ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಾತ್ರೆಯಲ್ಲಿ ಕನ್ನಡ ಹಾಡು ಹಾಕದೇ ಇದ್ದುದಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಏನಿದು ಘಟನೆ?
ಲಿಂಗರಾಜಪುರದ ಜಾತ್ರೆ ಹಿನ್ನೆಲೆ ಡಿಜೆ ಸಾಂಗ್ ಹಾಕಿಸಲಾಗಿತ್ತು. ಕೆಜೆ ಹಳ್ಳಿ ಠಾಣಾ ವ್ಯಾಪ್ತಿಯ ಹಳೆಬಾಗಲೂರಿನ ನಾಲ್ಕು ಹುಡುಗರು ಬಂದಿದ್ದರು. ತಮಿಳು ಹಾಗೂ ಕನ್ನಡ ಸಾಂಗ್ ಹಾಕುವ ವಿಚಾರವಾಗಿ ಅವರಲ್ಲೇ ಜಗಳ ನಡೆದಿದ್ದು, ಈ ಜಗಳದಲ್ಲಿ ಪ್ರವೀಣ್ ಎಂಬಾತ ಮೂವರಲ್ಲಿ ಓರ್ವರಿಗೆ ಹೆಲ್ಮೆಟ್’ನಿಂದ ಹೊಡೆದಿದ್ದಾನೆ. ಬಳಿಕ ಅದೇ ಹೆಲ್ಮೆಟ್ ಕಸಿದುಕೊಂಡು ಹಲ್ಲೆ ಆತನ ಮೇಲೆ ಮೂವರು ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಪ್ರಕರಣ ಕುರಿತಂತೆ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಕೊಲೆ ಸಂಬಂಧ ಮೃತ ಪ್ರವೀಣ್ ಸ್ನೇಹಿತರಾದ ಸುಂದರ್ (27), ಪ್ರಭು (25) ಮತ್ತು ಆರುಮುಗಂ (27) ಎಂಬುವವರನ್ನು ಬಂಧಿಸಲಾಗಿದೆ ಎಂದಿದ್ದಾರೆ.
Also read: ತೆಲಂಗಾಣದಲ್ಲಿ ಕಾಂಗ್ರೆಸ್ ನೀಡಿರುವ ಆರು ಗ್ಯಾರೆಂಟಿಗಳು ಯಾವುವು ಗೊತ್ತಾ?
ಮೃತ ವ್ಯಕ್ತಿ ಡೆಲಿವರಿ ಬಾಯ್ ಆಗಿದ್ದ ಮೃತನಿಗೆ ಸಣ್ಣ ಸಣ್ಣ ವಿಚಾರಕ್ಕೂ ಕೋಪ ಮಾಡಿಕೊಳ್ಳುವ ಸ್ವಭಾವ ಇತ್ತು. ಈ ಹಿಂದೆ ಗೆಳೆಯರ ಜೊತೆ ಗಲಾಟೆ ಮಾಡಿಕೊಂಡಿದ್ದು, ಪೊಲೀಸ್ ಸಿಬ್ಬಂದಿ ಜೊತೆ ಸಹ ಗಲಾಟೆ ಮಾಡಿದ್ದ. 2021ರಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಗಲಾಟೆ ಮಾಡಿಕೊಂಡಿದ್ದ ಈತನ ವಿರುದ್ಧ ಎಫ್’ಐಆರ್ ಸಹ ದಾಖಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post