Tuesday, July 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಬೆಂಗಳೂರು: ಅಭಿನಯದ ಪ್ರೌಢಿಮೆ ಅಭಿವ್ಯಕ್ತಿಸಿದ ಅನುಷಾ ರಂಗ ಪ್ರವೇಶ

August 31, 2019
in Small Bytes, ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 3 minutes

ಸುರಿಯುತ್ತಿದ್ದ ಸೋನೆ ಮಳೆ, ಬಾನಲ್ಲಿ ಮಳೆಯ ನೀರನ್ನು ಹೊತ್ತು ತೇಲಾಡುತ್ತಿದ್ದ  ಮೋಡಗಳು, ಭಾನುವಾರದ ಮುಂಜಾನೆ ಬೆಳಂಬೆಳಗ್ಗೆ ಬೀಳುತ್ತಿದ್ದ ಸಣ್ಣ ಮಳೆಹನಿಗಳ ನಡುವೆಯೇ ನಗರದ ಮಲ್ಲೇಶ್ವರಂನ ಸೇವಾ ಸದನವು ಕುಮಾರಿ ಅನುಷಾ ನಾಗರಾಜ್ ರವರ ರಂಗಪ್ರವೇಶದ ಕಾರ್ಯಕ್ರಮಕ್ಕೆ ಸರ್ವಸಿದ್ಧತೆಗಳನ್ನು ಮಾಡಿಕೊಂಡಿತ್ತು. ಇದು ನೃತ್ಯ ಭಾರತಿ ಅಕಾಡೆಮಿಯ ನಿರ್ದೇಶಕಿ ಗುರು ಶ್ರೀಮತಿ ಪದ್ಮಾ ಹೇಮಂತ್ ರವರ ಸಾರಥ್ಯದಲ್ಲಿ ಪ್ರಸ್ತುತಗೊಂಡ ರಂಗಪ್ರವೇಶ ಎಂಬುದು ಒಂದು ವಿಶೇಷವಾದರೆ ಆ  ದಿನದ ಮತ್ತೊಂದು ವಿಶೇಷವೆಂದರೆ ಅದು ಅನುಷ ರವರ ಹುಟ್ಟುಹಬ್ಬವೂ ಆಗಿತ್ತು.ಕುಮಾರಿ ಅನುಷಾ ತಮ್ಮ ಸಾಂಪ್ರದಾಯಿಕ ಭರತನಾಟ್ಯ ರಂಗ ಪ್ರವೇಶವನ್ನು ಒಂದು ಪುಷ್ಪಾಂಜಲಿಯೊಂದಿಗೆ ಆರಂಭಿಸಿ ಮುಂದುವರೆದು ‘ಆನಂದ ನರ್ತನ ಗಣಪತಿಂ…’ ಎಂಬ ಗಣೇಶನ ಸ್ತುತಿಯೊಂದಿಗೆ ಮುಂದುವರೆಸಿದರು. ಈ ಎರಡು ನೃತ್ಯ ಬಂಧಗಳು ನಾಟ ರಾಗ ಮತ್ತು ಆದಿತಾಳಕ್ಕೆ ನಿಬದ್ಧಗೊಂಡಿತ್ತು. ಆರಂಭದ ಸಭಾಕಂಪನದಿಂದ  ಹೊರಬಂದು ಆತ್ಮವಿಶ್ವಾಸವನ್ನು ತುಂಬಿಸಿ ಕೊಡುವ ಒಂದು ನೃತ್ತ ಬಂಧವಾಗಿ ಖಚಿತವಾದ ಅಡವುಗಳ ಸುಂದರ ಸಂಯೋಜನೆಯಾಗಿತ್ತು  ಮೊದಲನೆಯ ಪುಷ್ಪಂಜಲಿ.

ಇನ್ನು ಮುಂದುವರೆದ ಭಾಗವಾಗಿ ಮೂಡಿ  ಬಂದ ಶ್ರೀಯುತ ವೆಂಕಟಸುಬ್ಬಯ್ಯರ್ ರವರ  ರಚನೆಯ ನೃತ್ತ  ಮತ್ತು ಅಭಿನಯದ ವಿನೂತನ ಮೇಳದಂತಿತ್ತು ಗಣೇಶನ ಸ್ತುತಿ. ತಮ್ಮ ಎರಡನೆಯ ಪ್ರಸ್ತುತಿಯಾಗಿ  ಅನುಷಾರವರು ಆರಿಸಿಕೊಂಡಿದ್ದದ್ದು  ಶ್ರೀಯುತ ಟಿ. ವಿ. ಗೋಪಾಲಕೃಷ್ಣರವರ ರಚನೆ, ಮೋಹನ ರಾಗ ಮತ್ತು ಮಿಶ್ರ ಛಾಪು ತಾಳದ ಜತಿಸ್ವರ. ಸುಂದರ ಸ್ವರ ಜೋಡಣೆಗೆ ಅಷ್ಟೇ ಸುಂದರವಾಗಿ ಹೆಜ್ಜೆಗಳನ್ನ ಪೋಣಿಸಿದಂತೆ ಸೊಗಸಾಗಿ ಮೂಡಿ  ಬಂತು ಜತಿಸ್ವರ. ಮುಂದಿನ ಭಾಗವಾಗಿ ಇಡೀ ರಾಮಾಯಣವನ್ನು ಒಂದು ಶ್ಲೋಕದಲ್ಲಿ ವಿವರಿಸುವಂಥ ಏಕಶ್ಲೋಕಿ ರಾಮಾಯಣವನ್ನು ಗುರು ಶ್ರೀಮತಿ ಪದ್ಮಾ ಹೇಮಂತ್ ರವರು ಕುಮಾರಿ ಅನುಷಾಳಿಗಾಗಿ ಸಂಯೋಜಿಸಿದ್ದರು. ಇದನ್ನು ರಾಗಮಾಲಿಕೆ ಮತ್ತು ಆದಿ ತಾಳಕ್ಕೆ ಸಂಯೋಜಿಸಲಾಗಿತ್ತು.


ಒಂದು ರಂಗಪ್ರವೇಶದ ಕಾರ್ಯಕ್ರಮದ ಹೃದಯಭಾಗವೆಂದೇ ಹೆಸರಾದ ಪದವರ್ಣದ ಆಯ್ಕೆ ಇಲ್ಲಿ ಬಹಳ ಸಮಂಜಸವಾಗಿತ್ತು. ಶ್ರೀ ಮಧುರೈ ಮುರಳೀಧರನ್ ರವರ ಸಿಂಹೇಂದ್ರ ಮಧ್ಯಮ ರಾಗ ಮತ್ತು ಆದಿತಾಳದ, ‘ಮಾಯೆ ಮನಂ  ಕನಿಂದರುಳ ….’ಎಂಬ ದೇವಿಯ ಕುರಿತಾದ ಒಂದು ಸುಂದರ ಪ್ರಸ್ತುತಿಯನ್ನು ಅಷ್ಟೇ ಸುಂದರವಾಗಿ ಕುಮಾರಿ ಅನುಷಾಳಿಗೆ ಹಸ್ತಾಂತರಿಸಿದ್ದರು ಗುರು ಶ್ರೀಮತಿ ಪದ್ಮ. ತನ್ನ ಖಚಿತವಾದ ನಡಿಗೆಗಳಿಂದ, ಸ್ಪಷ್ಟವಾದ ಕೈ ಚಲನೆಗಳಿಂದ ಸಾಹಿತ್ಯ ಮತ್ತು ಸಂಚಾರಿಯಲ್ಲಿನ ಭಾವಕ್ಕೆ ಚುತಿ ಬಾರದಂತೆ ತಮ್ಮ ಸೊಗಸಾದ ಭಾವ ಭಂಗಿಗಳು,  ನೃತ್ತ ಮತ್ತು ಅಭಿನಯಗಳಿಂದ ನೆರೆದಿದ್ದ ರಸಿಕರನ್ನು ಮೆಚ್ಚಿಸಿದರು ಅನುಷಾ.

ಸಭಾ  ಕಾರ್ಯಕ್ರಮದಲ್ಲಿ ಲಲಿತ ಶ್ರೀ ಅಕಾಡೆಮಿಯ ಸಂಸ್ಥಾಪಕಿ, ನೃತ್ಯ ಗುರು ಶ್ರೀಮತಿ ಸುಮಾ ಕೃಷ್ಣಮೂರ್ತಿಯವರು ಮಾತನಾಡಿ ತುಂಬು ಮನಸ್ಸಿನಿಂದ ಅನುಷಾಳ ನೃತ್ಯವನ್ನು, ಅವಳ ನೃತ್ಯದ ಹಿಂದಿನ ಶಕ್ತಿಯಾಗಿದ್ದ ಗುರುಗಳನ್ನು ಅಪಾರವಾಗಿ ಶ್ಲಾಘಿಸಿ ಮಾತನಾಡಿದರು. ಮುಂದೆ ಮಾತನಾಡಿದ ಶಿಕ್ಷಣತಜ್ಞ ವೈ. ಸಿ. ದೊಡ್ಡಯ್ಯನವರು ಕಲಾವಿದೆಯನ್ನು ಬಹುವಾಗಿ ಮೆಚ್ಚಿಕೊಂಡರು.

ಕಾರ್ಯಕ್ರಮದ ಎರಡನೆಯ ಭಾಗದ ಆರಂಭಕ್ಕೆಂದು ಆರಿಸಿಕೊಂಡಿದ್ದದ್ದದ್ದು ಶ್ರೀಮತಿ ಲಲಿತಾ ಶಿವಕುಮಾರ್ ರಚನೆಯ ಒಂದು ಶಿವಸ್ತುತಿ, ‘ಕಪಾಲಿನಿ ದಯಾ ನಿಧಿ….’ .  ಕ್ಲಿಷ್ಟಕರವಾದ ಮತ್ತು ರೋಚಕವೆನಿಸುವ  ಭಂಗಿಗಳು, ತಟ್ಟುಮೆಟ್ಟುಗಳು ಮತ್ತು ತಮ್ಮ ಶ್ರೇಷ್ಠವಾದ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡರು ಕುಮಾರಿ ಅನುಷ. ಮುಂದೆ ದಾಸಶ್ರೇಷ್ಠ ಶ್ರೀ ಪುರಂದರದಾಸರ ಅತ್ಯಂತ ಜನಪ್ರಿಯ ರಚನೆಗಳಲ್ಲಿ ಒಂದಾದ ‘ವೆಂಕಟಾಚಲ ನಿಲಯಂ…’ ನಲ್ಲಿ ಭಕ್ತಿಯ ಪರಾಕಾಷ್ಟೆಯನ್ನು ಮೆರೆಯುತ್ತಾ ತಮ್ಮ ಅಭಿನಯದ ಪ್ರೌಢಿಮೆಯನ್ನು ಅಭಿವ್ಯಕ್ತಿಸಿದರು ಅನುಷಾ.  ಸಂಚಾರಿಯಲ್ಲಿ ಗಜೇಂದ್ರ ಮೋಕ್ಷದ ಭಾಗವನ್ನು ಅತ್ಯಂತ ಸೂಕ್ತವಾಗಿ ಪ್ರಸ್ತುತಪಡಿಸಿದರು.

ವಂದನಾರ್ಪಣೆಯನ್ನು ಸಲ್ಲಿಸಿದ ಗುರು ಶ್ರೀಮತಿ ಪದ್ಮಾ ಹೇಮಂತ್ ರವರು ಮಾತನಾಡುತ್ತಾ, ‘ದಿಟ್ಟ ಗುರಿ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಇದ್ದಾಗಲಷ್ಟೆ  ಯಾವುದೇ ರಂಗದಲ್ಲಿ ಯಶಸ್ಸು ಸಾಧ್ಯ’ ಎಂದು ನುಡಿದರು. ಕಾರ್ಯಕ್ರಮದ ಕೊನೆಯ ಭಾಗವಾಗಿ ವಿದುಷಿ ದ್ವಾರಕಿ ಕೃಷ್ಣ ಸ್ವಾಮಿಯವರು ರಚಿಸಿದ್ದ ವಲಚಿ ರಾಗದ ತಿಲ್ಲಾನವನ್ನು ಆರಿಸಿಕೊಂಡಿದ್ದರು. ಗುರು ಶ್ರೀಮತಿ ಪದ್ಮಾ ಹೇಮಂತ್ ಹಾಗೂ ಮೃದಂಗ ವಿದ್ವಾನ್ ಶ್ರೀ ವಿನೋದ್ ಶಾಮ ಆನೂರ್  ರವರ ಜುಗಲ್ಬಂದಿಯಂತಿದ್ದ ಗೆತ್ತಿನ ಭಾಗದಲ್ಲಿ ತಾಳದ ಮೇಲಿನ ತಮ್ಮ ಹಿಡಿತವನ್ನು ಬಹಳ ಪ್ರಬುದ್ಧತೆಯಿಂದ ಮೆರೆದರು ಅನುಷ. ಸರಳವಾದ ಮಂಗಳದೊಂದಿಗೆ ತಮ್ಮ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು ಕುಮಾರಿ ಅನುಷಾ. ತುಂಬಿದ ಸಭೆಯ ನಿರಂತರ ಕರತಾಡನವೇ ಅವರ ನೃತ್ಯ ಪ್ರದರ್ಶನದ ಶ್ರೇಷ್ಠತೆಯನ್ನು ಬಿಂಬಿಸುತ್ತಿತ್ತು.


ಶ್ರೀ ಸುಗ್ಗನಹಳ್ಳಿ  ಷಡಕ್ಷರಿಯವರ ಅದ್ಭುತ ನಿರೂಪಣೆ ಒಂದೆಡೆಯಾದರೆ ಗಂಧರ್ವ ಕಲಾವಿದರ ಸಮೂಹವೇ ಸಭೆಯ ಬಲ ಭಾಗದಲ್ಲಿ ಸೇರಿತ್ತು . ನಟುವಾಂಗದಲ್ಲಿ ಗುರು ಶ್ರೀಮತಿ ಪದ್ಮಾ ಹೇಮಂತ್ ರವರು ಮತ್ತು ಅವರ ಜೊತೆಯಲ್ಲಿ ಅವರ ಪುತ್ರಿ ಶೀತಲ್ ಹೇಮಂತ್, ಶ್ರೀ ವಿನೋದ್ ಶ್ಯಾಮ್ ಆನೂರ್, ಕೊಳಲಿನಲ್ಲಿ ಶ್ರೀ ವೇಣು ಗೋಪಾಲ್ ಹೆಮ್ಮಿಗೆ,  ವೈಲಿನ್ ನಲ್ಲಿ ಶ್ರೀ ಹೇಮಂತ್ ಕುಮಾರ್, ರಿದಮ್ ಪಾಡ್ಸ್ ನಲ್ಲಿ ಶ್ರೀ ಪ್ರಣವ್ ದತ್ತ ಬಹಳ ಸಮರ್ಥವಾಗಿ ಕಲಾವಿದೆಗೆ ಸಹಕರಿಸುತ್ತಾ ಕಾರ್ಯಕ್ರಮದ ಗುಣಮಟ್ಟವನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯ್ದರು. ಒಟ್ಟಾರೆಯಾಗಿ ಒಂದು ಒಳ್ಳೆಯ ಕಾರ್ಯಕ್ರಮವನ್ನು ವೀಕ್ಷಿಸಿ ಭಾನುವಾರದ ಬೆಳಗನ್ನು ಸೂಕ್ತ ರೀತಿಯಲ್ಲಿ ಕಳೆದೆವೆಂಬ ಭಾವ ಅಲ್ಲಿದ್ದ ರಸಿಕರ ಮುಖಗಳಲ್ಲಿ ಬಿಂಬಿತವಾಗಿತ್ತು.

Tags: BENGALURUBharatanatyamDanceKannada ArticleRanga Praveshaಬೆಂಗಳೂರುಭರತನಾಟ್ಯರಂಗಪ್ರವೇಶ
Previous Post

ವಿಶ್ವವನ್ನೇ ನಿಬ್ಬೆರಗಾಗಿಸಿದ ಹಾಕಿ ಮಾಂತ್ರಿಕ ಧ್ಯಾನ್’ಚಂದ್ ಬಗ್ಗೆ ತಿಳಿಯದಿದ್ದರೆ ಜೀವನವೇ ವ್ಯರ್ಥ

Next Post

ದಾಯೆ ಬೋಡು ಅಧಿಕೃತ ಭಾಷೆದ ಮಾನದಿಗೆ??

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದಾಯೆ ಬೋಡು ಅಧಿಕೃತ ಭಾಷೆದ ಮಾನದಿಗೆ??

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಬಾಳೆಬೈಲು-ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ

July 28, 2025

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಬಾಳೆಬೈಲು-ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ

July 28, 2025

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!