ಹ್ಯಾಕ್ ಆಯೋಜಿಸುವ ವೇದಿಕೆ ಡೆವ್ರೋಪೊಲಿಯೋದಿಂದ ನೈಋತ್ಯ ರೈಲ್ವೆ ಮತ್ತು ಭಾರತೀಯ ರೈಲ್ವೆ #Indian Railway ಸಹಯೋಗದೊಂದಿಗೆ ಡುರೊಂಟೊ ಎಕ್ಸ್’ಪ್ರೆಸ್ ರೈಲಿನಲ್ಲಿ #Duronto Express Train ಬೆಂಗಳೂರಿನಿಂದ ನವದೆಹಲಿಗೆ ಸಂಚರಿಸುವ 36 ಗಂಟೆಗಳ ಅವಧಿಯಲ್ಲಿ ಯುವ ಟೆಕ್ಕಿಗಳ ಸಮೂಹ ದೇಶದ ಮೊಟ್ಟ ಮೊದಲ ಮತ್ತು ಏಷ್ಯಾದ ಚೊಚ್ಚಲ ಹ್ಯಾಕಥಾನ್ ಆಯೋಜಿಸಿ ಗಮನ ಸೆಳೆದಿದೆ.
ಮೂರು ನಾಲ್ಕು ತಿಂಗಳಿಂದ ಸಂಶೋಧನೆ ನಡೆಸಿ ಹ್ಯಾಕಥಾನ್ ಮಾಡಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ #V Somanna ಅವರ ಬೆಂಬಲ, ಡೆವ್ರಫಪಲಿಯೋ ಸಿಇಒ ಡೆನ್ವರ್, ಹಿರಿಯ ಉದ್ಯೋಗಿ ಅಮೋಘ್ ಎನ್ ಆರಾಧ್ಯ ನೇತೃತ್ವದಲ್ಲಿ ವಿಶೇಷ ಹ್ಯಾಕಥಾನ್ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ #PM Narendra Modi ಹಲವಾರು ಹ್ಯಾಕಥಾನ್’ಗಳನ್ನು ನಡೆಸಿದ್ದು, ಅವರ ದೂರದೃಷ್ಟಿ ಮತ್ತು ಆಶಯಕ್ಕೆ ಪೂರಕವಾಗಿ ಸಚಿವ ವಿ. ಸೋಮಣ್ಣ ರೈಲ್ವೆಯಿಂದ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದರು. ಕೋಡಿಂಗ್ ಕಾಂಪಿಟೇಷನ್ ಬಿಲ್ಡ್ ಮಾಡುವ 17 ತಂಡಗಳು ಹ್ಯಾಕಥಾನ್ ನಲ್ಲಿ ಭಾಗವಹಿಸಿದ್ದು, 10 ಜನ ಹೆಣ್ಣುಮಕ್ಕಳು ಒಳಗೊಂಡAತೆ 100 ಸದಸ್ಯರು, ಎಐ, ಬ್ಲ್ಯಾಕ್ ಚೈನ್, ಹಣಕಾಸು, ತಂತ್ರಜ್ಞಾನ ಸೇರಿದಂತೆ 17 ಯೋಜನೆಗಳನ್ನು ರೈಲಿನಲ್ಲಿ ಪೂರ್ಣಗೊಳಿಸಿ ಸೈ ಎನಿಸಿಕೊಂಡಿದ್ದಾರೆ. ಚಲಿಸುವ ರೈಲಿನಲ್ಲಿ ಇಂಟರ್’ನೆಟ್’ಗೆ ಸಮಸ್ಯೆಯಾಗಬಾರದು ಎಂದು ಇಂಟ್ರಾನೆಟ್’ಗೆ ಸರ್ವರ್’ಗಳನ್ನು ಟೆಕ್ಕಿಗಳೇ ರೂಪಿಸಿಕೊಂಡಿದ್ದರು. ಚಾಟ್ ಜಿಪಿಟಿ ಆನ್ ಬೋರ್ಡ್ ಇಂಟರ್ ನೆಟ್’ಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಜರ್ಮನಿ, ದುಬೈನಿಂದಲೂ ಹ್ಯಾಕಥಾನ್’ನಲ್ಲಿ ಭಾಗವಹಿಸಿದ್ದರು. ಒಟ್ಟು 17 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಈ ತಂಡಗಳು 20 ರ ಶನಿವಾರ ರಾತ್ರಿ 11.30 ಕ್ಕೆ ಬೆಂಗಳೂರಿನಿಂದ ಹೊರಟು 22 ಸೋಮವಾರ ಬೆಳಿಗ್ಗೆ ದೆಹಲಿ ತಲುಪಿದೆ. ಇದಕ್ಕೂ ಮುನ್ನ ಯಶವಂತಪುರ ವೈಷ್ಣವ್ ಸಫಯರ್ ಪಿವಿಆರ್’ನಲ್ಲಿ ಸಮ್ಮೇಳನ ನಡೆಸಿದ್ದು, ಪಾಲ್ಗೊಂಡವರಿಗೆ ಇದು ಹೊಸ ಅನುಭವ ನೀಡಿತು. ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾರ ಪ್ರವೀಣ್ ಕಾತರಿಕಿ ಮಾತನಾಡಿ, ನೈಋತ್ಯ ರೈಲು ಅತಿ ಹೆಚ್ಚು ರೈಲ್ವೆ ಕಾರ್ಯಾಚರಣೆ ನಡೆಸುತ್ತಿರುವ ವಿಭಾಗವಾಗಿದೆ. ತಂತ್ರಜ್ಞಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಯುವ ಪಡೆಗೆ ರೈಲ್ವೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಲಿದೆ. ಈ ಉಪಕ್ರಮವು ಏಷ್ಯಾದ ಮೊದಲ ಚಲಿಸುವ ರೈಲಿನ ಹ್ಯಾಕಥಾನ್ ಅನ್ನು ಗುರುತಿಸುತ್ತದೆ. ಇದು ಭಾರತದ ರೈಲ್ವೆ ಮೂಲಸೌಕರ್ಯದೊಂದಿಗೆ ತಾಂತ್ರಿಕ ನಾವೀನ್ಯತೆಯನ್ನು ಸಂಯೋಜಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದರು.
ಡೆವ್ರೋಪಲಿಯೋ ಸಿಇಒ ಡೆನ್ವರ್ ಮಾತನಾಡಿ, ಪ್ರಯಾಣದ ಸಮಯದಲ್ಲಿ, ಹೊಸ ಆಲೋಚನೆಗಳನ್ನು ನಿರ್ಮಿಸುವ ಮತ್ತು ಹಂಚಿಕೊಳ್ಳುವ ಸಹಯೋಗದ ಕಾರ್ಯಕ್ಷೇತ್ರಗಳಾಗಿ ಪರಿವರ್ತಿಸಲಾಯಿತು. ತಾಂತ್ರಿಕ ಕಾರ್ಯಕ್ರಮದ ಜೊತೆಗೆ, ಒಂದು ಸಣ್ಣ ಸಂಗೀತ ಪ್ರದರ್ಶನವನ್ನು ಒಳಗೊಂಡಂತೆ ಒಂದು ಸಾಧಾರಣ ಸಾಂಸ್ಕೃತಿಕ ಸೌರಭದ ಸೌಹಾರ್ದತೆಯನ್ನು ಈ ಯಾನ ಬೆಳೆಸಿತು ಮತ್ತು ಅನುಭವವನ್ನು ಉತ್ಕೃಷ್ಟಗೊಳಿಸಿತು ಎಂದರು.
ಹ್ಯಾಕಥಾನ್ ನೇತೃತ್ವ ವಹಿಸಿದ್ದ ಡೆವ್ರೋಪಲಿಯೋ ಉದ್ಯೋಗಿ ಅಮೋಘ್ ಎನ್ ಆರಾಧ್ಯ ಮಾತನಾಡಿ, ಈ ಕಾರ್ಯಕ್ರಮ ಪಾಲುದಾರರಾದ ಬೇಸ್, ನಾಯ್ಸ್, ಜಿಯೋಡ್ವರ್ಕ್ ಮತ್ತು ಜಾಗೃತಿ ಯಾತ್ರಾದ ಮೌಲ್ಯಯುತ ಬೆಂಬಲದಿಂದ ಸಾಧ್ಯವಾಯಿತು. ಅವರ ಬದ್ಧತೆ, ನೈಋತ್ಯ ರೈಲ್ವೆ ಒದಗಿಸಿದ ಮೂಲಸೌಕರ್ಯ ಮತ್ತು ಸೌಲಭ್ಯಗಳೊಂದಿಗೆ ಸೇರಿ, ಕಾರ್ಯಕ್ರಮವು ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಯುವಂತೆ ಮಾಡಿತು. ಈ ರೀತಿಯ ಮೊದಲ ಉಪಕ್ರಮವನ್ನು ಸಕ್ರಿಯಗೊಳಿಸಿದ್ದಕ್ಕಾಗಿ ಭಾರತೀಯ ರೈಲ್ವೆಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಭಾರತದ ರೈಲ್ವೆ ಜಾಲವು ನಾವೀನ್ಯತೆ ಮತ್ತು ಸಮುದಾಯಕ್ಕೆ ವೇದಿಕೆಯಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಪ್ರದರ್ಶಿಸಲು ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಲು ಎದುರು ನೋಡುತ್ತಿz್ದೆÃವೆ ಎಂದರು.
Discussion about this post