ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಮ್ಮನ್ನು ತುಳಿಯಲು ಯಾವ ರಾಕ್ಷಸನಿಂದಲೂ ಸಾಧ್ಯವಿಲ್ಲ. ಇಂದು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತನಾಗಿ ಬಂದಿದ್ದು, ಹಿಂದುತ್ವ, ಧರ್ಮ, ಸಂಸ್ಕೃತಿ ಕಾಪಾಡಲು ಸದಾ ಸಿದ್ಧ. ತಮ್ಮ ಹೋರಾಟವನ್ನು ಅಜೀವಪರ್ಯಂತ ಮುಂದುವರೆಸುತ್ತೇನೆ ಎಂದು ಶಾಸಕ ಈಶ್ವರಪ್ಪ MLA Eshwarappa ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್, ಕೇಸರಿ ಧ್ವಜ ಅಥವಾ ಹಿಂದೂ ಕೊಲೆ ಯಾವುದೇ ವಿಚಾರವಿರಬಹುದು ಯಾರೋ ಬಂದು ತೊಡರುಗಾಲು ಹಾಕಲು ಪ್ರಯತ್ನಿಸಿದರೆ ಮಣಿಯುದಿಲ್ಲ. ತಮ್ಮ ಕೊನೆಯುಸಿರುವವರೆಗೂ ಇದಕ್ಕಾಗಿ ಹೋರಾಡುತ್ತೇನೆ ಎಂದರು.
ಆರೋಪ ಬಂದ ಸಂದರ್ಭದಲ್ಲಿ ಪಕ್ಷದ ಮುಖಂಡರು ಧೈರ್ಯ ತುಂಬಿದರು. ಹಾಗೂ ಎಲ್ಲಾ ಸಾಧು ಸಂತರು ತಾವು ಆದಷ್ಟು ಬೇಗ ಆರೋಪದಿಂದ ಮುಕ್ತರಾಗುತ್ತೀರಿ ಎಂದು ಆಶೀರ್ವದಿಸಿದ್ದರು. ತಮ್ಮ ಮೇಲೆ ಆರೋಪ ಬಂದ ಕಾರಣ ರಾಷ್ಟ್ರೀಯ ಮುಖಂಡರು, ಕಾರ್ಯಕರ್ತರು ಮುಜುಗರ ಅನುಭವಿಸುತ್ತಿದ್ದರು. ಇಂದು ತಾನು ಆರೋಪ ಮುಕ್ತನಾಗಿರುವುದು ಅವರೆಲ್ಲರ ಮುಜುಗರಕ್ಕೂ ಮುಕ್ತಿ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
Also read: ಬಾಲಕಿಯ ಪ್ರಾಣಕ್ಕೆ ಕುತ್ತು ತಂದ ಚಾಕ್ಲೆಟ್ ಕವರ್!
ನಿರಾಧಾರವಾಗಿ ಬಂದ ಆರೋಪದಿಂದ ನೋವಾಗಿತ್ತು. ಆದರೆ ಇಂದು ಅದರಿಂದ ಮುಕ್ತವಾಗಿರುವುದು ಸಂತಂಸ ಉಂಟು ಮಾಡಿದೆ. ರಾಜಕೀಯದಲ್ಲಿ ಇದು ಸಾಮಾನ್ಯವಾಗಿದ್ದು, ಇಂತಹ ಸಂದರ್ಭಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಆರೋಪ ಮುಕ್ತವಾಗಿರುವುದು ತಮಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ತೃಪ್ತಿ ತಂದಿದೆ ಎಂದರು.
ಮತ್ತೆ ಸಚಿವ ಸ್ಥಾನ ಪಡೆಯುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ, ರಾಷ್ಟ್ರೀಯ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post