Wednesday, March 29, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ದಕ್ಷ

ಬುಲೆಟ್ ಸವಾರಿ-20: ಸ್ವಿಮ್ಮಿಂಗ್‌ಪೂಲ್‌ನಲ್ಲಿ ಪುನರ್ಜನ್ಮ-2

March 20, 2018
in ದಕ್ಷ
0 0
0
Share on facebookShare on TwitterWhatsapp
Read - 2 minutes

ನಾನು ನೀರಿಗೆ ಬಿದ್ದ ರೀತಿ ನೋಡಿಯೇ ಡಾ.ಸುಬ್ಬಯ್ಯ ಅಪಾಯ ಅರಿತಿದ್ದರಂತೆ, ನಾನು ಒಮ್ಮೆ ಮೇಲಕ್ಕೆ ಬಂದು ಚಡಪಡಿಸುತ್ತ ಕೆಳಕ್ಕೆ ಹೋಗುತ್ತಿದ್ದಂತೆ ಅವರು ಉಳಿದವರನ್ನು ಎಚ್ಚರಿಸಿ, ಸಹಾಯಕ್ಕಾಗಿ ಮೊರೆ ಇಟ್ಟರಂತೆ. ಅಲ್ಲಿದ್ದ ನೂರಾರು ಜನ ಈಜು ನಿಲ್ಲಿಸಿ ಬೊಬ್ಬೆ ಹೊಡೆಯಲಾರಂಭಿಸಿದರೂ, ಆಳಕ್ಕೆ ಇಳಿದು ನನ್ನನ್ನು ರಕ್ಷಿಸುವ ಧೈರ್ಯವನ್ನೂ ಯಾರೂ ತೋರಲಿಲ್ಲ.

ನಮ್ಮ ಗ್ರಹಚಾರಕ್ಕೆ ಅಲ್ಲಿಯವರೆಗೆ ಅಲ್ಲಿಯೇ ಇದ್ದ ಹರೀಶ್ ಬಾತ್‌ಕೋಟ್ ಧರಿಸಿಕೊಂಡು ಸ್ನೇಹಿತರ ಜತೆ ಟೀ ಕುಡಿಯಲು ಹೊರಟಿದ್ದರು. ಆದರೆ ಸ್ವಿಮ್ಮಿಂಗ್‌ಪೂಲ್‌ನಿಂದ ಆರ್ತನಾದ ಕೇಳಿ ಬರುತ್ತಿದ್ದುದರಿಂದ ಅವರು ಓಡೋಡಿ ಬಂದು, ನಾನು ಕೊನೆಯ ಬಾರಿ ಮುಳುಗಿದ ಸ್ಥಳ ಕೇಳಿಕೊಂಡು ನೀರಿಗೆ ಧುಮುಕಿದರಂತೆ, ತಳಪೂರ್ತಿ ಹುಡುಕಾಡಿ ನಾನೆಲ್ಲೂ ಕಾಣಸಿಗದೆ ಮೇಲಕ್ಕೆ ತೇಲಿ ಜೋರಾಗಿ ಉಸಿರೆಳೆದುಕೊಂಡು ಕೊನೆಯ ಪ್ರಯತ್ನವೆಂಬಂತೆ ಮತ್ತೊಮ್ಮೆ ಮುಳುಗಿದರಂತೆ. ನನ್ನ ದೇಹ ಎಲ್ಲೂ ಕಾಣಿಸದೆ ಸುಸ್ತಾಗಿ ಮೇಲೆ ಬರಬೇಕು ಎನ್ನುವಷ್ಟರಲ್ಲಿ ನಾನು ಧರಿಸಿದ್ದ ಹಳದಿ ಸ್ವಿಮ್ಮಿಂಗ್ ಚೆಡ್ಡಿ ಗೋಚರಿಸಿ ಅತ್ತ ಧಾವಿಸಿದರಂತೆ.

ನಿಸ್ತೇಜವಾಗಿ ಬಿದ್ದಿದ್ದ ನನ್ನ ದೇಹ ಕಂಡು. ಚೆಡ್ಡಿಯ ಬೆಲ್‌ಟ್ ಹಿಡಿದು ಮೇಲಕ್ಕೆ ಎಳೆದು ತಂದರಂತೆ. ಉಸಿರಾಟ ನಿಂತುಹೋಗಿ, ನನ್ನ ಮೈಯೆಲ್ಲ ಕಪ್ಪಗಾಗಿತ್ತಂತೆ ಡಾ. ಸುಬ್ಬಯ್ಯ ಅವರು ತಕ್ಷಣ ನನ್ನನ್ನು ಬೋರಲು ಮಲಗಿಸಿ ಹೊಟ್ಟೆಯನ್ನು ಪ್ರೆಸ್ ಮಾಡಿ ನೀರನ್ನು ಹೊರತೆಗೆದರಂತೆ, ಒಮ್ಮೆ ಕಣ್ಣು ಬಿಟ್ಟ ನಾನು, ಸುತ್ತ ಸೇರಿದ್ದ ನೂರಾರು ಜನರನ್ನು ನೋಡಿ ಮತ್ತೆ ಪ್ರಜ್ಞೆ ತಪ್ಪಿದೆನಂತೆ! ಅಷ್ಟರಲ್ಲಿ ಯಾರೋ ಸೀಮೆ ಎಣ್ಣೆ ತಂದು ನನ್ನ ಮೈಕೈಗೆಲ್ಲ ಉಜ್ಜಿ, ಕಂಬಳಿ ಹೊದಿಸಿ ಬಿಸಿ ಮಾಡಿದರಂತೆ. ಆಗ ಪ್ರಜ್ಞೆ ಇಲ್ಲದ ನನ್ನನ್ನು ಕೆ.ಸಿ. ಜನರಲ್ ಆಸ್ಪತ್ರೆಯ ಐಸಿಯುಗೆ ಸೇರಿಸಿದರಂತೆ.

ನನ್ನ ಬ್ಯಾಚ್‌ಮೇಟ್ ಶ್ರೀಮತಿ ಆಂಡಾಳ್ ಆಗ ಮಲ್ಲೇಶ್ವರ ಠಾಣೆಯಲ್ಲಿ ಮಹಿಳಾ ಎಸ್‌ಐ ಆಗಿ ಪ್ರೊಬೆಷನರಿಯಲ್ಲಿದ್ದರು. ಹೆಚ್ಚಾಗಿ ಅವರು ದೈನಂದಿನ ಆಸ್ವಾಭಾವಿಕ ಸಾವಿನ ಪ್ರಕರಣಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಈಜುಕೊಳದಲ್ಲಿ ಮುಳುಗಿ ಯಾವುದೋ ಯುವಕ ಸತ್ತಿದ್ದಾನೆ ಎಂಬ ಸುದ್ದಿ ಕೇಳಿ ಅವರು ಆಸ್ಪತ್ರೆಗೆ ಓಡಿ ಬಂದಿದ್ದರು. ಯುಡಿಆರ್ ಫಾರ್ಮ್ ಭರ್ತಿ ಮಾಡುತ್ತ, ಸತ್ತ ವ್ಯಕ್ತಿಯ ಹೆಸರು ಅಶೋಕ್, 27 ವರ್ಷ ಎಂದು ಬರೆದು, ಈತನ ತಂದೆಯ ಹೆಸರೇನು ಎನ್ನುವುದು ಗೊತ್ತಾಗದೆ ಅವರಿವರಲ್ಲಿ ಕೇಳಿಕೊಂಡು ಓಡಾಡುತ್ತಿದ್ದರಂತೆ! ಅಷ್ಟರಲ್ಲಿ ಅಲ್ಲಿಗೆ ಬಂದ ಇತರ ಪೊಲೀಸರು, ‘ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿದವರು ಚಾಮರಾಜಪೇಟೆ ಪ್ರೊಬೆಷನರಿ ಎಸ್‌ಐ ಅಶೋಕ್‌ಕುಮಾರ್ ಮೇಡಂ,’ ಎಂದಾಗ ಅವರು ಹೌಹಾರಿದರಂತೆ! ‘ಅವರು ಸತ್ತಿಲ್ಲ ಮೇಡಂ, ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ,’ ಎಂದಾಗ ಮತ್ತಷ್ಟು ತಬ್ಬಿಬ್ಬಾದರಂತೆ!

ಮುಂದೆ 1988ರಲ್ಲಿ, ನೀರಿನಲ್ಲಿ ಮುಳುಗಿದ್ದ ಮಹಿಳೆ ಮತ್ತು ಆಕೆಯ ಒಂದೂವರೆ ವರ್ಷದ ಮಗುವನ್ನು ರಕ್ಷಿಸುವ ಸವಾಲು ನನಗೆ ಎದುರಾಗಿತ್ತು. ಅವತ್ತು ನಾವು ಶ್ರೀರಾಂಪುರ ಕಿಟ್ಟಿ ಎಂಬ ರೌಡಿಯನ್ನು ನೆಲಮಂಗಲದಲ್ಲಿ ಹಿಡಿದು ಬೆಳಗಿನ ಜಾವ ವೈಯಾಲಿಕಾವಲ್ ಠಾಣೆಗೆ ಕರೆದುಕೊಂಡು ಬಂದಿದ್ದೆವು. ನೊಂದ ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಗಂಡು ಮಗುವಿನ ಜತೆ ಪ್ಯಾಲೇಸ್‌ಗುಟ್ಟಹಳ್ಳಿ ಬಳಿಯ ಸುಮಾರು 40 ಅಡಿ ಆಳದ ಬಾವಿಗೆ ಹಾರಿದ್ದಳು. ನೂರಾರು ಜನ ಆ ಬಾವಿಯ ಸುತ್ತ ಸೇರಿ ಹಾಹಾಕಾರ ಎಬ್ಬಿಸುತ್ತಿದ್ದರೇ ಹೊರತು ಯಾರೋಬ್ಬರೂ ಬಾವಿಗೆ ಇಳಿಯುವ ಧೈರ್ಯ ತೋರಲಿಲ್ಲ. ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತಾದರೂ ಅವರು ಬರುವಷ್ಟರಲ್ಲಿ ಜೀವ ಹೋಗುವ ಸಾಧ್ಯತೆ ಇತ್ತು. ಹಾಗಾಗಿ ನಾನು ತಡ ಮಾಡದೆ ಯೂನಿಫಾರ್ಮ್, ಶೂ, ಜರ್ಕಿನ್ ಸಮೇತ ಹಗ್ಗದ ಸಹಾಯದಿಂದ ಬಾವಿಗಿಳಿದೆ.

ಮುಳುಗಿದ್ದ ಮಹಿಳೆ ಮತ್ತು ಮಗುವನ್ನು ನೀರಿನಲ್ಲಿ ಎತ್ತಿ ಹಿಡಿದುಕೊಂಡೆ. ಮತ್ತೊಂದು ಜೋಡುಹಗ್ಗದ ಸಹಾಯದಿಂದ ಅವರಿಬ್ಬರನ್ನು ಮೇಲಕ್ಕೆ ಎಳೆದುಕೊಳ್ಳಲಾಯಿತು. ಆದರೆ ಅದು ಪಾಳುಬಾವಿಯಾಗಿದ್ದ ಕಾರಣ ವಿಷಾನಿಲ ಆವರಿಸಿ ನನಗೆ ಉಸಿರುಕಟ್ಟಲಾರಂಭಿಸಿತು. ಹಗ್ಗ ಹಿಡಿದುಕೊಂಡು ಅರ್ಧ ಮಟ್ಟಕ್ಕೆ ಏರುವಷ್ಟರಲ್ಲಿ ನಿಶ್ಯಕ್ತನಾಗಿಬಿಟ್ಟೆ. ಮೇಲಿದ್ದವರೇ ಹಗ್ಗ ಎಳೆಯಬೇಕಾಯಿತು. ಅಸ್ವಸ್ಥನಾಗಿ ಬಿದ್ದ ನನ್ನನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿಸಲಾಯಿತು. ಕಾಕತಾಳಿಯವೆಂದರೆ, ಹಿಂದೆ ನಾನು ಈಜುಕೊಳದಲ್ಲಿ ಮುಳುಗಿದ್ದಾಗ ಇದೇ ಆಸ್ಪತ್ರೆಗೆ ಸೇರಿಸಲಾಗಿತ್ತು. ನಾನು ನೀರಿನಿಂದ ಮೇಲಕ್ಕೆತ್ತಿದ ಮಹಿಳೆಯೇನೋ ಬದುಕುಳಿದಳು. ಆದರೆ ಆಕೆಯ ಮಗು ಬದುಕುಳಿಯಲಿಲ್ಲ ಎಂಬ ಸುದ್ದಿ ತಿಳಿದು ದನಾನು ದುಃಖಿತನಾಗಿದ್ದೆ.

ಈಜುಕೊಳದ ಹರೀಶ್ ಮತ್ತು ನನ್ನ ಭಾವ ಡಾ.ಸುಬ್ಬಯ್ಯ ಅವರು ನನ್ನ ಪಾಲಿಗೆ ಪ್ರಾಣದಾತರು. ಬೇಸರದ ಸಂಗತಿ ಎಂದರೆ, ಪಾಣದ ಹಂಗು ತೊರೆದು ನನ್ನ ಜೀವ ಕಾಪಾಡಿದ ಈಜುಕೊಳದ ಕೋಚ್ ಹರೀಶ್ ಸಣ್ಣ ಪ್ರಾಯದಲ್ಲೇ ದಾರುಣವಾಗಿ ತೀರಿಕೊಂಡರು. ನನ್ನ ಜತೆ ಈಜಲು ಬಂದಿದ್ದ ದೇವಯ್ಯ ಕರ್ತವ್ಯದಲ್ಲಿರುವಾಗಲೇ ಅಪಘಾತಕ್ಕೆ ಬಲಿಯಾದರು.

Tags: Bangalore PoliceBullet SavariDakshaKalpa NewsSwimming PoolTiger BB Ashok Kumar
Previous Post

ಇದೊಂದು ಜಗತ್ತು: ಗಯಾನದಲ್ಲಿ ಭಾರತೀಯರು-3

Next Post

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-1

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-1

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಪರಿಸರವಾದಿಗಳ ಪ್ರಯತ್ನಕ್ಕೆ ಸಿಕ್ಕ ಫಲ: ತ್ಯಾಜ್ಯ ಸಂಸ್ಕರಣಾ ಘಟಕಗಳ ಮರು ಕಾರ್ಯಾರಂಭಕ್ಕೆ ಸಿದ್ಧತೆ

March 29, 2023

ಶಿವಮೊಗ್ಗದ ಇಂದಿನ ಸುದ್ಧಿಗಳು | ಒಳ ಮೀಸಲಾತಿ ವಿರೋಧಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

March 29, 2023

ಚುನಾವಣೆ ಘೋಷಣೆ: ಶಿವಮೊಗ್ಗ ಜಿಲ್ಲೆ ಎಷ್ಟು ಮತದಾರರಿದ್ದಾರೆ? ಎಷ್ಟು ಮತಗಟ್ಟೆಗಳಿವೆ?

March 29, 2023

ಸ್ವಸ್ತಿಶ್ರೀ ಭಟ್ಟಾರಕರು ವ್ಯಕ್ತಿಯಲ್ಲ, ವ್ಯಕ್ತಿತ್ವವೂ ಅಲ್ಲ, ಅವರೊಂದು ಪರಂಪರೆ

March 29, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪರಿಸರವಾದಿಗಳ ಪ್ರಯತ್ನಕ್ಕೆ ಸಿಕ್ಕ ಫಲ: ತ್ಯಾಜ್ಯ ಸಂಸ್ಕರಣಾ ಘಟಕಗಳ ಮರು ಕಾರ್ಯಾರಂಭಕ್ಕೆ ಸಿದ್ಧತೆ

March 29, 2023

ಶಿವಮೊಗ್ಗದ ಇಂದಿನ ಸುದ್ಧಿಗಳು | ಒಳ ಮೀಸಲಾತಿ ವಿರೋಧಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

March 29, 2023

ಚುನಾವಣೆ ಘೋಷಣೆ: ಶಿವಮೊಗ್ಗ ಜಿಲ್ಲೆ ಎಷ್ಟು ಮತದಾರರಿದ್ದಾರೆ? ಎಷ್ಟು ಮತಗಟ್ಟೆಗಳಿವೆ?

March 29, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!