ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಹುಬ್ಬಳ್ಳಿಗಳಿಗೆ ತೆರಳುವ ಜನಶತಾಬ್ದಿ ಎಕ್ಸ್’ಪ್ರೆಸ್ ರೈಲುಗಳ ಕುರಿತಾಗಿ ರೈಲ್ವೆ ಇಲಾಖೆ ಮಹತ್ವದ ಮಾಹಿತಿ ನೀಡಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಎರಡೂ ಜನಶತಾಬ್ದಿ ರೈಲುಗಳಿಗೆ ತಿಪಟೂರಿನಲ್ಲಿ ಜನಶತಾಬ್ದಿ ಎಕ್ಸ್’ಪ್ರೆಸ್ ರೈಲುಗಳ ನಿಲುಗಡೆಯನ್ನು ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದೆ.
Also Read>> ಮೈಸೂರು | ಕ್ಷುಲ್ಲಕ ಕಾರಣಕ್ಕೆ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ
12079/12080 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು- ಹುಬ್ಬಳ್ಳಿ-ಕೆಎಸ್’ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್’ಪ್ರೆಸ್ ಮತ್ತು 12089/12090 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಶಿವಮೊಗ್ಗ ಟೌನ್-ಕೆಎಸ್’ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್’ಪ್ರೆಸ್ ರೈಲುಗಳು ತಿಪಟೂರು ನಿಲ್ದಾಣದಲ್ಲಿ ನಿಲುಗಡೆ ನೀಡುವುದನ್ನು ಮುಂದುವರೆಸಲಿವೆ.
ಈ ನಿಲುಗಡೆಯು ಮೇ 16, 2026 ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಪ್ರಸ್ತುತ ಇರುವ ಸಮಯದ ವೇಳಾಪಟ್ಟಿಯಂತೆಯೇ ರೈಲುಗಳು ನಿಲ್ದಾಣದಲ್ಲಿ ನಿಲ್ಲಲಿವೆ.
ವಿಶೇಷ ರೈಲುಗಳ ಸೇವೆ ಅವಧಿ ವಿಸ್ತರಣೆ
ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ, ದಕ್ಷಿಣ ಮಧ್ಯ ರೈಲ್ವೆಯು 07043/07044 ಸಂಖ್ಯೆಯ ಹೈದರಾಬಾದ್-ಬೆಳಗಾವಿ-ಹೈದರಾಬಾದ್ ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯನ್ನು ಪ್ರತಿ ದಿಕ್ಕಿನಲ್ಲಿ ಒಂದು ಹೆಚ್ಚುವರಿ ಟ್ರಿಪ್’ಗೆ ವಿಸ್ತರಿಸಿದೆ.
ಇದರನ್ವಯ, ಈ ಮೊದಲು ಏಪ್ರಿಲ್ 30, 2026 ರವರೆಗೆ ಮಾತ್ರ ಸಂಚರಿಸಬೇಕಿದ್ದ 07043 ಸಂಖ್ಯೆಯ ಹೈದರಾಬಾದ್-ಬೆಳಗಾವಿ ವಿಶೇಷ ರೈಲು ಈಗ ಮೇ 7, 2026 ರಂದು ಒಂದು ಹೆಚ್ಚುವರಿ ಸಂಚಾರ ನಡೆಸಲಿದೆ. ಅದೇ ರೀತಿ, ಈ ಮೊದಲು ಮೇ 1, 2026ಕ್ಕೆ ಕೊನೆಗೊಳ್ಳಬೇಕಿದ್ದ 07044 ಸಂಖ್ಯೆಯ ಬೆಳಗಾವಿ-ಹೈದರಾಬಾದ್ ವಿಶೇಷ ರೈಲು ಈಗ ಮೇ 8, 2026ರಂದು ಒಂದು ಹೆಚ್ಚುವರಿ ಸಂಚಾರ ನಡೆಸಲಿದೆ.
ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನರಾರಂಭ
ಕ್ಯಾಸಲ್ ರಾಕ್ ಮತ್ತು ಕುಲೆಮ್ ನಡುವಿನ ಘಟ್ಟ ಭಾಗದಲ್ಲಿ ನಿರ್ವಹಣಾ ಕಾಮಗಾರಿಗಾಗಿ ಈ ಹಿಂದೆ ರೈಲ್ವೆ ಲೈನ್ ಬ್ಲಾಕ್ ಹಿನ್ನೆಲೆಯಲ್ಲಿ, ಜಸಿಹ್’ನಿಂದ 27.04.2026, 04.05.2026, 11.05.2026, 18.05.2026, 25.05.2026 ಮತ್ತು 01.06.2026 ರಂದು ಸಂಚರಿಸಬೇಕಿದ್ದ ರೈಲು ಸಂಖ್ಯೆ 17322 ಜಸಿದಿಹ್ – ವಾಸ್ಕೋಡಗಾಮ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲನ್ನು ಎಸ್’ಎಸ್ಎಸ್ ಹುಬ್ಬಳ್ಳಿ ಮತ್ತು ವಾಸ್ಕೋಡಗಾಮ ನಡುವೆ ಭಾಗಶಃ ರದ್ದುಗೊಳಿಸಲು ಸೂಚಿಸಲಾಗಿತ್ತು. ಈಗ ಈ ರೈಲು ಮೇಲಿನ ಎಲ್ಲಾ ದಿನಾಂಕಗಳಂದು ತನ್ನ ನಿಗದಿತ ಮಾರ್ಗದ ಪ್ರಕಾರ ಚಲಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















