ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಕಳೆದ ಎರಡು ದಶಕಗಳಿಂದ ಕಾಣುತ್ತಿದ್ದೇವೆ. ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ಭಾರತೀಯ ರಿರ್ಸವ್ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ಆರಂಭದಿಂದಲ್ಲೂ ನೀಡುತ್ತಾ ಬಂದಿದೆ. ಮುಂದುವರೆದ ದೇಶಗಳ ಬಡ್ಡಿ ದರಗಳಿಗೆ ಹೋಲಿಸಿದರೇ ಕೊಂಚ ಹೆಚ್ಚೇ ಬಡ್ಡಿ ಹಾಕುತ್ತಾರೆ ಎನ್ನುವ ಅಪವಾದವು ಇದೆ. ಸಾರ್ವಜನಿಕ ವಲಯದ ಬ್ಯಾಂಕ್’ಗಳಾಗಲಿ ಖಾಸಗಿ ವಲಯದ ಬ್ಯಾಂಕ್’ಗಳಾಗಲಿ ಭಾರತದಂತಹ ಗ್ರಾಮೀಣ ಜನಗಳನ್ನು ವಹಿವಾಟಿನಲ್ಲಿ ತೊಡಗಿಸುವುದರಲ್ಲಿ ಸೋತಿವೆ.
ಕೃಷಿ ಪ್ರಧಾನ ಕುಟುಂಬಗಳಲ್ಲಿನ ಶಿಕ್ಷಣದ ಕೊರೆತೆ ಹಾಗೂ ಬ್ಯಾಂಕ್ ನೌಕರರ ಮುಂಚುಮರೆಯ ನಿಲುವುಗಳು ಬ್ಯಾಂಕಿಂಗ್ ವಲಯದ ಪ್ರಗತಿಗೆ ಮಾರಕವಾಗಿದೆ ಎಂದು ಹೇಳಬಹುದು. ಒಬ್ಬ ಕೃಷಿ ಭೂಮಿ ಹೊಂದಿರುವ ವ್ಯಕ್ತಿಯು ಕೆಸಿಸಿ ಖಾತೆಯಲ್ಲಿ ಸಾಲ ಪಡೆದಿರುತ್ತಾನೆ. ಆತ ಇನ್ಯಾವುದೋ ಉದ್ದೇಶದಿಂದ ಬಂಗಾರವನ್ನು ಅಡಮಾನವಾಗಿಟ್ಟು ಜೊತೆಗೆ ಆರ್’ಟಿಸಿಯನ್ನು ಸಲ್ಲಿಸಿರುತ್ತಾನೆ. ಹಸು ಖರೀದಿಗೆ ಅದೇ ವ್ಯಕ್ತಿ ಸಾಲವನ್ನು ನೀಡುತ್ತಾರೆ.
ಇಷ್ಟೆಲ್ಲ ರೀತಿಯ ಸಾಲವನ್ನು ನೀಡುವ ಬ್ಯಾಂಕಿನ ನೌಕರರು ಸಾಲ ಪಡೆದ ವ್ಯಕ್ತಿಗೆ ಸಾಲ ಮರುಪಾವತಿಯ ದಿನಾಂಕ ತಿಂಗಳು ಕಂತಿನ ವಿವರ ಹಾಗೂ ಸರ್ಕಾರಗಳಿಂದ ನಿಗದಿ ಸಮಯಕ್ಕೆ ಬಡ್ಡಿ ಪಾವತಿಸಿದಕ್ಕೆ ನೀಡುವ ಸಬ್ಸಿಡಿಗಳ ಮಾಹಿತಿಯನ್ನು ಯಾವ ಬ್ಯಾಂಕಿನವರು ನೀಡುವುದಿಲ್ಲ. ಸಾಲ ಪಡೆಯುವ ವ್ಯಕ್ತಿಗೆ ತನ್ನದೇ ಆದ ಸಂಕಷ್ಟ ನಿವಾರಣೆಗೆಂದು ಬಂದ ಕಾರಣ ಮರುಪಾವತಿ ಮಾಹಿತಿಯನ್ನು ಸ್ವತಃ ಸ್ವಯಂ ಪ್ರೇರಿತರಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಅಥವಾ ಬ್ಯಾಂಕಿನಲ್ಲಿರುವ ಸೌಲಭ್ಯಗಳನ್ನು ಗ್ರಾಹಕರಿಗೆ ತಿಳಿಸುವ ಗೋಜಿಗೆ ಹೋಗುವುದಿಲ್ಲ.
ಕೃಷಿ ಕುಟುಂಬದಿಂದ ಬಂದ ಗ್ರಾಹಕರನ್ನು ಹೇಗೆಲ್ಲ ಯಾಮಾರಿಸುತ್ತಾರೆ ಎಂದರೆ, ಜರೂರಾಗಿ ಮಕ್ಕಳ ಮದುವೆಗಾಗಿ ಗೋಲ್ಡ್ ಲೋನ್’ನಲ್ಲಿಟ್ಟ ಬಂಗಾರವನ್ನು ಬಿಡಿಸಬೇಕೆಂದು ಬಂದ ಗ್ರಾಹಕನಿಗೆ ಉಳಿದ ಲೋನ್’ಗಳಾದ ಕೆಸಿಸಿ, ಟ್ಯಾಕ್ಟರ್ ಸಾಲಗಳ ಬಡ್ಡಿಯನ್ನು ರೈತನಿಗೆ ಹೇಳದೇ ಒಟ್ಟು ಮೊತ್ತ ಇಷ್ಟಾಗಿದೆ ಎನ್ನುವ ಬ್ಯಾಂಕ್ ನೌಕರನಿಗೆ ಇವರುಗಳಿಂದ ನನಗೆ ಸಂಬಳ, ಅನ್ನ ತಿಂದ ಮನೆಗೆ ಕನ್ನ ಹಾಕಬಾರದೆಂಬ ಕನಿಷ್ಟ ನಿಯತ್ತು ಕೂಡ ಇಲ್ಲವಾಗಿಸಿಕೊಂಡಿರುತ್ತಾರೆ.
ಹಣ ಕಟ್ಟಿದ ರೈತನಿಗೆ ಯಾವುದೋ ರೂಪದಲ್ಲಿ ವಿಷಯ ತಲುಪಿದಾಗ ಬಾಯಿಬಿಟ್ಟು ಇಂತಹದಕ್ಕೆ ಇಷ್ಟಿಷ್ಟು ಬಡ್ಡಿಯಾಗಿತ್ತು, ಕಟ್ಟಿಸಿಕೊಳ್ಳುತ್ತಿವೆ ಎಂದರೆ ಹೇಗಾದ್ರೂ ಮಾಡಿ ಕಟ್ಟುತ್ತಿದೆ. ಈ ರೀತಿ ಮಾಡಬಾರದಿತ್ತು. ಇನ್ನು ಈ ಬ್ಯಾಂಕ್ ಅವರ ಸಹವಾಸ ಸಾಕೆಂಬ ನಿರ್ಧಾರಕ್ಕೆ ಬಂದುಬಿಡುತ್ತಾನೆ. ಅದೇ ಗ್ರಾಹಕ ತಾನು ಪಡೆದ ಸಾಲವನ್ನೆಲ್ಲ ಒಂದೇ ಸಾರಿ ಕಟ್ಟಿದರೇ ಬ್ಯಾಂಕ್’ನವರು ಡಿಸ್ಕೌಂಟ್ ಕೊಡುತ್ತಾರೆಂದು ಘೋಷಿಸಿದನ್ನು ಕೇಳಿ ಬರುತ್ತಾನೆ. ಅದೇ ಬ್ಯಾಂಕ್ ಮ್ಯಾನೇಜರ್ ಹೇಳ್ತಾನೆ ಕಳೆದ ತಿಂಗಳು ಗೋಲ್ಡ್ ಲೋನ್ ಕ್ಲೋಸ್ ಮಾಡುವಾಗ ಉಳಿದ ಲೋನ್ ರಿನೀವಲ್ ಆಗಿದೆ, ಇವಾಗ ಏನು ಮಾಡಲು ಸಾಧ್ಯವಿಲ್ಲ.
ಬ್ಯಾಂಕ್ ನೌಕರ ಮಾಡಿದ ಈ ಯಡವಟ್ಟಿನಿಂದ ಒನ್ ಟೈಮ್ ಸೆಟಲ್ಮೆಂಟ್ ಅಡಿ ಶೇ.35ರಷ್ಟು ಮಾತ್ರ ಕಟ್ಟಿದ್ದರೇ ಸಾಲ ಮುಕ್ತವಾಗುವ ಅವಕಾಶವಿತ್ತು. ಹೇಯ್ ವ್ಯವಸಾಯಗಾರ ನೀ ಸಾಯ ನಿಮ್ಮಪ್ಪ ಸಾಯ ಮನೆ ಮಂದಿ ಎಲ್ಲಾ ಸಾಯ. ಆದರೆ ಬ್ಯಾಂಕಿನವರಿಂದ ಋಣಮುಕ್ತರಾಗದಿರಿ ಎನ್ನುವ ಹಿಡನ್ ಅಜೆಂಡಾದೊಂದಿಗೆ ರೈತಾಪಿ ಜನಗಳನ್ನು ಶೋಷಿಸುತ್ತಿದ್ದಾರೆ.
ಈ ಮೇಲೆ ವ್ಯಕ್ತಪಡಿಸಿದ ಸನ್ನಿವೇಶ ನೈಜವಾಗಿ ನಡೆದ ಘಟನೆಯಾಗಿದ್ದು. ಬ್ಯಾಂಕ್’ಗಳು ಹೇಗೆ ರೈತಾಪಿ ವರ್ಗವನ್ನು ಅಡಿಯಾಳಾಗಿ ಮಾಡಿಕೊಂಡಿವೆ ಎನ್ನುವುದಕ್ಕೆ ತಾಜಾ ಉದಾಹರಣೆ. ಒಂದು ಕಡೆ ಮಳೆ ಅತಿಯಾಗಿ ಬೆಳೆ ನಾಶ ಇನ್ನೊಂದು ಕಡೆ ಬರಗಾಲದಿಂದ ದೀಘಾವಧಿ ಬೆಳೆ ನಾಶ. ಅಲ್ಲೊಂದ್ ಸ್ವಲ್ಪ, ಇಲ್ಲೊಂದ್ ಸ್ವಲ್ಪ ಬಂದ ಬೆಳೆಗೆ ನಿಗದಿತ ದರವಿಲ್ಲದೇ ಕಂಗಾಲಾಗಿದ್ದಲ್ಲದೇ ಬ್ಯಾಂಕಿನವರಿಗೆ ಸಾಯುವವರೆಗೂ ಗುಮಲಾಗಿರಿ ಮಾಡಿಕೊಂಡೇ ಇರುವ ಪರಿಸ್ಥಿತಿ.
ಬ್ಯಾಂಕಿನವರಿಗೆ ನಿಗದಿತ ಬಡ್ಡಿ ದರವಿದೆ, ಔಷಧಿ ಅಂಗಡಿಯಲ್ಲಿ ನಿಗದಿತ ದರವಿದೆ, ಬೇರೆ ಯಾವುದೇ ಸರಕು ಸಾಮಾಗ್ರಿಗಳಿಗೆ ನಿಗದಿತ ದರ ಇರುತ್ತದೆ. ರೈತ ಬೆಳೆದ ಬೆಲೆ ನಿಗದಿತ ಬೆಲೆ ಇಲ್ಲವೆ ಇಲ್ಲ. ಇನ್ನು ಮುಗಿಲು ನೋಡುತ್ತಾ ಆಚ್ಛೇ ದಿನ್ ಕಾಯುತ್ತಲೇ ಇದೆ ಭಾರತ ರೈತಾಪಿ ವರ್ಗ.
Get in Touch With Us info@kalpa.news Whatsapp: 9481252093
Discussion about this post