ಭಗವಾನನಿಗೆ ಚಾತುರ್ವರ್ಣ ಚಾತುರ್ವರ್ಣ ಎಂಬ ಕಾಯಿಲೆ ಎಂಬುದನ್ನು ಆರಂಭದಲ್ಲೇ ಹೇಳಿ ಬಿಡುತ್ತೇನೆ.
ಈಗ ವಿಚಾರಕ್ಕೆ ಬರೋಣ… ವರ್ಣಾಶ್ರಮದ ಬಗೆಗಿನ ಒಂದು ಸಣ್ಣ ಉದಾಹರಣೆ ಕಥೆ ಕೇಳಿ.
ಭಾಗವತ ಸಪ್ತಾಹ ಶುರುವಾದದ್ದು ಪರೀಕ್ಷಿತ ರಾಜನಿಂದ. ಬ್ರಾಹ್ಮಣ ಶಾಪದಿಂದ ಖಿನ್ನನಾಗಿದ್ದ ಪರೀಕ್ಷಿತ ರಾಜ. ಹರಿಯುತ್ತಿರುವ ಸರ್ಪನನ್ನು ಕೊಂದು ಆ ಧ್ಯಾನಾಸಕ್ತ ಋಷಿಯ ಕೊರಳಿಗೆ ಹಾಕಿ ತನ್ನ ದುರ್ಬುದ್ಧಿಗೆ ತಾನೇ ಪ್ರಶಂಸಿಸಿ ಗಹಗಹನೆ ನಕ್ಕು ಅಲ್ಲಿಂದ ತೆರಳಿದ. ಕೆಲವು ಹೊತ್ತಿನ ಬಳಿಕ ಋಷಿಯು ಕಣ್ತೆರೆದು ನೋಡಿದಾಗ, ನಡೆದ ವೃತ್ತಾಂತ ತಿಳಿದು, ಯಾರು ನನ್ನ ಧ್ಯಾನಕ್ಕೆ ಭಂಗ ತಂದರೋ ಅವರು ಇನ್ನೇಳು ದಿನಗಳಲ್ಲಿ ಸರ್ಪ ಕಡಿತದಿಂದಲೇ ಮರಣ ಹೊಂದಲಿ ಎಂದು ಶಪಿಸಿದ ಆ ಮಹಾ ತಪಸ್ವಿ.
ಋಷಿಗಳ ಶಾಪ ಸುಳ್ಳಾಗದು ರಾಜನ್, ಸರ್ಪ ವಧೆ ಮಾಡಿದ ಪಾಪ ಪರಿಹಾರಕ್ಕೆ ಭಾಗವತ ಸಪ್ತಾಹ ಮಾಡಲು ಸಲಹೆ ನೀಡುತ್ತಾರೆ ರಾಜ ಗುರುಗಳು. ಮೃತಿ ನಿಶ್ಚಿತ. ಆದರೆ ಮರಣ ಕಾಲದಲ್ಲಿ ಭಯಗ್ರಸ್ತನಾಗಬಾರದು ಎಂಬ ಸಂದೇಶವಿದೆ.
ಭಾಗವತ ಪ್ರವಚನದಲ್ಲಿ ಪ್ರಬುದ್ಧರಾದ ಆಚಾರ್ಯರನ್ನು ಗೊತ್ತು ಮಾಡಿದರು. ಸೂತ ಪುರಾಣಿಕರೇ ಈ ಭಾಗವತ ಪ್ರವಚನದ ಪ್ರವರ್ತಕ. ಮೊಟ್ಟ ಮೊದಲ ಬಾರಿಗೆ ಭಾಗವತ ಪ್ರವಚನ ನಡೆದದ್ದೂ ಪರೀಕ್ಷಿತನ ಅರಮನೆಯಲ್ಲೇ. ಸೂತ ಪುರಾಣಿಕರು ರಥದ ಸಾರಥಿಯ ವಂಶಜ. ಅಂದರೆ ನಾವಾಡುವ ಶೂದ್ರಜ. ಇವರನ್ನು ವೇದಿಕೆಗೆ ಕರೆತಂದು ಪಾದ ಪೂಜೆ ಮಾಡಿ, ಸತ್ಕರಿಸಿದ್ದು ಮಹಾ ಬ್ರಾಹ್ಮಣ ಋಷಿಗಳಾದ ಶೌನಕ ಮುನಿಗಳು!
ಎಲ್ಲಿ ಹೋಯ್ತು ಭಗವಾನ ಹೇಳುವ ಜಾತಿ? ಶೂದ್ರಜನಾದ ಭಗವಾನನಿಗೆ ದೇವರು ಜ್ಞಾನ ಕೊಟ್ಟರು. ಇದು ಪೂರ್ವ ಪುಣ್ಯ. ಆದರೆ ಅದನ್ನು ಗಂಜಿಯಾಸೆಗೆ ದುರುಪಯೋಗ ಮಾಡಿ ಪಟಿಂಗನಾದದ್ದು ದೇವರಿಂದಲ್ಲ. ಮಹಾಯೋಗವನ್ನು ರಕ್ಷಣೆ ಮಾಡಿಕೊಳ್ಳಲಾಗದ ಮನದಿಂದ. ನೀತಿಯೇ ಬ್ರಾಹ್ಮಣ, ಜ್ಞಾನವೇ ಬ್ರಾಹ್ಮಣ. ಕುನೀತಿ, ಅಜ್ಞಾನಗಳು ಚಾತುರ್ವರ್ಣಗಳಲ್ಲಿಲ್ಲ. ಅದು ಇರುವುದು ಕ್ರಿಮಿಗಳಲ್ಲಿ ಮಾತ್ರ ಎಂಬುದನ್ನು ಭಗವಾನ ಸಾಕ್ಷಿ ಸಹಿತ ತೋರಿಸಿಕೊಟ್ಟ. ಈ ಉದಾಹರಣೆಯಾದ ಭಗವಾನ ಇನ್ನೂ ಬೊಗಳಲಿ. ಅವನಿಂದ ಸಮಾಜ ಎಚ್ಚೆತ್ತುಕೊಳ್ಳುತ್ತದೆಯೇ ವಿನಾ ಹಾಳಾಗದು.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post