ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿರಿಯರು ಕಟ್ಟಿದ ಕಾಂಗ್ರೆಸ್ ಪಕ್ಷ ಇಂದು ಬೆತ್ತಲೆಯಾಗಿ ಬೀದಿಗೆ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1885 ರಲ್ಲಿ ಎಲ್ಲ ರಾಷ್ಟ್ರಭಕ್ತರು ಸೇರಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಇದರಲ್ಲಿ ಆರ್ಎಸ್ಎಸ್ನ ಹೆಗ್ಡ್ಡೆವಾರ್, ಬಾಲಗಂಗಾಧರ ತಿಲಕ್ ಸೇರಿದಂತೆ ಹಲವರು ಕಟ್ಟಿದ್ದರು. ಇಂದು ಕಾಂಗ್ರೆಸ್ ಅಧಿಕಾರದ ದಾಹಕ್ಕಾಗಿ ಪೂರ್ಣ ಕೆಳಮಟ್ಟಕ್ಕೆ ಇಳಿದು ಹೀನಾಯ ಸ್ಥಿತಿಗೆ ಬಂದಿದೆ ಎಂದರು.
ತಮ್ಮನ್ನು ಮರಳಿ ಬಿಜೆಪಿಗೆ ಸೇರಿಸಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿಯಲ್ಲಿರುವ ಗೊಂದಲಗಳು ಸರಿಯಾದ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ, ಬಿಜೆಪಿ ನನ್ನ ಮಾತೃ ಪಕ್ಷವಾಗಿದೆ. ಆದರೆ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ನಾನು ಕೆಲವು ಬೇಡಿಕೆ ಮುಂದಿಟ್ಟಿದ್ದೇನೆ, ಆದರೆ ಅವು ಷರತ್ತಲ್ಲ. ಬಿಜೆಪಿನ ಸೇರ್ಪಡೆಗೆ ಯಾವುದೇ ಷÀರತ್ತು ವಿಧಿಸುವುದಿಲ್ಲ. ಸಂಘಟನೆ ದೃಷ್ಟಿಯಿಂದ ಬಿಜೆಪಿಯಲ್ಲಿ ಕೆಲವು ಬದಲಾವಣೆಗಳು ಆಗಬೇಕಾಗಿದೆ. ಪಕ್ಷದ ದೃಷ್ಟಿಯಿಂದ ಅದು ಒಳ್ಳೆಯದು.
-ಕೆ.ಎಸ್.ಈಶ್ವರಪ್ಪ, ರಾಷ್ಟ್ರಭಕ್ತ ಬಳಗದ ಸಂಚಾಲಕ
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಸ್ವಾರ್ಥವೇ ತುಂಬಿ ತುಳುತ್ತಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಅಧಿಕಾರ ಸಿಗದೆ ಶಾಸಕರು ಅತೃಪ್ತರಾಗಿದ್ದಾರೆ. ಅವರ ಬೆಂಬಲಿಗರು ಸಹ ಮುಖ್ಯಮಂತ್ರಿ ವಿರುದ್ದ ಧಿಕ್ಕಾರ ಕೂಗುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕೆಲವು ಶಾಸಕರಿಗೆ ಮಂತ್ರಿ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿದ್ದರು. ಸಚಿವ ಸ್ಥಾನ ಸಿಗದ ಬೇಳೂರು ಗೋಪಾಲಕೃಷ್ಣ ಅವರು ತಮಗೆ ಮಂತ್ರಿ ಸ್ಥಾನ ಸಿಗದಿರಲು ರಾಹುಲ್ ಗಾಂಧಿಯವರೇ ಕಾರಣ ಎಂದು ಹೇಳಿದ್ದಾರೆ. ಕಾಂಗ್ರೆಸ್ ಗೆ ಈ ಪರಿಸ್ಥಿತಿ ಬರಬಾರದಿತ್ತೆಂದು ವ್ಯಂಗ್ಯವಾಡಿದ ಅವರು ಇಂದು ಕಾಂಗ್ರೆಸ್ ರಾಜ್ಯದಲ್ಲಿ ಸಮಾಧಿಯಾಗಿದೆ ಎಂದರು.
ಅತಿವೃಷ್ಟಿ, ಅನಾವೃಷಿಯಿಂದಾಗಿ ರಾಜ್ಯದಲ್ಲಿ ಜನರು ತತ್ತರಿಸಿದ್ದಾರೆ. ಅವರ ಗೋಳು ಕೇಳುವವರು ಇಲ್ಲದ್ದಾಗಿದ್ದಾರೆ. ಅಭಿವೃದ್ದಿ ಸಂಪೂರ್ಣ ಶೂನ್ಯವಾಗಿದೆ. ಎರಡು ತಿಂಗಳಾದರು ಸಂಪೂರ್ಣ ಕ್ಯಾಬಿನೆಟ್ ಪೂರ್ಣಗೊಂಡಿಲ್ಲ. ಅತೃಪ್ತ ಶಾಸಕರಿಗೆ ತೃಪ್ತಿ ಪಡಿಸಲು ಮುಖ್ಯಮಂತ್ರಿಗಳು ದೆಹಲಿಗೆ ಹೋಗುತ್ತಿದ್ದಾರೆ. ಓರ್ವ ಮಹಿಳೆಗೂ ಸಚಿವ ಸ್ಥಾನ ನೀಡದ ಸರ್ಕಾರ ಮಹಿಳೆಯರಿಗೆ ವಂಚಿಸಿದೆ. ಗಾಯತ್ರಿ ಶಾಂತೇಗೌಡ ಅವರ ಹೆಸರು ಸಚಿವರ ಪಟ್ಟಿಯಲ್ಲಿ ಇದ್ದರು. ಕೊನೆ ಕ್ಷಣದಲ್ಲಿ ರದ್ದಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ದುಸ್ಥಿತಿಗೆ ಬಂದಿದೆ ಎಂದರು.
Also read>> ಭದ್ರಾವತಿ : ಗುರುರಾಯರ ಆರಾಧನಾ ಮಹೋತ್ಸವ: ವಿವಿಧ ಸ್ಪರ್ಧೆಗಳ ಆಯೋಜನೆ
ರಾಜ್ಯದಲ್ಲಿ ಕಾಂಗ್ರೆಸ್ನಲ್ಲಿ ಅಶಿಸ್ತು ತುಂಬಿ ಹೋಗಿದೆ. ಸಭಾಪತಿ ಪೀಠಕ್ಕೂ ಅವಮಾನವಾಗಿದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಳಿಸಿದ್ದ ಸಚಿವರ ಪಟ್ಟಿಯಲ್ಲಿ ಸಭಾಪತಿ ಹಾಗೂ ಉಪ ಸಭಾಪತಿ ಹೆಸರು ಬಂದಿರುವುದು ಸಂವಿಧಾನ ಆಶಯ ಎಲ್ಲಿಗೆ ಬಂತೆಂಬುದನ್ನು ಜನರು ನೋಡುತ್ತಿದ್ದಾರೆ. ಕಾಂಗ್ರೆಸ್ ಕರ್ಮಕಾಂಡದಿಂದ ಜನರ ಮುಂದೆ ಬೆತ್ತಲೆಯಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇನ್ನಾದರೂ ರಾಜ್ಯದ ಅಭಿವೃದ್ದಿ ಕಡೆ ಗಮನಹರಿಸಬೇಕು. ಈಗ ಪಕ್ಷದಲ್ಲಿ ಆಗುತ್ತಿರುವ ರಂಪಾಟವನ್ನು ಜನ ನೋಡುತ್ತಿದ್ದಾರೆ. ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ನೀಡಿದರು.
ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮ ರಕ್ಷಣೆಗೆ ಹಲವರು ಬಲಿದಾನವಾಗಿದ್ದಾರೆ. ಆದರೆ ಇಂತಹ ಹೇಳಿಕೆಗಳಿಂದ ಹಿಂದೂ ರಾಷ್ಟ್ರವಾಗಲ್ಲ ಎಂಬುದು ಅವರ ಭ್ರಮೆ ಇರಬಹುದು. ಯತೀಂದ್ರ ಏನೇ ಹೇಳಿದರು ಭಾತರ ಮುಸ್ಲಿಂ ರಾಷ್ಟ್ರವಾಗುವುದಿಲ್ಲ. ಇದು ಹಿಂದೂ ರಾಷ್ಟ್ರವೇ ಆಗಿರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಇ.ವಿಶ್ವಾಸ್, ಕುಬೇಂದ್ರಪ್ಪ, ಶಿವಾಜಿ,ಬಾಲು,ಸೀತಾಲಕ್ಷ್ಮೀ, ಅನಿತಾ, ಕೋಕಿಲಾ , ಮೋಹನ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







