ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಮೂಲಭೂತ ಸಮಸ್ಯೆಗಳು ಎದುರಾದಲ್ಲಿ ಸಂಬಂಧಿಸಿದವರನ್ನು ಸಂಪರ್ಕಿಸಲು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಉತ್ತಮ ಮತ್ತು ತುರ್ತು ಸೇವೆ ಕಲ್ಪಿಸುವ ದೃಷ್ಠಿಯಿಂದ ಮೂಲಭೂತ ಸೌಕರ್ಯಗಳಾದ ಬೀದಿ ದೀಪ ನಿರ್ವಹಣೆ, ನಗರ ಸ್ವಚ್ಛತಾ ಕಾರ್ಯ ನೀರು ಸರಬರಾಜು, ಕಟ್ಟಡ ಪರವಾನಿಗೆ, ವ್ಯಾಪಾರ ಪರವಾನಿಗೆ, ಕಂದಾಯ ನಿಗಧಿ ಇತ್ಯಾದಿ ಸೇವೆಗಳಲ್ಲಿ ವಿಳಂಬ ಮತ್ತು ವ್ಯತ್ಯಯವಾದಾಗ ಈ ವಿಭಾಗದ ಮುಖ್ಯಸ್ಥರನ್ನು ಅಥವಾ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ದಾಖಲಿಸುವ ಸಲುವಾಗಿ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಗೂ ಸಹಾಯವಾಣಿ ಸಂಖ್ಯೆ 18004257677 ನ್ನು ಪ್ರಕಟಿಸಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ದೂರುಗಳ ತ್ವರಿತ ನಿವಾರಣೆ ಮಾಡುಕೊಳ್ಳುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ಸಮಸ್ಯೆಗೆ ಯಾವ ಸಂಖ್ಯೆ?
ಪಾಲಿಕೆ ಆಡಳಿತ ಹಾಗೂ ಆಶ್ರಯ ವಿಭಾಗಕ್ಕೆ ಸಂಬಂಧಿಸಿದ ದೂರು ನೀಡಲು ಉಪ ಆಯುಕ್ತರು ಪ್ರಮೋದ್ ಎಚ್.ಪಿ. – 9538534685/ 6361468740, ಪಾಲಿಕೆ ವ್ಯಾಪ್ತಿಯ ವಿವಿಧ ಕಾಮಗಾರಿಗಳು, ಕಟ್ಟಡ ಪರವಾನಿಗೆ ಹಾಗೂ ಒಳಚರಂಡಿ ನಿರ್ವಹಣೆಗೆ ಸಂಬಂಧಿಸಿದಂತೆ ದೂರು ನೀಡಲು ಪಿ.ಆರ್.ಓ- ತುಷಾರ್ ಬಿ. ಹೊಸೂರ್, ಡೊಂಕಪ್ಪ ಇಇ, ಹರೀಶ್-ಇಇ -9449651855/9448146358, ಬೀದಿ ದೀಪ ನಿರ್ವಹಣೆಗೆ ಸಂಬಂಧಿಸಿದ ದೂರು ನೀಡಲು ವಿದ್ಯುತ್ ಇಇ ಶ್ರೀಧರ್-8762288680, ನೀರು ಸರಬರಾಜು ಸಂಬಂಧಿಸಿದ ದೂರು ನೀಡಲು ರಮೇಶ್-ಇಇ (ಕೆಯುಡಬ್ಲ್ಯೂಎಸ್ ಡಿಬಿ)-9480689673 /9480813132, ನಗರ ಸ್ವಚ್ಛತೆಗೆ ಸಂಬಂಧಿಸಿದ ದೂರು ನೀಡಲು ಪಾಲಿಕೆ ಆರೋಗ್ಯಾಧಿಕಾರಿ ಡಾ. ಮದಕರಿನಾಯಕ ಎಚ್.ಬಿ.-7676135028, ವ್ಯಾಪಾರ ಪರವಾನಿಗೆ ಹಾಗೂ ಜನನ-ಮರಣ ಪ್ರಮಾಣ ಪತ್ರದ ಕುರಿತು ವಿಚಾರಿಸಲು ಅಮೋಘ್ ಎಸ್.ಕವಲಗಿ -9449324245, ಬೀಡಾಡಿ ಜಾನುವಾರುಗಳು ಹಾಗೂ ಬೀದಿ ನಾಯಿಗಳ ಉಪದ್ರವ ಕುರಿತು ದೂರ ನೀಡಲು ಪಶುವೈದ್ಯಾಧಿಕಾರಿ ಡಾ. ರೇಖಾ ಎಸ್.ಟಿ. -9886326268, ಕಂದಾಯ ಶಾಖೆಗೆ ಸಂಬಂಧಿಸಿದಂತೆ ದೂರು ನೀಡಲು ಉಪ ಆಯುಕ್ತರು (ಕಂ) ನಾಗೇಂದ್ರ ಡಿ., ಕಂದಾಯಾಧಿಕಾರಿ ಬಾಲಾಜಿ ಮತ್ತು ಸುನೀತಾ -9880396995/ 8762019195 /9482056858/7892009461 ಗಳನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post