No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Tuesday, April 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ರಾಮಾಯಣ ಎಳೆಯ ಮನಸ್ಸುಗಳನ್ನು ಮುಟ್ಟಬೇಕಾದ ಅಗತ್ಯ ಇಂದು ಹೆಚ್ಚಾಗಬೇಕು: ಜಿ. ವೆಂಕಟಸುಬ್ಬಯ್ಯ ಅಭಿಮತ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 23, 2019
in Small Bytes, ಬೆಂಗಳೂರು ನಗರ
0
Share on FacebookShare on TwitterShare on WhatsApp

ಬೆಂಗಳೂರು: ಇಂದಿನ ಕಾಲಮಾನದಲ್ಲಿ ರಾಮಾಯಣ ಎಳೆಯ ಮನಸ್ಸುಗಳನ್ನು ಮುಟ್ಟಬೇಕಾದ ಅತ್ಯಗತ್ಯವಿದೆ ಎಂದು ಸಚಿತ್ರ ರಾಮಾಯಣ 3 ಭಾಷೆಯ ಪ್ರಧಾನ ಸಂಪಾದಕರು, ಶತಾಯುಷಿ, ನಡೆದಾಡುವ ನಿಘಂಟು ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಹೇಳಿದರು.

ಶ್ರೀ ಜಯರಾಮ ಸೇವಾ ಮಂಡಳಿ ವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಜಯನಗರ 8ನೆಯ ಬಡಾವಣೆಯ ಶ್ರೀಜಯರಾಮ ಸೇವಾ ಮಂಡಳಿ ಆವರಣದ ಪ್ರೊ.ಜಿ.ವಿ. ಶತಮಾನೋತ್ಸವ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಾಯಣ ಎಳೆಯ ಮನಸ್ಸುಗಳನ್ನು ಅದರಲ್ಲೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಮುಟ್ಟಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. ಹಲವು ಪುಟಗಳಲ್ಲಿ ಹೇಳುವುದನ್ನು ಒಂದು ಚಿತ್ರದಲ್ಲಿ ಮನಮುಟ್ಟುವಂತೆ ಹೇಳುವ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ವ್ಯಕ್ತಿತ್ವ ಪರಿಚಯದೊಂದಿಗೆ ರಾಮರಾಜ್ಯದ ಪರಿಕಲ್ಪನೆ. ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಈ ಕೃತಿಯ ಮೂಲಕ ಆಗುತ್ತಿರುವುದು ಸ್ತುತ್ಯಾರ್ಹ ಅಭಿಪ್ರಾಯಪಟ್ಟರು.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್. ಕುಮಾರ್‌ ಮಾತನಾಡಿ, ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ಸಾಹಿತ್ಯರಾಶಿಗೆ ಅಪಾರವಾದ ಪ್ರಾಧಾನ್ಯವಿದೆ. ವೇದಮಂತ್ರಗಳಿಂದ ಹಿಡಿದು ಉಪನಿಷತ್ತುಗಳು ಬ್ರಾಹ್ಮಣಗಳು ಮುಂತಾದ ಗ್ರಂಥಗಳಲ್ಲಿ ಮಾನವ ಜೀವನವನ್ನು ಅಂತರಂಗ ಬಹಿರಂಗಗಳಿಂದ ಪರಿಶೀಲಿಸಿ ಒಂದು ವ್ಯವಸ್ಥೆಗೆ ಏರ್ಪಡಿಸಿದ ಕಾರ್ಯ ನೆರವೇರಿದೆ ಎಂದರು.


ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ, ಕಲ್ಪ ಎಂಬ ವೇದಾಂಗಗಳಿಂದ ಮಾನವನ ತಿಳಿವಳಿಕೆ ಚೆನ್ನಾಗಿ ವೃದ್ಧಿ ಹೊಂದಿದೆ. ಅದಾದ ಬಳಿಕ ನಮ್ಮ ಇತಿಹಾಸಗಳಿಂದ ರಾಮಾಯಣ ಮತ್ತು ಮಹಾಭಾರತಗಳು ನಮ್ಮರಾಷ್ಟ್ರದ ಪ್ರಾಚೀನ ಮಾನವಜೀವನ ಹೇಗಿತ್ತು ಎಂಬುದರ ಚಿತ್ರವನ್ನು ಭವ್ಯವಾಗಿ ನಿರೂಪಿಸಿವೆ. ಈ ಗ್ರಂಥಗಳನ್ನು ಎಷ್ಟು ಸಲ ಓದಿದರೂ ನಮ್ಮ ಹಿಂದಿನವರ ಬಗ್ಗೆ ಹೊಸ ಹೊಸ ವಿವರಗಳು ದೊರಕುತ್ತಿವೆ. ಈ ಗ್ರಂಥಗಳು ಸದಾ ನವೀನವಾಗಿರುವ ಸತ್ವವನ್ನು ಪಡೆದಿವೆ. ಇವು ನಮ್ಮಅತ್ಯಂತ ಪ್ರಾಚೀನ ಸಾಹಿತ್ಯ ಗ್ರಂಥಗಳು. ಇವುಗಳಲ್ಲಿ ಅಡಗಿರುವ ನಮ್ಮ ಪ್ರಾಚೀನ ಸಂಸ್ಕೃತಿಯು ಎಷ್ಟು ವೈವಿಧ್ಯಮಯವಾಗಿತ್ತು ಎಂಬ ಬಗ್ಗೆ ಪಾಶ್ಚಾತ್ಯರೂ ಪೌರಸ್ತ್ಯರೂ ಮಾಡಿರುವ ಸಂಶೋಧನೆಗಳು ಆಶ್ಚರ್ಯಕರವಾಗಿವೆ ಎಂದರು.

ಶ್ರೀ ಜಯರಾಮ ಸೇವಾ ಮಂಡಳಿಯ ಅಧ್ಯಕ್ಷ ಆರ್.ಎನ್. ಸ್ವಾಮಿ ಮಾತನಾಡಿ, ರಾಮಾಯಣ ಒಂದು ಮಹಾ ಕಾವ್ಯ. ಭಾರತೀಯರ ಪವಿತ್ರಗ್ರಂಥ. ಅದರಲ್ಲಿ ನಮ್ಮ ಸಮಾಜದ ಸಂಸ್ಕೃತಿ. ಧರ್ಮ ಸೂಕ್ಷ್ಮಗಳು, ಮಾನವೀಯ ಸಂಬಂಧಗಳು, ನೈತಿಕ ಮೌಲ್ಯಗಳು, ವಿಚಾರಧಾರೆ ಎಲ್ಲ ಅಡಗಿವೆ. ರಾಮಾಯಣ ಅಧ್ಯಯನ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ. ಇಂದಿನ ವಿದ್ಯಾಭ್ಯಾಸದ ಪಠ್ಯ ಪುಸ್ತಕಗಳಲ್ಲಿ ಈ ಅಧ್ಯಯನಕ್ಕೆ ಅವಕಾಶವಿಲ್ಲದಿರುವುದರಿಂದ. ‘‘ಸಚಿತ್ರ ರಾಮಾಯಣ ದರ್ಶನ ಆ ಕೊರತೆಯನ್ನು ನೀಗುವುದರಲ್ಲಿ ಸಹಾಯಕಾರಿ. ಸನಾತನ ಧರ್ಮದಲ್ಲಿ ನಂಬಿಕೆಯಿರುವ ಪೋಷಕರು ಈ ಸದಾವಕಾಶವನ್ನು ಬಳಸಿಕೊಳ್ಳುವರೆಂದು ಭಾವಿಸಿದ್ದೇವೆ ಎಂದರು.

ಸಂಪೂರ್ಣ ರಾಮಾಯಣ ದರ್ಶನದ ದರ್ಪಣ
ಒಂದುಚಿತ್ರ ನೂರು ಪದಗಳಿಗೆ ಸಮ. ಎಲ್ಲರೂ ಒಪ್ಪುವ ಹೇಳಿಕೆ. ಈ ಹೇಳಿಕೆಯ ಆಧಾರದಲ್ಲಿಜಯರಾಮ ಸೇವಾ ಮಂಡಳಿ ತನ್ನ ಸುವರ್ಣ ಸಂಭ್ರಮದ ವ್ಯಾಪ್ತಿಯಲ್ಲಿ ವರ್ಣಮಯ, ಪ್ರಕಾಶಮಯ ಚಿತ್ರಗಳ ವಿಶಿಷ್ಟ ಕೋಶವನ್ನು ಹೊರತಂದಿದೆ. ಈ ಚಿತ್ರಪಟ ಸಂಪೂರ್ಣವಾಗಿ ರಾಮಾಯಣ ದರ್ಶನದ ದರ್ಪಣ. ರಾಮಾಯಣದ ಎಂಟು ಕಾಂಡಗಳ ಎಲ್ಲಾ ಪ್ರಮುಖ ಸನ್ನಿವೇಶ ಘಟನೆ ಹಾಗೂ ಸಂಭವಿಸಿದ ಪ್ರಕರಣಗಳ ಸಾರವನ್ನು ಹಿಡಿಯಾಗಿ ಚಿತ್ತಾಕರ್ಷಕ ಹೊತ್ತಿಗೆಯಲ್ಲಿ ಮುದ್ರಣಗೊಳ್ಳಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಸದುಪಯೋಗದೊಂದಿಗೆ, ರಾಮಾಯಣದ ದೀರ್ಘ ಓದಿಗೆ ಹಿರಿದರ್ಥವನ್ನು ಚಿತ್ರಗಳು ಕಿರಿದರ್ಥದಲ್ಲಿ ಸ್ಮರಿಸುತ್ತದೆ. ಭಾವ, ಭಾವನೆ, ಅಭಿವ್ಯಕ್ತಿ, ವರ್ಣಸಂಯೋಜನೆ ಹಾಗೂ ಚಿತ್ರಕಲೆಯ ಎಲ್ಲಾ ತತ್ವಗಳನ್ನು ಆಧರಿಸಿ, ಹಿರಿಯ ವಿದ್ವಾಂಸರಾದ ನಾಡೋಜ ಜಿ. ವೆಂಕಟಸುಬ್ಬಯ್ಯನವರ ಮಾರ್ಗದರ್ಶನದಲ್ಲಿ ಪ್ರಕಟಗೊಂಡಿದೆ. ಖ್ಯಾತ ವಿದ್ವಾಂಸರಾದ ಡಾ. ವನಿತ ರಾಮಸ್ವಾಮಿಯವರು ಈ ಸಂಪುಟದ ಸಂಪಾದಕರಾಗಿ ಶ್ರಮಿಸಿದ್ದಾರೆ ಎಂದು ಮಂಡಳಿಯ ಪರವಾಗಿ ಕಾರ್ಯದರ್ಶಿ ಎಸ್.ಕೆ. ಗೋಪಾಲಕೃಷ್ಣ ತಿಳಿಸಿದ್ದಾರೆ.

Tags: BENGALURUKannada NewsProfessor G VenkatasubbaiahRamayanaSampoorna Ramayanaಪ್ರೊ. ಜಿ. ವೆಂಕಟಸುಬ್ಬಯ್ಯಬೆಂಗಳೂರುರಾಮಾಯಣಶ್ರೀ ಜಯರಾಮ ಸೇವಾ ಮಂಡಳಿಸಂಪೂರ್ಣ ರಾಮಾಯಣ ದರ್ಶನ
Share238Tweet123Send
Previous Post

ವೈರಲ್ ಫಿವರ್’ಗೆ ಕಾರಣಗಳೇನು? ಹೀಗಿರಲಿ ಮುನ್ನೆಚ್ಚರಿಕಾ ಕ್ರಮಗಳು

Next Post

ಮೈಸೂರು: ಗುರುರಾಜ ಪೋಶೆಟ್ಟಿಹಳ್ಳಿ ಸೇರಿ ಹಲವು ಸಾಧಕರಿಗೆ ವಾಸುದೇವ ಮಹಾರಾಜ್ ಸ್ಮಾರಕ ಪ್ರಶಸ್ತಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೈಸೂರು: ಗುರುರಾಜ ಪೋಶೆಟ್ಟಿಹಳ್ಳಿ ಸೇರಿ ಹಲವು ಸಾಧಕರಿಗೆ ವಾಸುದೇವ ಮಹಾರಾಜ್ ಸ್ಮಾರಕ ಪ್ರಶಸ್ತಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ರಾಜಕೀಯ ಸ್ವಾರ್ಥಕ್ಕಾಗಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಚರ್ಚೆಗೆ ಕಿಮ್ಮನೆ ರತ್ನಾಕರ್ ಪಂಥಾಹ್ವಾನ

ರಾಜಕೀಯ ಸ್ವಾರ್ಥಕ್ಕಾಗಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಚರ್ಚೆಗೆ ಕಿಮ್ಮನೆ ರತ್ನಾಕರ್ ಪಂಥಾಹ್ವಾನ

April 21, 2026
ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ

ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ

April 21, 2026
ಪಾರ್ವತಮ್ಮ ಬಡಾವಣೆಗೆ ಶಾಸಕ ಚನ್ನಬಸಪ್ಪ ಭೇಟಿ | ಯುಜಿಡಿ, ರಸ್ತೆ ಸಮಸ್ಯೆ ಪರಿಹಾರಕ್ಕೆ ಸೂಚನೆ

ಪಾರ್ವತಮ್ಮ ಬಡಾವಣೆಗೆ ಶಾಸಕ ಚನ್ನಬಸಪ್ಪ ಭೇಟಿ | ಯುಜಿಡಿ, ರಸ್ತೆ ಸಮಸ್ಯೆ ಪರಿಹಾರಕ್ಕೆ ಸೂಚನೆ

April 21, 2026
ಇಂಡಿಯನ್ ರೇಸಿಂಗ್ ಲೀಗ್’ನಲ್ಲಿ ಮೂರನೇ ಸ್ಥಾನ ಪಡೆದ ಕಿಚ್ಚ ಸುದೀಪ್ ತಂಡ!

ಇಂಡಿಯನ್ ರೇಸಿಂಗ್ ಲೀಗ್’ನಲ್ಲಿ ಮೂರನೇ ಸ್ಥಾನ ಪಡೆದ ಕಿಚ್ಚ ಸುದೀಪ್ ತಂಡ!

April 21, 2026
ಭಾರತೀಯ ಸನಾತನ ಧರ್ಮವನ್ನು ರಕ್ಷಿಸಿದವರು ಆದಿ ಶಂಕರಾಚಾರ್ಯರು: ಸುರೇಶ್ ಋಗ್ವೇದಿ

ಭಾರತೀಯ ಸನಾತನ ಧರ್ಮವನ್ನು ರಕ್ಷಿಸಿದವರು ಆದಿ ಶಂಕರಾಚಾರ್ಯರು: ಸುರೇಶ್ ಋಗ್ವೇದಿ

April 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL