ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಲಾಕ್ಡೌನ್ ವೇಳೆ ಸಂಕಷ್ಟದಲ್ಲಿರುವವರಿಗೆ ನೆರವಾಗಲು, ಉದ್ಯಮಿ ಕಿಮ್ಮನೆ ಜಯರಾಂ ಕುಟುಂಬವು ಮಹಾನಗರ ಪಾಲಿಕೆ ಆಡಳಿತಕ್ಕೆ 500 ಫುಡ್ ಕಿಟ್ ಗಳನ್ನು ಮಂಗಳವಾರ ಮಹಾನಗರ ಪಾಲಿಕೆ ಆಡಳಿತಕ್ಕೆ ಹಸ್ತಾಂತರಿಸಿತು.
ಕಿಮ್ಮನೆ ಜಯರಾಂರವರ ಪುತ್ರ ರೋನಕ್ ಜಯರಾಂರವರು, ಪಾಲಿಕೆ ಕಚೇರಿ ಆವರಣದಲ್ಲಿ ಫುಡ್ ಕಿಟ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್, ಕಮೀಷನರ್ ಚಿದಾನಂದ ವಟಾರೆ, ಸದಸ್ಯರಾದ ಎಚ್.ಸಿ. ಯೋಗೇಶ್, ಯುವ ಉದ್ಯಮಿ ರಾಘವೇಂದ್ರ ಹಾಗೂ ಮನುರವರು ಉಪಸ್ಥಿತರಿದ್ದರು.
ಫುಡ್ ಕಿಟ್ ನಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಉಪ್ಪು, ರಸಂ ಪೌಡರ್, ಗೋಧಿ ಸೇರಿದಂತೆ ವಿವಿಧ ಅವಶ್ಯಕ ಸಾಮಾಗ್ರಿಗಳಿವೆ. ಈ ಫುಡ್ ಕಿಟ್ ಗಳನ್ನು ಅಗತ್ಯವಿರುವವರಿಗೆ ತಲುಪಿಸುವಂತೆ ಪಾಲಿಕೆ ಆಡಳಿತಕ್ಕೆ ಕಿಮ್ಮನೆ ಜಯರಾಂ ಕುಟುಂಬ ಮನವಿ ಮಾಡಿತು.
10 ಲಕ್ಷ ರೂ. ದೇಣಿಗೆ
ಕಿಮ್ಮನೆ ಜಯರಾಂರವರು, ಈಗಾಗಲೇ ಪ್ರಧಾನಮಂತ್ರಿಗಳ ಪಿಎಂ ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ತಲಾ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆಗೆ 2000 ಮಾಸ್ಕ್ ಮತ್ತು 500 ಸ್ಯಾನಿಟೈಸರ್’ಗಳ ನೀಡುವ ಮೂಲಕ, ಕೊರೋನಾ ವಿರುದ್ದದ ಹೋರಾಟಕ್ಕೆ ನೆರವಾಗಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post