No Result
View All Result
ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?
English Articles

SpiceJet Flights to Shivamogga Suspended After IndiGo Exit | What’s the Reason?

by ಕಲ್ಪ ನ್ಯೂಸ್
June 6, 2026
0

Kalpa Media House  |  Shivamogga | Following the suspension of IndiGo flight services, SpiceJet has also cancelled its operations to...

Read moreDetails
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

India Dominates World Yogasana Championship 2026, Wins 5 Golds on Opening Day

June 6, 2026
INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

June 5, 2026
From the Village Tracks to International Triumphs: The Inspiring Saga of Geetha A. Shetty

From the Village Tracks to International Triumphs: The Inspiring Saga of Geetha A. Shetty

June 5, 2026
ಭದ್ರಾವತಿ | ಹೃದಯಾಘಾತದಿಂದ 23 ವರ್ಷದ ಯುವತಿ ಸಾವು! ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

Young Woman Dies of Cardiac Arrest; Parents Give New Life Through Organ Donation

June 3, 2026
  • Advertise With Us
  • Grievances
  • About Us
  • Contact Us
Saturday, June 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಪುಸ್ತಕ ಬರೆಯುವ ಮುನ್ನವೇ ದಿನಾಂಕ ನಿಗದಿಪಡಿಸುವ ಸಾಮರ್ಥ್ಯ ಹೊಂದಿದ್ದ ಲೇಖಕ ಬೆಳಗೆರೆ: ಪತ್ರಕರ್ತ ಶೃಂಗೇಶ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 21, 2020
in Small Bytes, ಶಿವಮೊಗ್ಗ
0
ಪುಸ್ತಕ ಬರೆಯುವ ಮುನ್ನವೇ ದಿನಾಂಕ ನಿಗದಿಪಡಿಸುವ ಸಾಮರ್ಥ್ಯ ಹೊಂದಿದ್ದ ಲೇಖಕ ಬೆಳಗೆರೆ: ಪತ್ರಕರ್ತ ಶೃಂಗೇಶ್
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ಒಂದು ಪುಸ್ತಕ ಬರೆಯುವ ಮುನ್ನವೇ ದಿನಾಂಕ ನಿಗದಿಪಡಿಸುತ್ತಿದ್ದ ಏಕಮಾತ್ರ ಲೇಖಕರೆಂದರೆ ಅದು ರವಿ ಬೆಳಗೆರೆ ಮಾತ್ರ ಎಂದು ಹಿರಿಯ ಪತ್ರಕರ್ತ ಶೃಂಗೇಶ್ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಅಗಲಿದ ದಿ.ರವಿ ಬೆಳಗೆರೆಯವರಿಗೆ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಲಿಟರರಿ ಕ್ಲಬ್ ವತಿಯಿಂದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಯಾವುದೇ ಕೆಲಸವನ್ನು ಮಾಡಿದರು ಶ್ರದ್ಧೆಯಿಂದ ಮಾಡುತ್ತಿದ್ದವರು ರವಿ ಬೆಳಗೆರೆ. ಎರಡು ಪುಸ್ತಕದ ಬಿಡುಗಡೆಗೆಂದು ಬೆಂಗಳೂರಿಗೆ ಹೋದಾಗ ಎರಡು ಪುಸ್ತಗಳು ಬಿಡುಗಡೆಗೆ ಸಿದ್ಧವಾಗಿದ್ದವು. ಇನ್ನು ಬಿಡುಗಡೆಗೆ 48 ಗಂಟೆ ಸಮಯ ಬಾಕಿ ಇದೆ ಎಂದು ಹೇಳಿದ ಅವರು ಅಮ್ಮ ಸಿಕ್ಕಿದಳು ಎಂಬ ಕಿರುಹೊತ್ತಿಗೆಯನ್ನು ಬರೆದು ಮುದ್ರಣ ಮಾಡಿಸಿ ಎರಡು ಪುಸ್ತಕರ ಜೊತೆ ಬಿಡುಗಡೆಗೊಳಿಸಿದರು ಎಂದು ನೆನಪಿಸಿಕೊಂಡರು.

ಲಂಕೇಶ್ ಪತ್ರಿಕೆಯ ಓದುಗರಾಗಿದ್ದವರು ಹಾಗೂ ಲಂಕೇಶ್ ಪತ್ರಿಕೆಯ ತಂಡದವರೊಂದಿಗೆ ಒಡನಾಟ ಇಟ್ಟುಕೊಂಡವರು ನಾವು. ಸತ್ಯಮೂರ್ತಿ, ಆನಂದರೊಟ್ಟಿಗೆ ರವಿ ಬೆಳಗೆರೆಯವರ ಬಳಿ ಹೋಗಿದ್ದು ಹಾಯ್ ಬೆಂಗಳೂರು ಪತ್ರಿಕೆಯ ಏಜೆನ್ಸಿ ಕೊಡಿ ಎಂದು. ಆದರೆ ಶಿವಮೊಗ್ಗ ವರದಿಗಾರನಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು. ಹಾಯ್ ಬೆಂಗಳೂರು ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಟೌನ್ ಹಾಲ್‌ನಲ್ಲಿ ನಡೆದಾಗ ಗೆಳೆಯರೊಂದಿಗೆ ಕಾರ್ಯದಲ್ಲಿ ಭಾಗವಹಿಸಿದ್ದೆವು. ವರದಿಗಾರನಾಗಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಕೇವಲ ವರದಿಗಾರನಾಗಿ ಮಾತ್ರವಲ್ಲ ಬೆಳಗೆರೆಯರೊಟ್ಟಿಗೆ ಇಡೀ ಕರ್ನಾಟಕವನ್ನು ಸುತ್ತಿದ್ದೇನೆ ಎಂದು ರವಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನೆದರು.

ರವಿ ಬೆಳಗೆರೆಯವರು ಇನ್ನಿಲ್ಲವೆಂದಾಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಗಳ ಚರ್ಚೆಗಳು ಮತ್ತು ಪ್ರತಿಕ್ರಿಯೆಗಳು ದೊಡ್ಡಮಟ್ಟದಲ್ಲಿ ನಡೆಯಿತು. ವರದಿಗಾರನಾಗಿ ಒಂದು ಪತ್ರಿಕೆಗೆ ವರದಿಗೆ ಸಿದ್ಧಪಡಿಸಬೇಕು, ಅ ಪತ್ರಿಕೆಯ ಓದುಗರು ಹೇಗೆಲ್ಲ ಇರುತ್ತಾರೆ, ಯಾವ ರೀತಿಯ ವಿಷಯಗಳು ವರದಿಯಾಗಬೇಕು, ವರದಿಗಾರನ ಬದ್ದತೆ ಎಷ್ಟಿರಬೇಕು ಎನ್ನುವುದನ್ನು ರವಿ ಬೆಳಗೆರೆಯವರು ಹೇಳಿಕೊಟ್ಟರು. ನಂತರದಲ್ಲಿ ಸ್ಥಳೀಯ ಪತ್ರಿಕೆ ಮಾಡಿದೆ. ಪ್ರಿಂಟಿಂಗ್ ಪ್ರೆಸ್ ಮಾಡಿದೆ, ಹೀಗೆ ಅನೇಕ ಕಡೆ ಬೆಳವಣಿಗೆ ಕಂಡಿದ್ದೇನೆ. ಆದರೆ ಮೂಲಭೂತವಾಗಿ ಎಲ್ಲವನ್ನು ಮಾಡುವ ಮೊದಲು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕಲಿತ ಅನುಭವವೇ ಬುನಾದಿ ಆಯಿತು ಎಂದರು.

ರವಿ ಬೆಳಗೆರೆಯವರು ಬರವಣಿಗೆಗೆ ಕುಳಿತರೆ ಅವರ ಬರಹ ಮುತ್ತಿನಂತಹ ಅಕ್ಷರಗಳಿಂದ ಕೂಡಿರುತ್ತಿತ್ತು. ನೂರು ಪುಟ ಬರೆದರೂ ಒಂದೇ ಒಂದು ಚಿತ್ತು-ಕಾಟು ಇಲ್ಲದೆ ಬರೆಯುತ್ತಿದ್ದರು. ಅಂದರೆ ಮಾನಸಿಕವಾಗಿ ಬರೆಯುವ ವಿಷಯದ ಕುರಿತು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿರುತ್ತಿದ್ದರು. ಒಂದು ಪುಸ್ತಕ ಬರೆಯುವುದಕ್ಕೆ ಕನ್ನಡ ಕಾದಂಬರಿಕಾರರಲ್ಲಿ ಎಸ್.ಎಲ್. ಬೈರಪ್ಪ ಮತ್ತು ರವಿ ಬೆಳಗೆರೆ ಮಾತ್ರ ಪೂರಕ ತಯಾರಿ ಮಾಡಿಕೊಳ್ಳುತ್ತಾರೆ ಅನಿಸುತ್ತದೆ. ಕ್ರೆûಂ ಸ್ಟೋರಿಗಳನ್ನು ವಿಸ್ಕೃತವಾಗಿ ಅಧ್ಯಯನ ನಡೆಸಲು ಎಫ್’ಐಆರ್’ಗಳನ್ನು ತರಿಸಿಕೊಂಡು ಸಂಬಂಧಪಟ್ಟ ಮಾಹಿತಿ ಕಲೆ ಹಾಕುತ್ತಿದ್ದರು ಎಂದರು.


ರವಿ ಬೆಳಗೆರೆಯವರ ಪತ್ರಿಕೆಯಲ್ಲಿ ಯಾವೊಂದು ಪುಟವೂ ಓದಲಿಕ್ಕೆ ಆಗುವುದಿಲ್ಲ ಎಂದು ಇರಲೇಯಿಲ್ಲ. ಪುಟ ತುಂಬಿಸಬೇಕು ಎಂದು ಕಸ ತುಂಬಿಟ್ಟು ಪತ್ರಿಕೆಯನ್ನು ಮಾರುಕಟ್ಟೆಗೆ ಬಿಡುತ್ತಿರಲಿಲ್ಲ. ಅವರು ಆರೋಗ್ಯದಿಂದ ಇರುವಷ್ಟು ದಿನ ಪ್ರತಿ ಪುಟದ ಒಂದೊಂದು ಅಕ್ಷರವನ್ನು ಗಮನಿಸಿ ಮುದ್ರಣಕ್ಕೆ ಕಳಿಸುತ್ತಿರುವಷ್ಟು ಬದ್ದತೆ ಅವರಲ್ಲಿತ್ತು. ಎಷ್ಟೇ ಆತ್ಮೀಯರಿರಲಿ ಬರೆದಿರುವ ಲೇಖನ ಓದುವಂತೆ ಇಲ್ಲವಾದರೆ ಯಾವುದೇ ಮುಲಾಜಿಲ್ಲದೇ ಕಸದ ಪುಟ್ಟಿ ಹಾಕಿಬಿಡುತ್ತಿದ್ದರು ಎಂದರು.

ಪತ್ರಿಕೆ ಮಾಡುವುದರಲ್ಲಿ, ಪುಸ್ತಕ ಬರೆಯುದರಲ್ಲಿ ಅವರು ಒಂದು ಶ್ರದ್ಧೆ ಇಟ್ಟು ಕೊಂಡಿರುತ್ತಿದ್ದರು. ಶ್ರದ್ದೆಯ ಜೊತೆಗೆ ಅಳವಾದ ಅಧ್ಯಯನ ನಡೆಸುತ್ತಿದ್ದರೇ ಹೊರತು ಕಾಟಾಚಾರಕ್ಕೆ ಎಂದಿಗೂ ಲೇಖನವನ್ನು ಪ್ರಕಟಿಸುತ್ತಿರಲಿಲ್ಲ. ಅಲ್ಲದೇ, ಯಾವ ವರದಿಗಾರನಿಂದ ಏನೆಲ್ಲ ಕೆಲಸ ಮಾಡಿಸಬಹುದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆಯಾ ವಾರಕ್ಕೆ ಏನೆಲ್ಲ ವಿಷಯ ಸಂಗ್ರಣೆ ಮಾಡಬೇಕು ಎಂಬುದು ಅವರ ಮನಸ್ಸಿನಲ್ಲಿ ಮೊದಲೇ ಮುದ್ರಣವಾಗಿರುತ್ತಿತ್ತು. ಯಾವ ಪತ್ರಿಕೆಯ ವರದಿಗಾರನಿಗೂ ಸ್ವತಂತ್ರವಾಗಿ ವರದಿ ಮಾಡುವ ಕಾಲ ಹೋಗಿ ತುಂಬ ವರ್ಷಗಳು ಕಳೆದಿವೆ. ಅ ಪತ್ರಿಕೆಯ ಮಾಲಿಕ ವರ್ಗ ಹೇಳಿದ್ದನ್ನು ಮಾತ್ರ ವರದಿ ಮಾಡಬೇಕಿದೆ. ಆದರೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಎಂದೂ ವರದಿಗಾರರು ಸಿದ್ಧಪಡಿಸಿದ ಸಮಂಜಸ ವರದಿಗಳನ್ನು ಪ್ರಟಿಸದೇ ಬಿಟ್ಟಿಲ್ಲ ಅಂದರೆ ಅಷ್ಟು ಸ್ವಾತಂತ್ರ್ಯ ಸಹೋದ್ಯೋಗಿಗಳಿಗೆ ನೀಡಿದ್ದರು ಎಂದು ನೆನೆದರು.

ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಆರ್.ಪಿ. ಪೈ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಹಿಪೋಕ್ರೆಟಿಕ್ ಒಥ್ ಜೊತೆಗೆ ಸಾಹಿತ್ಯದ ಕುರಿತ ವಿಷಯಗಳನ್ನು ವೈದ್ಯರಾದವರು ತಿಳಿದುಕೊಂಡಿರಬೇಕು. ಕೋವಿಡ್ ನಂತಹ ಸಮಯದಲ್ಲಿ ವೈದ್ಯರು ಮನುಷ್ಯರಾದ ಕಾರಣ ಅವರನ್ನು ರಕ್ಷಿಸಿಕೊಂಡು ರೋಗಿಯ ಕಾಯಿಲೆ ನಿವಾರಣೆ ಮಾಡುವುದು ನಿಜಕ್ಕೂ ವೈದ್ಯಲೋಕಕ್ಕೆ ತುಂಬ ಕಷ್ಟದ ಪರಿಸ್ಥಿತಿಯಾಗಿತ್ತು. ವೈದ್ಯರು ಸಹ ಸಾಹಿತ್ಯದ ಅಭಿರುಚಿ ಹೊಂದಿದರೇ ವೈದ್ಯಕೀಯ ವೈಪರೀತ್ಯಗಳನ್ನು ನಿಭಾಯಿಸಲು ಸಹಕಾರಿಯಾಗುತ್ತದೆ. ರವಿ ಬೆಳಗೆರೆಯವರ ಸಾಹಿತ್ಯವು ವೈದ್ಯಕೀಯ ವಿಚಾರಗಳಲ್ಲಿ ಅನೇಕ ಉಪಾಯ ಕೌಶಲ್ಯಗಳನ್ನು ಒಳಗೊಂಡಿದೆ ಎಂದರು.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿನಯಾ ಶ್ರೀನಿವಾಸ್, ಪ್ರಾಂಶುಪಾಲರಾದ ಡಾ.ಎಸ್.ಎಂ. ಕಟ್ಟಿ, ಡಾ.ಸಿದ್ಧಲಿಂಗಪ್ಪ, ಡಾ.ಸುಜಿತ್ ಹಾಲಪ್ಪ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaLocal NewsMalnad NewsRavi BelagereShimogaShivamoggaShivamogga Newssubbaiah medical college shimogaಮಲೆನಾಡು ಸುದ್ಧಿರವಿ ಬೆಳಗೆರೆಶಿವಮೊಗ್ಗಶಿವಮೊಗ್ಗ ನ್ಯೂಸ್ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ
Share197Tweet123Send
Previous Post

ಎರಡು ಲಾರಿಗಳ ನಡುವೆ ಭೀಕರ ಅಪಘಾತ: ಇಬ್ಬರು ಚಾಲಕರು ಸ್ಥಳದಲ್ಲೇ ಸಾವು

Next Post

ಜ.2-3ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಿಣಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜ.2-3ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಿಣಿ

ಜ.2-3ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಿಣಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ದುರ್ಗಾಂಬ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ | ತಪ್ಪಿದ ಭಾರೀ ಅನಾಹುತ

ದುರ್ಗಾಂಬ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ | ತಪ್ಪಿದ ಭಾರೀ ಅನಾಹುತ

June 6, 2026
ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

SpiceJet Flights to Shivamogga Suspended After IndiGo Exit | What’s the Reason?

June 6, 2026
ಪಶ್ಚಿಮ ಬಂಗಾಳದಲ್ಲಿ 200ರ ಗಡಿ ಮುಟ್ಟಿ ಇತಿಹಾಸ ನಿರ್ಮಿಸಿದ ಬಿಜೆಪಿ | ಟಿಎಂಸಿ ಧೂಳಿಪಟ

ತಮಿಳುನಾಡು ರಾಜಕೀಯದಲ್ಲಿ ತಲ್ಲಣ – ಬಿಜೆಪಿ ನಾಯಕರ ಸರಣಿ ರಾಜೀನಾಮೆ

June 6, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಬಂಗಾರದ ನಾಣ್ಯ ಮೋಸ: ಅರ್ಧ ಕೆಜಿ ಬಂಗಾರ ಹೆಸರಿನಲ್ಲಿ ₹10 ಲಕ್ಷ ದೋಚಿದ ಗ್ಯಾಂಗ್!

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

India Dominates World Yogasana Championship 2026, Wins 5 Golds on Opening Day

June 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL