No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Saturday, May 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ನಮ್ಮತನವನ್ನು ಅರ್ಥಮಾಡಿಕೊಂಡಾಗ ಸಾಧನೆ ಸಾಧ್ಯ | ಯುವ ಕಲಾವಿದೆ ಡಾ. ಸ್ಫೂರ್ತಿ ಐತಾಳ್ ಅಭಿಮತ

ರಂಗಪ್ರವೇಶಕ್ಕೆ ಅಣಿಯಾಗಿರುವ ಯುವ ಕಲಾವಿದೆ ಅಂತರಂಗದ ಆಶಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 8, 2025
in ಬೆಂಗಳೂರು ನಗರ
0
ನಮ್ಮತನವನ್ನು ಅರ್ಥಮಾಡಿಕೊಂಡಾಗ ಸಾಧನೆ ಸಾಧ್ಯ | ಯುವ ಕಲಾವಿದೆ ಡಾ. ಸ್ಫೂರ್ತಿ ಐತಾಳ್ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ : ಶಿವಮೊಗ್ಗ ರಾಂ  |

ನಾವು ಎಲ್ಲಿದ್ದೇವೆ, ಹೇಗಿದ್ದೇವೆ, ಯಾರಿಗಾಗಿ ಯಾವ ಕೆಲಸವನ್ನು ಮಾಡುತ್ತಾ ಇದ್ದೇವೆ, ನಮ್ಮ ಚೌಕಟ್ಟುಗಳು ಏನು, ಕುಟುಂಬಕ್ಕೆ ಸಮಾಜಕ್ಕೆ ಮತ್ತು ನಮ್ಮ ಪರಿಸರಕ್ಕೆ ನಾವು ಏನು ಕೊಡುಗೆ ನೀಡುತ್ತ ಇದ್ದೇವೆ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಅರಿತುಕೊಂಡು ನಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿದಾಗ ಮಾತ್ರ ನಮ್ಮನ್ನು ನಾವು ಗೌರವಿಸಿಕೊಂಡಂತೆ…. ಹೀಗೆ ಹೇಳುತ್ತಾರೆ ಬೆಂಗಳೂರಿನ ಆಯುರ್ವೇದ ತಜ್ಞೆ ಮತ್ತು ಭರತನಾಟ್ಯ ಕ್ಷೇತ್ರದ ಯುವ ಕಲಾವಿದೆ ಸ್ಫೂರ್ತಿ ಐತಾಳ್.

ಬದುಕಿನ ನಿರ್ವಹಣೆಗೆ ಮಾಡುವ ವೃತ್ತಿ ಏನೇ ಇರಬಹುದು, ಆದರೆ ಮನುಷ್ಯನಿಗೆ ಒಂದು ಕಲೆ ಬೇಕೇ ಬೇಕು. ಕಲೆಯನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಹಿರಿಯರನ್ನು ಗೌರವಿಸುವ, ನಮ್ಮ ಸಮ ವಯಸ್ಸಿನವರನ್ನು ಪ್ರೀತಿ- ವಿಶ್ವಾಸದಿಂದ ಕಾಣುವ ಹಾಗೂ ಕಿರಿಯರನ್ನು ಬೆನ್ನು ತಟ್ಟಿ ಬೆಳೆಸುವ ಗುಣ ನಮ್ಮದಾಗಬೇಕು. ಯಾವುದೇ ಕಲೆಯನ್ನು ಮತ್ತು ವಿದ್ಯೆಯನ್ನು ಕರಗತ ಮಾಡಿಕೊಳ್ಳಲು ಹತ್ತಾರು ಬಾರಿ ಅದನ್ನು ಅಭ್ಯಾಸ ಮಾಡಬೇಕು. ಗುರು ಹೇಳಿದ್ದನ್ನು ಶ್ರದ್ಧೆಯಿಂದ ಕೇಳಿ ಅನುಸರಿಸಬೇಕು. ಆಗ ಮಾತ್ರ ನಾವು ಏನನ್ನಾದರೂ ಕಲಿಯಲು, ಸಾಧನೆ ಮಾಡಲು ಸಾಧ್ಯ ಎಂಬುದು ಸ್ಫೂರ್ತಿ ಅವರ ಅಭಿಮತ.

ಬೇಕರಿ ಉದ್ಯಮಿ ಮಂಜುನಾಥ ಐತಾಳ್ ಮತ್ತು ಶಿಕ್ಷಕಿ ಶಶಿಕಲಾ ಅವರ ಪುತ್ರಿಯಾದ ಸ್ಫೂರ್ತಿ ಐತಾಳ್‌ಅವರು ಈಗಾಗಲೇ ಭರತನಾಟ್ಯದ ಜೂನಿಯರ್, ಸೀನಿಯರ್ ಸೇರಿದಂತೆ ವಿದ್ವತ್ ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ಸಂಯೋಗ – ಕನಕ್ಟಿಂಗ್ ಆರ್ಟ್ಸ್ ಸಂಸ್ಥೆಯ ‘ವಿದುಷಿ ಲತಾ ಲಕ್ಷೀಶ ಅವರನ್ನು ಗುರುವಾಗಿ ಪಡೆದು ಧನ್ಯತೆ ಹೊಂದಿರುವೆ ಎನ್ನುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಆಯುರ್ವೇದ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಸ್ಫೂರ್ತಿ ಐತಾಳ್‌ಗೆ ನೃತ್ಯ ರಂಗದ ಬಗ್ಗೆ ವಿಶೇಷ ಪೂಜ್ಯತೆ ಇರುವುದು ಗಮನಾರ್ಹ ಸಂಗತಿ.
ವೃತ್ತಿ- ಪ್ರವೃತ್ತಿ ಸಮನ್ವಯ
6ನೇ ತರಗತಿಯಿಂದಲೂ ವಿದುಷಿ ಲತಾ ಅವರಲ್ಲಿ ಭರತನಾಟ್ಯವನ್ನು ಕಲಿತು ನಾಡಿನ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಲಾ ಪ್ರದರ್ಶನವನ್ನು ಮಾಡಿರುವ ಈಕೆ ಅದಮ್ಯ ಭರವಸೆ ಮತ್ತು ಉತ್ಸಾಹಗಳಿಂದ ಕಲೆ ಮತ್ತು ವೈದ್ಯಕೀಯ ರಂಗವನ್ನು ಸಮನ್ವಯಗೊಳಿಸಿಕೊಂಡು ಸಾಗುತ್ತಿದ್ದಾರೆ.

ನನ್ನ ತಾಯಿಗೆ ಸಂಗೀತ ಎಂದರೆ ಬಲು ಇಷ್ಟ. ಅವರು ಅನೇಕ ಜನರಿಗೆ ಭಜನೆಯನ್ನು ಕೂಡ ಹೇಳಿಕೊಡುತ್ತಾರೆ. ನನ್ನ ಅಜ್ಜ ಯಕ್ಷಗಾನ ಮಾಡಿಸುತ್ತಾ ಇದ್ದರು. ಅಜ್ಜನ ಮನೆಗೆ ಹೋದಾಗಲೆಲ್ಲ ಯಕ್ಷಗಾನ ನೋಡುವುದು ನನ್ನ ಬಿಡುವಿನ ವೇಳೆ ಹವ್ಯಾಸವಾಗಿತ್ತು . ಆದರೆ ನನ್ನ ಆಸಕ್ತಿ ನೃತ್ಯದ ಕಡೆಗೆ ಮೊದಲಿಂದಲೂ ಇತ್ತು. ಹಾಗಾಗಿ ಭರತನಾಟ್ಯ ರಂಗವನ್ನು ಆಯ್ಕೆ ಮಾಡಿಕೊಂಡೆ ಎಂಬುದು ಸ್ಫೂರ್ತಿ ಅನಿಸಿಕೆ.

ಆಯುರ್ವೇದ ವೈದ್ಯಕೀಯ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅಧ್ಯಯನ ಮಾಡುವ ವಿಷಯಗಳೇ ಸಾಕಷ್ಟು ಇದ್ದವು. ಅವುಗಳ ನಡುವೆಯೂ ಮನಕ್ಕೆ ಒಂದಿಷ್ಟು ಹೊಸತನ ಮತ್ತು ಸ್ಫೂರ್ತಿ ಬೇಕು ಎಂಬ ಕಾರಣಕ್ಕಾಗಿ ಭರತನಾಟ್ಯವನ್ನು ಬಿಡಲಿಲ್ಲ.

ಗುರುವಿನ ಕಾರುಣ್ಯ ದೊಡ್ಡದು
ನನಗೆ ಎಷ್ಟೇ ಸಮಯದ ಒತ್ತಡವಿದ್ದರೂ ನನ್ನ ಗುರು ಲತಾ ಲಕ್ಷ್ಮೀಶ ಅವರು ತಮ್ಮ ಅಮೂಲ್ಯವಾದ ಸಮಯವನ್ನು ನನಗೆ ಧಾರೆ ಎರೆದು, ನನ್ನ ಊಟ, ತಿಂಡಿ ಇತ್ಯಾದಿಗಳನ್ನು ತಾವೇ ನಿರ್ವಹಿಸಿಕೊಂಡು ‘ ನೀನು ಎಲ್ಲವನ್ನೂ ಮಾಡುತ್ತೀಯಾ … ಎಂಬ ಭರವಸೆಯನ್ನು ತುಂಬಿ ನನ್ನನ್ನು ಈ ಮಟ್ಟಕ್ಕೆ ತಂದಿದ್ದಾರೆ. ಗುರುವಿನ ಕಾರುಣ್ಯ ದೊಡ್ಡದು. ಹಾಗಾಗಿ ನನಗೆ ಸಮಯ ಸಿಕ್ಕಾಗಲೆಲ್ಲವೂ ಕಲೆ ಬಗ್ಗೆ ಆಲೋಚಿಸುತ್ತೇನೆ. ನೃತ್ಯವನ್ನು ಅಭ್ಯಾಸ ಮಾಡುತ್ತೇನೆ ಎನ್ನುತ್ತಾರೆ ಈ ಯುವ ಕಲಾವಿದೆ.ಮಕ್ಕಳಿಗೆ ಬೋಧನೆ ಮಾಡಬೇಕು
ನಾವು ಹಳೆಯ ತಲೆಮಾರಿನ ಕಲೆ,ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಅದನ್ನು ಕಲಿಯಬೇಕು ಮತ್ತು ಹೊಸ ಪೀಳಿಗೆಗೆ ಕಳಿಸಬೇಕು. ಈ ನಿಟ್ಟಿನಲ್ಲಿ ನಾನು ವೈದ್ಯಳಾಗುವ ಜೊತೆಗೆ ಒಬ್ಬ ನೃತ್ಯ ಶಿಕ್ಷಕಿಯೂ ಆಗ ಬಯಸುತ್ತೇನೆ. ನೂರಾರು ಕಿರಿಯ ಮಕ್ಕಳಿಗೆ ಕಲೆಯನ್ನು ಬೋಧಿಸುವುದು ನನ್ನ ಬದುಕಿನ ಅತ್ಯಂತ ದೊಡ್ಡ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಂಗ ಪ್ರವೇಶ ನನಗೆ ಇನ್ನಷ್ಟು ಹೊಸ ದ್ವಾರಗಳನ್ನು ತೆರೆಯಲಿದೆ ಎಂಬ ಆಶಾವಾದವಿದೆ ಎನ್ನುತ್ತಾರೆ ಸ್ಫೂರ್ತಿ.

ಅಮ್ಮನ ಅಂತರಂಗ
ವೈದ್ಯ ವೃತ್ತಿಗೆ ಬದ್ಧರಾಗಿದ್ದು ಆ ನಿಟ್ಟಿನಲ್ಲಿ ಅನೇಕ ಜೀವಗಳನ್ನು ಉಳಿಸಬೇಕು- ಇದು ಕರ್ತವ್ಯ. ಇನ್ನೊಂದೆಡೆ ಕಲೆಯನ್ನು ಪ್ರೀತಿಸುವ ನಿಟ್ಟಿನಲ್ಲಿ ಹಲವು ಜೀವಿಗಳನ್ನು ಅರಳಿಸಬೇಕು- ಇದು ಗುರುವಿಗೆ ಮತ್ತು ಕಲೆಗೆ ತೋರುವ ಗೌರವ. ಇವೆರಡನ್ನೂ ನನ್ನ ಮಗಳು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ ಎಂಬ ಸಂತೋಷ ಮತ್ತು ಸಂಭ್ರಮ ನನಗೆ ಇದೆ ಎನ್ನುತ್ತಾರೆ ಸ್ಫೂರ್ತಿ ಅವರ ತಾಯಿ ಶಶಿಕಲಾ.

ದೇವರ ಕೃಪೆ, ಗುರುವಿನ ಅನುಗ್ರಹ ಮತ್ತು ವಿದ್ಯಾರ್ಥಿಯಲ್ಲಿ ಕಲಿಕಾಸಕ್ತಿ – ಇವು ಮೂರು ಒಂದೆಡೆ ಸಮನ್ವಯವಾದರೆ ನಾವು ಸಮಾಜದಲ್ಲಿ ನಮ್ಮ ಗುರುತನ್ನು ಮೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನನ್ನ ಪುತ್ರಿ ಒಂದಷ್ಟು ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದಾಳೆ. ಆಕೆಗೆ ನಿರಂತರವಾಗಿ ದೈವ ಕೃಪೆ ಒಲಿದು ಬರಲಿ ಎಂದು ಹಾರೈಸುತ್ತೇನೆ ಎನ್ನುತ್ತಾರೆ ಶಶಿಕಲಾ ಅವರು.

9ರಂದು ಕಾರ್ಯಕ್ರಮ
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ನ. 9 ರಂದು ಸಂಜೆ 5ಕ್ಕೆ ಸಂಯೋಗ – ಕನಕ್ಟಿಂಗ್ ಆರ್ಟ್ಸ್ ಸಂಸ್ಥೆಯು ‘ಶಾಂಭವಿ’ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಯುವ ಕಲಾವಿದೆ ಡಾ. ಸ್ಫೂರ್ತಿ ಐತಾಳ್ ಅವರು ರಂಗಪ್ರವೇಶ ಮಾಡಲಿದ್ದಾರೆ. ಗುರು ವಿದುಷಿ ಲತಾ ಲಕ್ಷ್ಮೀಶ ಅವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಲೋಕೇಶ್ ಚೌಧರಿ, ಸಿಇಒ ಡಾ. ವರ್ಷಾ ಮತ್ತು ಹಿರಿಯ ವಿದ್ವಾಂಸ ರಮೇಶ್ ಚಡಗ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: BekaryBENGALURUBharatanatyamConnecting Arts InstituteIndian DanceKannada News WebsiteLatest News Kannadaಕನಕ್ಟಿಂಗ್ ಆರ್ಟ್ಸ್ ಸಂಸ್ಥೆನೃತ್ಯಬೆಂಗಳೂರುಬೇಕರಿಭರತನಾಟ್ಯವಿದ್ವತ್ ಪರೀಕ್ಷೆ
Share196Tweet123Send
Previous Post

ವಂದೇ ಮಾತರಂ 150 ವರ್ಷ ಸ್ಮರಣಾರ್ಥ | ಮೈಸೂರು ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಆಚರಣೆ

Next Post

ಕಾನೂನು ಕಲ್ಪ | ಹಿಂದೂ ವಿವಾಹದ ನೋಂದಣಿ ಕಡ್ಡಾಯವೇ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕಾನೂನು ಕಲ್ಪ | ಹಿಂದೂ ವಿವಾಹದ ನೋಂದಣಿ ಕಡ್ಡಾಯವೇ?

ಕಾನೂನು ಕಲ್ಪ | ಹಿಂದೂ ವಿವಾಹದ ನೋಂದಣಿ ಕಡ್ಡಾಯವೇ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಹಾಸನಾಂಬ ಉತ್ಸವದಲ್ಲಿ ವಿಐಪಿ ಸಂಪ್ರದಾಯಕ್ಕೆ ಬ್ರೇಕ್? ಸಚಿವ ಕೃಷ್ಣಬೈರೇಗೌಡ ಮಹತ್ವದ ಹೇಳಿಕೆ

ಬಿರುಗಾಳಿ ಮಳೆ ಹಾನಿ ಪ್ರದೇಶಕ್ಕೆ ಸಚಿವ ಕೃಷ್ಣಬೈರೇಗೌಡ ಭೇಟಿ: ಪರಿಶೀಲನೆ

May 2, 2026
ಅರ್ಥಗರ್ಭಿತ ಮಹಿಳಾ ದಿನಾಚರಣೆ: ಎಸ್‌ಪಿ ನಿಖಿಲ್ ಸಂತಸ

ಮನೆ ಕಳ್ಳತನ ಪ್ರಕರಣ ತಡೆಗೆ `ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಜಾರಿಗೆ: ಎಸ್‌ಪಿ ನಿಖಿಲ್

May 1, 2026
ಬಳ್ಳಾರಿ | ಸಂಜೀವರಾಯ ದೇವಸ್ಥಾನದಲ್ಲಿ ವಿದುಷಿ ದಿವ್ಯಾ ಗಿರಿಧರ್ ಅದ್ಭುತ ಗಾಯನ

ಬಳ್ಳಾರಿ | ಸಂಜೀವರಾಯ ದೇವಸ್ಥಾನದಲ್ಲಿ ವಿದುಷಿ ದಿವ್ಯಾ ಗಿರಿಧರ್ ಅದ್ಭುತ ಗಾಯನ

May 1, 2026
ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ | ಸೂಕ್ತ ಪರಿಹಾರ ನೀಡಲು ಡಾ. ಧನಂಜಯ ಸರ್ಜಿ ಮನವಿ

ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ | ಸೂಕ್ತ ಪರಿಹಾರ ನೀಡಲು ಡಾ. ಧನಂಜಯ ಸರ್ಜಿ ಮನವಿ

May 1, 2026
ಸೊರಬ | ಸಂಭ್ರಮದ ಶಿಖರಕ್ಕೆ ತಲುಪಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ | ನೂತನ ರಥದಲ್ಲಿ ಭವ್ಯ ಮೆರವಣಿಗೆ

ಸೊರಬ | ಸಂಭ್ರಮದ ಶಿಖರಕ್ಕೆ ತಲುಪಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ | ನೂತನ ರಥದಲ್ಲಿ ಭವ್ಯ ಮೆರವಣಿಗೆ

May 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL