ಡಾ. ಧನಂಜಯ ಸರ್ಜಿ

June 26, 2025

ಕೇಂದ್ರಾಡಳಿತ ಪ್ರದೇಶ ದಿಯು ದಮನ್‌ಗೆ ಶಾಸಕ ಡಿ. ಎಸ್. ಅರುಣ್ ಭೇಟಿ

June 26, 2025

ಸಮಾಜದ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಗತ್ಯ: ಸಂತೋಷ್ ಪಾಟೀಲ್ 

June 26, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭೂತಕಾಲದ ವಿಚಾರಗಳು ತಿಳಿದಾಗ ಮಾತ್ರ ವ್ಯಕ್ತಿ ಭವಿಷ್ಯ ನಿರ್ಮಿಸಲು ಸಾಧ್ಯ

June 26, 2025

ನಿಸ್ವಾರ್ಥ ಸೇವೆಯಿಂದ ಆತ್ಮತೃಪ್ತಿ ಲಭ್ಯ: ಡಾ. ಧನಂಜಯ ಸರ್ಜಿ

June 26, 2025

ಕೇಂದ್ರಾಡಳಿತ ಪ್ರದೇಶ ದಿಯು ದಮನ್‌ಗೆ ಶಾಸಕ ಡಿ. ಎಸ್. ಅರುಣ್ ಭೇಟಿ

June 26, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!