ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಹೊಸದುರ್ಗ ಪಟ್ಟಣದಲ್ಲಿ ಅಪಘಾತಕ್ಕೀಡಾಗಿ ಸಕ್ರೆಬೈಲ್ ನ ಅರಣ್ಯ ರಕ್ಷಕ ಸಂತೋಷ್ (33) ಸಾವಿಗೀಡಾಗಿದ್ದಾರೆ.
ಸಂತೋಷ್ ಅವರು ತಮ್ಮ ಸ್ನೇಹಿತರಾದ ಗಾಜನೂರಿನ ಸುದೀಪ್ ಮತ್ತು ಪ್ರಿಯಾಂಕಾ ಅವರ ಜೊತೆ ತೆರಳುವಾಗ ಖಾಸಗಿ ಬಸ್ ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡಿದ್ದ ಸಂತೋಷ್ ಗೆ ಹೊಸದುರ್ದಗಲ್ಲಿ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣಕ್ಕೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸಂತೋಷ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ನಾಗರಾಳ ಗ್ರಾಮದವರಾಗಿದ್ದು. ಎರಡು ವರ್ಷದಿಂದ ಸಕ್ರೆಬೈಲ್ ವನ್ಯಜೀವಿ ವಿಭಾಗದ ಕೀಗಡಿ ಭಾಗದಲ್ಲಿ ರಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ನಾಲ್ಕು ತಿಂಗಳ ಹಿಂದೆಯಷ್ಟೆ ಇವರ ವಿವಾಹವಾಗಿತ್ತು. ಜನಸ್ನೇಹಿ ಅಧಿಕಾರಿಯಾಗಿ ಜನಪ್ರಿಯರಾಗಿದ್ದರು.
Also read: ಹುಬ್ಬಳ್ಳಿ-ಧಾರವಾಡ ನಗರವು ಇತರ ನಗರಗಳಿಗೆ ಮಾದರಿಯಾಗಲಿ: ಕುನಾಲ್ ಕುಮಾರ್
ಗಾಯಾಳುಗಳಾದ ಸುದೀಪ್ ಮತ್ತು ಪ್ರಿಯಾಂಕಾ ಸಣ್ಣಪುಟ್ಟ ಗಾಯಕ್ಕೊಳಗಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post