ಕಲ್ಪ ಮೀಡಿಯಾ ಹೌಸ್ | ಬಾರಕೂರು |
ಶ್ರೀ ಭಂಡಾರಕೇರಿ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರ ಚಾತುರ್ಮಾಸ್ಯ (Chaturmasya) ಪ್ರಯುಕ್ತ ಆಗಸ್ಟ್ 3, 2026ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Chaturmasya | ಇಂದು ಏನೆಲ್ಲಾ ಕಾರ್ಯಕ್ರಮಗಳು
ಸೋಮವಾರ ನಡೆಯುವ ಈ ಕಾರ್ಯಕ್ರಮವು ಸಂಜೆ 4:00 ಗಂಟೆಗೆ ಭಜನೆ ಮೂಲಕ ಆರಂಭವಾಗಲಿದೆ. ನೀಲಾವರದ ಮಹಿಷಮರ್ದಿನಿ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ.
Also Read>> ಹೊಳೆಹೊನ್ನೂರು | ಜನರ ಮೇಲೆ ಏಕಾಏಕಿ ಎರಗಿದ ಮುಸಿಯಾ | ಬಾಲಕನಿಗೆ ಗಂಭೀರ ಗಾಯ
ಸಂಜೆ 5:00ರಿಂದ 6:20ರವರೆಗೆ ವಿ. ಶ್ರೀ ಆನಂದತೀರ್ಥ ನಾಗಸಂಪಿಗೆ ಆಚಾರ್ಯರಿಂದ ಮಹಾಭಾರತ ಉಪಾಖ್ಯಾನ ಪ್ರವಚನ ನಡೆಯಲಿದೆ. ಬಳಿಕ ಸಂಜೆ 6:20ರಿಂದ 6:30ರವರೆಗೆ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರಿಂದ ಕೃಷ್ಣನಾಮ ವ್ಯಾಖ್ಯಾನ ನಡೆಯಲಿದೆ.
ಸಂಜೆ 6:30ರಿಂದ ರಾತ್ರಿ 8:00ರವರೆಗೆ ಡಾ. ಸುಪ್ರಭಾ ಎಸ್. ರಾವ್ ಮತ್ತು ಬಳಗದಿಂದ ದಾಸಲಹರಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಬಾರಕೂರಿನ ಭಂಡಾರಕೇರಿ ಪ್ರದೇಶದಲ್ಲಿರುವ ಶ್ರೀ ಭಂಡಾರಕೇರಿ ಮಠದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ನಂತರ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











