ಕಲ್ಪ ಮೀಡಿಯಾ ಹೌಸ್ | ಆಂಧ್ರಪ್ರದೇಶ |
ಆಂಧ್ರಪ್ರದೇಶದ #Andrapradesh ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು #Chandrababu Naidu ಅವರು ಅಮರಾವತಿ ರಾಜ್ಯದ ಏಕೈಕ ರಾಜಧಾನಿಯಾಗಲಿದೆ ಎಂದು ಘೋಷಿಸಿದ್ದಾರೆ.
ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಎನ್ಡಿಎ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ನಾಯ್ಡು ಇಂದು ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಶಾಸಕರ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸರ್ಕಾರದಲ್ಲಿ ಮೂರು ರಾಜಧಾನಿಗಳ ನೆಪದಲ್ಲಿ ಆಟ ನಡೆಯುವುದಿಲ್ಲ. ನಮ್ಮ ರಾಜಧಾನಿ ಅಮರಾವತಿ. ಅಮರಾವತಿಯೇ #Amaravathi ರಾಜಧಾನಿ ಎಂದು ಪ್ರತಿಪಾದಿಸಿದರು.
Also read: ಶಿವಮೊಗ್ಗ | ಅರಿಯಿರಿ ಚಿನ್ನದ ಪೇಟೆ-ಆಡಿರಿ ಬೆಳ್ಳಿ ಬೇಟೆ | ಭವಿಷ್ಯವನ್ನು ಭದ್ರ ಪಡಿಸುವುದು ಹೇಗೆ ಗೊತ್ತಾ?
2014 ಮತ್ತು 2019ರ ನಡುವೆ ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಕೊಂಡಾಗ ಅಮರಾವತಿಯನ್ನು ರಾಜಧಾನಿಯಾಗಿ ಘೋಷಿಸುವ ಕಲ್ಪನೆ ಹೊಂದಿದ್ದರು. ಆದರೆ, 2019ರಲ್ಲಿ ವೈ.ಎಸ್. ಜಗನ್ ಮೋಹನ್ ರೆಡ್ಡಿ #Jaganmohan Reddy ನೇತೃತ್ವದ ವೈಎಸ್ಆರ್ಸಿಪಿ #YSRCP ಭರ್ಜರಿ ಜಯ ಸಾಧಿಸಿದಾಗ ನಾಯ್ಡು ಅವರ ಈ ಕನಸಿನ ಕಲ್ಪನೆಗೆ ಹಿನ್ನಡೆಯಾಗಿತ್ತು.
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸುವ ಮೂಲಕ ಮತ್ತೆ ಟಿಡಿಪಿ #TDP ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೂ ಮುನ್ನವೇ ಚಂದ್ರಬಾಬು ನಾಯ್ಡು ಈ ಮಹತ್ವದ ಘೋಷಣೆಗೆ ಮುಂದಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post