Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಏಕಾದಶ ಸಂವತ್ಸರೋತ್ಸವ ಸಂಭ್ರಮ | ಮೈಸೂರಿನ ಶ್ರೀ ವೆಂಕಟಾಚಲ ಧಾಮದಲ್ಲಿಂದು ವೈಭವ

ಉಡುಪಿ ಭಂಡಾರಕೇರಿ ಶಾಖಾ ಮಠದಲ್ಲಿ ವಿಶೇಷ ಕಾರ್ಯಕ್ರಮ

May 20, 2022
in Special Articles, ಮೈಸೂರು
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಕಲ್ಯಾಣಕಾರಕನಾದ ಶ್ರೀ ವೆಂಕಟೇಶನ ಸನ್ನಿಧಾನ ಅರಮನೆ ನಗರಿಯಲ್ಲಿ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ವಿಶೇಷ ಮಂದಿರವಾಗಿದೆ. ಅದುವೇ ಶ್ರೀ ವೆಂಕಟಾಚಲ ಧಾಮ. ಚಾಮರಾಜ ಜೋಡಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದ ಸನಿಹವೇ ಇರುವ ಈ ದೇಗುಲದಲ್ಲಿ ಅಭಯಪ್ರದನಾದ ವೆಂಕಟೇಶ ಸ್ವಾಮಿ ಸಾವಿರಾರು ಭಕ್ತರ ಆರಾಧ್ಯ ದೈವನಾಗಿದ್ದಾನೆ. ಮಾತ್ರವಲ್ಲ, ಕಲಿಯುಗದಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಕ್ಷೇತ್ರವೂ ಇಲ್ಲೇ ಇರುವುದು ಬಹಳ ವಿಶೇಷವಾಗಿದೆ.

ಏಕಾದಶ ಸಂವತ್ಸರೋತ್ಸವ
ಶ್ರೀ ವೆಂಕಟಾಚಲಧಾಮದ 11ನೇ ವಾರ್ಷಿಕೋತ್ಸವ ಅಂಗವಾಗಿ ಏಕಾದಶ ಸಂವತ್ಸರೋತ್ಸವ ಆಯೋಜಿಸಲಾಗಿದೆ. ಮೇ 21ರ ಬೆಳಗ್ಗೆ 7ಕ್ಕೆ ಪಂಚಾಶತ್ ಕಲಶಾರಾಧನೆ, ಅಧಿವಾಸ ಹೋಮ, ಬೆಳಗ್ಗೆ 10ಕ್ಕೆ ಶ್ರೀವಿದ್ಯೇಶತೀರ್ಥರಿಂದ ಬ್ರಹ್ಮ ಕಲಶಾಭಿಷೇಕ ಮತ್ತು ಸಂಸ್ಥಾನ ಪೂಜೆ, ಸಂಜೆ 7ಕ್ಕೆ ರಂಗಪೂಜೆ, ರಥೋತ್ಸವ ಸಂಪನ್ನಗೊಳ್ಳಲಿದೆ.22ರಂದು ಸಂಜೆ 4ಕ್ಕೆ ಪ್ರಧಾನ ಅರ್ಚಕ ರಾಘವೇಂದ್ರರ ನೇತೃತ್ವದಲ್ಲಕಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ. ಎರಡು ದಿನದ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.

ಶ್ರೀ ವೆಂಕಟೇಶ ದೇವರ ವಿಗ್ರಹ ಇಲ್ಲಿ ನೆಲೆ ನಿಂತಿದ್ದು, ರಾಯರ ವೃಂದಾವನ ಪ್ರತಿಷ್ಠಾಪನೆ ಗೊಂಡದ್ದರ ಹಿಂದೆ ಭಕ್ತರ ಅನನ್ಯವಾದ ಪ್ರಾರ್ಥನೆಯೇ ಕಾರಣವಾಗಿದೆ.

ಭಕ್ತರಿಗೆ ದೇವರ ಅನುಗ್ರಹವಾಗಬೇಕು. ನಂಬಿ ಬಂದ ಜನರಿಗೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ನೆರವು ನೀಡಬೇಕು. ನಿತ್ಯ ನೈವೇದ್ಯ ಮಾಡಿದ ಅನ್ನದಾನವಾಗಬೇಕು ಎಂಬುದು ಶ್ರೀವೆಂಕಟಾಚಲ ಧಾಮದ ಮುಖ್ಯ ಉದ್ದೇಶ. ದಶಕಗಳ ಕಾಲ ಇವೆಲ್ಲವೂ ಈಡೇರಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸೇವೆಯನ್ನು ಒದಗಿಸಿಕೊಡಲು ಈ ಶ್ರದ್ಧಾಕೇಂದ್ರದ ಅಣಿಯಾಗಿದೆ.
ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ
ಭಂಡಾರಕೇರಿ ಮಠ

ಉಡುಪಿ ಮೂಲದ ಶ್ರೀ ಭಂಡಾರಕೇರಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥರು ಆಗಾಗ್ಗೆ ಮೈಸೂರಿನ ಭಕ್ತರಾದ ಆಡಿಟರ್ ರವೀಂದ್ರ ಎಂಬವರ ಆಗಮಿಸಿ ಪಾದಪೂಜೆ ಸ್ವೀಕರಿಸಿ, ತೊಟ್ಟಿಲು ಪೂಜೆ ಮಾಡುತ್ತಿದ್ದರು. ಹೀಗೆ ಒಮ್ಮೆ ಭಕ್ತರಾದ ಆಡಿಟರ್ ಜಿ. ರವೀಂದ್ರ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭ ಮೈಸೂರಿನಲ್ಲಿ ಮಠದ ಶಾಖೆ ಆರಂಭಿಸುವ ಪ್ರಸ್ತಾಪ ಮಾಡಿದರು. ಇಲ್ಲಿ ಶ್ರೀ ಭಾಗವತ ಆಶ್ರಮ ಹೆಸರಿನ ಧಾರ್ಮಿಕ ನೆಲೆ ಸ್ಥಾಪಿಸಬೇಕು. ಆ ಮೂಲಕ ಸಾವಿರಾರು ಭಕ್ತರಿಗೆ ಅನುವಾಗುವಂತೆ ವಿವಿಧ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ರೂಪಿಸಬೇಕು ಎಂಬುದು ಶ್ರೀಗಳ ಆಶಯವಾಗಿತ್ತು.

Also Read: ಮಳೆಯಿಂದಾಗಿ ಕುಸಿತದ ಭೀತಿಯಲ್ಲಿ ಮನೆಗಳು: ಹೊಳೆಹೊನ್ನೂರಿನ 6 ಕುಟುಂಬಗಳು ಸ್ಥಳಾಂತರ

ಚಾಮರಾಜ ಜೋಡಿ ರಸ್ತೆಯಲ್ಲಿ ಮೈಸೂರು ಆಸ್ಥಾನದ ಅಗ್ರ ಪಂಕ್ತಿಯ ಸಂಗೀತ ವಿದ್ವಾಂಸರಾಗಿದ್ದ ಪದ್ಮನಾಭರಾಯರ ಹಳೆಯ ಮನೆ ಮತ್ತು ನಿವೇಶನ ಖರೀದಿಗೆ ಲಭ್ಯವಿರುವ ಸುಳಿವು ಸಿಕ್ಕಿತು. ಮಠದ ಭಕ್ತರಾದ ಆಡಿಟರ್ ರವೀಂದ್ರ, ಪದಕಿ, ರಾಘವೇಂದ್ರ ಮತ್ತಿತರರು ಮಠಕ್ಕೆ ಈ ಜಾಗ ಖರೀದಿ ಮಾಡುವಲ್ಲಿ ಮುಂದಾಳತ್ವ ವಹಿಸಿದರು. ಹೀಗೆ ಇಲ್ಲಿ ಭಾಗವತಾಶ್ರಮ ಪ್ರತಿಷ್ಠಾನದ ಚಟುವಟಿಕೆಗಳು 2009ರಲ್ಲಿ ಚಾಲನೆ ಪಡೆದವು. ಹವನ, ಹೋಮ, ಭಜನೆ, ಪಾರಾಯಣ, ಹಬ್ಬ-ಹರಿದಿನಗಳ ಆಚರಣೆ ಮೊದಲುಗೊಂಡವು. ಇದಕ್ಕಾಗಿ ಹತ್ತಾರು ಜನ ಸ್ವಯಂಸೇವಕರ ತಂಡ ಸೇವಾಕಾರ್ಯಕ್ಕೆ ಮುಂದಾಯಿತು.

ಶ್ರೀವಿದ್ಯೇಶತೀರ್ಥರು

ನವೀಕೃತ ಕಟ್ಟಡ
ಹೆಂಚಿನಮನೆಯ ಹಳೆಯ ಕಟ್ಟಡದ ಭಾಗವತಾಶ್ರಮವನ್ನು ಸುಸಜ್ಜಿತ ಮತ್ತು ಆಧುನೀಕರಣಗೊಳಿಸಬೇಕು ಎಂದು ಭಕ್ತರು ಸಂಕಲ್ಪ ಮಾಡಿದರು. ಮಧುಸೂದನ ಪದಕಿ ಅಧ್ಯಕ್ಷತೆಯಲ್ಲಿ ಕಟ್ಟಡ ನಿರ್ಮಾಣ ಸಮಿತಿ ರಚನೆಗೊಂಡಿತು.

ಆಶ್ರಮದಲ್ಲಿ ವೆಂಕಟೇಶ ದೇವರ ಪ್ರತಿಮೆ ಸ್ಥಾಪನೆ ಆಗಬೇಕು, ಅದರೊಂದಿಗೆ ರಾಯರ ಮೃತ್ತಿಕಾ ಬೃಂದಾವನವೂ ಇದ್ದರೆ ಸನ್ನಿಧಾನ ಮತ್ತಷ್ಟು ಜಾಗೃತ ಕ್ಷೇತ್ರವಾಗುತ್ತದೆ ಎಂದು 10 ಜನರ ಸಮಿತಿ ನಿರ್ಧರಿಸಿತು. ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥರು ಮತ್ತು ಹಿರಿಯ ವೇದ ಪಂಡಿತರಾದ ಶ್ರೀ ಕೃಷ್ಣಕುಮಾರ್ ಆಚಾರ್ ಮಾರ್ಗದರ್ಶನದಲ್ಲಿ ನಿರ್ಮಾಣ ಕಾಮಗಾರಿ ಚಾಲನೆಗೊಂಡಿತು.
2011ರ ಮೇ 24 ರಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥರ ಸಾನ್ನಿಧ್ಯದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಮತ್ತು ಶ್ರೀ ವಿಶ್ವ ಪ್ರಸನ್ನ ತೀರ್ಥರು ಭಾಗವತಾಶ್ರಮದ ನೂತನ ಕಟ್ಟಡ ‘ಶ್ರೀವೆಂಕಟಾಚಲ ಧಾಮ’ ವನ್ನು ಲೋಕಾರ್ಪಣೆಗೊಳಿಸಿದರು. ಅಂದಿನಿಂದ ಹತ್ತು ಹಲವು ಧಾರ್ಮಿಕ ಸೇವಾ ಕಾರ್ಯಗಳು ಇಲ್ಲಿ ಸಾಂಗವಾಗಿ ನೆರವೇರುತ್ತಿದೆ. 3 ಅಂತಸ್ತಿನ ಸುಸಜ್ಜಿತ ಕಟ್ಟಡದಲ್ಲಿ ಯಾಗಶಾಲೆ, ಪಾಕಶಾಲೆ, ಸಭೆ, ಸಮಾರಂಭಗಳ ವೇದಿಕೆಯೂ ಇರುವುದು ಗಮನೀಯ.

ಪ್ರತಿಮೆಯಲ್ಲಿ ಒಂದು ವಿಶೇಷತೆ
ವೆಂಕಟಾಚಲ ಧಾಮದಲ್ಲಿರುವ ಶ್ರೀ ವೆಂಕಟೇಶ ದೇವರ ಪ್ರತಿಮೆಗೆಂದು ವಿಶೇಷತೆ ಇದೆ. ಶ್ರೀ ಪದ್ಮ ಪುರಾಣೋಕ್ತ ಶೈಲಿಯಲ್ಲಿ ದೇವರ ಪ್ರತಿಮೆ ಕೆತ್ತನೆಯಾಗಬೇಕು ಎಂದು ಶ್ರೀ ವಿದ್ಯೇಶತೀರ್ಥರು ಆದೇಶಿಸಿದ್ದನ್ನು ಶಿಲ್ಪಿಗಳು ಕಾರ್ಯರೂಪಕ್ಕೆ ತಂದಿದ್ದಾರೆ. ಹಾಗಾಗಿ ಇಲ್ಲಿ ವೆಂಕಟೇಶನು ಶ್ರೀನಿವಾಸನಾಗಿ ಸಕಲ ಸಿರಿ ಸಂಪತ್ತುಗಳನ್ನೂ ಭಕ್ತರಿಗೆ ಪ್ರದಾನ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಿಗೆ ಅಚಲವಾಗಿದೆ. ಹಾಗಾಗಿಯೇ ಇದು ‘ವೆಂಕಟಾಚಲ ಧಾಮ’ ಎಂಬ ಹೆಸರಿಗೆ ಅನ್ವರ್ಥವಾಗಿದೆ.Also Read: ಸೋಮಿನಕೊಪ್ಪ ಕೆರೆಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುದುರೆಗಳ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ಅವತಾರವಾಗಲು ಶ್ರೀ ವೆಂಕಟೇಶನೇ ಕಾರಣ. ರಾಯರ ಆರಾಧ್ಯ ದೈವವೂ ವೆಂಕಟೇಶನೇ. ಇವೆರಡೂ ಇಲ್ಲಿ ಮಿಳಿತಗೊಂಡಿರುವುದು ಸನ್ನಿಧಾನದ ಮಹತ್ವವನ್ನು ಸಾವಿರ ಪಟ್ಟು ಹೆಚ್ಚಿಸಿದೆ ಎಂದು ಭಕ್ತಿಪೂರ್ವಕವಾಗಿ ಹೇಳುತ್ತಾರೆ ಶ್ರೀ ವಿದ್ಯೇಶ ತೀರ್ಥರು.
ವಿವಿಧ ಸೇವೆಗಳು
ಧಾಮದಲ್ಲಿ ಪ್ರತಿನಿತ್ಯ ವೆಂಕಟೇಶದೇವರಿಗೆ ಮತ್ತು ರಾಯರ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಸೇವೆ, ತಂತ್ರಸಾರೋಕ್ತ ಪೂಜೆ, ಮಹಾ ನೈವೇದ್ಯ, ಪ್ರತಿ ಗುರುವಾರ ಸಂಜೆ ರಥೋತ್ಸವ, ದೀಪೋತ್ಸವ, ರಂಗಪೂಜೆ ನಡೆಯುತ್ತದೆ. ಯುಗಾದಿ, ಶ್ರೀರಾಮ ನವಮಿ, ದೀಪಾವಳಿ, ವಿಜಯದಶಮಿ, ಗಣೇಶ ಚತುರ್ಥಿ ಸೇರಿದಂತೆ ಹಿಂದು ಪಂಚಾಂಗದ ಎಲ್ಲ ಹಬ್ಬ- ಹರಿದಿನಗಳನ್ನೂ ಆಚರಿಸಲಾಗತ್ತದೆ. ವೈಕುಂಠ ಏಕಾದಶಿ ಬಹಳ ವಿಶೇಷ. ಅಂದು ಸ್ವರ್ಗದ ಬಾಗಿಲು ಮತ್ತು ಉಯ್ಯಾಲೆಗಳನ್ನು ನಿರ್ಮಿಸಿ ದೇವರಿಗೆ ವೈಭವೋಪೇತ ಅಲಂಕಾರ, ಶ್ರೀನಿವಾಸ ಕಲ್ಯಾಣಗಳನ್ನು ನೆರವೇರಿಸಲಾಗುತ್ತದೆ. 15ಕ್ಕೂ ಹೆಚ್ಚು ಭಜನಾಮಂಡಳಿಗಳು ಬೆಳಗಿನಿಂದ ರಾತ್ರಿವರೆಗೆ ಅಖಂಡ ಭಜನಾ ಸೇವೆ ಸಮರ್ಪಿಸುತ್ತಾರೆ.

ವಿವಿಧ ದೋಶ ಪರಿಹಾರಾರ್ಥವಾಗಿ ಮಂಡಲಪೂಜೆ, ನಾಗಾರಾಧನೆ, ವಿವಿಧ ರೀತಿಯ ಹೋಮ, ಹವನ, ಉಪನಯನ ಇತ್ಯಾದಿ ಕಾರ್ಯಕ್ರಮಗಳನ್ನೂ ನೆರವೇರಿಸಲು ಭಕ್ತರಿಗೆ ಇಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಪಿತೃಕಾರ್ಯಗಳಿಗೂ ಸಕಲ ರೀತಿಯ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ವಿವರಿಸುತ್ತಾರೆ ಧಾಮದ ವ್ಯವಸ್ಥಾಪಕ (ರಾಘಣ್ಣ).

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Bhanadarakeri MuttKannada News WebsiteLatest News KannadamysoreUdupiಉಡುಪಿಏಕಾದಶ ಸಂವತ್ಸರೋತ್ಸವಭಂಡಾರಕೇರಿ ಮಠಮೈಸೂರುವೆಂಕಟೇಶ ಸ್ವಾಮಿಶ್ರೀ ರಾಘವೇಂದ್ರ ಸ್ವಾಮಿಶ್ರೀ ವಿದ್ಯೇಶತೀರ್ಥರುಶ್ರೀ ವೆಂಕಟಾಚಲ ಧಾಮ
Previous Post

ಮಳೆಯಿಂದಾಗಿ ಕುಸಿತದ ಭೀತಿಯಲ್ಲಿ ಮನೆಗಳು: ಹೊಳೆಹೊನ್ನೂರಿನ 6 ಕುಟುಂಬಗಳು ಸ್ಥಳಾಂತರ

Next Post

ಸೊರಬದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೊರಬದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025

A Divine Journey to South India on Bharat Gaurav Train Here is the full details of tour

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!